ETV Bharat / state

ಕೆಡಿಪಿ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಸಚಿವ ಮಾಧುಸ್ವಾಮಿ ಆಕ್ರೋಶ - ಕೆಡಿಪಿ ಸಭೆ

ಕೆಡಿಪಿ ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಸಚಿವ ಮಾಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ಮಾಹಿತಿ ನೀಡುವ ಹಾಗಿದ್ರೆ ನೀಡಿ ಇಲ್ಲ ಅಂದ್ರೆ ಆಚೆ ಹೋಗಿ ಎಂದು ಖಡಕ್ಕಾಗಿ ಸೂಚಿಸಿದರು.

ಕೆಡಿಪಿ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಸಚಿವ ಮಾಧುಸ್ವಾಮಿ ಆಕ್ರೋಶ
author img

By

Published : Oct 19, 2019, 10:10 PM IST

ತುಮಕೂರು‌: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಗೆ ಕಾರ್ಮಿಕ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಇಲ್ಲದೇ ಸಹಾಯಕ ಅಧಿಕಾರಿ ಹಾಜರಾಗಿದ್ದಕ್ಕೆ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ಕೆಂಡಾಮಂಡಲರಾದರು.

ಕೆಡಿಪಿ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಸಚಿವ ಮಾಧುಸ್ವಾಮಿ ಆಕ್ರೋಶ

ತಿಪಟೂರು ತಾಲೂಕಿನ ಬಗ್ಗೆ ಮಾಹಿತಿ ನೀಡುತ್ತಿದ್ದ ಸಹಾಯಕ ಅಧಿಕಾರಿಯನ್ನು, ತಕ್ಷಣ ನೀವ್ಯಾರು ಎಂದು ಪ್ರಶ್ನೆ ಕೇಳಿದ ಸಚಿವರು, ಕಾರ್ಮಿಕ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಸಭೆ ಹಾಜರಾಗದೆ ಅಸಿಸ್ಟೆಂಟ್​ನನ್ನು ಸಭೆಗೆ ಕಳುಹಿಸಿರುವುದನ್ನು ತಿಳಿದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ್ರು.

ಯಾತಕ್ಕೆ ಇದ್ದಿರಿ ಇಲ್ಲಿ..? ಈ ಮುಂಚೆಯೇ ಕ್ಲಿಯರ್ ಕಟ್ಟಾಗಿ ಜಿಲ್ಲಾಧಿಕಾರಿ ಮೀಟಿಂಗ್ ಕರೆದು ಹೇಳಿದ್ದೇನೆ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನ ಬಿಟ್ಟು ಯಾವುದೇ ಕಾರಣಕ್ಕೂ ಅಸಿಸ್ಟೆಂಡ್​ಗಳು ಸಭೆಗೆ ಹಾಜರಾಗದಂತೆ ಎಂದು ಮಾಧುಸ್ವಾಮಿ ತಿಳಿಸಿದರು.

ತುಮಕೂರು‌: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಗೆ ಕಾರ್ಮಿಕ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಇಲ್ಲದೇ ಸಹಾಯಕ ಅಧಿಕಾರಿ ಹಾಜರಾಗಿದ್ದಕ್ಕೆ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ಕೆಂಡಾಮಂಡಲರಾದರು.

ಕೆಡಿಪಿ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಸಚಿವ ಮಾಧುಸ್ವಾಮಿ ಆಕ್ರೋಶ

ತಿಪಟೂರು ತಾಲೂಕಿನ ಬಗ್ಗೆ ಮಾಹಿತಿ ನೀಡುತ್ತಿದ್ದ ಸಹಾಯಕ ಅಧಿಕಾರಿಯನ್ನು, ತಕ್ಷಣ ನೀವ್ಯಾರು ಎಂದು ಪ್ರಶ್ನೆ ಕೇಳಿದ ಸಚಿವರು, ಕಾರ್ಮಿಕ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಸಭೆ ಹಾಜರಾಗದೆ ಅಸಿಸ್ಟೆಂಟ್​ನನ್ನು ಸಭೆಗೆ ಕಳುಹಿಸಿರುವುದನ್ನು ತಿಳಿದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ್ರು.

ಯಾತಕ್ಕೆ ಇದ್ದಿರಿ ಇಲ್ಲಿ..? ಈ ಮುಂಚೆಯೇ ಕ್ಲಿಯರ್ ಕಟ್ಟಾಗಿ ಜಿಲ್ಲಾಧಿಕಾರಿ ಮೀಟಿಂಗ್ ಕರೆದು ಹೇಳಿದ್ದೇನೆ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನ ಬಿಟ್ಟು ಯಾವುದೇ ಕಾರಣಕ್ಕೂ ಅಸಿಸ್ಟೆಂಡ್​ಗಳು ಸಭೆಗೆ ಹಾಜರಾಗದಂತೆ ಎಂದು ಮಾಧುಸ್ವಾಮಿ ತಿಳಿಸಿದರು.

