ETV Bharat / state

ಹೆಲ್ಮೆಟ್ ಕಡ್ಡಾಯ ಭಟ್ಕಳದಲ್ಲಿ ತಂದೊಡ್ಡಿದೆಯಾ ಭೀತಿ...?

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಮೋಟಾರು ವಾಹನ ಕಾಯ್ದೆ ಭಟ್ಕಳ ಜನರ ಆತಂಕಕ್ಕೆ ಕಾರಣವಾಗಿದೆ.

author img

By

Published : Sep 27, 2019, 8:34 PM IST

ಹೆಲ್ಮೆಟ್ ಕಡ್ಡಾಯ ಭಟ್ಕಳದಲ್ಲಿ ಭೀತಿ

ಭಟ್ಕಳ: ಸಂಚಾರಿ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯ್ದೆಯಲ್ಲಿ ಹೆಲ್ಮೆಟ್ ಧರಿಸುವುದು ಕಡ್ಡಾಯ ಮಾಡಿದ್ದೇನೋ ಸರಿ. ಆದರೆ ಇದರ ಅನುಕೂಲವನ್ನು ಸರಗಳ್ಳರು ಸದುಪಯೋಗ ಪಡಿಸಿಕೊಳ್ಳುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.

ಹೆಲ್ಮೆಟ್ ಕಡ್ಡಾಯ ಭಟ್ಕಳದಲ್ಲಿ ಭೀತಿ

ಈ ಹಿಂದೆ ಭಟ್ಕಳದಲ್ಲಿ ಹಾಡಹಗಲೇ ನಡು ರಸ್ತೆಯಲ್ಲಿ ಸರಗಳ್ಳರು ಹೆಲ್ಮೆಟ್ ಧರಿಸಿಕೊಂಡು ಸರಗಳ್ಳತನಕ್ಕೆ ಇಳಿದು ಲಕ್ಷಾಂತರ ರೂ. ಮೌಲ್ಯದ ಚಿನ್ನ ದೋಚಿದ್ದುರು. ಆ ಪ್ರಕರಣ ಇನ್ನೂ ತನಿಖೆ ಹಂತದಲ್ಲಿಯೇ ಇದೆ. ಹೆಲ್ಮೆಟ್ ಇಲ್ಲದ ದಿನದಲ್ಲಿ ನಡೆದ ಕಳ್ಳತನವನ್ನು ಪೊಲೀಸರು ಇನ್ನು ಭೇದಿಸಿಲ್ಲ. ಈಗ ಹೆಲ್ಮೆಟ್ ಕಡ್ಡಾಯವಾದ ಮೇಲೆ ಸರಗಳ್ಳತನ ನಡೆದಲ್ಲಿ ಅದರ ತನಿಖೆ ಇನ್ನೆಷ್ಟರ ಮಟ್ಟಿಗೆ ಆಗಬಹುದು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಈ ಹಿಂದೆ ಹೆಲ್ಮೆಟ್ ಧರಿಸುವವರ ಸಂಖ್ಯೆ ತೀರಾ ವಿರಳವಾಗಿತ್ತು. ಹಾಗಾಗಿ ಯಾರಾದರೂ ಹೆಲ್ಮೆಟ್ ಧರಿಸಿದ್ದ ಅಪರಿಚಿತ ವ್ಯಕ್ತಿ ಕಂಡರೆ ಸಾರ್ವಜನಿಕರು ಮತ್ತು ಪೊಲೀಸರು ಅಲರ್ಟ್ ಆಗುತ್ತಿದ್ದರು. ದೇಶಾದ್ಯಂತ ಹೆಲ್ಮೆಟ್ ಧರಿಸುವುದು ಕಡ್ಡಾಯ ಮಾಡುತ್ತಿದ್ದಂತೆ ಸರಗಳ್ಳರು ಮತ್ತೆ ಬಾಲ ಬಿಚ್ಚಿದ್ದು. ಕೆಲವು ದಿನಗಳ ಹಿಂದಷ್ಟೇ ಕುಮಟಾ ಪಟ್ಟಣದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಹೆಲ್ಮೆಟ್​ ದಾರಿಗಳು ಎಗರಿಸಿ ಪರಾರಿಯಾಗಿದ್ದರು.

ಮತ್ತೆ ಸರಗಳ್ಳತನಕ್ಕೆ ಹೆಲ್ಮೆಟ್ ಕಡ್ಡಾಯ ದಾರಿಯಾಗಲಿದೆಯಾ?

