ETV Bharat / state

ಭಟ್ಕಳದಿಂದ ಸಾಗರಕ್ಕೆ ಬಂದು ದರೋಡೆಗೆ ಯತ್ನ: ಮಾರಕಾಸ್ತ್ರ ಸಮೇತ ಐವರ ಬಂಧನ

author img

By

Published : Aug 21, 2019, 1:59 AM IST

ಭಟ್ಕಳದಿಂದ ಕಾರಿನಲ್ಲಿ ಬಂದು, ಸಾಗರದ ವರದಹಳ್ಳಿ ಕಡೆ ಹೋಗುವ ದಾರಿಯಲ್ಲಿ ಕಾರನ್ನು ನಿಲ್ಲಿಸಿ ದಾರಿಯಲ್ಲಿ ಬರುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ, ಐವರು ಖದೀಮರನ್ನು ಸಾಗರ ಪೊಲೀಸರು ಬಂಧಿಸಿದ್ದಾರೆ.

ದರೋಡೆಗೆ ಯತ್ನಿಸುತ್ತಿದ್ದ ಕಳ್ಳರು

ಶಿವಮೊಗ್ಗ: ಭಟ್ಕಳದಿಂದ ಕಾರಿನಲ್ಲಿ ಬಂದು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಐವರು ಖದೀಮರನ್ನು ಸಾಗರ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.

ಆರೋಪಿಗಳು ಸಾಗರದ ವರದಹಳ್ಳಿ ಕಡೆ ಹೋಗುವ ದಾರಿಯಲ್ಲಿ ಸಿಲ್ವರ್ ಬಣ್ಣದ TOYOTA ETIOS ಕಾರನ್ನು ನಿಲ್ಲಿಸಿ ದಾರಿಯಲ್ಲಿ ಬರುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ಸಾಗರ ಪೇಟೆ ಪೊಲೀಸ್ ಠಾಣೆಯ ಪೊಲೀಸರು ಗಸ್ತಿನಲ್ಲಿದಿದ್ದನ್ನು ಕಂಡು ಕಾರನ್ನು ಬಿಟ್ಟು ಪರಾರಿ ಆಗಲು ಯತ್ನಿಸಿದ್ದಾರೆ.

ತಕ್ಷಣ ಪೊಲೀಸರು ಕಾರ್ಯ ಪ್ರವೃತ್ತರಾಗಿ ಕಾರು ಬಿಟ್ಟು ಓಡಿ ಹೋಗುತ್ತಿದ್ದ ಮೊಹಮ್ಮದ್ ಮುಸ್ತಾಫ್ (26), ಸುಹೇಲ್ (32) ,ಮೊಹಮ್ಮದ್ ಅಕ್ರಂ (18), ಸಮೀರ್ (21) , ಅಬ್ದುಲ್ ಮೊಹೀಂ (21) ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಮಚ್ಚು , 2 ಕಬ್ಬಿಣದ ರಾಡು, 1 ಹಗ್ಗ ,1 ಮೆಣಸಿನ ಪುಡಿ ಪ್ಯಾಕೆಟ್, ಕಾರಿನ ಡಿಕ್ಕಿಯಲ್ಲಿ ಒಂದು ಮರದ ದೊಣ್ಣೆ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಸಾಗರದ ಎಎಸ್‌ಪಿ ಯತೀಶ್ ಎನ್ ಅವರ ಮಾರ್ಗದರ್ಶನದಲ್ಲಿ, ಇನ್ಸ್‌ಪೆಕ್ಟರ್ ಮಹಾಬಲೇಶ್ವರ, ಎಎಸ್‌ಐ ಶಿವಕುಮಾರ್, ದಪೇದಾರ್‌ಗಳಾದ ದಿವಾಕರ ನಾಯ್ಕ, ಜಯೇಂದ್ರ, ನಾಗರಾಜ ಮತ್ತು ಪೋಲೀಸ್ ಕಾನ್ಸ್ಟೇಬಲ್‌ಗಳಾದ ಕಾಳಾನಾಯ್ಕ, ಮಲ್ಲೇಶ್, ರವಿ ಹರಿಜನ, ಚಾಲಕರಾದ ಮಲ್ಲನಗೌಡ ಮತ್ತು ವೆಂಕಟೇಶ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ದರೋಡೆ ಕೋರರನ್ನು ಬಂಧಿಸಿದ ಪೊಲೀಸ್ ತಂಡದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ: ಭಟ್ಕಳದಿಂದ ಕಾರಿನಲ್ಲಿ ಬಂದು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಐವರು ಖದೀಮರನ್ನು ಸಾಗರ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.

