ETV Bharat / state

ಹೆರಿಗೆ ಬಳಿಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಪತ್ನಿ; ತಿಪಟೂರಿನಲ್ಲಿ ಸಾವಿನ ಹಾದಿ ತುಳಿದ ಪತಿ

author img

By

Published : Jun 22, 2021, 9:58 AM IST

Updated : Jun 22, 2021, 8:03 PM IST

ಹೆರಿಗೆ ಬಳಿಕ ಪತ್ನಿ ಬೇಬಿಕಲಾ ಪತಿಗೆ ತಿಳಿಸದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಇದರಿಂದ ಕೋಪಗೊಂಡ ನಾಗರಾಜ್, ಪತ್ನಿಯ ಸಂಬಂಧಿಕರೊಂದಿಗೆ ಗಲಾಟೆ ಮಾಡಿದ್ದಾರೆ. ಈ ವೇಳೆ ಪೊಲೀಸರಿಗೆ ದೂರು ನೀಡುವುದಾಗಿ ಸಂಬಂಧಿಕರು ಹೆದರಿಸಿದ್ದರು.

Man Committed Suicide
ವ್ಯಕ್ತಿ ಆತ್ಮಹತ್ಯೆ

ತುಮಕೂರು: ಹೆರಿಗೆ ಬಳಿಕ ಪತ್ನಿ ತನಗೆ ತಿಳಿಸದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು ಈ ಬಗ್ಗೆ ಸಂಬಂಧಿಕರ ಜೊತೆ ಗಲಾಟೆ ಮಾಡಿದ ಪತಿ ಕೊನೆಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಪಟೂರಿನಲ್ಲಿ ನಡೆದಿದೆ. ತಿಪಟೂರಿನ ಅಮ್ಮನಬಾವಿ ಗ್ರಾಮದ ನಾಗರಾಜ್ ಎಸ್​.ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ನಾಗರಾಜ್ , ಅರಸೀಕೆರೆ ತಾಲೂಕು ಚಿಂದೇನಹಳ್ಳಿ ಸಮೀಪದ ಸೋಮೆನಹಳ್ಳಿಯ ಬೇಬಿಕಲಾ ಅವರನ್ನು ಕಳೆದ ವರ್ಷ ವಿವಾಹವಾಗಿದ್ದರು. ನಂತರ ದಂಪತಿ ಅಮ್ಮನಬಾವಿಯಲ್ಲಿ ನೆಲೆಸಿದ್ದರು. ಮೂರು ದಿನಗಳ ಹಿಂದೆ ಹೆರಿಗೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಬೇಬಿಕಲಾ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಹೆರಿಗೆ ಬಳಿಕ ಬೇಬಿಕಲಾ ಪತಿಗೆ ತಿಳಿಸದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಇದರಿಂದ ಕೋಪಗೊಂಡ ನಾಗರಾಜ್, ಪತ್ನಿಯ ಸಂಬಂಧಿಕರೊಂದಿಗೆ ಗಲಾಟೆ ಮಾಡಿದ್ದಾರೆ. ಈ ವೇಳೆ ಪೊಲೀಸರಿಗೆ ದೂರು ನೀಡುವುದಾಗಿ ಸಂಬಂಧಿಕರು ಹೆದರಿಸಿದ್ದರು.

ಸಂಬಂಧಿಕರ ಮಾತಿನಿಂದ ಮನನೊಂದ ನಾಗರಾಜ್, ಅಮ್ಮನಬಾವಿ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಆಟೋ‌ ನಿಲ್ಲಿಸಿದ ವಿಚಾರಕ್ಕೆ ಗ್ರಾಮಗಳ ಜನರ ನಡುವೆ ಗಲಾಟೆ: ನಾಲ್ವರ ಬಂಧನ

ತುಮಕೂರು: ಹೆರಿಗೆ ಬಳಿಕ ಪತ್ನಿ ತನಗೆ ತಿಳಿಸದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು ಈ ಬಗ್ಗೆ ಸಂಬಂಧಿಕರ ಜೊತೆ ಗಲಾಟೆ ಮಾಡಿದ ಪತಿ ಕೊನೆಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಪಟೂರಿನಲ್ಲಿ ನಡೆದಿದೆ. ತಿಪಟೂರಿನ ಅಮ್ಮನಬಾವಿ ಗ್ರಾಮದ ನಾಗರಾಜ್ ಎಸ್​.ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ನಾಗರಾಜ್ , ಅರಸೀಕೆರೆ ತಾಲೂಕು ಚಿಂದೇನಹಳ್ಳಿ ಸಮೀಪದ ಸೋಮೆನಹಳ್ಳಿಯ ಬೇಬಿಕಲಾ ಅವರನ್ನು ಕಳೆದ ವರ್ಷ ವಿವಾಹವಾಗಿದ್ದರು. ನಂತರ ದಂಪತಿ ಅಮ್ಮನಬಾವಿಯಲ್ಲಿ ನೆಲೆಸಿದ್ದರು. ಮೂರು ದಿನಗಳ ಹಿಂದೆ ಹೆರಿಗೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಬೇಬಿಕಲಾ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಹೆರಿಗೆ ಬಳಿಕ ಬೇಬಿಕಲಾ ಪತಿಗೆ ತಿಳಿಸದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಇದರಿಂದ ಕೋಪಗೊಂಡ ನಾಗರಾಜ್, ಪತ್ನಿಯ ಸಂಬಂಧಿಕರೊಂದಿಗೆ ಗಲಾಟೆ ಮಾಡಿದ್ದಾರೆ. ಈ ವೇಳೆ ಪೊಲೀಸರಿಗೆ ದೂರು ನೀಡುವುದಾಗಿ ಸಂಬಂಧಿಕರು ಹೆದರಿಸಿದ್ದರು.

ಸಂಬಂಧಿಕರ ಮಾತಿನಿಂದ ಮನನೊಂದ ನಾಗರಾಜ್, ಅಮ್ಮನಬಾವಿ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಆಟೋ‌ ನಿಲ್ಲಿಸಿದ ವಿಚಾರಕ್ಕೆ ಗ್ರಾಮಗಳ ಜನರ ನಡುವೆ ಗಲಾಟೆ: ನಾಲ್ವರ ಬಂಧನ

Last Updated : Jun 22, 2021, 8:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.