ತಾಲೂಕಿನಲ್ಲಿ ಈ ಹಿಂದೆ ಹಲವು ಸರಗಳ್ಳತನದ ಪ್ರಕರರಣ ನಡೆದಿದ್ದು, ಭಟ್ಕಳದ ಅರ್ಬನ್ ಬ್ಯಾಂಕ್ ಸಮೀಪ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿರುವಾಗ ವಿಳಾಸ ಕೇಳುವ ನೆಪದಲ್ಲಿ 90 ಸಾವಿರಕ್ಕೂ ಅಧಿಕ ಮೌಲ್ಯದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದರು. ನಂತರ ಈ ಪ್ರಕರಣ ನಡೆದ ಒಂದು ವರ್ಷದಲ್ಲೇ ಚನ್ನಪಟ್ಟಣದ ಹನುಮಂತ ದೇವಸ್ಥಾನದ ಸಮೀಪದಲ್ಲಿ ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿಗಳು ಮಹಿಳೆಯ ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿದ್ದರು. ತಾಲೂಕಿನಲ್ಲಿ ನಡೆದ ಸರಗಳ್ಳತನದ ಪ್ರಕರಣ ಕೆಲವದರಲ್ಲಿ ಆರೋಪಿಗಳು ಪತ್ತೆಯಾಗಿದ್ದು, ಮುಖ್ಯ ಪ್ರಕರಣದ ಆರೋಪಿ ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.

ಭಟ್ಕಳದಲ್ಲಿ ಹೆಚ್ಚಾಗಬೇಕಿದೆ ಸಿ.ಸಿ.ಟಿ.ವಿ ಅಳವಡಿಕೆ:

ಹೆಲ್ಮೆಟ್ ಧರಿಸುವುದು ಕಡ್ಡಾಯವಾಗುತ್ತಿದಂತೆ ಪಟ್ಟಣ ಜನರು ಸೇರಿದಂತೆ ಗ್ರಾಮೀಣ ಹಾಗೂ ಹಳ್ಳಿಯ ಜನರೆಲ್ಲ ದಂಡದಿಂದ ತಪ್ಪಿಸಿಕೊಳ್ಳಲು ಹೆಲ್ಮೆಟ್ ಧರಿಸುತ್ತಿದ್ದಾರೆ. ಈ ಸಮಯದಲ್ಲಿ ಸರಗಳ್ಳತನವಾದರೆ ಕಳ್ಳತನ ಮಾಡಿದವರು ಹಾಗೂ ಸಾರ್ವಜನಿಕರು ಯಾರು ಎಂದು ತಿಳಿಯುವುದು ಪೊಲೀಸರಿಗೆ ಕಷ್ಟವಾಗುವುದರಿಂದ ಪಟ್ಟಣದ ಹಲವು ಕಡೆ ಸಿ.ಸಿ.ಟಿ.ವಿಯನ್ನು ಹೆಚ್ಚಾಗಿ ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಭಟ್ಕಳ: ಸಂಚಾರಿ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯ್ದೆಯಲ್ಲಿ ಹೆಲ್ಮೆಟ್ ಧರಿಸುವುದು ಕಡ್ಡಾಯ ಮಾಡಿದ್ದೇನೋ ಸರಿ. ಆದರೆ ಇದರ ಅನುಕೂಲವನ್ನು ಸರಗಳ್ಳರು ಸದುಪಯೋಗ ಪಡಿಸಿಕೊಳ್ಳುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.

