ETV Bharat / state

15 ವರ್ಷದ ಹಿಂದೆ ಡಾಂಬರು ಕಂಡ ಭಟ್ಕಳದ ನಸ್ತಾರ ರಸ್ತೆ.. - ಭಟ್ಕಳದ ನಸ್ತಾರ ರಸ್ತೆ

ನಗರದ ನಸ್ತಾರ ಭಾಗದ ಡೆಡ್ ಎಂಡ್ ರಸ್ತೆಗೆ 15 ವರ್ಷ ಹಿಂದೆ  ಡಾಂಬರು ಹಾಕಿದ್ದು, ಅದಾದ ಬಳಿಕ ಈ ರಸ್ತೆಗೆ ಯಾವುದೇ ದುರಸ್ಥಿ ಕಾರ್ಯ ನಡೆದಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bhatkal  Nastara  Road
ಭಟ್ಕಳದ ನಸ್ತಾರ ರಸ್ತೆ: ದುರಸ್ಥಿಗೆ ಆಗ್ರಹ
author img

By

Published : Dec 1, 2019, 11:08 AM IST

ಭಟ್ಕಳ: ನಗರದ ನಸ್ತಾರ ಭಾಗದ ಡೆಡ್ ಎಂಡ್ ರಸ್ತೆಗೆ 15 ವರ್ಷ ಹಿಂದೆ ಡಾಂಬರು ಹಾಕಿದ್ದು, ಅದಾದ ಬಳಿಕ ಈ ರಸ್ತೆಗೆ ಯಾವುದೇ ದುರಸ್ಥಿ ಕಾರ್ಯ ನಡೆದಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಟ್ಕಳದ ನಸ್ತಾರ ರಸ್ತೆ..

ಒಂದೆರೆಡು ವರ್ಷದ ಹಿಂದೆ ಸಮರ್ಪಕ ರಸ್ತೆ ನಿರ್ಮಾಣ ಆಗುತ್ತಿರುವ ವೇಳೆ ಇನ್ನೂ 1.5 ಕಿ.ಮೀ ನಷ್ಟು ರಸ್ತೆ ಬಾಕಿ ಬಿಟ್ಟಿರುವ ಬಗ್ಗೆ ರಸ್ತೆ ಕಾಮಗಾರಿ ಗುತ್ತಿಗೆದಾರರಲ್ಲಿ ಪ್ರಶ್ನಿಸಿದ ಸ್ಥಳೀಯರಿಗೆ ನಮಗೆ ಟೆಂಡರ ಸಿಕ್ಕಿರುವುದು ಇಷ್ಟೇ.. ಉಳಿದಿರುವ ರಸ್ತೆ ಬಗ್ಗೆ ತಿಳಿದಿಲ್ಲ ಅಂತಾ ರಸ್ತೆ ನಿರ್ಮಾಣದ ಗುತ್ತಿಗೆದಾರರು ಉತ್ತರಿಸಿದ್ದಾರೆ ಎಂದು ಮಾಧ್ಯಮದ ಮುಂದೆ ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಸಮುದ್ರದ ಬದಿಯ ಈ ಹೊಂಡಮಯವಾದ ರಸ್ತೆ ಮಳೆಗಾಲದಲ್ಲಿ ನೀರಿನಿಂದ ತುಂಬಿರುತ್ತೆ. ಆದಷ್ಟು ಬೇಗ ಹಾಳಾದ ರಸ್ತೆ ಸರಿಪಡಿಸದಿದ್ದಲ್ಲಿ ಮುಂದಿನ ಮಳೆಗಾಲದಲ್ಲಿ ಇಲ್ಲಿ ರಸ್ತೆ ಇರುವ ಕುರುಹು ಸಹ ಇಲ್ಲದಂತಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಕೇವಲ 1.5 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ಮನಸ್ಸು ಮಾಡದ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆಯ ವಿರುದ್ಧ ಇಲ್ಲಿನ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.

ಭಟ್ಕಳ: ನಗರದ ನಸ್ತಾರ ಭಾಗದ ಡೆಡ್ ಎಂಡ್ ರಸ್ತೆಗೆ 15 ವರ್ಷ ಹಿಂದೆ ಡಾಂಬರು ಹಾಕಿದ್ದು, ಅದಾದ ಬಳಿಕ ಈ ರಸ್ತೆಗೆ ಯಾವುದೇ ದುರಸ್ಥಿ ಕಾರ್ಯ ನಡೆದಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಟ್ಕಳದ ನಸ್ತಾರ ರಸ್ತೆ..

