ETV Bharat / state

ಮಳೆರಾಯನ ಆಗಮನಕ್ಕಾಗಿ ರಾಮೇಶ್ವರನಿಗೆ ಎಳನೀರು ಅಭಿಷೇಕ - Kannada news

ಮಳೆರಾಯ ಭೂಮಿಯ ಮೇಲೆ ಮುನಿಸಿಕೊಂಡಾಗ ರಾಮೇಶ್ವರನಿಗೆ ಎಳನೀರಿನ ಅಭಿಷೇಕ ಮಾಡಿದರೆ ವರುಣ ಧರೆಗಿಳಿಯುತ್ತಾನೆ ಎಂಬ ನಂಬಿಕೆ ಜನರಲ್ಲಿದೆ. ಆದ್ದರಿಂದ ಭೋದನಾನೇಂದ್ರ ಸ್ವಾಮೀಜಿಗಳ ನೆತೃತ್ವದಲ್ಲಿ ಭಕ್ತರು ಎಳನೀರು ಅಭಿಷೇಕ ಮಾಡಿದರು.

ಮಳೆರಾಯನ ಆಗಮನಕ್ಕಾಗಿ ರಾಮೇಶ್ವರನಿಗೆ ಎಳನೀರು ಅಭಿಷೇಕ
author img

By

Published : Jun 10, 2019, 7:59 PM IST

ಶಿವಮೊಗ್ಗ: ಜೂನ್ ಪ್ರಾರಂಭವಾದ್ರೂ ಮಳೆರಾಯನ ಸುಳಿವಿಲ್ಲ. ಮಳೆ ಇಲ್ಲದೆ ಇಳೆ ಬಿರುಕು ಬಿಟ್ಟಿದೆ. ಭೂಮಿಯ ಮೇಲಿನ ಸರ್ವ ಜೀವಿಗಳಿಗೂ ನೀರಿನ ಅವಶ್ಯಕತೆ ಇದೆ. ವರುಣ ದೇವ ಭೂಮಿಗೆ ಬರಲಿ ಎಂದು ನಗರದಲ್ಲಿ ಶಿವನಿಗೆ ಎಳನೀರಿನ ಅಭಿಷೇಕ ಹಾಗೂ ಪರ್ಜನ್ಯ ಜಪವನ್ನು ನಡೆಸಲಾಯಿತು.

ನಗರದ ಹೊರವಲಯದ ಹರಕರೆಯ ಶ್ರೀರಾಮೇಶ್ವರ ದೇವಾಲಯದಲ್ಲಿ ಮಳೆಗಾಗಿ ವಿಶೇಷ ಪೊಜೆ ಹಾಗೂ ಪರ್ಜನ್ಯ ಜಪವನ್ನು ಮಾಡಲಾಯಿತು. ನಗರದ ಸೌರಭ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಡೆದ ಪೊಜೆ ಹಾಗೂ ಜಪಗಳು ಮತ್ರೂರಿನ ಭೋದನಾನೇಂದ್ರ ಸರಸ್ವತಿ ಸ್ವಾಮಿಜೀಗಳ ನೇತೃತ್ವದಲ್ಲಿ ನಡೆಯಿತು.

ಮಳೆರಾಯನ ಆಗಮನಕ್ಕಾಗಿ ರಾಮೇಶ್ವರನಿಗೆ ಎಳನೀರು ಅಭಿಷೇಕ

ಮಳೆರಾಯ ಭೂಮಿಯ ಮೇಲೆ ಮುನಿಸಿಕೊಂಡಾಗ ರಾಮೇಶ್ವರನಿಗೆ ಎಳನೀರಿನ ಅಭಿಷೇಕ ಮಾಡಿದರೆ ವರುಣ ಧರೆಗಿಳಿಯುತ್ತಾನೆ ಎಂಬ ನಂಬಿಕೆ ಜನರಲ್ಲಿದೆ. ಆದ್ದರಿಂದ ಭೋದನಾನೇಂದ್ರ ಸ್ವಾಮೀಜಿಗಳ ನೆತೃತ್ವದಲ್ಲಿ, ಭಕ್ತರು ಎಳನೀರು ಅಭಿಷೇಕ ಮಾಡಿದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಪೂಜೆಯಲ್ಲಿ ಪರ್ಜನ್ಯ ಜಪವನ್ನು ಬ್ರಾಹ್ಮಣರು ನಡೆಸಿಕೊಟ್ಟರು.

