ETV Bharat / state

ಕಡಲಲೆಗಳ ಅಬ್ಬರ ತಡೆಯುತ್ತಾ ಗ್ರೋಯೆನ್ಸ್ ತಡೆಗೋಡೆ?: ಈ ಮಳೆಗಾಲದಲ್ಲೇ ಸತ್ವಪರೀಕ್ಷೆ! - undefined

ಕಡಲ ಕೊರೆತವನ್ನು ತಡೆಯುವ ಸಲುವಾಗಿ ಉಡುಪಿಯ ಮಟ್ಟು ಬೀಚ್​​ನಿಂದ ಪಡುಕೆರೆಯವರೆಗೆ ಲಂಬಾಕಾರದ ಕಲ್ಲಿನ ಗೋಡೆಗಳನ್ನು ನಿರ್ಮಿಸಲಾಗಿದೆ. ಈ ವೈಜ್ಞಾನಿಕ ನಿರ್ಮಾಣವನ್ನು ‘ಗ್ರೋಯೆನ್ಸ್ ತಂತ್ರಜ್ಞಾನ’ ಎಂದು ಕರೆಯಲಾಗುತ್ತೆ.

Udupi
author img

By

Published : Jun 11, 2019, 11:32 PM IST

ಉಡುಪಿ: ಮಳೆಗಾಲ ಆರಂಭವಾಯ್ತೆಂದರೆ ಸಾಕು ಕಡಲ ತೀರದ ಜನರು ಮಾತ್ರ ದಿಗಿಲುಗೊಳ್ತಾರೆ. ಅಬ್ಬರಿಸುವ ಸಮುದ್ರದಲೆಗಳ ಜತೆ ಅದೆಷ್ಟೋ ಜನರ ಬದುಕೂ ಕೊಚ್ಚಿ ಹೋಗುತ್ತದೆ. ಆದರೆ ಈ ಬಾರಿ ಕಡಲ್ಕೊರೆತ ತಡೆಯಲು ಲಂಬಕೋನದ ‘ಗ್ರೋಯೆನ್ಸ್’ ತಡೆಗೋಡೆ ಹಾಕಲಾಗಿದ್ದು, ಬಹುಕೋಟಿ ವೆಚ್ಚದ ಈ ಗೋಡೆ ಈ ಮಳೆಗಾಲದಲ್ಲಿ ಸತ್ವ ಪರೀಕ್ಷೆಗೆ ಒಳಗಾಗಲಿದೆ.

ವರ್ಷಪ್ರತಿ ನಡೆಯುವ ಕಡಲ ಕೊರೆತವನ್ನು ತಡೆಯುವ ಸಲುವಾಗಿ ಮಟ್ಟು ಬೀಚ್​​ನಿಂದ ಪಡುಕೆರೆಯವರೆಗೆ ಲಂಬಾಕಾರದ ಕಲ್ಲಿನ ಗೋಡೆಗಳನ್ನು ನಿರ್ಮಿಸಲಾಗಿದೆ. ಈ ವೈಜ್ಞಾನಿಕ ನಿರ್ಮಾಣವನ್ನು ‘ಗ್ರೋಯೆನ್ಸ್ ತಂತ್ರಜ್ಞಾನ’ ಎಂದು ಕರೆಯಲಾಗುತ್ತದೆ. ಚೆನ್ನೈ ಕಡಲತೀರದಲ್ಲಿ ಅಳವಡಿಸಿ ಯಶಸ್ವಿಯಾದ ಈ ತಡೆಗೋಡೆಯನ್ನು ಕರ್ನಾಟಕ ಕರಾವಳಿಯಲ್ಲೂ ನಿರ್ಮಾಣ ಮಾಡಲಾಗಿದೆ. ಮತ್ತಷ್ಟು ಸಮರ್ಪಕವಾಗಿ ಈ ಯೋಜನೆ ರೂಪಿಸಬಹುದಿತ್ತು ಎಂದು ಸ್ಥಳೀಯರಾದ ಪ್ರಭಾಕರ್ ಅಭಿಪ್ರಾಯಪಟ್ಟರು.

