ETV Bharat / state

ಕಿಡಿಗೇಡಿಗಳ ಪುಂಡಾಟ... ಕಾಲೇಜು​ ಕಟ್ಟಡದ ಗಾಜು, ವಿದ್ಯುತ್​ ದೀಪ ಪುಡಿಪುಡಿ - ಸರ್ಕಾರಿ ಜೂನಿಯರ್ ಕಾಲೇಜ್ ತುಮಕೂರು

ಸ್ವಾತಂತ್ರ್ಯ ಪೂರ್ವದಿಂದಲೂ ಇರುವ ಸರ್ಕಾರಿ ಜೂನಿಯರ್ ಕಾಲೇಜ್ ಮತ್ತು ಪ್ರೌಢಶಾಲೆಯಲ್ಲಿ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದ್ದು, ಕಟ್ಟಡದ ಕಿಟಕಿ ಗಾಜು, ವಿದ್ಯುತ್ ದೀಪಗಳನ್ನು ಒಡೆದು ಹಾಕುತ್ತಿದ್ದಾರೆ.

ಕಿಡಿಗೇಡಿಗಳ ಪುಂಡಾಟ..
author img

By

Published : Aug 27, 2019, 4:45 AM IST

ತುಮಕೂರು: ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜ್ ಮತ್ತು ಪ್ರೌಢ ಶಾಲೆಯಲ್ಲಿ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದೆ. ಈ ಕಾಲೇಜಿನ ಹಾಗೂ ಪ್ರೌಢ ಶಾಲೆಯ ಆವರಣದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸ ಮಾಡಿದರೂ ಅದನ್ನು ಹಾಳುಗೆಡವುತ್ತಿದ್ದಾರೆ.

ಕಿಡಿಗೇಡಿಗಳ ಪುಂಡಾಟ..

ಹೌದು, ಸ್ವಾತಂತ್ರ್ಯ ಪೂರ್ವದಿಂದಲೂ ಇರುವ ಸರ್ಕಾರಿ ಶಾಲಾ ಕಟ್ಟಡದ ಸುತ್ತಲೂ ಎಷ್ಟೇ ವಿದ್ಯುತ್ ದೀಪಗಳನ್ನು ಅಳವಡಿಸಿದರೂ ಪ್ರಯೋಜನಕ್ಕೆ ಬಾರದಂತಾಗಿದೆ. ರಾತ್ರಿ ಹೊತ್ತಲ್ಲಿ ಕಟ್ಟಡದ ಕಿಟಕಿ ಗಾಜುಗಳನ್ನು, ವಿದ್ಯುತ್ ದೀಪಗಳನ್ನು ಒಡೆದು ಹಾಕುತ್ತಿದ್ದಾರೆ.

ಮಕ್ಕಳ ಉಜ್ವಲ ಭವಿಷ್ಯ ನಿರ್ಮಿಸುವ ವಿದ್ಯಾಸಂಸ್ಥೆಯ ಕಟ್ಟಡ ಈಗ ಕಿಡಿಗೇಡಿಗಳ ಅಡ್ಡವಾಗಿದ್ದು, ಸಂಬಂಧಿತರು ಈ ಬಗ್ಗೆ ಗಮನ ಹರಿಸಬೇಕಿದೆ.

ತುಮಕೂರು: ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜ್ ಮತ್ತು ಪ್ರೌಢ ಶಾಲೆಯಲ್ಲಿ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದೆ. ಈ ಕಾಲೇಜಿನ ಹಾಗೂ ಪ್ರೌಢ ಶಾಲೆಯ ಆವರಣದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸ ಮಾಡಿದರೂ ಅದನ್ನು ಹಾಳುಗೆಡವುತ್ತಿದ್ದಾರೆ.

ಕಿಡಿಗೇಡಿಗಳ ಪುಂಡಾಟ..

ಹೌದು, ಸ್ವಾತಂತ್ರ್ಯ ಪೂರ್ವದಿಂದಲೂ ಇರುವ ಸರ್ಕಾರಿ ಶಾಲಾ ಕಟ್ಟಡದ ಸುತ್ತಲೂ ಎಷ್ಟೇ ವಿದ್ಯುತ್ ದೀಪಗಳನ್ನು ಅಳವಡಿಸಿದರೂ ಪ್ರಯೋಜನಕ್ಕೆ ಬಾರದಂತಾಗಿದೆ. ರಾತ್ರಿ ಹೊತ್ತಲ್ಲಿ ಕಟ್ಟಡದ ಕಿಟಕಿ ಗಾಜುಗಳನ್ನು, ವಿದ್ಯುತ್ ದೀಪಗಳನ್ನು ಒಡೆದು ಹಾಕುತ್ತಿದ್ದಾರೆ.

ಮಕ್ಕಳ ಉಜ್ವಲ ಭವಿಷ್ಯ ನಿರ್ಮಿಸುವ ವಿದ್ಯಾಸಂಸ್ಥೆಯ ಕಟ್ಟಡ ಈಗ ಕಿಡಿಗೇಡಿಗಳ ಅಡ್ಡವಾಗಿದ್ದು, ಸಂಬಂಧಿತರು ಈ ಬಗ್ಗೆ ಗಮನ ಹರಿಸಬೇಕಿದೆ.

Intro:ದುಷ್ಕರ್ಮಿಗಳ ಪುಂಡಾಟಕ್ಕೆ ನಲುಗಿದೆ ಸರಕಾರಿ ಶಾಲಾ ಪರಿಸರ....

