ETV Bharat / state

ಹಾಡಹಗಲೇ ಯುವತಿಗೆ ಚಾಕು ಇರಿದ ಯುವಕ : ಬೆಚ್ಚಿಬಿದ್ದ ಕೃಷ್ಣನಗರಿ ಜನ

author img

By

Published : Aug 30, 2021, 9:46 PM IST

ಯುವಕ ಹಾಗೂ ಯುವತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇರಿತಕ್ಕೆ ಕಾರಣ ಏನು ಅನ್ನೋದರ ಕುರಿತಾಗಿ ತನಿಖೆ ಮುಂದುವರಿದಿದೆ..

young-man-stabbed-knife-to-girl-in-udupi
ಹಾಡಹಗಲೇ ಯುವತಿಗೆ ಚಾಕು ಇರಿದ ಯುವಕ: ಬೆಚ್ಚಿಬಿದ್ದ ಕೃಷ್ಣನಗರಿ ಜನ

ಉಡುಪಿ : ಹಾಡಹಗಲೇ ಯುವತಿಗೆ ಯುವಕನೊಬ್ಬ ಚಾಕು ಇರಿದ ಘಟನೆ ಉಡುಪಿಯ ಸಂತೆಕಟ್ಟೆ ಬಳಿ ನಡೆದಿದೆ. ಯುವತಿಯ ಸ್ಕೂಟಿಯನ್ನು ತಡೆದು ನಿಲ್ಲಿಸಿದ ಯುವಕ ಆಕೆಯ ಕುತ್ತಿಗೆಗೆ ಚಾಕು ಇರಿದಿದ್ದಾನೆ.

ಸೌಮ್ಯಶ್ರೀ ಎಂಬುವಳು ಇರಿತಕ್ಕೊಳಗಾದ ಯುವತಿಯಾಗಿದ್ದಾಳೆ. ಮೆಡಿಕಲ್​ನಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಯುವತಿಯು ಕುಸಿದು ಬೀಳುತ್ತಿದ್ದಂತೆ ತನಗೆ ತಾನೇ ಚಾಕು ಇರಿದುಕೊಂಡಿದ್ದಾನೆ. ವಾರದ ಹಿಂದೆ ಯುವತಿಗೆ ಬೇರೆ ಯುವಕನೊಂದಿಗೆ ನಿಶ್ಚಿತಾರ್ಥ ಆಗಿತ್ತು ಎನ್ನಲಾಗಿದೆ.

ಯುವಕ ಹಾಗೂ ಯುವತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇರಿತಕ್ಕೆ ಕಾರಣ ಏನು ಅನ್ನೋದರ ಕುರಿತಾಗಿ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಡ್ರಗ್ಸ್​ ಪ್ರಕರಣ.. ಬೆಂಗಳೂರಲ್ಲಿ ಮಾಡೆಲ್​, ಡಿಜೆ ಮನೆ ಮೇಲೆ ಪೊಲೀಸ್​ ದಾಳಿ.. ಮೂವರು ವಶಕ್ಕೆ..

ಉಡುಪಿ : ಹಾಡಹಗಲೇ ಯುವತಿಗೆ ಯುವಕನೊಬ್ಬ ಚಾಕು ಇರಿದ ಘಟನೆ ಉಡುಪಿಯ ಸಂತೆಕಟ್ಟೆ ಬಳಿ ನಡೆದಿದೆ. ಯುವತಿಯ ಸ್ಕೂಟಿಯನ್ನು ತಡೆದು ನಿಲ್ಲಿಸಿದ ಯುವಕ ಆಕೆಯ ಕುತ್ತಿಗೆಗೆ ಚಾಕು ಇರಿದಿದ್ದಾನೆ.

ಸೌಮ್ಯಶ್ರೀ ಎಂಬುವಳು ಇರಿತಕ್ಕೊಳಗಾದ ಯುವತಿಯಾಗಿದ್ದಾಳೆ. ಮೆಡಿಕಲ್​ನಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಯುವತಿಯು ಕುಸಿದು ಬೀಳುತ್ತಿದ್ದಂತೆ ತನಗೆ ತಾನೇ ಚಾಕು ಇರಿದುಕೊಂಡಿದ್ದಾನೆ. ವಾರದ ಹಿಂದೆ ಯುವತಿಗೆ ಬೇರೆ ಯುವಕನೊಂದಿಗೆ ನಿಶ್ಚಿತಾರ್ಥ ಆಗಿತ್ತು ಎನ್ನಲಾಗಿದೆ.

ಯುವಕ ಹಾಗೂ ಯುವತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇರಿತಕ್ಕೆ ಕಾರಣ ಏನು ಅನ್ನೋದರ ಕುರಿತಾಗಿ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಡ್ರಗ್ಸ್​ ಪ್ರಕರಣ.. ಬೆಂಗಳೂರಲ್ಲಿ ಮಾಡೆಲ್​, ಡಿಜೆ ಮನೆ ಮೇಲೆ ಪೊಲೀಸ್​ ದಾಳಿ.. ಮೂವರು ವಶಕ್ಕೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.