ಆರೋಪಿಗಳು ಸಾಗರದ ವರದಹಳ್ಳಿ ಕಡೆ ಹೋಗುವ ದಾರಿಯಲ್ಲಿ ಸಿಲ್ವರ್ ಬಣ್ಣದ TOYOTA ETIOS ಕಾರನ್ನು ನಿಲ್ಲಿಸಿ ದಾರಿಯಲ್ಲಿ ಬರುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ಸಾಗರ ಪೇಟೆ ಪೊಲೀಸ್ ಠಾಣೆಯ ಪೊಲೀಸರು ಗಸ್ತಿನಲ್ಲಿದಿದ್ದನ್ನು ಕಂಡು ಕಾರನ್ನು ಬಿಟ್ಟು ಪರಾರಿ ಆಗಲು ಯತ್ನಿಸಿದ್ದಾರೆ.

ತಕ್ಷಣ ಪೊಲೀಸರು ಕಾರ್ಯ ಪ್ರವೃತ್ತರಾಗಿ ಕಾರು ಬಿಟ್ಟು ಓಡಿ ಹೋಗುತ್ತಿದ್ದ ಮೊಹಮ್ಮದ್ ಮುಸ್ತಾಫ್ (26), ಸುಹೇಲ್ (32) ,ಮೊಹಮ್ಮದ್ ಅಕ್ರಂ (18), ಸಮೀರ್ (21) , ಅಬ್ದುಲ್ ಮೊಹೀಂ (21) ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಮಚ್ಚು , 2 ಕಬ್ಬಿಣದ ರಾಡು, 1 ಹಗ್ಗ ,1 ಮೆಣಸಿನ ಪುಡಿ ಪ್ಯಾಕೆಟ್, ಕಾರಿನ ಡಿಕ್ಕಿಯಲ್ಲಿ ಒಂದು ಮರದ ದೊಣ್ಣೆ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಸಾಗರದ ಎಎಸ್‌ಪಿ ಯತೀಶ್ ಎನ್ ಅವರ ಮಾರ್ಗದರ್ಶನದಲ್ಲಿ, ಇನ್ಸ್‌ಪೆಕ್ಟರ್ ಮಹಾಬಲೇಶ್ವರ, ಎಎಸ್‌ಐ ಶಿವಕುಮಾರ್, ದಪೇದಾರ್‌ಗಳಾದ ದಿವಾಕರ ನಾಯ್ಕ, ಜಯೇಂದ್ರ, ನಾಗರಾಜ ಮತ್ತು ಪೋಲೀಸ್ ಕಾನ್ಸ್ಟೇಬಲ್‌ಗಳಾದ ಕಾಳಾನಾಯ್ಕ, ಮಲ್ಲೇಶ್, ರವಿ ಹರಿಜನ, ಚಾಲಕರಾದ ಮಲ್ಲನಗೌಡ ಮತ್ತು ವೆಂಕಟೇಶ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ದರೋಡೆ ಕೋರರನ್ನು ಬಂಧಿಸಿದ ಪೊಲೀಸ್ ತಂಡದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Intro:ಭಟ್ಕಳದಿಂದ ಸಾಗರಕ್ಕೆ ಬಂದು ದರೋಡೆಗೆ ಯತ್ನ ಕಾರು, ಮಾರಕಾಸ್ತ್ರ ಸಮೇತ ಐವರ ಬಂಧನ.

