ETV Bharat / state

ವಿಭೃಂಜಣೆಯಿಂದ ತೆರೆ ಕಂಡ ಸಾಗರದ ಶ್ರೀ ಮಾರಿಕಾಂಬ ಜಾತ್ರೆ - ಶಿವಮೊಗ್ಗ ಮಾರಿಕಾಂಬ ಜಾತ್ರೆ

ವಿಭೃಂಜಣೆಯಿಂದ ತೆರೆ ಕಂಡ ಸಾಗರದ ಶ್ರೀ ಮಾರಿಕಾಂಬ ಜಾತ್ರೆ - ದೇವಿಗೆ ವಿವಿಧ ಹರಕೆ ಸಲ್ಲಿಸಿದ ಭಕ್ತರು - 15 ದಿನಗಳ ಕಾಲ‌ ಅದ್ಧೂರಿಯಾಗಿ ನಡೆದ ಜಾತ್ರಾ ಮಹೋತ್ಸವ

marikamba fair
ಶ್ರೀ ಮಾರಿಕಾಂಬ ಜಾತ್ರೆ
author img

By

Published : Feb 17, 2023, 9:29 AM IST

ಶಿವಮೊಗ್ಗ: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಸಾಗರ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ ಸಂಪನ್ನಗೊಂಡಿದೆ. ಕಳೆದ 15 ದಿನಗಳ ಕಾಲ‌ ಅದ್ಧೂರಿಯಾಗಿ ನಡೆದ ಮಾರಿಜಾತ್ರೆಯು ಯಾವುದೇ ಅಪಸ್ವರಕ್ಕೆ ಅವಕಾಶ ನೀಡದೇ ತೆರೆ ಕಂಡಿದೆ. ಬುಧವಾರ ರಾತ್ರಿ ಆರಂಭವಾದ ಶ್ರೀ ಮಾರಿಕಾಂಬ ದೇವಿಯ ವೈಭವಯುತ ರಾಜಬೀದಿ ಉತ್ಸವದ ನಂತರ ಗುರುವಾರ ಬೆಳಗ್ಗೆ ವನಕ್ಕೆ ಬಿಡುವ ಕಾರ್ಯಕ್ರಮದ ಮೂಲಕ ಸಂಪನ್ನಗೊಂಡಿತು.

ಮೊದಲ ದಿನ ತವರು ಮನೆಯಲ್ಲಿದ್ದ ಶ್ರೀ ಮಾರಿಕಾಂಬೆಯನ್ನು ವಿಜೃಂಭಣೆಯಿಂದ ಗಂಡನ ಮನೆಗೆ ಕರೆತರಲಾಯಿತು. ಗಂಡನ ಮನೆಯಲ್ಲಿ ಸುಮಾರು 14 ದಿನಗಳ ಕಾಲ ಪ್ರತಿಷ್ಠಾಪಿಸಲಾಯಿತು. ಇಲ್ಲಿ ದೇವಿಗೆ ಭಕ್ತರು ವಿವಿಧ ಹರಕೆಯನ್ನು ಸಲ್ಲಿಸಿದರು. ನಾಟಿ ಕೋಳಿಯನ್ನು ಹರಕೆ ರೂಪದಲ್ಲಿ ದೇವಿ ಮೇಲೆ ಎಸೆಯಲಾಗುತ್ತದೆ. ಜೊತೆಗೆ ಸೀರೆ, ರವಿಕೆ, ಮಡಿಲ ಅಕ್ಕಿ ಸೇರಿದಂತೆ ಹಣವನ್ನು ಕಾಣಿಗೆ ರೂಪದಲ್ಲಿ ನೀಡಲಾಗುತ್ತದೆ.

ಪ್ರತಿವರ್ಷ ಮಾರಿದೇವಿ ಪ್ರತಿಷ್ಠಾಪನೆಗಾಗಿ ವಿಶೇಷ ಪೆಂಡಾಲ್ ಹಾಕಲಾಗುತ್ತದೆ. ಈ ಬಾರಿ ಸಹ ಪೆಂಡಾಲ್​ ಜೊತೆ ವಿಶೇಷ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಸರದಿ ಸಾಲಿನಲ್ಲಿ ನಿಲ್ಲುವ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಪ್ರತಿ ಭಕ್ತರಿಗೂ ದೇವಿಯ ಪಾದ ಸ್ಪರ್ಶ ಮಾಡುವ ಅವಕಾಶ ಕಲ್ಪಿಸಲಾಗಿತ್ತು.