ಪರ್ಜನ್ಯ ಜಪ ಮಾಡಿ ಇಂದ್ರನಿಗೆ ಪ್ರಾರ್ಥನೆ ಸಲ್ಲಿಸಿ, ಎಳನೀರಿನ ಅಭಿಷೇಕ ಮಾಡಿದ್ರೆ ದೇವತೆಗಳು ಸಂತೃಪ್ತರಾಗಿ ಮಳೆಯನ್ನು ಸುರಿಸುತ್ತಾರೆ. ಇದರಿಂದ ಮಳೆ ಬಾರದ ಸಮಯದಲ್ಲಿ ಈ ರೀತಿಯ ವಿಶೇಷ ಪೂಜೆ ನಡೆಸಲಾಗುತ್ತೆ ಎನ್ನುತ್ತಾರೆ ಸೌರಭ ಸಂಸ್ಥೆಯ ಕೆ.ಬಿ.ಪ್ರಸನ್ನ ಕುಮಾರ್.

ಮಳೆ ಬಾರದೆ ಹೋದಾಗ ಈ ರೀತಿ ವಿಶೇಷ ಪೊಜೆ ಹಾಗೂ ಜಪ ನಡೆಸಿದಾಗ ಮಳೆ ಬಂದ ಉದಾಹರಣೆಗಳಿವೆ ಎಂದು ಭೋದನಾನೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಶಿವಮೊಗ್ಗ: ಜೂನ್ ಪ್ರಾರಂಭವಾದ್ರೂ ಮಳೆರಾಯನ ಸುಳಿವಿಲ್ಲ. ಮಳೆ ಇಲ್ಲದೆ ಇಳೆ ಬಿರುಕು ಬಿಟ್ಟಿದೆ. ಭೂಮಿಯ ಮೇಲಿನ ಸರ್ವ ಜೀವಿಗಳಿಗೂ ನೀರಿನ ಅವಶ್ಯಕತೆ ಇದೆ. ವರುಣ ದೇವ ಭೂಮಿಗೆ ಬರಲಿ ಎಂದು ನಗರದಲ್ಲಿ ಶಿವನಿಗೆ ಎಳನೀರಿನ ಅಭಿಷೇಕ ಹಾಗೂ ಪರ್ಜನ್ಯ ಜಪವನ್ನು ನಡೆಸಲಾಯಿತು.

ನಗರದ ಹೊರವಲಯದ ಹರಕರೆಯ ಶ್ರೀರಾಮೇಶ್ವರ ದೇವಾಲಯದಲ್ಲಿ ಮಳೆಗಾಗಿ ವಿಶೇಷ ಪೊಜೆ ಹಾಗೂ ಪರ್ಜನ್ಯ ಜಪವನ್ನು ಮಾಡಲಾಯಿತು. ನಗರದ ಸೌರಭ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಡೆದ ಪೊಜೆ ಹಾಗೂ ಜಪಗಳು ಮತ್ರೂರಿನ ಭೋದನಾನೇಂದ್ರ ಸರಸ್ವತಿ ಸ್ವಾಮಿಜೀಗಳ ನೇತೃತ್ವದಲ್ಲಿ ನಡೆಯಿತು.

ಮಳೆರಾಯನ ಆಗಮನಕ್ಕಾಗಿ ರಾಮೇಶ್ವರನಿಗೆ ಎಳನೀರು ಅಭಿಷೇಕ

ಮಳೆರಾಯ ಭೂಮಿಯ ಮೇಲೆ ಮುನಿಸಿಕೊಂಡಾಗ ರಾಮೇಶ್ವರನಿಗೆ ಎಳನೀರಿನ ಅಭಿಷೇಕ ಮಾಡಿದರೆ ವರುಣ ಧರೆಗಿಳಿಯುತ್ತಾನೆ ಎಂಬ ನಂಬಿಕೆ ಜನರಲ್ಲಿದೆ. ಆದ್ದರಿಂದ ಭೋದನಾನೇಂದ್ರ ಸ್ವಾಮೀಜಿಗಳ ನೆತೃತ್ವದಲ್ಲಿ, ಭಕ್ತರು ಎಳನೀರು ಅಭಿಷೇಕ ಮಾಡಿದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಪೂಜೆಯಲ್ಲಿ ಪರ್ಜನ್ಯ ಜಪವನ್ನು ಬ್ರಾಹ್ಮಣರು ನಡೆಸಿಕೊಟ್ಟರು.