ಹೆಲ್ಮೆಟ್ ಕಡ್ಡಾಯ ಭಟ್ಕಳದಲ್ಲಿ ಭೀತಿ

ಈ ಹಿಂದೆ ಭಟ್ಕಳದಲ್ಲಿ ಹಾಡಹಗಲೇ ನಡು ರಸ್ತೆಯಲ್ಲಿ ಸರಗಳ್ಳರು ಹೆಲ್ಮೆಟ್ ಧರಿಸಿಕೊಂಡು ಸರಗಳ್ಳತನಕ್ಕೆ ಇಳಿದು ಲಕ್ಷಾಂತರ ರೂ. ಮೌಲ್ಯದ ಚಿನ್ನ ದೋಚಿದ್ದುರು. ಆ ಪ್ರಕರಣ ಇನ್ನೂ ತನಿಖೆ ಹಂತದಲ್ಲಿಯೇ ಇದೆ. ಹೆಲ್ಮೆಟ್ ಇಲ್ಲದ ದಿನದಲ್ಲಿ ನಡೆದ ಕಳ್ಳತನವನ್ನು ಪೊಲೀಸರು ಇನ್ನು ಭೇದಿಸಿಲ್ಲ. ಈಗ ಹೆಲ್ಮೆಟ್ ಕಡ್ಡಾಯವಾದ ಮೇಲೆ ಸರಗಳ್ಳತನ ನಡೆದಲ್ಲಿ ಅದರ ತನಿಖೆ ಇನ್ನೆಷ್ಟರ ಮಟ್ಟಿಗೆ ಆಗಬಹುದು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಈ ಹಿಂದೆ ಹೆಲ್ಮೆಟ್ ಧರಿಸುವವರ ಸಂಖ್ಯೆ ತೀರಾ ವಿರಳವಾಗಿತ್ತು. ಹಾಗಾಗಿ ಯಾರಾದರೂ ಹೆಲ್ಮೆಟ್ ಧರಿಸಿದ್ದ ಅಪರಿಚಿತ ವ್ಯಕ್ತಿ ಕಂಡರೆ ಸಾರ್ವಜನಿಕರು ಮತ್ತು ಪೊಲೀಸರು ಅಲರ್ಟ್ ಆಗುತ್ತಿದ್ದರು. ದೇಶಾದ್ಯಂತ ಹೆಲ್ಮೆಟ್ ಧರಿಸುವುದು ಕಡ್ಡಾಯ ಮಾಡುತ್ತಿದ್ದಂತೆ ಸರಗಳ್ಳರು ಮತ್ತೆ ಬಾಲ ಬಿಚ್ಚಿದ್ದು. ಕೆಲವು ದಿನಗಳ ಹಿಂದಷ್ಟೇ ಕುಮಟಾ ಪಟ್ಟಣದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಹೆಲ್ಮೆಟ್​ ದಾರಿಗಳು ಎಗರಿಸಿ ಪರಾರಿಯಾಗಿದ್ದರು.

ಮತ್ತೆ ಸರಗಳ್ಳತನಕ್ಕೆ ಹೆಲ್ಮೆಟ್ ಕಡ್ಡಾಯ ದಾರಿಯಾಗಲಿದೆಯಾ?

ತಾಲೂಕಿನಲ್ಲಿ ಈ ಹಿಂದೆ ಹಲವು ಸರಗಳ್ಳತನದ ಪ್ರಕರರಣ ನಡೆದಿದ್ದು, ಭಟ್ಕಳದ ಅರ್ಬನ್ ಬ್ಯಾಂಕ್ ಸಮೀಪ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿರುವಾಗ ವಿಳಾಸ ಕೇಳುವ ನೆಪದಲ್ಲಿ 90 ಸಾವಿರಕ್ಕೂ ಅಧಿಕ ಮೌಲ್ಯದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದರು. ನಂತರ ಈ ಪ್ರಕರಣ ನಡೆದ ಒಂದು ವರ್ಷದಲ್ಲೇ ಚನ್ನಪಟ್ಟಣದ ಹನುಮಂತ ದೇವಸ್ಥಾನದ ಸಮೀಪದಲ್ಲಿ ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿಗಳು ಮಹಿಳೆಯ ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿದ್ದರು. ತಾಲೂಕಿನಲ್ಲಿ ನಡೆದ ಸರಗಳ್ಳತನದ ಪ್ರಕರಣ ಕೆಲವದರಲ್ಲಿ ಆರೋಪಿಗಳು ಪತ್ತೆಯಾಗಿದ್ದು, ಮುಖ್ಯ ಪ್ರಕರಣದ ಆರೋಪಿ ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.

ಭಟ್ಕಳದಲ್ಲಿ ಹೆಚ್ಚಾಗಬೇಕಿದೆ ಸಿ.ಸಿ.ಟಿ.ವಿ ಅಳವಡಿಕೆ:

