ETV Bharat / state

ತುಮಕೂರು : 90 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಜ್ಯೋತಿ ಗಣೇಶ್ ಚಾಲನೆ

ಮುಖ್ಯಮಂತ್ರಿ ವಿವೇಚನಾ ಕೋಟಾದಡಿ 90 ಲಕ್ಷ ರೂ. ಹಣ ವೆಚ್ಚದ ರಸ್ತೆ ಕಾಮಗಾರಿಗೆ ಇಂದು ಶಾಸಕ ಜ್ಯೋತಿ ಗಣೇಶ್ ಚಾಲನೆ ನೀಡಿದ್ರು.

author img

By

Published : Sep 20, 2020, 10:09 PM IST

Updated : Sep 21, 2020, 8:54 AM IST

road work  started under smart city project
ರಸ್ತೆ ಕಾಮಗಾರಿಗೆ ಶಾಸಕ ಜ್ಯೋತಿಗಣೇಶ್ ಚಾಲನೆ

ತುಮಕೂರು: ಸ್ಮಾರ್ಟ್​​ ಸಿಟಿ ಯೋಜನೆ ಅಡಿ ರಸ್ತೆ ಭಾಗ್ಯ ದೊರೆಯದ ತುಮಕೂರು ಮಹಾನಗರ ಪಾಲಿಕೆಯ 35ನೇ ವಾರ್ಡ್​ಗೆ ಮುಖ್ಯಮಂತ್ರಿ ವಿವೇಚನಾ ಕೋಟಾದಡಿ ರಸ್ತೆ ಅಭಿವೃದ್ಧಿಗೆ ನಗರ ಶಾಸಕ ಜ್ಯೋತಿ ಗಣೇಶ್ ಚಾಲನೆ ನೀಡಿದರು.

ರಸ್ತೆ ಕಾಮಗಾರಿಗೆ ಶಾಸಕ ಜ್ಯೋತಿಗಣೇಶ್ ಚಾಲನೆ

ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಬಿಡುಗಡೆಯಾದ 90 ಲಕ್ಷ ರೂ. ಹಣ ವೆಚ್ಚದ ಕಾಮಗಾರಿ ಆರಂಭಿಸಲಾಯಿತು. ತುಮಕೂರು ಮಹಾನಗರ ಪಾಲಿಕೆಯಲ್ಲಿಯೇ ಅತಿದೊಡ್ಡ ವಾರ್ಡ್ ಆಗಿರುವಂತಹ 35ನೇ ವಾರ್ಡ್ ವ್ಯಾಪ್ತಿಗೆ ಬಂಡೆಪಾಳ್ಯ, ದೇವರಾಯಪಟ್ಟಣ, ಸಿದ್ದರಾಮೇಶ್ವರ ಬಡಾವಣೆ, ಮಹಾಲಕ್ಷ್ಮಿ ಬಡಾವಣೆ, ಶ್ರೀನಗರ ಬಡಾವಣೆಗಳು ಸೇರಲಿದ್ದು ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಟ್ರ್ಯಾಕ್ ಗಳು ವಾರ್ಡ್ ವ್ಯಾಪ್ತಿಯಲ್ಲಿ ಬರುತ್ತವೆ. ಇದು ಒಂದು ರೀತಿ ವಾರ್ಡ್ ವಿಂಗಡನೆ ವೇಳೆ ವಿಚಿತ್ರವಾಗಿ ನಿರ್ಧಾರವನ್ನು ತೆಗೆದುಕೊಂಡಿದ್ದೇ ಇಂತಹ ವಾರ್ಡ್ ಪರಿವರ್ತನೆಯಾಗಲು ಕಾರಣವಾಗಿದೆ.

ಸ್ಮಾರ್ಟ್ ಸಿಟಿ ಕಾಮಗಾರಿ ಎಲ್ಲಾ ಬಡಾವಣೆಗಳಿಗೂ ದೊರೆಯುತ್ತಿಲ್ಲ ಎಂಬ ಕೊರಗು ಬರಬಾರದು ಎಂಬ ಉದ್ದೇಶವನ್ನು ಹೊಂದಲಾಗಿದ್ದು ಮುಖ್ಯಮಂತ್ರಿ ವಿವೇಚನಾ ಕೋಟಾದಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಎಲ್ಲಾ ವಾರ್ಡ್​​ಗಳ ವರ್ಗದ ಅಭಿವೃದ್ಧಿಗೆ ಮಾತ್ರ ಹಣ ವಿನಿಯೋಗಿಸಲಾಗುತ್ತಿದೆ ಅಲ್ಲದೆ ನಿರ್ದಿಷ್ಟ ಪ್ರದೇಶದ ರಸ್ತೆ ಅಭಿವೃದ್ಧಿಗೆ ಮಾತ್ರ ಸ್ಮಾರ್ಟ್ ಸಿಟಿ ಯೋಜನೆಯಿಂದ ಹಣ ದೊರೆಯುತ್ತಿದೆ ಎಂದು ತಿಳಿಸಿದರು.