ಪರ್ಜನ್ಯ ಜಪ ಮಾಡಿ ಇಂದ್ರನಿಗೆ ಪ್ರಾರ್ಥನೆ ಸಲ್ಲಿಸಿ, ಎಳನೀರಿನ ಅಭಿಷೇಕ ಮಾಡಿದ್ರೆ ದೇವತೆಗಳು ಸಂತೃಪ್ತರಾಗಿ ಮಳೆಯನ್ನು ಸುರಿಸುತ್ತಾರೆ. ಇದರಿಂದ ಮಳೆ ಬಾರದ ಸಮಯದಲ್ಲಿ ಈ ರೀತಿಯ ವಿಶೇಷ ಪೂಜೆ ನಡೆಸಲಾಗುತ್ತೆ ಎನ್ನುತ್ತಾರೆ ಸೌರಭ ಸಂಸ್ಥೆಯ ಕೆ.ಬಿ.ಪ್ರಸನ್ನ ಕುಮಾರ್.

ಮಳೆ ಬಾರದೆ ಹೋದಾಗ ಈ ರೀತಿ ವಿಶೇಷ ಪೊಜೆ ಹಾಗೂ ಜಪ ನಡೆಸಿದಾಗ ಮಳೆ ಬಂದ ಉದಾಹರಣೆಗಳಿವೆ ಎಂದು ಭೋದನಾನೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

Intro:ಜೂನ್ ಪ್ರಾರಂಭವಾದ್ರೂ ಮಳೆರಾಯನ ಸುಳಿವಿಲ್ಲ. ಮಳೆ ಇಲ್ಲದೆ ಇಳೆ ಬಿರುಕು ಬಿಟ್ಟಿದೆ. ಮಳೆರಾಯ ಭೂಮಿಗೆ ಬಂದ್ರೆ ಭೂಮಿ ಜೀವಂತವಾಗಿ ಇರುತ್ತದೆ. ಭೂಮಿ ಮೇಲಿನ ಸರ್ವ ಜೀವಿಗೂ ನೀರಿನ ಅವಶ್ಯಕತೆ ಇದೆ. ಮಳೆರಾಯ ಭೂಮಿಗೆ ಬರಲಿ ಎಂದು ಶಿವಮೊಗ್ಗದಲ್ಲಿ ಶಿವನಿಗೆ ಎಳನೀರಿನ ಅಭಿಷೇಕ ಹಾಗೂ ಪರ್ಜನ್ಯ ಜಪವನ್ನು ನಡೆಸಲಾಯಿತು. ಶಿವಮೊಗ್ಗ ಹೊರವಲಯದ ಹರಕರೆಯ ಶ್ರೀರಾಮೇಶ್ವರ ದೇವಾಲಯದಲ್ಲಿ ಮಳೆಗಾಗಿ ವಿಶೇಷ ಪೊಜೆ ಹಾಗೂ ಪರ್ಜನ್ಯ ಜಪವನ್ನು ಮಾಡಲಾಯಿತು. ನಗರದ ಸೌರಭ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಡೆದ ಪೊಜೆ ಹಾಗೂ ಜಪಗಳು ಮತ್ರೂರಿನ ಭೋದನಾನೇಂದ್ರ ಸರಸ್ವತಿ ಸ್ವಾಮಿಜೀಗಳ ನೇತೃತ್ವದಲ್ಲಿ ನಡೆಯಿತು.