ಇದನ್ನೂ ಓದಿ: ಸಗರ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಭಕ್ತಸಾಗರ; ಮನಸೆಳೆದ ಜಗಜಟ್ಟಿಗಳ ಕಾಳಗ

9 ದಿನಗಳ ಪೂಜಾ ವಿಧಿ ವಿಧಾನಗಳ ನಂತರ ಬುಧವಾರ ರಾತ್ರಿ ಮಾರಿಕಾಂಬಾ ಜಾತ್ರೆ ಮುಕ್ತಾಯಗೊಂಡಿದ್ದು, ಮಧ್ಯರಾತ್ರಿ ನಂತರ ದೇವಿಯ ಆಕರ್ಷಕ ಮೂರ್ತಿಯನ್ನು ಮೆರವಣಿಗೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ವನಕ್ಕೆ ಬಿಡಲಾಯಿತು. ರಾಜ ಬೀದಿ ಉತ್ಸವದಲ್ಲಿ ಸಾವಿರಾರು ಜನ ಸೇರಿದಂತೆ ಡೊಳ್ಳು ತಂಡಗಳು, ವೇಷಭೂಷಣಗಳ ನೃತ್ಯ ಕಲಾವಿದರು, ವಿವಿಧ ವಾದ್ಯಗಳ ತಂಡದವರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ರಿಮೋಟ್‌ ಕಂಟ್ರೋಲ್‌ ಮೂಲಕ ಚಲಿಸುತ್ತದೆ ವಾಲ್ಮೀಕಿ ಮಠದ ರಥ!

ಮಾರಿಕಾಂಬ ದೇವಿಯ ದರ್ಶನಕ್ಕೆ ರಾಜ್ಯದ ಎಲ್ಲಾ ಭಾಗಗಳಿಂದಲೂ ಸಹ ಭಕ್ತರು ಆಗಮಿಸಿದ್ದರು. ಪ್ರತಿ ದಿನ ಎರಡು ಲಕ್ಷಕ್ಕೂ ಅಧಿಕ ಭಕ್ತರು ಅಮ್ಮನ ದರ್ಶನ ಪಡೆದುಕೊಂಡಿದ್ದಾರೆ. ಜಾತ್ರೆಯನ್ನು ನಾವು ಅಚ್ಚುಕಟ್ಟಾಗಿ ಮಾಡಿದ್ವಿ ಅನ್ನುವುದಕ್ಕಿಂತ ದೇವಿ ಮಾಡಿಸಿಕೊಂಡರು ಎನ್ನಬಹುದು. ಎಲ್ಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ನಗರಸಭೆ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಜಾತ್ರಾ ಸಮಿತಿ, ವಿವಿಧ ಸಂಘಸಂಸ್ಥೆಗಳು, ಸಾರ್ವಜನಿಕರ ಸಹಕಾರದಿಂದ ಇತಿಹಾಸ ಪ್ರಸಿದ್ಧ ಮಾರಿಕಾಂಬಾ ಜಾತ್ರೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ ಎನ್ನುತ್ತಾರೆ ಮಾರಿಜಾತ್ರೆಯ ಪ್ರಚಾರ ಸಮಿತಿಯ ಸದಸ್ಯರಾದ ರವಿನಾಯ್ಡು.

ಇದನ್ನೂ ಓದಿ: ಮಾದಪ್ಪನ ಶಿವರಾತ್ರಿ ಜಾತ್ರೆಗೆ ಆಗಮಿಸುತ್ತಿರುವ ಭಕ್ತರು: ಕಾವೇರಿ ನದಿ ದಾಟುತ್ತಿರುವ ಜನ ಸಾಗರ

ಶಿವಮೊಗ್ಗ: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಸಾಗರ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ ಸಂಪನ್ನಗೊಂಡಿದೆ. ಕಳೆದ 15 ದಿನಗಳ ಕಾಲ‌ ಅದ್ಧೂರಿಯಾಗಿ ನಡೆದ ಮಾರಿಜಾತ್ರೆಯು ಯಾವುದೇ ಅಪಸ್ವರಕ್ಕೆ ಅವಕಾಶ ನೀಡದೇ ತೆರೆ ಕಂಡಿದೆ. ಬುಧವಾರ ರಾತ್ರಿ ಆರಂಭವಾದ ಶ್ರೀ ಮಾರಿಕಾಂಬ ದೇವಿಯ ವೈಭವಯುತ ರಾಜಬೀದಿ ಉತ್ಸವದ ನಂತರ ಗುರುವಾರ ಬೆಳಗ್ಗೆ ವನಕ್ಕೆ ಬಿಡುವ ಕಾರ್ಯಕ್ರಮದ ಮೂಲಕ ಸಂಪನ್ನಗೊಂಡಿತು.

ಮೊದಲ ದಿನ ತವರು ಮನೆಯಲ್ಲಿದ್ದ ಶ್ರೀ ಮಾರಿಕಾಂಬೆಯನ್ನು ವಿಜೃಂಭಣೆಯಿಂದ ಗಂಡನ ಮನೆಗೆ ಕರೆತರಲಾಯಿತು. ಗಂಡನ ಮನೆಯಲ್ಲಿ ಸುಮಾರು 14 ದಿನಗಳ ಕಾಲ ಪ್ರತಿಷ್ಠಾಪಿಸಲಾಯಿತು. ಇಲ್ಲಿ ದೇವಿಗೆ ಭಕ್ತರು ವಿವಿಧ ಹರಕೆಯನ್ನು ಸಲ್ಲಿಸಿದರು. ನಾಟಿ ಕೋಳಿಯನ್ನು ಹರಕೆ ರೂಪದಲ್ಲಿ ದೇವಿ ಮೇಲೆ ಎಸೆಯಲಾಗುತ್ತದೆ. ಜೊತೆಗೆ ಸೀರೆ, ರವಿಕೆ, ಮಡಿಲ ಅಕ್ಕಿ ಸೇರಿದಂತೆ ಹಣವನ್ನು ಕಾಣಿಗೆ ರೂಪದಲ್ಲಿ ನೀಡಲಾಗುತ್ತದೆ.