ಹೆಲ್ಮೆಟ್ ಧರಿಸುವುದು ಕಡ್ಡಾಯವಾಗುತ್ತಿದಂತೆ ಪಟ್ಟಣ ಜನರು ಸೇರಿದಂತೆ ಗ್ರಾಮೀಣ ಹಾಗೂ ಹಳ್ಳಿಯ ಜನರೆಲ್ಲ ದಂಡದಿಂದ ತಪ್ಪಿಸಿಕೊಳ್ಳಲು ಹೆಲ್ಮೆಟ್ ಧರಿಸುತ್ತಿದ್ದಾರೆ. ಈ ಸಮಯದಲ್ಲಿ ಸರಗಳ್ಳತನವಾದರೆ ಕಳ್ಳತನ ಮಾಡಿದವರು ಹಾಗೂ ಸಾರ್ವಜನಿಕರು ಯಾರು ಎಂದು ತಿಳಿಯುವುದು ಪೊಲೀಸರಿಗೆ ಕಷ್ಟವಾಗುವುದರಿಂದ ಪಟ್ಟಣದ ಹಲವು ಕಡೆ ಸಿ.ಸಿ.ಟಿ.ವಿಯನ್ನು ಹೆಚ್ಚಾಗಿ ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Intro:ಭಟ್ಕಳ: ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯ್ದೆಯಲ್ಲಿ ಹೆಲ್ಮೆಟ್ ಧರಿಸುವುದು ಕಡ್ಡಾಯ ಮಾಡಿದ್ದೇನೋ ಸರಿ ಆದರೆ ಇದರ ಅನುಕೂಲವನ್ನು ಸರಗಳ್ಳರು ಸದುಪಯೋಗ ಪಡಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಈಗ ಇದೇ ರೀತಿಯ ಭೀತಿ ಭಟ್ಕಳದ ಜನರಲ್ಲಿ ಶುರುವಾಗಿದ್ದು, Body:ಭಟ್ಕಳ: ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯ್ದೆಯಲ್ಲಿ ಹೆಲ್ಮೆಟ್ ಧರಿಸುವುದು ಕಡ್ಡಾಯ ಮಾಡಿದ್ದೇನೋ ಸರಿ ಆದರೆ ಇದರ ಅನುಕೂಲವನ್ನು ಸರಗಳ್ಳರು ಸದುಪಯೋಗ ಪಡಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಈಗ ಇದೇ ರೀತಿಯ ಭೀತಿ ಭಟ್ಕಳದ ಜನರಲ್ಲಿ ಶುರುವಾಗಿದ್ದು.

ಹೌದು ಈ ಹಿಂದೆ ಭಟ್ಕಳದಲ್ಲಿ ಹಾಡುಹಗಲೇ ನಡು ರಸ್ತೆಯಲ್ಲಿ ಸರಗಳ್ಳರು ಹೆಲ್ಮೆಟ್ ಧರಿಸಿಕೊಂಡು ಸರಗಳ್ಳತನಕ್ಕೆ ಇಳಿದು ಲಕ್ಷಾಂತರ ರೂ ಮೌಲ್ಯದ ಚಿನ್ನವನ್ನು ದೋಚಿದ್ದು ಆ ತನಿಖೆ ಅಲ್ಲಿಯೇ ಇದ್ದು ಕಳ್ಳರನ್ನು ಪೊಲೀಸರು ಇನ್ನು ಪತ್ತೆ ಹಚ್ಚಿಲ್ಲವಾಗಿದೆ. ಹೆಲ್ಮೆಟ್ ಇಲ್ಲದ ದಿನದಲ್ಲಿ ನಡೆದ ಕಳ್ಳತನವನ್ನು ಪೊಲೀಸರು ಇನ್ನು ಭೇದಿಸಿಲ್ಲವಾಗಿದ್ದು ಈಗ ಹೆಲ್ಮೆಟ್ ಕಡ್ಡಾಯವಾದ ಮೇಲೆ ಸರಗಳ್ಳತನ ನಡೆದಲ್ಲಿ ಅದರ ತನಿಖೆ ಇನ್ನೆಷ್ಟರ ಮಟ್ಟಿಗೆ ಆಗಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಈ ಹಿಂದೆ ಹೆಲ್ಮೆಟ್ ಧರಿಸುವವರ ಸಂಖ್ಯೆ ತೀವ್ರ ವಿರಳವಾಗಿತ್ತು ಹಾಗಾಗಿ ಯಾರಾದರೂ ಹೆಲ್ಮೆಟ್ ಧರಿಸಿದ್ದ ಅಪರಿಚಿತ ವ್ಯಕ್ತಿ ಕಂಡರೆ ಸಾರ್ವಜನಿಕರು ಮತ್ತು ಪೊಲೀಸರು ಅಲರ್ಟ್ ಆಗುತ್ತಿದ್ದರು.
ದೇಶಾದ್ಯಂತ ಹೆಲ್ಮೆಟ್ ಧರಿಸುವುದು ಕಡ್ಡಾಯ ಮಾಡುತ್ತಿದ್ದಂತೆ ಸರಗಳ್ಳರು ಮತ್ತೆ ಬಾಲ ಬಿಚ್ಚಿದ್ದು. ಕೆಲವು ದಿನಗಳ ಹಿಂದಷ್ಟೇ ಕುಮಟ ಪಟ್ಟಣದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಹೆಲ್ಮೆಟ್ಧಾರಿಗಳು ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದ್ದು ಸದ್ಯ ಈಗ ಭಟ್ಕಳದಲ್ಲಿ ಈ ಹಿಂದಿನ ನಡೆದ ಸರಗಳ್ಳತನದ ಪ್ರಕರಣ ಜನರಲ್ಲಿ ಆತಂಕ ಹುಟ್ಟಿಸಿದೆ.

