ETV Bharat / state

ಪ್ರವಾಸಿ ಭಾರತ ಕ್ರಿಕೆಟ್ ತಂಡಕ್ಕೆ ರಾಯಚೂರಿನ ಯುವಕ ಆಯ್ಕೆ - undefined

ರಾಯಚೂರಿನ ಸಿಟಿ ಎಲೆವನ್ ತಂಡದ ಕ್ರಿಕೆಟ್ ಪಟು ವಿದ್ಯಾಧರ ಪಾಟೀಲ್​ ಕರ್ನಾಟಕ 19ವಯಸ್ಸಿನ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿ, ಬಿಸಿಸಿಐನ ಆಯ್ಕೆದಾರರ ಗಮನ ಸೆಳೆಯುವ ಮೂಲಕ ಅಂಡರ್19 ತಂಡಕ್ಕೆ ಆಯ್ಕೆಯಾಗಿದ್ದಾರೆ.

ಕ್ರಿಕೆಟ್ ಪಟು ವಿದ್ಯಾಧರ ಪಾಟೀಲ್
author img

By

Published : Jun 13, 2019, 3:04 AM IST

ರಾಯಚೂರು: ರಾಯಚೂರು ನಗರದ ಸಿಟಿ ಎಲೆವನ್ ತಂಡದ ಕ್ರಿಕೆಟ್ ಪಟು ವಿದ್ಯಾಧರ ಪಾಟೀಲ್ 19ರ ವಯಸ್ಸಿನ ಪ್ರವಾಸಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾನೆ.

ಕೆಪಿಎಲ್‌ನಲ್ಲಿ ಸ್ಥಾನಗಿಟ್ಟಿಸಿಕೊಂಡಿರುವ ವಿದ್ಯಾಧರ ಪಾಟೀಲ್, ಕರ್ನಾಟಕ 19ವಯಸ್ಸಿನ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ, ಬಿಸಿಸಿಐನ ಆಯ್ಕೆದಾರರ ಗಮನ ಸೆಳೆದು ಅಂಡರ್19 ತಂಡಕ್ಕೆ ಆಯ್ಕೆಯಾಗಿದ್ದಾರೆ.

ಜು.15ರಿಂದ ಪ್ರಾರಂಭವಾಗಲಿರುವ ತ್ರಿಕೋನ ಸರಣಿಯ ಪಂದ್ಯದಲ್ಲಿ ಭಾಗವಹಿಸಲು ವಿದ್ಯಾಧರ ಪಾಟೀಲ್ ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಅತಿಥೇಯ ಇಂಗ್ಲೆಂಡ್ ಹಾಗೂ ಬಾಂಗ್ಲಾ ತಂಡದೊಂದಿಗೆ ಸರಣಿ ನಡೆಯಲಿದೆ. ಕಳೆದ ವರ್ಷ ಮನೋಜ ಬಾಂಡಗೆ ಕೂಡ ಕೆಪಿಎಲ್‌ತಂಡದಲ್ಲಿ ಆಡಿದ ರಾಯಚೂರಿನ ಕ್ರಿಕೆಟಿಗರಾಗಿದ್ದಾರೆ.

ವಿದ್ಯಾಧರ ಪಾಟೀಲ್ ಆಯ್ಕೆಗೆ ಕೆಎಸ್‌ಸಿಎ ವಲಯ ಸಂಚಾಲಕ ಸುಜೀತ್ ಬೊಹರಾ, ಎಲೆವೆನ್ ತಂಡದ ಅಧ್ಯಕ್ಷ ಕೆ.ಶರಣರೆಡ್ಡಿ, ವಲಯ ವ್ಯವಸ್ಥಾಪಕ ಕೆ.ಭೀಮಾಚಾರ್, ತರಬೇತುದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಶುಭ ಹಾರೈಸಿದ್ದಾರೆ.

ರಾಯಚೂರು: ರಾಯಚೂರು ನಗರದ ಸಿಟಿ ಎಲೆವನ್ ತಂಡದ ಕ್ರಿಕೆಟ್ ಪಟು ವಿದ್ಯಾಧರ ಪಾಟೀಲ್ 19ರ ವಯಸ್ಸಿನ ಪ್ರವಾಸಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾನೆ.

ಕೆಪಿಎಲ್‌ನಲ್ಲಿ ಸ್ಥಾನಗಿಟ್ಟಿಸಿಕೊಂಡಿರುವ ವಿದ್ಯಾಧರ ಪಾಟೀಲ್, ಕರ್ನಾಟಕ 19ವಯಸ್ಸಿನ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ, ಬಿಸಿಸಿಐನ ಆಯ್ಕೆದಾರರ ಗಮನ ಸೆಳೆದು ಅಂಡರ್19 ತಂಡಕ್ಕೆ ಆಯ್ಕೆಯಾಗಿದ್ದಾರೆ.