ಒಂದೆರೆಡು ವರ್ಷದ ಹಿಂದೆ ಸಮರ್ಪಕ ರಸ್ತೆ ನಿರ್ಮಾಣ ಆಗುತ್ತಿರುವ ವೇಳೆ ಇನ್ನೂ 1.5 ಕಿ.ಮೀ ನಷ್ಟು ರಸ್ತೆ ಬಾಕಿ ಬಿಟ್ಟಿರುವ ಬಗ್ಗೆ ರಸ್ತೆ ಕಾಮಗಾರಿ ಗುತ್ತಿಗೆದಾರರಲ್ಲಿ ಪ್ರಶ್ನಿಸಿದ ಸ್ಥಳೀಯರಿಗೆ ನಮಗೆ ಟೆಂಡರ ಸಿಕ್ಕಿರುವುದು ಇಷ್ಟೇ.. ಉಳಿದಿರುವ ರಸ್ತೆ ಬಗ್ಗೆ ತಿಳಿದಿಲ್ಲ ಅಂತಾ ರಸ್ತೆ ನಿರ್ಮಾಣದ ಗುತ್ತಿಗೆದಾರರು ಉತ್ತರಿಸಿದ್ದಾರೆ ಎಂದು ಮಾಧ್ಯಮದ ಮುಂದೆ ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಸಮುದ್ರದ ಬದಿಯ ಈ ಹೊಂಡಮಯವಾದ ರಸ್ತೆ ಮಳೆಗಾಲದಲ್ಲಿ ನೀರಿನಿಂದ ತುಂಬಿರುತ್ತೆ. ಆದಷ್ಟು ಬೇಗ ಹಾಳಾದ ರಸ್ತೆ ಸರಿಪಡಿಸದಿದ್ದಲ್ಲಿ ಮುಂದಿನ ಮಳೆಗಾಲದಲ್ಲಿ ಇಲ್ಲಿ ರಸ್ತೆ ಇರುವ ಕುರುಹು ಸಹ ಇಲ್ಲದಂತಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಕೇವಲ 1.5 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ಮನಸ್ಸು ಮಾಡದ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆಯ ವಿರುದ್ಧ ಇಲ್ಲಿನ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.

Intro:Bhatkal_Pkg

Location_ಭಟ್ಕಳ

Slugs



ಒಂದು ಕಡೆ ಈ ರಸ್ತೆಯಿಂದ  ಹೆಂಡತಿಯನ್ನೇ ಮರೆತು ಬಂದ ಗಂಡ



ಇನ್ನೊಂದು ಕಡೆ ಅರ್ಧಂಬರ್ಧ ರಸ್ತೆ ಮಾಡಿ ಮಲತಾಯಿ ಧೋರಣೆ ಮಾಡುತ್ತಿರುವ ಪಂಚಾಯತ



Weblead: ಇತ್ತೀಚೆಗೆ ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಗಗನಯಾತ್ರಿಯ ವೇಷಧಾರಿ ನಡೆದಾಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ರಸ್ತೆಯಲ್ಲಿನ ಡಾಂಬರು, ಜಲ್ಲಿಕಲ್ಲು, ಮಣ್ಣು ಕಿತ್ತು ಹೋಗಿ ರಸ್ತೆ ಪಕ್ಕಕ್ಕೆ ಸರಿದಿವೆ. ನಗರವೆಲ್ಲ ಸ್ಮಾರ್ಟ್ ಸಿಟಿಯತ್ತ ವಾಲುತ್ತಿದ್ದರೆ, ಹಳ್ಳಿಗಳಲ್ಲಿನ ರಸ್ತೆ ಮಾತ್ರ ಹೊಂಡ ಗುಂಡಿಗಳಿಂದಲೇ ಸವೆಯುತ್ತಿದ್ದು, ವಾಹನ ಸವಾರರ ಜೀವಕ್ಕೆ ಕಂಟಕವಾಗಿದೆ. ಇದೇ ಸ್ಥಿತಿಯ ಚಿತ್ರಣ ಈಗ ಭಟ್ಕಳದ ನಸ್ತಾರ ಭಾಗದ ಡೆಡ್ ಎಂಡ್ ರಸ್ತೆಯೂ ಇದಕ್ಕೆ ಯಾವುದೇ ಹೊರತಾಗಿಲ್ಲ.

