ETV Bharat / state

ಚಂದ್ರಯಾನ-3 ಯಶಸ್ವಿಯಾಗುವುದನ್ನು ಕಣ್ತುಂಬಿಕೊಂಡಿದ್ದು ನಮ್ಮೆಲ್ಲರ ಪುಣ್ಯ: ಕೆ.ಎಸ್.ಈಶ್ವರಪ್ಪ

author img

By ETV Bharat Karnataka Team

Published : Aug 23, 2023, 10:45 PM IST

ಚಂದ್ರಯಾನ -3 ಯಶಸ್ವಿಯಾಗಿರುವುದು ಭಾರತೀಯರಾದ ನಮಗೆ ಹೆಮ್ಮೆ ಎಂದು ಮಾಜಿ ಉಪ‌ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ‌ ಸಂತಸ ವ್ಯಕ್ತಪಡಿಸಿದರು.

ks-eshwarappa-reaction-on-chandrayaan-3-success
ಚಂದ್ರಯಾನ -3 ಯಶಸ್ವಿಯಾಗುವುದನ್ನ ಕಣ್ತುಂಬಿಕೊಂಡಿದ್ದು ನಮ್ಮೆಲ್ಲರ ಪುಣ್ಯ: ಕೆ.ಎಸ್ ಈಶ್ವರಪ್ಪ
ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ‌

ಶಿವಮೊಗ್ಗ: "ಚಂದ್ರಯಾನ ಯಶಸ್ವಿಯಾಗುವುದನ್ನು ನಮ್ಮ ಕಣ್ಣಿಂದ ನೋಡುವ ಸೌಭಾಗ್ಯ ಸಿಕ್ಕಿದ್ದು ಪುಣ್ಯ" ಎಂದು ಮಾಜಿ ಉಪ‌ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ‌ ಹೇಳಿದರು. ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ಆದ ಹಿನ್ನೆಲೆಯಲ್ಲಿ ನಗರದ ಶುಭ ಮಂಗಳ ಕಲ್ಯಾಣ ಮಂದಿರದ ಆವರಣದಲ್ಲಿ ಸಂಭ್ರಮಾಚರಣೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಇಂದು ಇಡೀ ಪ್ರಪಂಚ ನಮ್ಮನ್ನು ಕೊಂಡಾಡುತ್ತಿದೆ. ಭಾರತೀಯರು ನಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ನಮ್ಮ ದೇಶದ ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ. ಆ ವಿಜ್ಞಾನಿಗಳಿಗೆ ಸಾಷ್ಟಾಂಗ ನಮಸ್ಕಾರ ತಿಳಿಸುತ್ತೇನೆ" ಎಂದರು.

"ಬರುವ ದಿನಗಳಲ್ಲಿ ದೇಶ ಒಂದು ಜಗತ್ತು ಎಂಬುದನ್ನು ಪ್ರಧಾನಿಗಳು ಹೇಳಿದ್ದಾರೆ. ಆ ದಿಕ್ಕಿನಲ್ಲಿ ನಾವು ಯಶಸ್ವಿಯಾಗೋಣ ಹಾಗೂ ಚಂದ್ರನ ದಕ್ಷಿಣ ಭಾಗಕ್ಕೆ ಮೊದಲನೇ ಬಾರಿ ಭಾರತೀಯ ಚಂದ್ರಯಾನ ಹೋಗಿ ಅಲ್ಲಿ ಯಶಸ್ವಿಯಾಗಿರುವುದು ಭಾರತೀಯರಾದ ನಮಗೆ ಹೆಮ್ಮೆ. ಈಗ ವಿಶ್ವದಲ್ಲಿ ಮೊದಲನೇ ಸ್ಥಾನದಲ್ಲಿ ನಾವು ಇದ್ದೇವೆ ಎನ್ನುವ ಗರ್ವ ನಮಗಿದೆ. ಇದಕ್ಕೆ ಕಾರಣರಾದ ಇಸ್ರೋ ಸಂಸ್ಥೆಯ ಎಲ್ಲಾ ವಿಜ್ಞಾನಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಹೇಳಿದರು.

ನಟ ಪ್ರಕಾಶ್ ರಾಜ್ ವ್ಯಂಗ್ಯ ಚಿತ್ರದ ಮೂಲಕ ಟೀಕೆ ಮಾಡಿರುವ ಬಗ್ಗೆ ಮಾತನಾಡಿ, "ನನ್ನ ಬಾಯಲ್ಲಿ ಯಾಕೆ ಕೆಟ್ಟದು ಹೇಳಿಸುತ್ತೀರಾ?. ಪ್ರಕಾಶ್ ರಾಜ್ ಅವರ ಬಗ್ಗೆ ಈ ಸಂದರ್ಭದಲ್ಲಿ ಮಾತನಾಡಲು ಇಚ್ಛೆಪಡಲ್ಲ. ದೇಶಕ್ಕೆ, ದೇಶದ ವಿಜ್ಞಾನಿಗಳಿಗೆ ಅಪಮಾನ ಮಾಡಿದ್ದನ್ನು ಅವರು ದೊಡ್ಡವರಾಗಿ ಕ್ಷಮೆ ಕೇಳಬೇಕು. ಕ್ಷಮೆ ಕೇಳುವುದು ಬಿಡುವುದು ಅವರಿಗೆ ಬಿಡುತ್ತೇನೆ. ಇದರ ಜೊತೆಗೆ ದೇಶದ ವಿಜ್ಞಾನಿಗಳು ಪೂಜೆ, ಪುನಸ್ಕಾರ ಮಾಡಿದ್ದು ಕೂಡ ಅವರನ್ನು ಕಾಪಾಡಿದೆ ಎನ್ನುವುದನ್ನು ಹೆಮ್ಮೆಯಿಂದ ಹೇಳುತ್ತೇನೆ" ಎಂದು ತಿಳಿಸಿದರು.

