ETV Bharat / state

ಚನ್ನಪಟ್ಟಣ ಕ್ಷೇತ್ರಕ್ಕೆ ಪ್ರಸನ್ನ ಪಿ ಗೌಡ ಕಾಂಗ್ರೆಸ್ ಅಭ್ಯರ್ಥಿ​: ಜಿಲ್ಲಾ ಕೈ ಅಧ್ಯಕ್ಷ ಗಂಗಾಧರ್ ಪರೋಕ್ಷ ಘೋಷಣೆ

author img

By

Published : Feb 14, 2023, 5:51 PM IST

ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರಕ್ಕೆ ಪ್ರಸನ್ನ ಪಿ ಗೌಡ ಕಾಂಗ್ರೆಸ್ ಅಭ್ಯರ್ಥಿ - ರಾಮನಗರ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್​​​ರಿಂದ ಪ್ರಕಟ.. ಆದರೆ ಪಕ್ಷದಿಂದ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ

Ramnagar District Block Congress President Gangadhar spoke
ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಮಾತನಾಡಿದರು

ರಾಮನಗರ: ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರಕ್ಕೆ ಕಾಂಗ್ರೆಸ್​ ಪಕ್ಷದಿಂದ ಪ್ರಸನ್ನ ಪಿ ಗೌಡ ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ. ರಾಮನಗರ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಅವರು ಪ್ರಸನ್ನ ಪಿ ಗೌಡ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಟಿಕಟ್​ ಆಕಾಂಕ್ಷಿಗಳ ಎದುರು ಘೋಷಣೆ ಮಾಡಿದ್ದಾರೆ‌. ಪಟ್ಟಣದ ಖಾಸಗಿ ಹೋಟೆಲ್​​​ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಗಂಗಾಧರ್ ಅವರು ಈ ಘೋಷಣೆ ಮಾಡಿದ್ದಾರೆ. ಆದರೆ ಕೆಪಿಸಿಸಿ ಇನ್ನೂ ಪಟ್ಟಿಯನ್ನು ಪ್ರಕಟಿಸಿಲ್ಲ.
ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರ ಕಾಂಗ್ರೆಸ್​ ಪಕ್ಷದ ಭದ್ರ ಕೋಟೆ ಎಂದ್ರೆ ತಪ್ಪಿಲ್ಲ. ಕಾಂಗ್ರೆಸ್ ಪಕ್ಷದಿಂದ ಘಟಾನುಘಟಿ ನಾಯಕರು ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಆದರೆ, ಪ್ರಸ್ತುತ ದಿನಗಳಲ್ಲಿ ರಾಜಕೀಯ ಏರಿಳಿತದ ನಡುವೆ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರು ಕೇಳಿದ್ರು ನಾನೇ ನಾಯಕ ಎನ್ನುವ ಪರಿಸ್ಥಿತಿ ಇತ್ತು. ಆದರೆ, ಚುನಾವಣೆ ಸಮೀಪಿಸುತ್ತಿದ್ದು, ಪ್ರಸನ್ನ ಪಿ ಗೌಡ ಅವರಿಗೆ ಕಾಂಗ್ರೆಸ್​ ಟಿಕೆಟ್ ಪಕ್ಕಾ ಆಗಿದೆ.
ಎಂಟು ಅಭ್ಯರ್ಥಿಗಳು ಕಾಂಗ್ರೆಸ್ ಟಿಕೆಟ್​ ಆಕಾಂಕ್ಷಿತರು:ಕಾಂಗ್ರೆಸ್ ಪಕ್ಷದ ಎಂಟು ಆಕಾಂಕ್ಷಿತ ಅಭ್ಯರ್ಥಿಗಳಲ್ಲಿ ಪೈಪೋಟಿ ಇತ್ತು. ಬೋರ್​​​ವೆಲ್​​ ರಂಗನಾಥ್, ಡಿ.ಕೆ ಕಾಂತರಾಜು, ಪ್ರಸನ್ನಪಿಗೌಡ, ಶರತ್ ಚಂದ್ರ, ಭಗತ್ ರಾಮ್, ಕರುಣಾಕರ್, ಚಂದ್ರಸಾಗರ್, ಇವರು ಎಂಟು ಮಂದಿ ಈಗಾಗಲೇ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಉಳಿದ ಅಭ್ಯರ್ಥಿಗಳು ಹಿಂದಕ್ಕೆ ಸರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವೂ ಪ್ರಸನ್ನ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.