15 ವರ್ಷ ಹಿಂದೆ ಅಂದು ಈ ರಸ್ತೆಗೆ ಡಾಂಬರ ಹಾಕಿದ್ದೆ ಕೊನೆಯದಾಗಿದ್ದು ಬಿಟ್ಟರೆ ಅದಾದ ಬಳಿಕ ಈ ರಸ್ತೆಗೆ ಡಾಂಬರು ಇರಲಿ ಕೊನೆಯ ಪಕ್ಷ ರಸ್ತೆಯ ಪ್ಯಾಚ್ ಕೆಲಸವೂ ಮಾಡಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳಿಯ ನಿವಾಸಿಗರು.Body:Look

V/o 1 -2 ವರ್ಷದ ಹಿಂದೆ ಸಮರ್ಪಕ ರಸ್ತೆ ನಿರ್ಮಾಣ ಆಗುತ್ತಿರುವ ವೇಳೆ ಇನ್ನು 1.50 ಕಿ.ಮೀ.ನಷ್ಟು ರಸ್ತೆ ಬಾಕಿ ಬಿಟ್ಟಿರುವ ಬಗ್ಗೆ ರಸ್ತೆ ಕಾಮಗಾರಿ ಗುತ್ತಿಗೆದಾರರಲ್ಲಿ ಪ್ರಶ್ನಿಸಿದ ಸ್ಥಳೀಯರಿಗೆ ನಮಗೆ ಟೆಂಡರ ಸಿಕ್ಕಿರುವುದು ಇಷ್ಟೇ ಆಗಿದ್ದು ಉಳಿದಿರುವ ರಸ್ತೆ ಬಗ್ಗೆ ತಿಳಿದಿಲ್ಲ ಎಂದು ರಸ್ತೆ ನಿರ್ಮಾಣದ ಗುತ್ತಿಗೆದಾರರು ಹೇಳಿರುವ ಬಗ್ಗೆ ಮಾಧ್ಯಮದ ಮುಂದೆ ಸ್ಥಳೀಯರು ವಿವರಿಸಿ ಆಕ್ರೋಶ ಹೊರಹಾಕಿದ್ದಾರೆ.

Byte 1 - ಮಹ್ಮದ ತೈಯಾಬ್- ಹಿರಿಯ ನಾಗರಿಕರು.



Look

V/o 2 -ಸಮುದ್ರದ ಬದಿಯಲ್ಲಿನ ಈ ಹೊಂಡಮಯವಾದ ರಸ್ತೆಯೂ ಮಳೆಗಾಲದಲ್ಲಿ ನೀರಿನಿಂದ ತುಂಬಲಿದ್ದು, ಆದಷ್ಟು ಬೇಗ ಹಾಳಾದ ರಸ್ತೆಯನ್ನು ಸರಿಪಡಿಸಲಿದ್ದಲ್ಲಿ ಮುಂದಿನ ಮಳೆಗಾಲದಲ್ಲಿ ಇಲ್ಲಿ ರಸ್ತೆ ಇರುವ ಕುರುಹು ಸಹ ಇಲ್ಲದಂತಾಗಲಿದೆ ಎಂಬುದು ಸ್ಥಳಿಯರ ಅಭಿಪ್ರಾಯವಾಗಿದೆ. ಇಲ್ಲಿನ ಶಾಸಕರು, ಪಂಚಾಯತ ಜನಪ್ರತಿನಿಧಿಗಳು ಊರಿನ ಕೊನೆಯ ರಸ್ತೆ ಎಂಬ ನಿಸ್ಕಾಳಜಿ ಬಿಟ್ಟು ಶೀಘ್ರದಲ್ಲಿ ರಸ್ತೆ ನಿರ್ಮಾಣಕ್ಕೆ ಶ್ರಮಿಸಬೇಕಾಗಿದೆ. ಈ ರಸ್ತೆಯ ತುಂಬೆಲ್ಲ ಜಲ್ಲಿಕಲ್ಲು ಹಾಗೂ ಕಿತ್ತು ಹೋದ ಡಾಂಬರೇ ಕಾಣ ಸಿಗಲಿದ್ದು, ದೊಡ್ಡ ದೊಡ್ಡ ಹೊಂಡಗಳಿದ್ದಲೇ ತುಂಬಿರುವ ಹಿನ್ನೆಲೆ ಜನರಿಗೆ ವಾಹನ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗಿದೆ. ಇಲ್ಲಿ ಸಾಕಷ್ಟು ಅಲ್ಪಸಂಖ್ಯಾತ ಸಮುದಾಯದವರೆ ವಾಸವಿದ್ದು ಇನ್ನುಳಿದಂತೆ ಬೇರೆ ಸಮುದಾಯದ ಜನರು ಸೇರಿ ಒಟ್ಟು 50ಕ್ಕೂ ಅಧಿಕ ಮನೆಗಳಿವೆ. ನಿತ್ಯವೂ 4 ಬಾರಿ ಮುಂಡಳ್ಳಿ ನಸ್ತಾರಕ್ಕೆ ಸರಕಾರಿ ಬಸ್ ಬಂದು ಹೋಗಲಿದ್ದು, ಶಾಲಾ ವಾಹನದ ಓಡಾಟಕ್ಕೆ ಈ ರಸ್ತೆಯ ಹೊಂಡವೂ ತಾಪತ್ರಯ ನೀಡುತ್ತಿದೆ. ಕೇವಲ 1.50 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ಮನಸ್ಸು ಮಾಡದ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆಯ ವಿರುದ್ಧ ಇಲ್ಲಿನ ಸ್ಥಳಿಯರು ಹಿಡಿಶಾಪ ಹಾಕುತ್ತಿದ್ದಾರೆ.

