ETV Bharat / state

ಮನೆ ಮುಂದೆ ಮಲಗಿದ್ದಾಗ ಹರಿದ ಟಿಪ್ಪರ್; ಸ್ಥಳದಲ್ಲೇ ವ್ಯಕ್ತಿ ಸಾವು - raichur tipper accident news

ಸೆಖೆಯಿಂದ ತಪ್ಪಿಸಿಕೊಳ್ಳಲು ಮನೆ ಮುಂದೆ ಮಲಗಿದ್ದ ಯುವಕನ ಮೇಲೆ‌ ಟಿಪ್ಪರ್ ವಾಹನ ಹರಿದಿದ್ದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

young man died by tipper accident in raichur
ರಾಯಚೂರು ಮಾರುತಿ ಸಾವು
author img

By

Published : Apr 14, 2022, 7:53 PM IST

ರಾಯಚೂರು: ಮನೆ ಮುಂದೆ ಮಲಗಿದ್ದ ಯುವಕನ ಮೇಲೆ‌ ಟಿಪ್ಪರ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಲಿಂಗದಳ್ಳಿ ಗ್ರಾಮದಲ್ಲಿ ನಡೆದಿದೆ. ಮಾರುತಿ(19) ಮೃತ ದುರ್ದೈವಿ. ಬೇಸಿಗೆ ಕಾರಣಕ್ಕೆ ಮಾರುತಿ ತನ್ನ ಮನೆಯ ಮುಂದೆ ಮಲಗಿದ್ದ. ರಾತ್ರಿ ಮರಳು ಸಾಗಣಿಕೆ ಮಾಡುತ್ತಿದ್ದ ಟಿಪ್ಪರ್ ಯುವಕನ ಮೇಲೆ ಹರಿದಿದ್ದು ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.


ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಕೆ.ಎಸ್‌.ಈಶ್ವರಪ್ಪ ರಾಜೀನಾಮೆ

ಈತ ಮೂಲತಃ ಕುಷ್ಟಗಿ ತಾಲೂಕಿನವನಾಗಿದ್ದು, ಲಿಂಗದಳ್ಳಿಯಲ್ಲಿ 10 ಎಕರೆ ಪ್ರದೇಶವನ್ನು ಲೀಝ್​ಗೆ ಪಡೆದುಕೊಂಡು ವ್ಯವಸಾಯ ಮಾಡುತ್ತಿದ್ದ. ಆದ್ರೆ ಮಂಜುನಾಥ ಎನ್ನುವ ವ್ಯಕ್ತಿ ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಣಿಕೆ ನಡೆಸುತ್ತಿದ್ದುದೇ ಈ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಸ್ಥಳಕ್ಕೆ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಾಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಯುವಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಯಚೂರು: ಮನೆ ಮುಂದೆ ಮಲಗಿದ್ದ ಯುವಕನ ಮೇಲೆ‌ ಟಿಪ್ಪರ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಲಿಂಗದಳ್ಳಿ ಗ್ರಾಮದಲ್ಲಿ ನಡೆದಿದೆ. ಮಾರುತಿ(19) ಮೃತ ದುರ್ದೈವಿ. ಬೇಸಿಗೆ ಕಾರಣಕ್ಕೆ ಮಾರುತಿ ತನ್ನ ಮನೆಯ ಮುಂದೆ ಮಲಗಿದ್ದ. ರಾತ್ರಿ ಮರಳು ಸಾಗಣಿಕೆ ಮಾಡುತ್ತಿದ್ದ ಟಿಪ್ಪರ್ ಯುವಕನ ಮೇಲೆ ಹರಿದಿದ್ದು ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.


ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಕೆ.ಎಸ್‌.ಈಶ್ವರಪ್ಪ ರಾಜೀನಾಮೆ

ಈತ ಮೂಲತಃ ಕುಷ್ಟಗಿ ತಾಲೂಕಿನವನಾಗಿದ್ದು, ಲಿಂಗದಳ್ಳಿಯಲ್ಲಿ 10 ಎಕರೆ ಪ್ರದೇಶವನ್ನು ಲೀಝ್​ಗೆ ಪಡೆದುಕೊಂಡು ವ್ಯವಸಾಯ ಮಾಡುತ್ತಿದ್ದ. ಆದ್ರೆ ಮಂಜುನಾಥ ಎನ್ನುವ ವ್ಯಕ್ತಿ ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಣಿಕೆ ನಡೆಸುತ್ತಿದ್ದುದೇ ಈ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಸ್ಥಳಕ್ಕೆ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಾಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಯುವಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.