ಜು.15ರಿಂದ ಪ್ರಾರಂಭವಾಗಲಿರುವ ತ್ರಿಕೋನ ಸರಣಿಯ ಪಂದ್ಯದಲ್ಲಿ ಭಾಗವಹಿಸಲು ವಿದ್ಯಾಧರ ಪಾಟೀಲ್ ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಅತಿಥೇಯ ಇಂಗ್ಲೆಂಡ್ ಹಾಗೂ ಬಾಂಗ್ಲಾ ತಂಡದೊಂದಿಗೆ ಸರಣಿ ನಡೆಯಲಿದೆ. ಕಳೆದ ವರ್ಷ ಮನೋಜ ಬಾಂಡಗೆ ಕೂಡ ಕೆಪಿಎಲ್‌ತಂಡದಲ್ಲಿ ಆಡಿದ ರಾಯಚೂರಿನ ಕ್ರಿಕೆಟಿಗರಾಗಿದ್ದಾರೆ.

ವಿದ್ಯಾಧರ ಪಾಟೀಲ್ ಆಯ್ಕೆಗೆ ಕೆಎಸ್‌ಸಿಎ ವಲಯ ಸಂಚಾಲಕ ಸುಜೀತ್ ಬೊಹರಾ, ಎಲೆವೆನ್ ತಂಡದ ಅಧ್ಯಕ್ಷ ಕೆ.ಶರಣರೆಡ್ಡಿ, ವಲಯ ವ್ಯವಸ್ಥಾಪಕ ಕೆ.ಭೀಮಾಚಾರ್, ತರಬೇತುದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಶುಭ ಹಾರೈಸಿದ್ದಾರೆ.

Intro:ಸ್ಲಗ್: ಅಂಡರ್ ೧೯ ಕ್ರಿಕೆಟ್ ತಂಡಕ್ಕೆ ರಾಯಚೂರಿನ ಯುವಕ ಆಯ್ಕೆ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೨-೦೬-೨೦೧೯
ಸ್ಥಳ: ರಾಯಚೂರು

ಆಂಕರ್: ರಾಯಚೂರು ನಗರದ ಸಿಟಿ ಎಲೆವನ್ ತಂಡದ ಕ್ರಿಕೆಟ್ ಪಟು ವಿದ್ಯಾಧರ ಪಾಟೀಲ್ 19ರ ವಯಸಿನ ಪ್ರವಾಸಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾನೆ.Body:ಕೆಪಿಎಲ್‌ನಲ್ಲಿ ಸ್ಥಾನಗಿಟ್ಟಿಸಿಕೊಂಡಿರುವ ವಿದ್ಯಾಧರ ಪಾಟೀಲ್, ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯಲ್ಲಿ ಹೆಚ್ಚಿನ ತರಬೇತಿ ಪಡೆದು, ಕರ್ನಾಟಕ 19ವಯಸಿನೊಳಗಿನ ತಂಡದಲ್ಲಿ ಪಾಲ್ಗೊಂಡು ಬಿಸಿಸಿಐನ ಆಯ್ಕೆದಾರರ ಗಮನ ಸೆಳೆಯುವ ಮೂಲಕ ಅಂಡರ್೧೯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮುಂಬರುವ ಜು.15ರಿಂದ ಪ್ರಾರಂಭವಾಗಲಿರುವ ತ್ರಿಕೋನ ಸರಣಿಯ ಪಂದ್ಯದಲ್ಲಿ ಭಾಗವಹಿಸಲು ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಅತಿಥೇಯ ಇಂಗ್ಲೆಂಡ್ ಹಾಗೂ ಬಾಂಗ್ಲಾ ತಂಡದೊಂದಿಗೆ ಸರಣಿ ನಡೆಯಲಿದೆ. ಕಳೆದ ವರ್ಷ ಮನೋಜ ಬಾಂಡಗೆ ಕೂಡ ಕೆಪಿಎಲ್‌ತಂಡದಲ್ಲಿ ಆಡಿದ ರಾಯಚೂರಿನ ಕ್ರಿಕೆಟಿಗರಾಗಿದ್ದಾರೆ.Conclusion:ವಿದ್ಯಾಧರ ಪಾಟೀಲ್ ಆಯ್ಕೆಗೆ ಕೆಎಸ್‌ಸಿಎ ವಲಯ ಸಂಚಾಲಕ ಸುಜೀತ್ ಬೊಹರಾ, ಎಲೆವೆನ್ ತಂಡದ ಅಧ್ಯಕ್ಷ ಕೆ.ಶರಣರೆಡ್ಡಿ, ವಲಯ ವ್ಯವಸ್ಥಾಪಕ ಕೆ.ಭೀಮಾಚಾರ್, ತರಬೇತುದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಶುಭ ಹಾರೈಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.