Byte 2- ನಜೀರ ಜಾದುಗಾರ- ಸ್ಥಳಿಯರು.



Look

V/o 3 -ಹೆಂಡತಿ ಮರೆತು ಬಂದ ಗಂಡ: ಇದು ಹಾಸ್ಯಾಸ್ಪದವಾಗಿದ್ದರು ಈ ರಸ್ತೆಯ ಅವಾಂತರದಿಂದಾಗ ಘಟನೆಯಾಗಿದೆ.  ಹೊಸದಾಗಿ ಮದುವೆಯಾದ ಜೋಡಿಯೊಂದು ಮನೆಯತ್ತ ಬರುತ್ತಿದ್ದ ವೇಳೆ ಬೈಕನ ಹಿಂಬದಿಯಲ್ಲಿ ಕುಳಿತಿದ್ದ ಹೆಂಡತಿ ರಸ್ತೆ ಹೊಂಡದಿಂದ ನೆಲಕ್ಕೆ ಬಿದ್ದಿದ್ದು ಇದರ ಪರಿವೆಯೇ ಇಲ್ಲದೇ ಗಂಡ ಮನೆಗೆ ಬಂದು ನೋಡಿದರೆ ಹೆಂಡತಿ ಇಲ್ಲದಿರುವುದು ಕಂಡು ಒಂದು ಬಾರಿ ಗಾಬರಿಗೊಂಡಿದ್ದಾನೆ ಪುನಃ ಬಂದ ದಾರಿಯಲ್ಲೆ ವಾಪಸ್ಸು ತೆರಳಿದಾಗ ಹೆಂಡತಿ ಬಿದ್ದಿದ್ದು ನಂತರ ಮೇಲೆದ್ದು ನಡೆದುಕೊಂಡು ಬರುತ್ತಿದ್ದನ್ನು ಕಂಡು ನಿಟ್ಟುಸಿರು ಬಿಟ್ಟಿದ್ದಾನೆ. ‘ಈ ರಸ್ತೆಯ ವ್ಯಾಪ್ತಿಯಲ್ಲಿ ಹೆಚ್ಚಾಗಿ ಅಲ್ಪಸಂಖ್ಯಾತ ಸಮುದಾಯದ ಜನರೆ ವಾಸವಿದ್ದು ಇಲ್ಲಿನ ಜನಪ್ರತಿನಿಧಿಗಳು, ಪಂಚಾಯತ ನಮ್ಮ ವಾರ್ಡನ್ನು ಮಲತಾಯಿ ಧೋರಣೆಯಂತೆ ನೋಡುತ್ತಿದೆ. ಚುನಾವಣೆಗೆ ಮತ ಹಾಕಲು ನಾವು ಅವಶ್ಯವಿದ್ದು, ಆದರೆ ಊರ ರಸ್ತೆ ಅಭಿವೃದ್ದಿಗೆ ಮಾತ್ರ ಇತ್ತ ಕಡೆ ಬರುವುದಿಲ್ಲ. ಶಾಲಾ ಹಾಗೂ ಅಂಗನವಾಡಿ ಕೇಂದ್ರವಿದ್ದು ವಿದ್ಯಾರ್ಥಿಗಳಿಗೆ ರಸ್ತೆಯಲ್ಲಿ ಓಡಾಡಬೇಕಾದರೆ ಗಮನವಹಿಸಿ ತಿರುಗಾಡಬೇಕಾಗಿದೆ.’



ಈ ಟಿವಿ ಭಾರತ ಭಟ್ಕಳ


‘Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.