ತುಮಕೂರು: ಸ್ಮಾರ್ಟ್​​ ಸಿಟಿ ಯೋಜನೆ ಅಡಿ ರಸ್ತೆ ಭಾಗ್ಯ ದೊರೆಯದ ತುಮಕೂರು ಮಹಾನಗರ ಪಾಲಿಕೆಯ 35ನೇ ವಾರ್ಡ್​ಗೆ ಮುಖ್ಯಮಂತ್ರಿ ವಿವೇಚನಾ ಕೋಟಾದಡಿ ರಸ್ತೆ ಅಭಿವೃದ್ಧಿಗೆ ನಗರ ಶಾಸಕ ಜ್ಯೋತಿ ಗಣೇಶ್ ಚಾಲನೆ ನೀಡಿದರು.

ರಸ್ತೆ ಕಾಮಗಾರಿಗೆ ಶಾಸಕ ಜ್ಯೋತಿಗಣೇಶ್ ಚಾಲನೆ

ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಬಿಡುಗಡೆಯಾದ 90 ಲಕ್ಷ ರೂ. ಹಣ ವೆಚ್ಚದ ಕಾಮಗಾರಿ ಆರಂಭಿಸಲಾಯಿತು. ತುಮಕೂರು ಮಹಾನಗರ ಪಾಲಿಕೆಯಲ್ಲಿಯೇ ಅತಿದೊಡ್ಡ ವಾರ್ಡ್ ಆಗಿರುವಂತಹ 35ನೇ ವಾರ್ಡ್ ವ್ಯಾಪ್ತಿಗೆ ಬಂಡೆಪಾಳ್ಯ, ದೇವರಾಯಪಟ್ಟಣ, ಸಿದ್ದರಾಮೇಶ್ವರ ಬಡಾವಣೆ, ಮಹಾಲಕ್ಷ್ಮಿ ಬಡಾವಣೆ, ಶ್ರೀನಗರ ಬಡಾವಣೆಗಳು ಸೇರಲಿದ್ದು ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಟ್ರ್ಯಾಕ್ ಗಳು ವಾರ್ಡ್ ವ್ಯಾಪ್ತಿಯಲ್ಲಿ ಬರುತ್ತವೆ. ಇದು ಒಂದು ರೀತಿ ವಾರ್ಡ್ ವಿಂಗಡನೆ ವೇಳೆ ವಿಚಿತ್ರವಾಗಿ ನಿರ್ಧಾರವನ್ನು ತೆಗೆದುಕೊಂಡಿದ್ದೇ ಇಂತಹ ವಾರ್ಡ್ ಪರಿವರ್ತನೆಯಾಗಲು ಕಾರಣವಾಗಿದೆ.

ಸ್ಮಾರ್ಟ್ ಸಿಟಿ ಕಾಮಗಾರಿ ಎಲ್ಲಾ ಬಡಾವಣೆಗಳಿಗೂ ದೊರೆಯುತ್ತಿಲ್ಲ ಎಂಬ ಕೊರಗು ಬರಬಾರದು ಎಂಬ ಉದ್ದೇಶವನ್ನು ಹೊಂದಲಾಗಿದ್ದು ಮುಖ್ಯಮಂತ್ರಿ ವಿವೇಚನಾ ಕೋಟಾದಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಎಲ್ಲಾ ವಾರ್ಡ್​​ಗಳ ವರ್ಗದ ಅಭಿವೃದ್ಧಿಗೆ ಮಾತ್ರ ಹಣ ವಿನಿಯೋಗಿಸಲಾಗುತ್ತಿದೆ ಅಲ್ಲದೆ ನಿರ್ದಿಷ್ಟ ಪ್ರದೇಶದ ರಸ್ತೆ ಅಭಿವೃದ್ಧಿಗೆ ಮಾತ್ರ ಸ್ಮಾರ್ಟ್ ಸಿಟಿ ಯೋಜನೆಯಿಂದ ಹಣ ದೊರೆಯುತ್ತಿದೆ ಎಂದು ತಿಳಿಸಿದರು.

Last Updated : Sep 21, 2020, 8:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.