ETV Bharat / state

ಶಿವಮೊಗ್ಗ: ತುಂಗಾ ನದಿಗೆ ನಿರ್ಮಿಸಲಾದ ನೂತನ ಸೇತುವೆ ಲೋಕಾರ್ಪಣೆ

author img

By ETV Bharat Karnataka Team

Published : Dec 17, 2023, 6:04 PM IST

Updated : Dec 17, 2023, 7:26 PM IST

20 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ತುಂಗಾಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು.

ಸೇತುವೆ ಲೋಕಾರ್ಪಣೆ
ಸೇತುವೆ ಲೋಕಾರ್ಪಣೆ

ತುಂಗಾ ನದಿಗೆ ನಿರ್ಮಿಸಲಾದ ನೂತನ ಸೇತುವೆ ಲೋಕಾರ್ಪಣೆ

ಶಿವಮೊಗ್ಗ: ನಗರದ ಬೈಪಾಸ್ ರಸ್ತೆಯಲ್ಲಿ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ನಾಲ್ಕನೇ ನೂತನ ಸೇತುವೆಯನ್ನು ಇಂದು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಸುಮಾರು 20.12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆ 280 ಮೀಟರ್ ಉದ್ದ ಹಾಗು 12 ಮೀಟರ್ ಅಗಲವಿದೆ.

ತುಂಗಾ ನದಿಗೆ ನಾಲ್ಕನೇ ಸೇತುವೆ ಲೋಕಾರ್ಪಣೆ
ಸೇತುವೆ ಲೋಕಾರ್ಪಣೆ

ಬಿ.ವೈ.ರಾಘವೇಂದ್ರ ಮಾತನಾಡಿ, ಈ ಸೇತುವೆಯು ಜನರ ಉಪಯೋಗಕ್ಕೆ ಅವಶ್ಯವಾಗಿ ಬೇಕಾಗಿತ್ತು. ಈಗ ಇರುವ ಸೇತುವೆ ಸ್ವಲ್ಪ ದುರಸ್ಥಿ ಮಾಡಬೇಕಿದೆ. ಅಲ್ಲದೆ, ಪಕ್ಕದ ಹಳೆ ಸೇತುವೆ ದುರಸ್ಥಿಗೆ 3.75 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.

ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಅಂತಿಮ: ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರಿಡಬೇಕೆಂದು ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿದ್ದಾಗ ತೀರ್ಮಾನ ಮಾಡಲಾಗಿತ್ತು. ಈಗ ವಿಧಾನಸಭೆಯಲ್ಲಿಟ್ಟು ಅದನ್ನು ಪಾಸ್ ಮಾಡಿ ಕೇಂದ್ರಕ್ಕೆ ಕಳುಹಿಸಿಕೊಡಬೇಕಿದೆ. ಇದಕ್ಕಾಗಿ ಸಂಬಂಧಪಟ್ಟ ಸಚಿವರಾದ ಎಂ.ಬಿ‌.ಪಾಟೀಲರ ಜೊತೆ ಮಾತನಾಡಿ, ಅಧಿವೇಶನದಲ್ಲಿ ಮಂಡಿಸಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಮುಂದಿನ ಹದಿನೈದು ದಿನಗಳಲ್ಲಿ ಕೇಂದ್ರದಿಂದ ಒಪ್ಪಿಗೆ ಸಿಗಬಹುದು. ಶಿವಮೊಗ್ಗದ ರೈಲ್ವೆ ನಿಲ್ದಾಣಕ್ಕೆ ಕೆಳದಿ ಶಿವಪ್ಪ ನಾಯಕ ಹೆಸರನ್ನು ಶಿಫಾರಸು ಮಾಡಲಾಗಿದೆ. ಇವೆರಡೂ ಅಧಿಕೃತವಾಗಲಿದೆ ಎಂದರು.

ಸೇತುವೆ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಮಂತ್ರಿ ಸೇರಿದಂತೆ ಯಾವುದೇ ಅಧಿಕಾರಿಗಳನ್ನು ಆಹ್ವಾನಿಸದೇ ಸಂಸದರು ತಾವೇ ಸೇತುವೆ ಉದ್ಘಾಟಿಸಿರುವುದು ಚರ್ಚೆಗೂ ಕಾರಣವಾಗಿದೆ.

ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್‌ ಸೇರಿದಂತೆ ಇತರರಿದ್ದರು.