ಪ್ರತಿವರ್ಷ ಮಾರಿದೇವಿ ಪ್ರತಿಷ್ಠಾಪನೆಗಾಗಿ ವಿಶೇಷ ಪೆಂಡಾಲ್ ಹಾಕಲಾಗುತ್ತದೆ. ಈ ಬಾರಿ ಸಹ ಪೆಂಡಾಲ್​ ಜೊತೆ ವಿಶೇಷ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಸರದಿ ಸಾಲಿನಲ್ಲಿ ನಿಲ್ಲುವ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಪ್ರತಿ ಭಕ್ತರಿಗೂ ದೇವಿಯ ಪಾದ ಸ್ಪರ್ಶ ಮಾಡುವ ಅವಕಾಶ ಕಲ್ಪಿಸಲಾಗಿತ್ತು.

ಇದನ್ನೂ ಓದಿ: ಸಗರ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಭಕ್ತಸಾಗರ; ಮನಸೆಳೆದ ಜಗಜಟ್ಟಿಗಳ ಕಾಳಗ

9 ದಿನಗಳ ಪೂಜಾ ವಿಧಿ ವಿಧಾನಗಳ ನಂತರ ಬುಧವಾರ ರಾತ್ರಿ ಮಾರಿಕಾಂಬಾ ಜಾತ್ರೆ ಮುಕ್ತಾಯಗೊಂಡಿದ್ದು, ಮಧ್ಯರಾತ್ರಿ ನಂತರ ದೇವಿಯ ಆಕರ್ಷಕ ಮೂರ್ತಿಯನ್ನು ಮೆರವಣಿಗೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ವನಕ್ಕೆ ಬಿಡಲಾಯಿತು. ರಾಜ ಬೀದಿ ಉತ್ಸವದಲ್ಲಿ ಸಾವಿರಾರು ಜನ ಸೇರಿದಂತೆ ಡೊಳ್ಳು ತಂಡಗಳು, ವೇಷಭೂಷಣಗಳ ನೃತ್ಯ ಕಲಾವಿದರು, ವಿವಿಧ ವಾದ್ಯಗಳ ತಂಡದವರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ರಿಮೋಟ್‌ ಕಂಟ್ರೋಲ್‌ ಮೂಲಕ ಚಲಿಸುತ್ತದೆ ವಾಲ್ಮೀಕಿ ಮಠದ ರಥ!

ಮಾರಿಕಾಂಬ ದೇವಿಯ ದರ್ಶನಕ್ಕೆ ರಾಜ್ಯದ ಎಲ್ಲಾ ಭಾಗಗಳಿಂದಲೂ ಸಹ ಭಕ್ತರು ಆಗಮಿಸಿದ್ದರು. ಪ್ರತಿ ದಿನ ಎರಡು ಲಕ್ಷಕ್ಕೂ ಅಧಿಕ ಭಕ್ತರು ಅಮ್ಮನ ದರ್ಶನ ಪಡೆದುಕೊಂಡಿದ್ದಾರೆ. ಜಾತ್ರೆಯನ್ನು ನಾವು ಅಚ್ಚುಕಟ್ಟಾಗಿ ಮಾಡಿದ್ವಿ ಅನ್ನುವುದಕ್ಕಿಂತ ದೇವಿ ಮಾಡಿಸಿಕೊಂಡರು ಎನ್ನಬಹುದು. ಎಲ್ಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ನಗರಸಭೆ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಜಾತ್ರಾ ಸಮಿತಿ, ವಿವಿಧ ಸಂಘಸಂಸ್ಥೆಗಳು, ಸಾರ್ವಜನಿಕರ ಸಹಕಾರದಿಂದ ಇತಿಹಾಸ ಪ್ರಸಿದ್ಧ ಮಾರಿಕಾಂಬಾ ಜಾತ್ರೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ ಎನ್ನುತ್ತಾರೆ ಮಾರಿಜಾತ್ರೆಯ ಪ್ರಚಾರ ಸಮಿತಿಯ ಸದಸ್ಯರಾದ ರವಿನಾಯ್ಡು.

ಇದನ್ನೂ ಓದಿ: ಮಾದಪ್ಪನ ಶಿವರಾತ್ರಿ ಜಾತ್ರೆಗೆ ಆಗಮಿಸುತ್ತಿರುವ ಭಕ್ತರು: ಕಾವೇರಿ ನದಿ ದಾಟುತ್ತಿರುವ ಜನ ಸಾಗರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.