ತುಮಕೂರು
ತುಮಕೂರು ನಗರದ ಹೃದಯಭಾಗದಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜ್ ಮತ್ತು ಪ್ರೌಢಶಾಲೆ ಪುಂಡುಪೋಕರಿಗಳ ಪುಂಡಾಟಕ್ಕೆ ನಲುಗಿಹೋಗಿದೆ. ಈ ಕಾಲೇಜಿನ ಹಾಗೂ ಪ್ರೌಢಶಾಲೆಯ ಆವರಣದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ಮಾಡಿದರೂ ಅದನ್ನು ಹಾಳುಗೆಡವುವ ಪುಂಡರು ಅಟ್ಟಹಾಸ ಮೆರೆಯುತ್ತಿದ್ದಾರೆ.

ಹೌದು ಸ್ವಾತಂತ್ರ್ಯಪೂರ್ವದಿಂದಲೂ ಅಸ್ತಿತ್ವದಲ್ಲಿರುವ ಈ ಸರ್ಕಾರಿ ಶಾಲಾ ಕಟ್ಟಡದ ಸುತ್ತಲೂ ಎಷ್ಟೇ ವಿದ್ಯುತ್ ದೀಪಗಳನ್ನು ಅಳವಡಿಸಿದರೂ ಪ್ರಯೋಜನಕ್ಕೆ ಬಾರದಂತಾಗಿದೆ. ಏಕೆಂದರೆ ಬೀದಿ ದೀಪಗಳನ್ನು ಆವರಣದಲ್ಲಿ ಅಳವಡಿಸಿದರೆ ರಾತ್ರೋರಾತ್ರಿ ಇಲ್ಲಿಗೆ ಬರೋ ದುಷ್ಕರ್ಮಿಗಳು ಹೊಡೆದು ಹಾಕುತ್ತಿದ್ದಾರೆ. ಜೂನಿಯರ್ ಕಾಲೇಜ್ ಹಾಗೂ ಪ್ರೌಢಶಾಲಾ ವಿಭಾಗ ಇರುವಂತಹ ಈ ಕಟ್ಟಡದಲ್ಲಿ ಪ್ರಾಂಶುಪಾಲರು ಬೀದಿ ದೀಪಗಳನ್ನು ಅಳವಡಿಸುವಂತೆ ಮಹಾನಗರಪಾಲಿಕೆ ಮೂಲಕ ನಾಲ್ಕು ಬಾರಿ ಮನವಿ ಮಾಡಿಕೊಂಡು ಅಳವಡಿಸಿದ್ರು. ಆದ್ರೆ ಪ್ರತಿ ಬಾರಿಯೂ ಪುಂಡರು ಹಾಳುಗೆಡವಿದ್ದಾರೆ.
ರಾತ್ರಿ ವೇಳೆಯಂತೂ ಇದು ಒಂದು ರೀತಿ ಶಾಲಾ ಆವರಣ ಅನೈತಿಕ ಚಟುವಟಿಕೆಯ ತಾಣವಾಗಿ ಪರಿವರ್ತನೆಗೊಳ್ಳುವುದು ವಿಷಾದನೀಯವಾಗಿದೆ.

ಇನ್ನು ಸ್ಮಾರ್ಟ್ ಸಿಟಿ ಯೋಜನೆ ವತಿಯಿಂದ ಪ್ರೌಢಶಾಲೆ ಮತ್ತು ಕಾಲೇಜಿಗೆ ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆ ಮಾಡಲಾಗಿದೆ. ಆದರೆ ದುಷ್ಕರ್ಮಿಗಳ ವಿಕೃತ ಮನಸ್ಸಿಗೆ ಈ ಕಂಪ್ಯೂಟರ್ ಕೊಠಡಿ ಕೂಡ ಬಲಿಯಾಗಿದೆ. ಈ ಕೊಠಡಿಯ ಸುತ್ತಲೂ ಇರುವ ಕಿಟಕಿಯ ಗಾಜುಗಳನ್ನು ಪುಡಿಗಟ್ಟಿರುವ ಪುಂಡರು ವಿಕೃತ ಸಂತೋಷ ಅನುಭವಿಸಿದ್ದಾರೆ.
ಹೀಗಾಗಿ ಈ ಕಾಲೇಜಿಗೆ ಹೆಚ್ಚುವರಿಯಾಗಿ ಶೈಕ್ಷಣಿಕ ಸೌಲಭ್ಯವನ್ನು ಕಲ್ಪಿಸಲು ಕೂಡ ದಾನಿಗಳು ಇರಬಹುದು ಹಾಗೂ ಸ್ಮಾರ್ಟ್ ಸಿಟಿ ಯೋಜನೆ ವತಿಯಿಂದ ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಇನ್ನು ಈ ಕಾಲೇಜಿನ ಸುತ್ತಲೂ ಎತ್ತರದ ಕಾಂಪೌಂಡ್ ನಿರ್ಮಿಸಿದರೆ ರಾತ್ರಿವೇಳೆ ಈರೀತಿ ಪುಂಡರ ಪುಂಡಾಟಿಕೆಗೆ ಕಡಿವಾಣ ಹಾಕಬಹುದಾಗಿದೆ. ಈ ಮೂಲಕ ಉತ್ತಮ ಶೈಕ್ಷಣಿಕ ಪರಿಸರವನ್ನು ನಿರ್ಮಿಸಬಹುದಾಗಿದೆ ಎನ್ನುತ್ತಾರೆ ಸ್ಥಳೀಯರು. ಇನ್ನು ಮುಂದಾದರೂ ಜಿಲ್ಲಾಡಳಿತ ಇತ್ತ ಗಮನಹರಿಸಿ ಪೂರಕ ಕ್ರಮ ಕೈಗೊಳ್ಳಬೇಕಿದೆ.

ಬೈಟ್: ಪಾಷ, ಸ್ಥಳೀಯರು.....



Body:ತುಮಕೂರು


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.