ಶಿವಮೊಗ್ಗ: ತಂದೆಯೊಂದಿಗೆ ಭಿಕ್ಷಾಟನೆಯಲ್ಲಿ ತೂಡಗಿದ್ದ 9 ವರ್ಷದ ಬಾಲಕನನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ರಕ್ಷಣೆ ಮಾಡಲಾಗಿದೆ.
ಸಾಗರ ತಾಲೂಕಿನ ರಸ್ತೆಯಲ್ಲಿ ಅಲೆಮಾರಿ ಜನಾಂಗದ ಬಾಲಕನೊಬ್ಬ ತನ್ನ ತಂದೆಯೊಂದಿಗೆ ಮಾರಮ್ಮ ದೇವರನ್ನು ಹೊತ್ತು ಭಿಕ್ಷೆ ಬೇಡುತ್ತಿದ್ದ. ಈ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಗಾಯಿತ್ರಿ ಹಾಗೂ ಸಹಾಯವಾಣಿ ಸಂಯೋಜಕರಾದ ಪರಶುರಾಮ್ ಅವರು ಬಾಲಕನನ್ನು ರಕ್ಷಿಸಿದ್ದಾರೆ.
ಸದ್ಯಕ್ಕೆ ಬಾಲಕನನ್ನು 'ಸುರಭಿ' ತೆರೆದ ತಂಗುದಾಣದಲ್ಲಿ ಇರಿಸಲಾಗಿದೆ.