ಈ ಹಿಂದೆ ಜಿಲ್ಲೆಯಲ್ಲಿ ಒಂದೇ ಇರಾನಿ ಗ್ಯಾಂಗನಿಂದ ಸರಣಿ ಸರಗಳ್ಳತನ ನಡೆದಿದ್ದು, ಬೆಳಿಗ್ಗೆ ಕಾರವಾರದಲ್ಲಿ ಹಾಗೂ ಮಧ್ಯಾಹ್ನ ಭಟ್ಕಳ ಹಾಗೂ ಸಂಜೆ ವೇಳೆಯಲ್ಲಿ ಕುಂದಾಪುರ ಕಳ್ಳತನ ಮಾಡಿ ಪರಾರಿಯಾಗಿಯಾಗುತ್ತಿರುವ ಸಂದರ್ಭದಲ್ಲಿ ಶಾಸ್ತ್ರೀ ಸರ್ಕಲನಲ್ಲಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡ ಪರಾರಿಯಾಗಿರುವ ಪ್ರಕರಣ ನಡೆದಿತ್ತು.

ಮತ್ತೆ ಸರಗಳ್ಳತನಕ್ಕೆ ಹೆಲ್ಮೆಟ್ ದಾರಿಯಾಗಲಿದೆಯಾ? : ತಾಲೂಕಿನಲ್ಲಿ ಈ ಹಿಂದೆ ಹಲವು ಸರಗಳ್ಳತನದ ಪ್ರಕರರಣ ನಡೆದಿದ್ದು, ಭಟ್ಕಳದ ಅರ್ಬನ ಬ್ಯಾಂಕ ಸಮೀಪ ಮಹಿಳೆಯೋರ್ವಳು ನಡೆದುಕೊಂಡು ಹೋಗುತ್ತಿರುವ ವೇಳೆ ವಿಳಾಸ ಕೇಳುವ ನೆಪದಲ್ಲಿ ಕೊರಳಲ್ಲಿರುವ 90ಸಾವಿರಕ್ಕೂ ಅಧಿಕ ಮೌಲ್ಯದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದರು. ನಂತರ ಈ ಪ್ರಕರಣವಾದ ಒಂದು ವರ್ಷದಲ್ಲೇ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಸಮೀಪದಲ್ಲಿ ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿಗಳು ಮಹಿಳೆಯ ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿದ್ದರು. ತಾಲೂಕಿನಲ್ಲಿ ನಡೆದ ಸರಗಳ್ಳತನದ ಪ್ರಕರಣವೂ ಕೆಲವದರಲ್ಲಿ ಆರೋಪಿಗಳು ಪತ್ತೆಯಾಗಿದ್ದು ಮುಖ್ಯ ಪ್ರಕರಣದ ಆರೋಪಿ ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.