ಇದನ್ನೂ ಓದಿ: ಜಮೀನಿನ ಮೇಲೆ ಪವರ್‌ಲೈನ್ ಅಳವಡಿಕೆ: ರೈತರ ಪ್ರತಿಭಟನೆ, ಪರಿಹಾರಕ್ಕೆ ಆಗ್ರಹ

ತುಂಗಾ ನದಿಗೆ ನಿರ್ಮಿಸಲಾದ ನೂತನ ಸೇತುವೆ ಲೋಕಾರ್ಪಣೆ

ಶಿವಮೊಗ್ಗ: ನಗರದ ಬೈಪಾಸ್ ರಸ್ತೆಯಲ್ಲಿ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ನಾಲ್ಕನೇ ನೂತನ ಸೇತುವೆಯನ್ನು ಇಂದು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಸುಮಾರು 20.12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆ 280 ಮೀಟರ್ ಉದ್ದ ಹಾಗು 12 ಮೀಟರ್ ಅಗಲವಿದೆ.

ತುಂಗಾ ನದಿಗೆ ನಾಲ್ಕನೇ ಸೇತುವೆ ಲೋಕಾರ್ಪಣೆ
ಸೇತುವೆ ಲೋಕಾರ್ಪಣೆ

ಬಿ.ವೈ.ರಾಘವೇಂದ್ರ ಮಾತನಾಡಿ, ಈ ಸೇತುವೆಯು ಜನರ ಉಪಯೋಗಕ್ಕೆ ಅವಶ್ಯವಾಗಿ ಬೇಕಾಗಿತ್ತು. ಈಗ ಇರುವ ಸೇತುವೆ ಸ್ವಲ್ಪ ದುರಸ್ಥಿ ಮಾಡಬೇಕಿದೆ. ಅಲ್ಲದೆ, ಪಕ್ಕದ ಹಳೆ ಸೇತುವೆ ದುರಸ್ಥಿಗೆ 3.75 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.

ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಅಂತಿಮ: ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರಿಡಬೇಕೆಂದು ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿದ್ದಾಗ ತೀರ್ಮಾನ ಮಾಡಲಾಗಿತ್ತು. ಈಗ ವಿಧಾನಸಭೆಯಲ್ಲಿಟ್ಟು ಅದನ್ನು ಪಾಸ್ ಮಾಡಿ ಕೇಂದ್ರಕ್ಕೆ ಕಳುಹಿಸಿಕೊಡಬೇಕಿದೆ. ಇದಕ್ಕಾಗಿ ಸಂಬಂಧಪಟ್ಟ ಸಚಿವರಾದ ಎಂ.ಬಿ‌.ಪಾಟೀಲರ ಜೊತೆ ಮಾತನಾಡಿ, ಅಧಿವೇಶನದಲ್ಲಿ ಮಂಡಿಸಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಮುಂದಿನ ಹದಿನೈದು ದಿನಗಳಲ್ಲಿ ಕೇಂದ್ರದಿಂದ ಒಪ್ಪಿಗೆ ಸಿಗಬಹುದು. ಶಿವಮೊಗ್ಗದ ರೈಲ್ವೆ ನಿಲ್ದಾಣಕ್ಕೆ ಕೆಳದಿ ಶಿವಪ್ಪ ನಾಯಕ ಹೆಸರನ್ನು ಶಿಫಾರಸು ಮಾಡಲಾಗಿದೆ. ಇವೆರಡೂ ಅಧಿಕೃತವಾಗಲಿದೆ ಎಂದರು.

ಸೇತುವೆ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಮಂತ್ರಿ ಸೇರಿದಂತೆ ಯಾವುದೇ ಅಧಿಕಾರಿಗಳನ್ನು ಆಹ್ವಾನಿಸದೇ ಸಂಸದರು ತಾವೇ ಸೇತುವೆ ಉದ್ಘಾಟಿಸಿರುವುದು ಚರ್ಚೆಗೂ ಕಾರಣವಾಗಿದೆ.

ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್‌ ಸೇರಿದಂತೆ ಇತರರಿದ್ದರು.

ಇದನ್ನೂ ಓದಿ: ಜಮೀನಿನ ಮೇಲೆ ಪವರ್‌ಲೈನ್ ಅಳವಡಿಕೆ: ರೈತರ ಪ್ರತಿಭಟನೆ, ಪರಿಹಾರಕ್ಕೆ ಆಗ್ರಹ

Last Updated : Dec 17, 2023, 7:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.