Body:ಶ್ರೀರಾಮೇಶ್ವರನಿಗೆ 1200 ಎಳನೀರಿನ ಅಭಿಷೇಕ ನಡೆಸಲಾಯಿತು. ಎಳನೀರಿನ ಅಭಿಷೇಕವನ್ನು ಭೋದನಾನೇಂದ್ರ ಸರಸ್ವತಿ ಸ್ವಾಮಿಜೀಗಳು ರಾಮೇಶ್ವರನಿಗೆ ಎಳನೀರಿನ ಅಭಿಷೇಕ ಮಾಡುವ ಮೂಲಕ ಪ್ರಾರಂಭಿಸಿದರು. ನಂತ್ರ ಭಕ್ತರು ದೇವರ ಅಭಿಷೇಕಕ್ಕೆ ಸರದಿ‌ ಸಾಲಿನಲ್ಲಿ ನಿಂತು ಎಳನೀರನ್ನು ನೀಡುತ್ತಾ ಅಭಿಷೇಕ ಮಾಡಿದರು. ಗರ್ಭಗುಡಿಯಲ್ಲಿ ವೇದಘೋಷದೊಂದಿಗೆ ರಾಮೇಶ್ವರನಿಗೆ ಎಳನೀರ ಅಭಿಷೇಕ ಮಾಡುತ್ತಿದ್ದರೆ, ದೇವಾಲಯದ ಹೊರಭಾಗದಲ್ಲಿ ಭೋದನಾನೇಂದ್ರ ಸರಸ್ವತಿ ಸ್ವಾಮಿಜೀಗಳ ನೇತೃತ್ವದಲ್ಲಿ ಪರ್ಜನ್ಯ ಜಪವನ್ನು ಬ್ರಾಹ್ಮಣರು ನಡೆಸಿ ಕೊಟ್ಟರು. ಈ ವೇಳೆ ಮಾತೆಯರು ಭಜನೆಯನ್ನು ನಡೆಸಿದರು. ಈ ಕಾರ್ಯಕ್ರಮ ಸುಮಾರು‌ ಎರಡು ಗಂಟೆಗಳ ಕಾಲ ನಡೆಯಿತು.‌


Conclusion:ಮಳೆರಾಯ ಭೂಮಿಯ ಮೇಲೆ ಮುನಿದು ಕೊಂಡಾಗ ಶಿವನಲ್ಲಿ ಪ್ರಾರ್ಥನೆ ಮಾಡುವ ಮೂಲಕ ಮಳೆ ಬರಲಿ ಎಂದು ಬೇಡಿ ಕೊಳ್ಳಲಾಗುತ್ತದೆ. ಇನ್ನೂ ಪರ್ಜನ್ಯ ಜಪ ಮಾಡುವ ಮೂಲಕ ಇಂದ್ರನಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಈ ರೀತಿ ಎಳನೀರಿನ ಅಭಿಷೇಕ ಹಾಗೂ ಪರ್ಜನ್ಯ ಜಪ ಮಾಡಿದರೆ, ದೇವತೆಗಳು‌ ಸಂತೃಪ್ತರಾಗಿ ಮಳೆಯನ್ನು ಸುರಿಸುತ್ತಾರೆ ಎಂಬ ನಂಬಿಕೆ ಇದೆ. ಇದರಿಂದ ಮಳೆ ಬಾರದೆ ಹೋದಾಗ ಜಪ ಹಾಗೂ ವಿಶೇಷ ಪೊಜೆಗಳನ್ನು ನಡೆಸಲಾಗುತ್ತದೆ. ಇದೇ ರೀತಿ ನಾಡಿನದ್ಯಾಂತ ಮಳೆಗಾಗಿ ಪೊಜೆ, ಪ್ರಾರ್ಥನೆ ನಡೆಸಲಾಗುತ್ತಿದೆ ಎನ್ನುತ್ತಾರೆ ಸೌರಭ ಸಂಸ್ಥೆಯ ಕೆ.ಬಿ.ಪ್ರಸನ್ನ ಕುಮಾರ್. ಮಳೆ ಬಾರದೆ ಹೋದಾಗ ಈ ರೀತಿ ವಿಶೇಷ ಪೊಜೆ ಹಾಗೂ ಜಪ ನಡೆಸಿದಾಗ ಮಳೆ ಬಂದ ಉದಾಹರಣೆಗಳಿವೆ ಎನ್ನುತ್ರಾರೆ ಭೋದನಾನೇಂದ್ರ ಸರಸ್ವತಿ ಸ್ವಾಮಿಜೀ

ಬೈಟ್: ಕೆ.ಬಿ.ಪ್ರಸನ್ನ ಕುಮಾರ್. ಸೌರಭ ಸಂಸ್ಥೆ.

ಬೈಟ್: ಭೋದಾನನೇಂದ್ರ ಸರಸ್ವತಿ ಸ್ವಾಮಿಜೀ.

ಕಿರಣ್ ಕುಮಾರ್. ಶಿವಮೊಗ್ಗ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.