ಕಡಲ ಕೊರೆತ ತಡೆಯಲು ‘ಗ್ರೋಯೆನ್ಸ್’ ತಡೆಗೋಡೆ ನಿರ್ಮಾಣ

ಈವರೆಗೆ ಕಡಲಕೊರೆತಕ್ಕೆ ಸಮಾನಾಂತರ ಮಾದರಿಯ ಕಲ್ಲಿನ ಗೋಡೆ ಹಾಕಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ‘ಸೀವಾಕ್’ ಮಾದರಿಯ ಲಂಬಕೋನದ ತಡೆಗೋಡೆ ನಿರ್ಮಿಸಲಾಗಿದೆ. ತಲಾ 120 ಮೀಟರ್ ಅಂತರದಲ್ಲಿ ‘ಐ’ ಆಕಾರದಲ್ಲಿ 35 ದಿಬ್ಬಗಳನ್ನು ನಿರ್ಮಿಸಲಾಗಿದೆ. ಈ ಬ್ರೇಕ್ ವಾಟರ್ ತಂತ್ರಜ್ಞಾನ ಮಳೆಗಾಲದಲ್ಲಿ ಸರಿಯಾದ ರಿಸಲ್ಟ್ ಕೊಡುತ್ತಾ? ಅಥವಾ ಮತ್ತಷ್ಟು ಕಲ್ಲುಗಳನ್ನು ಸಮುದ್ರಕ್ಕೆ ಆಹುತಿ ನೀಡಿದ್ದೇ ಸಾಧನೆಯಾಗುತ್ತಾ? ಎನ್ನುವುದನ್ನು ಕಾದು ನೋಡಬೇಕು ಎಂದು ಕಡಲ ತೀರದ ನಿವಾಸಿ ಪಲ್ಲವಿ ಹೇಳುತ್ತಾರೆ.

ಅಂದಾಜು 78 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಗ್ರೋಯೆನ್ಸ್ ದಿಬ್ಬ ನಿರ್ಮಾಣವಾಗಿದೆ. ಬೀಚ್​ಗಳನ್ನು ಅಭಿವೃದ್ಧಿ ಮಾಡುವ ಉದ್ದೇಶವೂ ಈ ಯೋಜನೆಯಲ್ಲಿದೆ.

ಉಡುಪಿ: ಮಳೆಗಾಲ ಆರಂಭವಾಯ್ತೆಂದರೆ ಸಾಕು ಕಡಲ ತೀರದ ಜನರು ಮಾತ್ರ ದಿಗಿಲುಗೊಳ್ತಾರೆ. ಅಬ್ಬರಿಸುವ ಸಮುದ್ರದಲೆಗಳ ಜತೆ ಅದೆಷ್ಟೋ ಜನರ ಬದುಕೂ ಕೊಚ್ಚಿ ಹೋಗುತ್ತದೆ. ಆದರೆ ಈ ಬಾರಿ ಕಡಲ್ಕೊರೆತ ತಡೆಯಲು ಲಂಬಕೋನದ ‘ಗ್ರೋಯೆನ್ಸ್’ ತಡೆಗೋಡೆ ಹಾಕಲಾಗಿದ್ದು, ಬಹುಕೋಟಿ ವೆಚ್ಚದ ಈ ಗೋಡೆ ಈ ಮಳೆಗಾಲದಲ್ಲಿ ಸತ್ವ ಪರೀಕ್ಷೆಗೆ ಒಳಗಾಗಲಿದೆ.