ಅಹಿಂದ ಮತಗಳು ಕಾಂಗ್ರೆಸ್​ಗೆ ನಿರ್ಣಾಯಕ: ಚನ್ನಪಟ್ಟಣ ಕ್ಷೇತ್ರದಲ್ಲಿ ಬಲಿಷ್ಟ ಅಭ್ಯರ್ಥಿಗಳು ಯಾರೂ ಇಲ್ಲ ಎಂದಲ್ಲ. ಇಂದಿಗೂ ಕೂಡ ಕ್ಷೇತ್ರದಲ್ಲಿ ಯಾರೇ ಕಾಂಗ್ರೆಸ್​​ ಪಕ್ಷದ ಅಭ್ಯರ್ಥಿಯಾದರೆ ತನ್ನದೇ ಆದ ವೋಟ್​​ ಬ್ಯಾಂಕ್ ಅನ್ನು ಉಳಿಸಿಕೊಂಡು ಬಂದಿದೆ ಎಂದರೆ ಅತಿಶಯೋಕ್ತಿಯಲ್ಲ. ಇತ್ತೀಚಿನ ರಾಜಕೀಯ ಬೆಳವಣೆಗೆ ನಡುವೆ ಅಹಿಂದಾ ಮತಗಳು ಒಂದು ವೇಳೆ ಕಾಂಗ್ರೆಸ್​ ಅಭ್ಯರ್ಥಿ ಪರ ಬಿದ್ದರೆ ರಾಜಕೀಯ ಚಿತ್ರಣ ಬದಲಾಗುವುದರಲ್ಲಿ ಯಾವುದೇ ಸಂಶಯ ಇಲ್ಲ.

ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಿ ಎಂ ಸಿದ್ದರಾಮಯ್ಯ ಅವರು ಈ ಕ್ಷೇತ್ರವನ್ನು ಪ್ರತಿಷ್ಠಿತ ಕಣವಾಗಿ ತೆಗೆದುಕೊಂಡಿದ್ದಾರೆ. ಅವರಿಗೆ ರಾಜ್ಯದ ವಿಧಾನಸಭೆ ಕ್ಷೇತ್ರಗಳಲ್ಲಿ ಹೆಚ್ಚು ಅಭ್ಯರ್ಥಿಗಳನ್ನೂ ಗೆಲ್ಲಿಸಿಕೊಂಡುಬರುವ ಹೊಣೆಗಾರಿಕೆ ಕೂಡ ಇದೆ.

ಪ್ರಸನ್ನ ಪಿ ಗೌಡಗೆ ಹೈಕಮಾಂಡ್ ಮಣೆ: ಚನ್ನಪಟ್ಟಣ ಕ್ಷೇತ್ರದಲ್ಲಿ ಅಂತೂ ಕಾಂಗ್ರೆಸ್​ ನಾಯಕರು ಸ್ಥಳೀಯ ಅಭ್ಯರ್ಥಿಗೆ ಮಣೆ ಹಾಕಿದ್ದಾರೆ. ತಾಲೂಕಿನ ಗಡಿಗ್ರಾಮ ಬುಕ್ ಸಾಗರ ಗ್ರಾಮದ ಪ್ರಸನ್ನ ಪಿ ಗೌಡ ಅವರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದೆ. ಚನ್ನಪಟ್ಟಣ ತಾಲೂಕಿನ ಮಗನಾಗಿರುವ ಪ್ರಸನ್ನ ಪಿ ಗೌಡ್ರು ಬುಕ್ ಸಾಗರ ಗ್ರಾಮದವರು.