Intro:Body:ಕೆಡಿಪಿ ಸಭೆಗೆ ಗೈರು ಹಾಜರಾದ ಜಿಲ್ಲಾಮಟ್ಟದ ಅಧಿಕಾರಿಗಳ ವಿರುದ್ಧ ಸಚಿವ ಮಾಧುಸ್ವಾಮಿ ಆಕ್ರೋಶ.......

ತುಮಕೂರು‌
ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಗೆ
ಕಾರ್ಮಿಕ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಇಲ್ಲದೇ ಸಹಾಯಕ ಅಧಿಕಾರಿ ಹಾಜರ್ ಆಗಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ಕೆಂಡಾಮಂಡಲರಾದರು.
ತಿಪಟೂರು ತಾಲೂಕಿನ ಬಗ್ಗೆ ಮಾಹಿತಿ ನೀಡುತ್ತಿದ್ದ ಸಹಾಯಕ ಅಧಿಕಾರಿಯನ್ನು, ತಕ್ಷಣ ನೀವ್ಯಾರು ಎಂದು ಪ್ರಶ್ನೆ ಕೇಳಿದ ಸಚಿವರು. ಅದಕ್ಕೆ ನಾನು ಅವರ ಅಸಿಸ್ಟೆಂಟ್ ಎಂದು ಅಧಿಕಾರಿ ಉತ್ತರಿಸಿದರು.

ಯಾತಕ್ಕೆ ಇದ್ದಿರ ಇಲ್ಲಿ..? ನಾನು ಈ ಮುಂಚೆಯೇ ಕ್ಲಿಯರ್ ಕಟ್ಟಾಗಿ ಡಿಸಿ ಅವರ ಮೀಟಿಂಗ್ ಕರೆದು ಹೇಳಿದ್ದೇನೆ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನ ಬಿಟ್ಟು ಯಾವುದೇ ಕಾರಣಕ್ಕೂ ಅಸಿಸ್ಟೆಂಟ್ ಗಳನ್ನ ಕೆಡಿಪಿ ಸಭೆಗೆ ಅಲೋವ್ ಮಾಡಬಾರದು ಎಂದು ಸೂಚಿಸಿರುವುದಾಗಿ ಸಚಿವ ಮಾಧುಸ್ವಾಮಿ ತಿಳಿಸಿದರು.
ಜಿಲ್ಲಾ ಮಟ್ಟದ ಆಫೀಸರ್ಸ್ ಮಾಹಿತಿ ನೀಡೋಹಾಗಿದ್ರೆ ನೀಡಿ ಇಲ್ಲಾ ಅಂದ್ರೆ ಆಚೆ ಹೋಗಿ ಎಂದು ಖಡಕ್ಕಾಗಿ ಸೂಚಿಸಿದರು.

ಕತ್ತೆಕಾಯೋಕಿದ್ದೀರ ಜಿಲ್ಲಾಮಟ್ಟದ ಅಧಿಕಾರಿಗಳು,
ಅಸಿಸ್ಟೆಂಟ್ ಗಳ ಕೈಲಿ ಹೇಳಿಸ್ತೀರಾ ಅಂತಾ ಗರಂ ಆದರು.
ಎದ್ದು ಜಾಗ ಖಾಲಿ ಮಾಡಿ, ಮತ್ತೊಮ್ಮೆ ಹೀಗಾದ್ರೆ ಚೆನ್ನಾಗಿರೋದಿಲ್ಲ..
ಸ್ಟ್ರಿಕ್ಟಾಗಿ ಹೇಳ್ತೀನಿ, ಅಸಿಸ್ಟೆಂಟ್ ಗಳನ್ನ ಕಳಿಸಿದ್ರೆ ಚೆನ್ನಾಗಿರೋದಿಲ್ಲ ಎಂದರು.

ಅಧಿಕಾರಿ ಬಂದು 15 ದಿವಸ ಆಗಿದೆ ಎಲ್ಲಾದುನ್ನೂ ಪ್ರಿಪೇರ್ ಆಗಿ ಬರೋದಕ್ಕೆ ಆಗಲ್ವಾ‌‌‌‌,
ತಡಬಡಾಯಿಸಿ ಉತ್ತರ ಕೊಡುತ್ತಿದ್ದ ಅಧಿಕಾರಿಗಳ ವಿರುದ್ಧ ಮಾಧುಸ್ವಾಮಿ ಗರಂ ಆದರು.
ಬೈಟ್: ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.