ಶಿವಮೊಗ್ಗ: ಭಟ್ಕಳ ದಿಂದ
ಕಾರಿನಲ್ಲಿ ಬಂದು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಐವರು ಕದೀಮರನ್ನು ಸಾಗರ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ. ಸಾಗರದ ವರದಹಳ್ಳಿ ಕಡೆ ಕಡೆಗೆ ಹೋಗುವ ದಾರಿಯಲ್ಲಿ ಸಿಲ್ವರ್ ಬಣ್ಣದ TOYOTA ETIOS ಕಾರನ್ನು ನಿಲ್ಲಿಸಿ ದಾರಿಯಲ್ಲಿ ಬರುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುವ ಯತ್ನದಲ್ಲಿ ಇದ್ದಾಗ, ಸಾಗರ ಪೇಟೆ ಪೊಲೀಸ್ ಠಾಣೆಯ ಪೊಲೀಸರು ಗಸ್ತಿನಲ್ಲಿದ್ದ ಪೊಲೀಸರನ್ನು ಕಂಡು ಕಾರನ್ನು ಬಿಟ್ಟು ಪರಾರಿ ಆಗಲು ಯತ್ನಿಸಿದ್ದಾರೆ.Body:ತಕ್ಷಣ ಪೊಲೀಸರು ಕಾರ್ಯ ಪ್ರವೃತ್ತರಾಗಿ ಕಾರು ಬಿಟ್ಟು ಓಡಿ ಹೋಗುತ್ತಿದ್ದ ಮೊಹಮ್ಮದ್ ಮುಸ್ತಾಫ್(26), ಸುಹೇಲ್ (32) ,ಮೊಹಮ್ಮದ್ ಅಕ್ರಂ (18), ಸಮೀರ್ (21) , ಅಬ್ದುಲ್ ಮೊಹೀಂ (21) ವರ್ಷ ಬಂಧಿಸಲಾಗಿದೆ. ಬಂಧಿತ ದರೋಡೆಕೋರಾಗಿದ್ದಾರೆ. ಬಂಧಿತ
ಆರೋಪಿಗಳಿಂದ ಒಂದು ಮಚ್ಚು ,  2 ಕಬ್ಬಿಣದ  ರಾಡು, 1 ಹಗ್ಗ ,  1 ಮೆಣಸಿನ ಪುಡಿ ಪ್ಯಾಕೆಟ್ , ಹಾಗೂ  ಕಾರಿನ ಡಿಕ್ಕಿಯಲ್ಲಿ ಒಂದು ಮರದ ದೊಣ್ಣೆ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ.Conclusion: ಸಾಗರದ ಎಎಸ್‌ಪಿ ರವರಾದ ಯತೀಶ್ ಎನ್ ರವರ ಮಾರ್ಗದರ್ಶನದಲ್ಲಿ, ಇನ್ಸ್‌ಫೆಕ್ಟರ್ ಮಹಾಬಲೇಶ್ವರ , ಎಎಸ್‌ಐ ಶಿವಕುಮಾರ್, ದಪೇದಾರ್‌ಗಳಾದ ದಿವಾಕರ ನಾಯ್ಕ, ಜಯೇಂದ್ರ, ನಾಗರಾಜ ಮತ್ತು ಪೋಲೀಸ್ ಕಾನ್ಸ್ಟೇಬಲ್‌ಗಳಾದ ಕಾಳಾನಾಯ್ಕ, ಮಲ್ಲೇಶ್, ರವಿ ಹರಿಜನ, ಚಾಲಕರಾದ ಮಲ್ಲನಗೌಡ ಮತ್ತು ವೆಂಕಟೇಶ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ದರೋಡೆಕೋರರನ್ನು ಬಂಧಿಸಿದ ಪೊಲೀಸ್ ತಂಡದ ಕಾರ್ಯಕ್ಕೆ ಸಾರ್ವಜನಿಕರು ಶಬ್ಬಾಷ್ ಎಂದಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.