ಮೈಯೆಲ್ಲಾ ಕಣ್ಣಾಗಿಸಿಕೊಂಡಿರಬೇಕಾಗಿದೆ ಪೊಲೀಸ ಇಲಾಖೆ: ಈ ಸಂದರ್ಭವನ್ನೇ ಸಮರ್ಪಕವಾಗಿ ಬಳಸಿಕೊಂಡು ಸರಗಳ್ಳರು ಕಾರ್ಯಾಚರಣೆಗಿಳಿಯ ಬಹುದಾಗಿದ್ದು, ರಸ್ತೆಯಲ್ಲಿ ಬಹುತೇಕ ಎಲ್ಲರೂ ಹೆಲ್ಮೆಟ್ ಧರಿಸಿರುವುದರಿಂದ ಸರಗಳ್ಳತನ ಮಾಡಿ ಪರಾರಿಯಾಗಲು ಸುಲಭವಾಗುತ್ತದೆ. ಕಾರಣಕ್ಕೆ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಬಂಗಾರದ ಸರವನ್ನು ಕಿತ್ತು ಪರಾರಿಯಾಗಲು ಹೆಲ್ಮೆಟ್ ಉಪಯೋಗಕಾರಿಯಾಗಿದೆ. ಸದ್ಯ ಪೊಲೀಸರು ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ದಂಡ ಹಾಕುವುದರ ಜೊತೆಯಲ್ಲಿ ಹೆಲ್ಮೆಟ್ ಧರಿಸಿಕೊಂಡು ಓಡಾಡುವ ಅಪರಿಚಿತ ಬೈಕ್ ಸವಾರ ಮೇಲೆ ನಿಗಾವಹಿಸಬೇಕಾಗುತ್ತದೆ. ಕಾರಣ ಭಟ್ಕಳದಲ್ಲಿ ಈ ಹಿಂದೆ ನಡೆದ ಸಾಕಷ್ಟು ಕಳ್ಳತನ, ಸರಗಳ್ಳತನ ಪ್ರಕರಣವಾಗಿದೆ.

ಭಟ್ಕಳದಲ್ಲಿ ಹೆಚ್ಚಾಗಬೇಕಿದೆ ಸಿ.ಸಿ.ಟಿ.ವಿ ಅಳವಡಿಕೆ: ಹೆಲ್ಮೆಟ್ ಧರಿಸುವುದು ಕಡ್ಡಾಯವಾಗುತ್ತಿದಂತೆ ಪಟ್ಟಣ ಜನರು ಸೇರಿದಂತೆ ಗ್ರಾಮೀಣ ಹಾಗೂ ಹಳ್ಳಿಯ ಜನರೆಲ್ಲ ಪೊಲೀಸರಿಂದ ದಂಡ ತಪ್ಪಿಸಿಕೊಳ್ಳಲು ಹೆಲ್ಮೆಟ್ ಧರಿಸುತ್ತಿದ್ದಾರೆ. ಈ ಸಮಯದಲ್ಲಿ ಸರಗಳ್ಳತನವಾದರೆ ಕಳ್ಳತನ ಮಾಡಿದವರು ಹಾಗೂ ಸಾರ್ವಜನಿಕರು ಯಾರು ಎಂದು ತಿಳಿಯುವದು ಪೊಲೀಸರಿಗೆ ಕಷ್ಟವಾಗುವುದರಿಂದ ಪಟ್ಟಣದ ಹಲವು ಕಡೆ ಸಿ.ಸಿ.ಟಿ.ವಿಯನ್ನು ಹೆಚ್ಚಾಗಿ ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಬೈಟ್ : ಪ್ರಸನ್ನ ಭಟ್ ಸರಗಳ್ಳತನವಾದ ಶೈಲಾ ಭಟ್ ಅವರ ಮಗ ಮಾತನಾಡಿದ್ದು ‘ಭಟ್ಕಳದಲ್ಲಿ ಪೊಲೀಸರಲು ಎಲ್ಲೆಂದರಲ್ಲಿ ಹೆಲ್ಮೆಟ್ ತಪಾಸಣೆ ಮಾಡಿ ದಂಡ ಹಾಕುತ್ತಿದ್ದಾರೆ. ಇದು ಜನರಲ್ಲಿ ಕಾಳಜಿ ಮೂಡಲಿದೆ ಆದರೆ ಪೊಲೀಸರು ಅಪರಿಚಿತ ವ್ಯಕ್ತಿಗಳ ಮೇಲೆಯೂ ನಿಗಾ ವಹಿಸಿದ್ದಲ್ಲಿ ಕಳ್ಳತನ ಮುಖ್ಯವಾಗಿ ಹೆಲ್ಮೆಟ್ ಧರಿಸಿ ಸರಗಳ್ಳತನ ನಡೆಯದಂತೆ ತಪ್ಪಿಸಬಹುದಾಗಿದೆ. ದಂಡ ವಿಧಿಸುವುದರ ಜೊತೆಗೆ ಅಪರಿಚಿತರ ಮೇಲೆ ನಿಗಾ ಇಡಬೇಕು’
Conclusion:ಉದಯ ನಾಯ್ಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.