ಇದನ್ನೂ ಓದಿ: ಚಂದ್ರಯಾನ-3 ಯಶಸ್ಸಿಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಿಜೆಐ ಸಂತಸ; ಇಸ್ರೋಗೆ NASA ಅಧ್ಯಕ್ಷರಿಂದ ಅಭಿನಂದನೆ

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ‌

ಶಿವಮೊಗ್ಗ: "ಚಂದ್ರಯಾನ ಯಶಸ್ವಿಯಾಗುವುದನ್ನು ನಮ್ಮ ಕಣ್ಣಿಂದ ನೋಡುವ ಸೌಭಾಗ್ಯ ಸಿಕ್ಕಿದ್ದು ಪುಣ್ಯ" ಎಂದು ಮಾಜಿ ಉಪ‌ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ‌ ಹೇಳಿದರು. ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ಆದ ಹಿನ್ನೆಲೆಯಲ್ಲಿ ನಗರದ ಶುಭ ಮಂಗಳ ಕಲ್ಯಾಣ ಮಂದಿರದ ಆವರಣದಲ್ಲಿ ಸಂಭ್ರಮಾಚರಣೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಇಂದು ಇಡೀ ಪ್ರಪಂಚ ನಮ್ಮನ್ನು ಕೊಂಡಾಡುತ್ತಿದೆ. ಭಾರತೀಯರು ನಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ನಮ್ಮ ದೇಶದ ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ. ಆ ವಿಜ್ಞಾನಿಗಳಿಗೆ ಸಾಷ್ಟಾಂಗ ನಮಸ್ಕಾರ ತಿಳಿಸುತ್ತೇನೆ" ಎಂದರು.

"ಬರುವ ದಿನಗಳಲ್ಲಿ ದೇಶ ಒಂದು ಜಗತ್ತು ಎಂಬುದನ್ನು ಪ್ರಧಾನಿಗಳು ಹೇಳಿದ್ದಾರೆ. ಆ ದಿಕ್ಕಿನಲ್ಲಿ ನಾವು ಯಶಸ್ವಿಯಾಗೋಣ ಹಾಗೂ ಚಂದ್ರನ ದಕ್ಷಿಣ ಭಾಗಕ್ಕೆ ಮೊದಲನೇ ಬಾರಿ ಭಾರತೀಯ ಚಂದ್ರಯಾನ ಹೋಗಿ ಅಲ್ಲಿ ಯಶಸ್ವಿಯಾಗಿರುವುದು ಭಾರತೀಯರಾದ ನಮಗೆ ಹೆಮ್ಮೆ. ಈಗ ವಿಶ್ವದಲ್ಲಿ ಮೊದಲನೇ ಸ್ಥಾನದಲ್ಲಿ ನಾವು ಇದ್ದೇವೆ ಎನ್ನುವ ಗರ್ವ ನಮಗಿದೆ. ಇದಕ್ಕೆ ಕಾರಣರಾದ ಇಸ್ರೋ ಸಂಸ್ಥೆಯ ಎಲ್ಲಾ ವಿಜ್ಞಾನಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಹೇಳಿದರು.

ನಟ ಪ್ರಕಾಶ್ ರಾಜ್ ವ್ಯಂಗ್ಯ ಚಿತ್ರದ ಮೂಲಕ ಟೀಕೆ ಮಾಡಿರುವ ಬಗ್ಗೆ ಮಾತನಾಡಿ, "ನನ್ನ ಬಾಯಲ್ಲಿ ಯಾಕೆ ಕೆಟ್ಟದು ಹೇಳಿಸುತ್ತೀರಾ?. ಪ್ರಕಾಶ್ ರಾಜ್ ಅವರ ಬಗ್ಗೆ ಈ ಸಂದರ್ಭದಲ್ಲಿ ಮಾತನಾಡಲು ಇಚ್ಛೆಪಡಲ್ಲ. ದೇಶಕ್ಕೆ, ದೇಶದ ವಿಜ್ಞಾನಿಗಳಿಗೆ ಅಪಮಾನ ಮಾಡಿದ್ದನ್ನು ಅವರು ದೊಡ್ಡವರಾಗಿ ಕ್ಷಮೆ ಕೇಳಬೇಕು. ಕ್ಷಮೆ ಕೇಳುವುದು ಬಿಡುವುದು ಅವರಿಗೆ ಬಿಡುತ್ತೇನೆ. ಇದರ ಜೊತೆಗೆ ದೇಶದ ವಿಜ್ಞಾನಿಗಳು ಪೂಜೆ, ಪುನಸ್ಕಾರ ಮಾಡಿದ್ದು ಕೂಡ ಅವರನ್ನು ಕಾಪಾಡಿದೆ ಎನ್ನುವುದನ್ನು ಹೆಮ್ಮೆಯಿಂದ ಹೇಳುತ್ತೇನೆ" ಎಂದು ತಿಳಿಸಿದರು.

ಇದನ್ನೂ ಓದಿ: ಚಂದ್ರಯಾನ-3 ಯಶಸ್ಸಿಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಿಜೆಐ ಸಂತಸ; ಇಸ್ರೋಗೆ NASA ಅಧ್ಯಕ್ಷರಿಂದ ಅಭಿನಂದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.