ETV Bharat / state

ತುಮಕೂರಲ್ಲಿ ಮದುವೆಯಾಗಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು!

author img

By

Published : Feb 22, 2019, 1:49 PM IST

ಪ್ರೇಮ ವಿವಾಹಕ್ಕೆ ಪೋಷಕರು ಅಡ್ಡಿಪಡಿಸಿದರೆಂದು ಮನ ನೊಂದ ಪ್ರೇಮಿಗಳು ಮದುವೆಯಾಗಿ, ಬಳಿಕ ಭೂವನಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ

ತುಮಕೂರು: ಪ್ರೇಮ ವಿವಾಹಕ್ಕೆ ಪೋಷಕರು ಅಡ್ಡಿಪಡಿಸಿದರೆಂದು ಮನ ನೊಂದ ಪ್ರೇಮಿಗಳು ಮದುವೆಯಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಭೂವನಹಳ್ಳಿಯಲ್ಲಿ ನಡೆದಿದೆ.

ಚೇತನ್​(25) ಹಾಗೂ ಯುವತಿ ಇಬ್ಬರೂ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೇತನ್ ಭೂವನಹಳ್ಳಿ ನಿವಾಸಿಯಾಗಿದ್ದು, ಯುವತಿ ಶಿರಾದ ಮಾಗೋಡು ಗ್ರಾಮದವಳೆಂದು ತಿಳಿದುಬಂದಿದೆ. ಒಂದೂವರೆ ತಿಂಗಳ ಹಿಂದೆ ಚೇತನ್ ಬೇರೊಬ್ಬ ಯುವತಿಯನ್ನು ಮದುವೆಯಾಗಿದ್ದ ಎನ್ನಲಾಗಿದೆ.

ಕಳೆದ ರಾತ್ರಿ ಸೈನೈಡ್ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೂ ಮುನ್ನ ಮದುವೆಯಾಗಿರುವುದು ಕಂಡುಬಂದಿದೆ. ಈ ಸಂಬಂಧ ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು: ಪ್ರೇಮ ವಿವಾಹಕ್ಕೆ ಪೋಷಕರು ಅಡ್ಡಿಪಡಿಸಿದರೆಂದು ಮನ ನೊಂದ ಪ್ರೇಮಿಗಳು ಮದುವೆಯಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಭೂವನಹಳ್ಳಿಯಲ್ಲಿ ನಡೆದಿದೆ.

ಚೇತನ್​(25) ಹಾಗೂ ಯುವತಿ ಇಬ್ಬರೂ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೇತನ್ ಭೂವನಹಳ್ಳಿ ನಿವಾಸಿಯಾಗಿದ್ದು, ಯುವತಿ ಶಿರಾದ ಮಾಗೋಡು ಗ್ರಾಮದವಳೆಂದು ತಿಳಿದುಬಂದಿದೆ. ಒಂದೂವರೆ ತಿಂಗಳ ಹಿಂದೆ ಚೇತನ್ ಬೇರೊಬ್ಬ ಯುವತಿಯನ್ನು ಮದುವೆಯಾಗಿದ್ದ ಎನ್ನಲಾಗಿದೆ.

ಕಳೆದ ರಾತ್ರಿ ಸೈನೈಡ್ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೂ ಮುನ್ನ ಮದುವೆಯಾಗಿರುವುದು ಕಂಡುಬಂದಿದೆ. ಈ ಸಂಬಂಧ ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.