ವರ್ಷಪ್ರತಿ ನಡೆಯುವ ಕಡಲ ಕೊರೆತವನ್ನು ತಡೆಯುವ ಸಲುವಾಗಿ ಮಟ್ಟು ಬೀಚ್​​ನಿಂದ ಪಡುಕೆರೆಯವರೆಗೆ ಲಂಬಾಕಾರದ ಕಲ್ಲಿನ ಗೋಡೆಗಳನ್ನು ನಿರ್ಮಿಸಲಾಗಿದೆ. ಈ ವೈಜ್ಞಾನಿಕ ನಿರ್ಮಾಣವನ್ನು ‘ಗ್ರೋಯೆನ್ಸ್ ತಂತ್ರಜ್ಞಾನ’ ಎಂದು ಕರೆಯಲಾಗುತ್ತದೆ. ಚೆನ್ನೈ ಕಡಲತೀರದಲ್ಲಿ ಅಳವಡಿಸಿ ಯಶಸ್ವಿಯಾದ ಈ ತಡೆಗೋಡೆಯನ್ನು ಕರ್ನಾಟಕ ಕರಾವಳಿಯಲ್ಲೂ ನಿರ್ಮಾಣ ಮಾಡಲಾಗಿದೆ. ಮತ್ತಷ್ಟು ಸಮರ್ಪಕವಾಗಿ ಈ ಯೋಜನೆ ರೂಪಿಸಬಹುದಿತ್ತು ಎಂದು ಸ್ಥಳೀಯರಾದ ಪ್ರಭಾಕರ್ ಅಭಿಪ್ರಾಯಪಟ್ಟರು.

ಕಡಲ ಕೊರೆತ ತಡೆಯಲು ‘ಗ್ರೋಯೆನ್ಸ್’ ತಡೆಗೋಡೆ ನಿರ್ಮಾಣ

ಈವರೆಗೆ ಕಡಲಕೊರೆತಕ್ಕೆ ಸಮಾನಾಂತರ ಮಾದರಿಯ ಕಲ್ಲಿನ ಗೋಡೆ ಹಾಕಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ‘ಸೀವಾಕ್’ ಮಾದರಿಯ ಲಂಬಕೋನದ ತಡೆಗೋಡೆ ನಿರ್ಮಿಸಲಾಗಿದೆ. ತಲಾ 120 ಮೀಟರ್ ಅಂತರದಲ್ಲಿ ‘ಐ’ ಆಕಾರದಲ್ಲಿ 35 ದಿಬ್ಬಗಳನ್ನು ನಿರ್ಮಿಸಲಾಗಿದೆ. ಈ ಬ್ರೇಕ್ ವಾಟರ್ ತಂತ್ರಜ್ಞಾನ ಮಳೆಗಾಲದಲ್ಲಿ ಸರಿಯಾದ ರಿಸಲ್ಟ್ ಕೊಡುತ್ತಾ? ಅಥವಾ ಮತ್ತಷ್ಟು ಕಲ್ಲುಗಳನ್ನು ಸಮುದ್ರಕ್ಕೆ ಆಹುತಿ ನೀಡಿದ್ದೇ ಸಾಧನೆಯಾಗುತ್ತಾ? ಎನ್ನುವುದನ್ನು ಕಾದು ನೋಡಬೇಕು ಎಂದು ಕಡಲ ತೀರದ ನಿವಾಸಿ ಪಲ್ಲವಿ ಹೇಳುತ್ತಾರೆ.

ಅಂದಾಜು 78 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಗ್ರೋಯೆನ್ಸ್ ದಿಬ್ಬ ನಿರ್ಮಾಣವಾಗಿದೆ. ಬೀಚ್​ಗಳನ್ನು ಅಭಿವೃದ್ಧಿ ಮಾಡುವ ಉದ್ದೇಶವೂ ಈ ಯೋಜನೆಯಲ್ಲಿದೆ.