ಅವರ ತಂದೆ ಪುಟ್ಟಸ್ವಾಮಿ ಹಾಗೂ ತಾಯಿ ರತ್ನಮ್ಮ, ಇವರ ತಾತ ದೊಡ್ಡೆಗೌಡ್ರು ಗ್ರಾಮದಲ್ಲಿ ಪ್ರಗತಿ ಪರ ರೈತರೆಂದು ಹೆಸರು ಪಡೆದುಕೊಂಡಿದ್ದರು. ರೈತ ಕುಟಂಬದಲ್ಲಿ ಜನಿಸಿರುವ ಇವರು ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತ ಬಂದಿದ್ದಾರೆ. ರೈತ ಕುಟುಂಬದಲ್ಲಿ ಬಂದ ಅವರು ಪ್ರಸನ್ನ ಪೌಂಡೇಷನ್ ಮಾಡಿಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ.

ಅಂತೂ ಕಾಂಗ್ರೆಸ್​ ಪಕ್ಷದ ಭದ್ರ ಕೋಟೆ ಚನ್ನಪಟ್ಟಣ ಕ್ಷೇತ್ರಕ್ಕೆ ಪ್ರಸನ್ನ ಪಿ ಗೌಡ ಆಯ್ಕೆಯಾಗಿದ್ದು, ಇನ್ನು ಕ್ಷೇತ್ರದಲ್ಲಿ ಮುನಿಸಿಕೊಂಡಿರುವ ಎಲ್ಲ ಮುಖಂಡರನ್ನ ತಮ್ಮ ಜೋತೆಯಲ್ಲಿ ತೆಗೆದುಕೊಂಡು ಹೋಗುವ ಹೊಣೆಗಾರಿಕೆ ಅವರ ಮೇಲಿದೆ. ಅದನ್ನು ಅವರು ಯಾವ ರೀತಿಯಲ್ಲಿ ನಿಭಾಯಿಸುತ್ತಾರೆಂಬುದನ್ನ ಕಾದು ನೋಡಬೇಕಿದೆ.

ಇದನ್ನೂಓದಿ:ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದಿಂದ ತೌಡು ಕುಟ್ಟುವ ಕೆಲಸವಾಗಿದೆ: ಸಿದ್ದರಾಮಯ್ಯ ವಾಗ್ದಾಳಿ

