ETV Bharat / state

ನಿಮ್ಮ ಮುಖದಲ್ಲಿ ನಗು ಇಲ್ಲಂದ್ರೆ, ಅವತ್ತು ಶಾಲೆಗೆ ಹೋಗ್ಬೇಡಿ ಅಂತ ವಾಗ್ಮಿ ಸೂಲಿಬೆಲೆ ಹೇಳಿದ್ದೇಕೆ?

ನಿಮ್ಮ ಮುಖದಲ್ಲಿ ನಗುವಿಲ್ಲ ಎಂದರೆ ಅವತ್ತು ಮನೆಯಿಂದ ಹೊರಗೆ ಹೋಗಲೆ ಬಾರದು ಎನ್ನುವ ಸ್ವಾಮಿ ವಿವೇಕಾನಂದರ ಮಾತನ್ನು ಹೇಳುವ ಮೂಲಕ ನಿಮ್ಮ ನಗು ಬೇರೊಬ್ಬರ ಮೊಗದಲ್ಲಿ ನಗು ತರಿಸುತ್ತದೆ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

author img

By

Published : Jan 25, 2020, 9:22 PM IST

chakravarti-sulibele
chakravarti-sulibele

ಶಿವಮೊಗ್ಗ: ನಿಮ್ಮ ಮುಖದಲ್ಲಿ ನಗುವಿಲ್ಲ ಎಂದರೆ ಅವತ್ತು ಮನೆಯಿಂದ ಹೊರಗೆ ಹೋಗಲೇಬಾರದು ಎನ್ನುವ ಸ್ವಾಮಿ ವಿವೇಕಾನಂದರ ಮಾತನ್ನು ಹೇಳುವ ಮೂಲಕ ನಿಮ್ಮ ನಗು ಬೇರೊಬ್ಬರ ಮೊಗದಲ್ಲಿ ನಗು ತರಿಸುತ್ತದೆ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ

ನಗರದ ಒಕ್ಕಲಿಗರ ಭವನದಲ್ಲಿ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಹಾಗೂ ಸಂಸ್ಕಾರ ಭಾರತಿ ಸಂಯುಕ್ತಾಶ್ರಯದಲ್ಲಿ ಭಾರತೀಯ ಸಂಸ್ಕೃತಿ ಹಿನ್ನೆಲೆ, ಪ್ರಸ್ತುತತೆ ಹಾಗೂ ಭವಿಷ್ಯದಲ್ಲಿ ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಇಂದಿನ ತರುಣ ಪೀಳಿಗೆಯ ಪಾತ್ರ ಕುರಿತ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಮ ತೊಂದರೆಯನ್ನಾಗಲಿ, ಬೇಸರವನ್ನಾಗಲಿ ಮತ್ತೊಬ್ಬರ ಮೇಲೆ ಹೇರುವ ಪ್ರಯತ್ನ ಮಾಡಬೇಡಿ, ನಿಮ್ಮ ಮುಖದಲ್ಲಿ ನಗು ಇಲ್ಲ ಅಂದರೆ ಅವತ್ತು ಕ್ಲಾಸಿಗೆ ಹೋಗಬೇಡಿ, ಏಕಂದರೆ, ನಿಮ್ಮ ನಗು ಇಲ್ಲದೇ ಇರುವ ಮುಖ ಮತ್ತೊಬ್ಬರ ಎರ್ನಜಿಯನ್ನು ಕಳೆದುಕೊಳ್ಳವಂತೆ ಮಾಡುತ್ತೆ ಎಂದರು. ವಿದ್ಯಾರ್ಥಿಗಳು ಸದಾ ಚೈತನ್ಯದಿಂದ, ಲವಲವಿಕೆ ಯಿಂದ ನಗು ಮುಖದಿಂದ ಕೂಡಿರಬೇಕೆಂದು ಸಲಹೆ ನೀಡಿದರು.

ಅಂಧಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವವನೇ ಗುರು. ಇಡೀ ವಿಶ್ವಕ್ಕೆ ಒಂದು ಕಾಲದಲ್ಲಿ ಭಾರತ ಗುರುವಾಗಿತ್ತು. ಕಾಲಾಂತರದಲ್ಲಿ ಕಡೆಗಣನೆಗೆ ತಳ್ಳಲ್ಪಟ್ಟ ಭಾರತ ಇದೀಗ ಮತ್ತೆ ಗುರುವಿನ ಸ್ಥಾನ ಪಡೆಯುವ ಹಂತದಲ್ಲಿದ್ದು ಮುಖ್ಯವಾಗಿ ಶಿಕ್ಷಕರು ನಮ್ಮ ಭಾರತೀಯ ಸಂಸ್ಕಾರ ಮತ್ತು ಸಂಸ್ಕೃತಿಗೆ ಪೂರಕವಾಗಿ ಶಿಕ್ಷಣ ನೀಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಕಾರ ಭಾರತೀಯ ಅರುಣ್ ಕುಮಾರ್, ಡಾ. ಮಧು, ಉಂಬ್ಲೆಬೈಲು ಮೋಹನ್, ಮಹೇಶ್ ಹೆಗ್ಡೆ, ಶ್ರೀಕಾಂತ್, ಕಿರಣ್‌ಕುಮಾರ್ ಮತ್ತಿತರರಿದ್ದರು.

ಶಿವಮೊಗ್ಗ: ನಿಮ್ಮ ಮುಖದಲ್ಲಿ ನಗುವಿಲ್ಲ ಎಂದರೆ ಅವತ್ತು ಮನೆಯಿಂದ ಹೊರಗೆ ಹೋಗಲೇಬಾರದು ಎನ್ನುವ ಸ್ವಾಮಿ ವಿವೇಕಾನಂದರ ಮಾತನ್ನು ಹೇಳುವ ಮೂಲಕ ನಿಮ್ಮ ನಗು ಬೇರೊಬ್ಬರ ಮೊಗದಲ್ಲಿ ನಗು ತರಿಸುತ್ತದೆ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ

ನಗರದ ಒಕ್ಕಲಿಗರ ಭವನದಲ್ಲಿ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಹಾಗೂ ಸಂಸ್ಕಾರ ಭಾರತಿ ಸಂಯುಕ್ತಾಶ್ರಯದಲ್ಲಿ ಭಾರತೀಯ ಸಂಸ್ಕೃತಿ ಹಿನ್ನೆಲೆ, ಪ್ರಸ್ತುತತೆ ಹಾಗೂ ಭವಿಷ್ಯದಲ್ಲಿ ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಇಂದಿನ ತರುಣ ಪೀಳಿಗೆಯ ಪಾತ್ರ ಕುರಿತ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಮ ತೊಂದರೆಯನ್ನಾಗಲಿ, ಬೇಸರವನ್ನಾಗಲಿ ಮತ್ತೊಬ್ಬರ ಮೇಲೆ ಹೇರುವ ಪ್ರಯತ್ನ ಮಾಡಬೇಡಿ, ನಿಮ್ಮ ಮುಖದಲ್ಲಿ ನಗು ಇಲ್ಲ ಅಂದರೆ ಅವತ್ತು ಕ್ಲಾಸಿಗೆ ಹೋಗಬೇಡಿ, ಏಕಂದರೆ, ನಿಮ್ಮ ನಗು ಇಲ್ಲದೇ ಇರುವ ಮುಖ ಮತ್ತೊಬ್ಬರ ಎರ್ನಜಿಯನ್ನು ಕಳೆದುಕೊಳ್ಳವಂತೆ ಮಾಡುತ್ತೆ ಎಂದರು. ವಿದ್ಯಾರ್ಥಿಗಳು ಸದಾ ಚೈತನ್ಯದಿಂದ, ಲವಲವಿಕೆ ಯಿಂದ ನಗು ಮುಖದಿಂದ ಕೂಡಿರಬೇಕೆಂದು ಸಲಹೆ ನೀಡಿದರು.

ಅಂಧಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವವನೇ ಗುರು. ಇಡೀ ವಿಶ್ವಕ್ಕೆ ಒಂದು ಕಾಲದಲ್ಲಿ ಭಾರತ ಗುರುವಾಗಿತ್ತು. ಕಾಲಾಂತರದಲ್ಲಿ ಕಡೆಗಣನೆಗೆ ತಳ್ಳಲ್ಪಟ್ಟ ಭಾರತ ಇದೀಗ ಮತ್ತೆ ಗುರುವಿನ ಸ್ಥಾನ ಪಡೆಯುವ ಹಂತದಲ್ಲಿದ್ದು ಮುಖ್ಯವಾಗಿ ಶಿಕ್ಷಕರು ನಮ್ಮ ಭಾರತೀಯ ಸಂಸ್ಕಾರ ಮತ್ತು ಸಂಸ್ಕೃತಿಗೆ ಪೂರಕವಾಗಿ ಶಿಕ್ಷಣ ನೀಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಕಾರ ಭಾರತೀಯ ಅರುಣ್ ಕುಮಾರ್, ಡಾ. ಮಧು, ಉಂಬ್ಲೆಬೈಲು ಮೋಹನ್, ಮಹೇಶ್ ಹೆಗ್ಡೆ, ಶ್ರೀಕಾಂತ್, ಕಿರಣ್‌ಕುಮಾರ್ ಮತ್ತಿತರರಿದ್ದರು.

Intro:ಶಿವಮೊಗ್ಗ,
ಸ್ಪರ್ಧಾತ್ಮಕ ಯುಗಕ್ಕೆ ಸರಿಯಾಗಿ ಶಿಕ್ಷಕರು ಹೆಚ್ಚಿನ ಜ್ಞಾನ ಬೆಳೆಸಿಕೊಂಡು ಬೋಧಿಸಬೇಕು ಎಂದು ಖ್ಯಾತವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ನಗರದ ಒಕ್ಕಲಿಗರ ಭವನದಲ್ಲಿ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಹಾಗೂ ಸಂಸ್ಕಾರ ಭಾರತಿ ಸಂಯುಕ್ತಾಶ್ರಯದಲ್ಲಿ ಭಾರತೀಯ ಸಂಸ್ಕೃತಿ ಹಿನ್ನೆಲೆ, ಪ್ರಸ್ತುತತೆ ಹಾಗೂ ಭವಿಷ್ಯ ದಲ್ಲಿ ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಇಂದಿನ ತರುಣ ಪೀಳಿಗೆಯ ಪಾತ್ರ ಕುರಿತ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಂಧಕಾರದಿಂದ ಬೆಳಕಿನೆಡೆಗೆ ಕರೆದೊಯ್ಯು ವವನೇ ಗುರು. ಇಡೀ ವಿಶ್ವಕ್ಕೆ ಒಂದುಕಾಲದಲ್ಲಿ ಭಾರತ ಗುರುವಾಗಿತ್ತು. ಕಾಲಾಂತರದಲ್ಲಿ ಕಡೆಗಣನೆಗೆ ತಳ್ಳಲ್ಪಟ್ಟ ಭಾರತ ಇದೀಗ ಮತ್ತೆ ಗುರುವಿನ ಸ್ಥಾನ ಪಡೆಯುವ ಹಂತದಲ್ಲಿದ್ದು ಮುಖ್ಯವಾಗಿ ಶಿಕ್ಷಕರು ನಮ್ಮ ಭಾರತೀಯ ಸಂಸ್ಕಾರ ಮತ್ತು ಸಂಸ್ಕೃತಿಗೆ ಪೂರಕವಾಗಿ ಶಿಕ್ಷಣ ನೀಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಕಾರ ಭಾರತಿಯ ಅರುಣ್ ಕುಮಾರ್, ಡಾ. ಮಧು, ಉಂಬ್ಲೆಬೈಲು ಮೋಹನ್, ಮಹೇಶ್ ಹೆಗ್ಡೆ, ಶ್ರೀಕಾಂತ್, ಕಿರಣ್‌ಕುಮಾರ್ ಮತ್ತಿತರರಿದ್ದರು.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.