Intro:Anchor_ಮಳೆಗಾಲದಲ್ಲಿ ಅಬ್ಬರಿಸುವ ಕಡಲನ್ನು ದೂರದಲ್ಲಿ ನಿಂತು ನೋಡೋದೇ ಒಂದು ಮಜಾ; ಆದರೆ ಕಡಲ ತೀರದ ಜನರಿಗೆ ಮಾತ್ರ ಇದು ದೊಡ್ಡ ಸಜಾ. ಸಮುದ್ರದ ಅಲೆಗಳು ಪ್ರತಿ ಮಳೆಗಾಲದಲ್ಲೂ ಅದೆಷ್ಟೋ ಜನರ ಬದುಕನ್ನೂ ಕೊಚ್ಚಿ ಕೊಂಡೊಯ್ಯುತ್ತದೆ. ಆದರೆ ಈ ಬಾರಿ ಕಡಲಕೊರೆತ ತಡೆಯಲು ಲಂಬಕೋನದ ‘ಗ್ರೋಯೆನ್ಸ್’ ತಡೆಗೋಡೆ ಹಾಕಲಾಗಿದೆ. ಬಹುಕೋಟಿ ವೆಚ್ಚದ ಈ ಆಕರ್ಷಕ ಗೋಡೆಗಳ ಸತ್ವ ಪರೀಕ್ಷೆ ಈ ಮಳೆಗಾಲದಲ್ಲಿ ನಡೆಯಲಿದೆ!



V1_-ಆಳೆತ್ತರದ ಸಮುದ್ರದ ಅಲೆಗಳ ಮೇಲೆ ನಡೆಯಬೇಕು, ಅವುಗಳ ನಡುವೆ ನಿಂತು ಎರಡೂ ಕೈ ಮೇಲೆತ್ತಿ ಆಕಾಶ ನೋಡಿ ಕೂಗಬೇಕು ಅನ್ನೋದು ಎಷ್ಟೋ ಜನರ ಆಸೆ. ಈ ಅಬ್ಬರಿಸುವ ಕಡಲನ್ನೊಮ್ಮೆ ನೋಡಿ..ಸುತ್ತಲೂ ನೀರು, ನಡುವಲ್ಲಿ ಹಾಕಿರುವ ಈ ಕಲ್ಲಿನ ಗೋಪುರದ ಮೇಲೆ ನಿಂತರೆ ನಿಮ್ಮ ಕನಸು ಈಡೇರಬಹುದು.


V2_ಆದರೆ ಭಾರೀ ಗಾತ್ರದ ಕಲ್ಲುಗಳನ್ನು ಈ ರೀತಿಯಲ್ಲಿ ಜೋಡಿಸಿದ ಉದ್ದೇಶವೇ ಬೇರೆ, ವರ್ಷಂಪ್ರತಿ ಮಳೆಗಾಲ ಬಂದಾಗ ಕಡಲು ಅಬ್ಬರಿಸುತ್ತೆ, ಕಡಲತೀರದ ಜನರ ರಕ್ತದೊತ್ತಡ ಏರುತ್ತೆ! ಅಲೆಗಳು ಬಂದು ಎಲ್ಲಿ ನಮ್ಮ ಬದುಕನ್ನು ಕೊಚ್ಚಿ ಹಾಕುತ್ತೋ ಅನ್ನೋ ಆತಂಕ ಶುರುವಾಗುತ್ತೆ. ಈ ಕಡಲು ಕೊರೆತವನ್ನು ತಡೆಯಲು ಸದ್ಯ ಮಟ್ಟು ಬೀಚ್ ನಿಂದ ಪಡುಕೆರೆಯವರೆಗೆ ಲಂಬಾಕಾರದ ಕಲ್ಲಿನ ಗೋಡೆಗಳನ್ನು ಪೇರಿಸಲಾಗುತ್ತಿದೆ. ಈ ವೈಜ್ಞಾನಿಕ ನಿರ್ಮಾಣವನ್ನು ‘ಗ್ರೋಯೆನ್ಸ್ ತಂತ್ರಜ್ಞಾನ’ ಎಂದು ಕರೆಯಲಾಗುತ್ತೆ. ಚೆನ್ನೈ ಕಡಲತೀರದಲ್ಲಿ ಅಳವಡಿಸಿ ಯಶಸ್ವಿಯಾದ ಈ ತಡೆಗೋಡೆಯನ್ನು ಕರ್ನಾಟಕ ಕರಾವಳಿಯಲ್ಲೂ ನಿರ್ಮಾಣ ಮಾಡಲಾಗಿದೆ.