ರಾಮನಗರ: ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರಕ್ಕೆ ಕಾಂಗ್ರೆಸ್​ ಪಕ್ಷದಿಂದ ಪ್ರಸನ್ನ ಪಿ ಗೌಡ ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ. ರಾಮನಗರ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಅವರು ಪ್ರಸನ್ನ ಪಿ ಗೌಡ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಟಿಕಟ್​ ಆಕಾಂಕ್ಷಿಗಳ ಎದುರು ಘೋಷಣೆ ಮಾಡಿದ್ದಾರೆ‌. ಪಟ್ಟಣದ ಖಾಸಗಿ ಹೋಟೆಲ್​​​ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಗಂಗಾಧರ್ ಅವರು ಈ ಘೋಷಣೆ ಮಾಡಿದ್ದಾರೆ. ಆದರೆ ಕೆಪಿಸಿಸಿ ಇನ್ನೂ ಪಟ್ಟಿಯನ್ನು ಪ್ರಕಟಿಸಿಲ್ಲ.
ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರ ಕಾಂಗ್ರೆಸ್​ ಪಕ್ಷದ ಭದ್ರ ಕೋಟೆ ಎಂದ್ರೆ ತಪ್ಪಿಲ್ಲ. ಕಾಂಗ್ರೆಸ್ ಪಕ್ಷದಿಂದ ಘಟಾನುಘಟಿ ನಾಯಕರು ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಆದರೆ, ಪ್ರಸ್ತುತ ದಿನಗಳಲ್ಲಿ ರಾಜಕೀಯ ಏರಿಳಿತದ ನಡುವೆ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರು ಕೇಳಿದ್ರು ನಾನೇ ನಾಯಕ ಎನ್ನುವ ಪರಿಸ್ಥಿತಿ ಇತ್ತು. ಆದರೆ, ಚುನಾವಣೆ ಸಮೀಪಿಸುತ್ತಿದ್ದು, ಪ್ರಸನ್ನ ಪಿ ಗೌಡ ಅವರಿಗೆ ಕಾಂಗ್ರೆಸ್​ ಟಿಕೆಟ್ ಪಕ್ಕಾ ಆಗಿದೆ.
ಎಂಟು ಅಭ್ಯರ್ಥಿಗಳು ಕಾಂಗ್ರೆಸ್ ಟಿಕೆಟ್​ ಆಕಾಂಕ್ಷಿತರು:ಕಾಂಗ್ರೆಸ್ ಪಕ್ಷದ ಎಂಟು ಆಕಾಂಕ್ಷಿತ ಅಭ್ಯರ್ಥಿಗಳಲ್ಲಿ ಪೈಪೋಟಿ ಇತ್ತು. ಬೋರ್​​​ವೆಲ್​​ ರಂಗನಾಥ್, ಡಿ.ಕೆ ಕಾಂತರಾಜು, ಪ್ರಸನ್ನಪಿಗೌಡ, ಶರತ್ ಚಂದ್ರ, ಭಗತ್ ರಾಮ್, ಕರುಣಾಕರ್, ಚಂದ್ರಸಾಗರ್, ಇವರು ಎಂಟು ಮಂದಿ ಈಗಾಗಲೇ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಉಳಿದ ಅಭ್ಯರ್ಥಿಗಳು ಹಿಂದಕ್ಕೆ ಸರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವೂ ಪ್ರಸನ್ನ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.

ಅಹಿಂದ ಮತಗಳು ಕಾಂಗ್ರೆಸ್​ಗೆ ನಿರ್ಣಾಯಕ: ಚನ್ನಪಟ್ಟಣ ಕ್ಷೇತ್ರದಲ್ಲಿ ಬಲಿಷ್ಟ ಅಭ್ಯರ್ಥಿಗಳು ಯಾರೂ ಇಲ್ಲ ಎಂದಲ್ಲ. ಇಂದಿಗೂ ಕೂಡ ಕ್ಷೇತ್ರದಲ್ಲಿ ಯಾರೇ ಕಾಂಗ್ರೆಸ್​​ ಪಕ್ಷದ ಅಭ್ಯರ್ಥಿಯಾದರೆ ತನ್ನದೇ ಆದ ವೋಟ್​​ ಬ್ಯಾಂಕ್ ಅನ್ನು ಉಳಿಸಿಕೊಂಡು ಬಂದಿದೆ ಎಂದರೆ ಅತಿಶಯೋಕ್ತಿಯಲ್ಲ. ಇತ್ತೀಚಿನ ರಾಜಕೀಯ ಬೆಳವಣೆಗೆ ನಡುವೆ ಅಹಿಂದಾ ಮತಗಳು ಒಂದು ವೇಳೆ ಕಾಂಗ್ರೆಸ್​ ಅಭ್ಯರ್ಥಿ ಪರ ಬಿದ್ದರೆ ರಾಜಕೀಯ ಚಿತ್ರಣ ಬದಲಾಗುವುದರಲ್ಲಿ ಯಾವುದೇ ಸಂಶಯ ಇಲ್ಲ.

ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಿ ಎಂ ಸಿದ್ದರಾಮಯ್ಯ ಅವರು ಈ ಕ್ಷೇತ್ರವನ್ನು ಪ್ರತಿಷ್ಠಿತ ಕಣವಾಗಿ ತೆಗೆದುಕೊಂಡಿದ್ದಾರೆ. ಅವರಿಗೆ ರಾಜ್ಯದ ವಿಧಾನಸಭೆ ಕ್ಷೇತ್ರಗಳಲ್ಲಿ ಹೆಚ್ಚು ಅಭ್ಯರ್ಥಿಗಳನ್ನೂ ಗೆಲ್ಲಿಸಿಕೊಂಡುಬರುವ ಹೊಣೆಗಾರಿಕೆ ಕೂಡ ಇದೆ.

ಪ್ರಸನ್ನ ಪಿ ಗೌಡಗೆ ಹೈಕಮಾಂಡ್ ಮಣೆ: ಚನ್ನಪಟ್ಟಣ ಕ್ಷೇತ್ರದಲ್ಲಿ ಅಂತೂ ಕಾಂಗ್ರೆಸ್​ ನಾಯಕರು ಸ್ಥಳೀಯ ಅಭ್ಯರ್ಥಿಗೆ ಮಣೆ ಹಾಕಿದ್ದಾರೆ. ತಾಲೂಕಿನ ಗಡಿಗ್ರಾಮ ಬುಕ್ ಸಾಗರ ಗ್ರಾಮದ ಪ್ರಸನ್ನ ಪಿ ಗೌಡ ಅವರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದೆ. ಚನ್ನಪಟ್ಟಣ ತಾಲೂಕಿನ ಮಗನಾಗಿರುವ ಪ್ರಸನ್ನ ಪಿ ಗೌಡ್ರು ಬುಕ್ ಸಾಗರ ಗ್ರಾಮದವರು.

ಅವರ ತಂದೆ ಪುಟ್ಟಸ್ವಾಮಿ ಹಾಗೂ ತಾಯಿ ರತ್ನಮ್ಮ, ಇವರ ತಾತ ದೊಡ್ಡೆಗೌಡ್ರು ಗ್ರಾಮದಲ್ಲಿ ಪ್ರಗತಿ ಪರ ರೈತರೆಂದು ಹೆಸರು ಪಡೆದುಕೊಂಡಿದ್ದರು. ರೈತ ಕುಟಂಬದಲ್ಲಿ ಜನಿಸಿರುವ ಇವರು ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತ ಬಂದಿದ್ದಾರೆ. ರೈತ ಕುಟುಂಬದಲ್ಲಿ ಬಂದ ಅವರು ಪ್ರಸನ್ನ ಪೌಂಡೇಷನ್ ಮಾಡಿಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ.

ಅಂತೂ ಕಾಂಗ್ರೆಸ್​ ಪಕ್ಷದ ಭದ್ರ ಕೋಟೆ ಚನ್ನಪಟ್ಟಣ ಕ್ಷೇತ್ರಕ್ಕೆ ಪ್ರಸನ್ನ ಪಿ ಗೌಡ ಆಯ್ಕೆಯಾಗಿದ್ದು, ಇನ್ನು ಕ್ಷೇತ್ರದಲ್ಲಿ ಮುನಿಸಿಕೊಂಡಿರುವ ಎಲ್ಲ ಮುಖಂಡರನ್ನ ತಮ್ಮ ಜೋತೆಯಲ್ಲಿ ತೆಗೆದುಕೊಂಡು ಹೋಗುವ ಹೊಣೆಗಾರಿಕೆ ಅವರ ಮೇಲಿದೆ. ಅದನ್ನು ಅವರು ಯಾವ ರೀತಿಯಲ್ಲಿ ನಿಭಾಯಿಸುತ್ತಾರೆಂಬುದನ್ನ ಕಾದು ನೋಡಬೇಕಿದೆ.

ಇದನ್ನೂಓದಿ:ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದಿಂದ ತೌಡು ಕುಟ್ಟುವ ಕೆಲಸವಾಗಿದೆ: ಸಿದ್ದರಾಮಯ್ಯ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.