Byte02_ಪ್ರಭಾಕರ್ (ಸ್ಥಳೀಯ ರು)



V3-ಈ ವರೆಗೆ ಕಡಲುಕೊರೆತಕ್ಕೆ ಸಮಾನಾಂತರ ಮಾದರಿಯ ಕಲ್ಲಿನ ಗೋಡೆ ಹಾಕಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ‘ಸೀವಾಕ್’ ಮಾದರಿಯ ಲಂಬಕೋನದ ಗೋಡೆ ನಿರ್ಮಿಸಲಾಗಿದೆ. ತಲಾ 120 ಮೀಟರ್ ಅಂತರದಲ್ಲಿ ‘ಐ’ ಆಕಾರದಲ್ಲಿ 35 ದಿಬ್ಬಗಳನ್ನು ನಿರ್ಮಾಣ ಮಾಡಲಾಗಿದೆ. ಈ ಬ್ರೇಕ್ ವಾಟರ್ ತಂತ್ರಜ್ಞಾನ ಈ ಮಳೆಗಾಲದಲ್ಲಿ ಸರಿಯಾದ ರಿಸಲ್ಟ್ ಕೊಡುತ್ತಾ? ಅಥವಾ ಮತ್ತಷ್ಟು ಕಲ್ಲುಗಳನ್ನು ಸಮುದ್ರಕ್ಕೆ ಆಹುತಿ ನೀಡಿದ್ದೇ ಸಾಧನೆಯಾಗುತ್ತಾ? ಕಾದು ನೋಡಬೇಕು. ಸಮುದ್ರದ ಚಲನವಲನ ಚೆನ್ನಾಗಿ ಅರಿತಿರುವ ಮೀನುಗಾರರಿಗೆ ಮಾತ್ರ ಈ ತಂತ್ರಜ್ಞಾನದ ಮೇಲೆ ಅಷ್ಟೊಂದು ಭರವಸೆ ಇಲ್ಲ.



Byte_02ಪಲ್ಲವಿ (ಸಮುದ್ರ ತೀರಾ ನಿವಾಸಿ)



V4_ಅಂದಾಜು 78 ಕೋಟಿ ರುಪಾಯಿ ವೆಚ್ಚದಲ್ಲಿ ಈ ಗ್ರೋಯೆನ್ಸ್ ದಿಬ್ಬ ನಿರ್ಮಾಣವಾಗಿದೆ. ಬೀಚ್ ಗಳನ್ನು ಅಭಿವೃದ್ಧಿ ಮಾಡುವ ಉದ್ದೇಶವೂ ಈ ಯೋಜನೆಯಲ್ಲಿ ಅಡಗಿದೆ. ಇನ್ನಾದರೂ ಮೀನುಗಾರರ ಆತಂಕ ದೂರವಾಗಲಿ, ಅಬ್ಬರಿಸುವ ಕಡಲನ್ನು ಈ ಬ್ರೇಕ್ ವಾಟರ್ ಗಳು ತಡೆಯಲಿ ಅನ್ನೋದೇ ನಮ್ಮ ಆಶಯ

ಹರ್ಷರಾಜ್ ಕೊಡಿ ಕನ್ಯಾಣ, ಉಡುಪಿBody:ಕಡಲಕೊರೆತConclusion:ಕಡಲ ಕೊರೆತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.