ETV Bharat / state

ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರಿಲ್ಲದೆ ಬಾಡಿರುವ ಸಸಿಗಳು...ಸೂಕ್ತ ಕ್ರಮಕ್ಕೆ ಸ್ಥಳೀಯರ ಅಗ್ರಹ - undefined

ನಗರಸಭೆ ಹಾಗೂ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ರಸ್ತೆ ಪಕ್ಕಯಲ್ಲಿ ಸಸಿಗಳನ್ನು ನೆಟ್ಟು ಹಸಿರೀಕರಣಗೊಳಿಸಿತ್ತು. ಆದರೆ ಸರಿಯಾದ ಪೋಷಣೆ ಇಲ್ಲದೆ ಬಾಡಿದ್ದು, ಸೂಕ್ತ ಕ್ರಮಕ್ಕೆ ಸ್ಥಳೀಯರ ಆಗ್ರಹವಾಗಿದೆ.

ಸರಿಯಾದ ಪೋಷಣೆಯಿಲ್ಲದೆ ಬಾಡಿ ಹೋಗಿರುವ ಸಸಿಗಳು
author img

By

Published : May 16, 2019, 5:56 AM IST

ರಾಯಚೂರು: ಬಿಸಿಲು ನಾಡು ರಾಯಚೂರಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದಕ್ಕೆ ನಗರಸಭೆ ಹಾಗೂ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ರಸ್ತೆ ಪಕ್ಕಯಲ್ಲಿ ಸಸಿಗಳನ್ನು ನೆಟ್ಟು ಹಸಿರೀಕರಣಗೊಳಿಸಿತ್ತು. ಆದರೆ ಸರಿಯಾದ ಪೋಷಣೆ ಇಲ್ಲದೆ ಬಾಡಿದ್ದು, ಮತ್ತೊಂದೆಡೆ ಗಿಡಗಳು ಬೃಹದಾಕಾರವಾಗಿ ಬೆಳೆದಿರುದರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುವುದಲ್ಲದೆ ಅಪಘಾತಕ್ಕೆ ಕಾರಣವಾಗುತ್ತಿವೆ.

ಸರಿಯಾದ ಪೋಷಣೆಯಿಲ್ಲದೆ ಬಾಡಿ ಹೋಗಿರುವ ಸಸಿಗಳು

ನಗರಸಭೆ ಹಾಗೂ ಅರಣ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಸ್ಟೇಷನ್ ರಸ್ತೆಯಿಂದ ಬಸವೇಶ್ವರ ವೃತ್ತ, ಗಂಜ್ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದಿಂದ ಬಸವೇಶ್ವರ ರಸ್ತೆಯವರೆಗೆ ಸಸಿಗಳನ್ನು ನೆಡಲಾಗಿತ್ತು. ರಸ್ತೆಗಳ ಎರಡು ಬದಿಗೆ ಹೊಂದಿಕೊಂಡಂತೆ ಸೆಂಟರ್​ನಲ್ಲಿ ಸಸಿಗಳನ್ನು ನೆಡುವ ಮೂಲಕ ಹಸಿರೀಕರಣಗೊಳಿಸುವ ಉದ್ದೇಶ ಹೊಂದಲಾಗಿತ್ತು. ಆರಂಭದಲ್ಲಿ ಸಸಿಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕಲಾಗುತ್ತಿತ್ತು. ಆದರೆ ಸಸಿಗಳಿಗೆ ಸಕಾಲಕ್ಕೆ ನೀರುಣಿಸದೆ ನಿರ್ಲಕ್ಷ್ಯವಹಿಸುತ್ತಿದ್ದು, ಇದರಿಂದ ಕೆಲ ಸಸಿಗಳು ಬೆಳೆಯದೆ, ಕೆಲವು ಬಿಡಾಡಿ ದನಗಳ ಪಾಲಾಗಿವೆ. ಮತ್ತೆ ಕೆಲವು ನೀರಿಲ್ಲದೆ ಒಣಗುವ ಹಂತವನ್ನು ತಲುಪಿವೆ. ಇಷ್ಟಾದರೂ ಯಾವೊಬ್ಬ ಅಧಿಕಾರಿ ಇತ್ತ ಸುಳಿಯದಿದ್ದಕ್ಕೆ ಅಧಿಕಾರಿಗಳು ಮತ್ತು ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಹನ ಸವಾರರಿ ಅಪತ್ತು:

ನಗರದಲ್ಲಿ ಹಸಿರೀಕರಣಕ್ಕೆ ಅಂದಿನ ಎಸ್.ಪಿ.ಚೇತನ್ ಸಿಂಗ್ ರಾಥೋರ್ ಅವರು ಗಂಜ್ ರಸ್ತೆಯಲ್ಲಿ ವಿವಿಧ ಗಿಡಿಗಳನ್ನು ಬೆಳೆದು ದೊಡ್ಡದಾಗಿದ್ದು, ಇದಕ್ಕೆ ಜಾಲಿ ಬ್ಯಾರಿಕೇಡ್ ಅಳವಡಿಸಿಲಾಗಿದೆ. ಕೆಲವೆಡೆ ತಂತಿ ಹಾಳಾಗಿ ಗಿಡಗಳು ನಾಶವಾಗಿವೆ. ಅಲ್ಲದೆ ಗಂಜ್ ವೃತ್ತದಲ್ಲಿ ಈ ಗಿಡಗಳು ದೊಡ್ಡದಾಗಿ ,ರೆಂಬೆಕೊಂಬೆಗಳು ಜಾಲರಿಯಿಂದ ಹೊರ ಬಂದಿದ್ದು, ರಸ್ತೆಬದಿಯ ವಾಹನ ಸವಾರರಿಗೆ ಮುಳ್ಳು ತಾಕುತ್ತಿವೆ. ಕೆಲವೊಮ್ಮೆ ಗಿಡಗಳು ತಾಕಿ ಅಪಘಾತಕ್ಕೆ ಎಡೆಮಾಡಿಕೊಡುತ್ತಿವೆ.

ಇನ್ನು ಮುಂದಾದರು ಸಂಬಂಧಿಸಿದ ಅಧಿಕಾರಿಗಳು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ.

ರಾಯಚೂರು: ಬಿಸಿಲು ನಾಡು ರಾಯಚೂರಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದಕ್ಕೆ ನಗರಸಭೆ ಹಾಗೂ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ರಸ್ತೆ ಪಕ್ಕಯಲ್ಲಿ ಸಸಿಗಳನ್ನು ನೆಟ್ಟು ಹಸಿರೀಕರಣಗೊಳಿಸಿತ್ತು. ಆದರೆ ಸರಿಯಾದ ಪೋಷಣೆ ಇಲ್ಲದೆ ಬಾಡಿದ್ದು, ಮತ್ತೊಂದೆಡೆ ಗಿಡಗಳು ಬೃಹದಾಕಾರವಾಗಿ ಬೆಳೆದಿರುದರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುವುದಲ್ಲದೆ ಅಪಘಾತಕ್ಕೆ ಕಾರಣವಾಗುತ್ತಿವೆ.

ಸರಿಯಾದ ಪೋಷಣೆಯಿಲ್ಲದೆ ಬಾಡಿ ಹೋಗಿರುವ ಸಸಿಗಳು

ನಗರಸಭೆ ಹಾಗೂ ಅರಣ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಸ್ಟೇಷನ್ ರಸ್ತೆಯಿಂದ ಬಸವೇಶ್ವರ ವೃತ್ತ, ಗಂಜ್ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದಿಂದ ಬಸವೇಶ್ವರ ರಸ್ತೆಯವರೆಗೆ ಸಸಿಗಳನ್ನು ನೆಡಲಾಗಿತ್ತು. ರಸ್ತೆಗಳ ಎರಡು ಬದಿಗೆ ಹೊಂದಿಕೊಂಡಂತೆ ಸೆಂಟರ್​ನಲ್ಲಿ ಸಸಿಗಳನ್ನು ನೆಡುವ ಮೂಲಕ ಹಸಿರೀಕರಣಗೊಳಿಸುವ ಉದ್ದೇಶ ಹೊಂದಲಾಗಿತ್ತು. ಆರಂಭದಲ್ಲಿ ಸಸಿಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕಲಾಗುತ್ತಿತ್ತು. ಆದರೆ ಸಸಿಗಳಿಗೆ ಸಕಾಲಕ್ಕೆ ನೀರುಣಿಸದೆ ನಿರ್ಲಕ್ಷ್ಯವಹಿಸುತ್ತಿದ್ದು, ಇದರಿಂದ ಕೆಲ ಸಸಿಗಳು ಬೆಳೆಯದೆ, ಕೆಲವು ಬಿಡಾಡಿ ದನಗಳ ಪಾಲಾಗಿವೆ. ಮತ್ತೆ ಕೆಲವು ನೀರಿಲ್ಲದೆ ಒಣಗುವ ಹಂತವನ್ನು ತಲುಪಿವೆ. ಇಷ್ಟಾದರೂ ಯಾವೊಬ್ಬ ಅಧಿಕಾರಿ ಇತ್ತ ಸುಳಿಯದಿದ್ದಕ್ಕೆ ಅಧಿಕಾರಿಗಳು ಮತ್ತು ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಹನ ಸವಾರರಿ ಅಪತ್ತು:

ನಗರದಲ್ಲಿ ಹಸಿರೀಕರಣಕ್ಕೆ ಅಂದಿನ ಎಸ್.ಪಿ.ಚೇತನ್ ಸಿಂಗ್ ರಾಥೋರ್ ಅವರು ಗಂಜ್ ರಸ್ತೆಯಲ್ಲಿ ವಿವಿಧ ಗಿಡಿಗಳನ್ನು ಬೆಳೆದು ದೊಡ್ಡದಾಗಿದ್ದು, ಇದಕ್ಕೆ ಜಾಲಿ ಬ್ಯಾರಿಕೇಡ್ ಅಳವಡಿಸಿಲಾಗಿದೆ. ಕೆಲವೆಡೆ ತಂತಿ ಹಾಳಾಗಿ ಗಿಡಗಳು ನಾಶವಾಗಿವೆ. ಅಲ್ಲದೆ ಗಂಜ್ ವೃತ್ತದಲ್ಲಿ ಈ ಗಿಡಗಳು ದೊಡ್ಡದಾಗಿ ,ರೆಂಬೆಕೊಂಬೆಗಳು ಜಾಲರಿಯಿಂದ ಹೊರ ಬಂದಿದ್ದು, ರಸ್ತೆಬದಿಯ ವಾಹನ ಸವಾರರಿಗೆ ಮುಳ್ಳು ತಾಕುತ್ತಿವೆ. ಕೆಲವೊಮ್ಮೆ ಗಿಡಗಳು ತಾಕಿ ಅಪಘಾತಕ್ಕೆ ಎಡೆಮಾಡಿಕೊಡುತ್ತಿವೆ.

ಇನ್ನು ಮುಂದಾದರು ಸಂಬಂಧಿಸಿದ ಅಧಿಕಾರಿಗಳು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ.

Intro:ಬಿಸಿಲು ನಾಡು ರಾಯಚೂರಿನಲ್ಲಿ ಬಿಸಿಲಿನ ತಾಪಮಾನದಿಂದ ಇಲ್ಲಿನ ನಿವಾಸಿಗಳು ತತ್ತರಿಸುವುದು ಸಾಮಾನ್ಯ ಈ ದಿಸೆಯಲ್ಲಿ ನಗರಸಭೆ ಹಾಗೂ ಅರಣ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಎರಡು ವರ್ಷಗಳ ಹಿಂದೆ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟು ಹಸಿರುಕರಣಗೊಳಿಸಿ ಒಂದಿಷ್ಟು ತಂಪಿನ ವಾತಾವರಣ ನಿರ್ಮಾಣದ ಧ್ಯಯ ಹೊಂದಿದ್ದರು.
ಆದ್ರೆ ಕೇವಲ ಸಸಿಗಳನ್ನು ನೆಟ್ಟು ಪೋಷಣೆಯ ಜವಾಬ್ದಾರಿ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಒಂದು ಕಡೆ ಸಸಿಗಳು ನೀರಿಲ್ಲದೆ ಬಾಡಿವೆ,ಕೆಲವು ಬಿಡಾಡಿ ದನಗಳ ಪಾಲಾಗಿವೆ. ಮತ್ತೊಂದು ಕಡೆ ರಸ್ತೆ ಬದಿಯ ಗಿಡಗಳು ಬೃಹದಾಕಾರವಾಗಿ ಬೆಳೆದರೂ ಸರಿಯಾದ ಸಮಯಕ್ಕೆ ಕಟಿಂಗ್ ಮಾಡದ ಕಾರಣ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುವುದಲ್ಲದೇ ಅಪಘಾತಕ್ಕೆ ಕಾರಣವಾಗುವಂತಿದೆ.



Body:ನಗರದ ಸ್ಟೇಷನ್ ರಸ್ತೆಯಿಂದ ಬಸವೇಶ್ವರ ವೃತ್ತ, ಗಂಜ್ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದಿಂದ ಬಸವೇಶ್ವರ ರಸ್ತೆಯ ವರೆಗೆ ಸಸಿ ನೆಡಲಾಗಿತ್ತು.
ರಸ್ತೆಗಳ ಎರಡು ಬದಿಗೆ ಹೊಂದಿಕೊಂಡಂತೆ ಸೆಂಟರ್ ನಲ್ಲಿ ಸಸಿಗಳನ್ನು ನೆಡುವ ಮೂಲಕ ಹಸಿರುಕರಣಗೊಳಿಸುವ ಉದ್ದೇಶ ಹೊಂದಲಾಗಿತ್ತು.
ಆರಂಭದಲ್ಲಿ ಟ್ಯಾಂಕರ್ ಮೂಲಕ ನೀರು ಹಾಕಲಾಗುತ್ತಿತ್ತು ನಂತರ ಸಸಿಗಳಿಗೆ ಸಕಾಲಕ್ಕೆ ನೀರುಣಿಸದೇ ತಮ್ಮ ಮನ ಬಂದಾಗ ಟ್ಯಾಂಕರ್ ಮೂಲಕ ನೀರು ಹಾಕುವ ಆದ್ರ ನಂತರ ನೀರು ಹಾಕದೇ ನಿರ್ಲಕ್ಷ್ಯ ವಹಿಸುತ್ತಿದೆ ಇದರಿಂದ ಕೆಲ ಸಸಿಗಳು ಬೆಳೆಯಲಿಲ್ಲ ,ಕೆಲವು ಬಿಡಾಡಿ ದನಗಳ ಪಾಲಾದವು ಮತ್ತೆ ಕೆಲವು ನೀರಿಲ್ಲದೇ ಒಣಗುತ್ತಾ ಬಂದಿದೆ.
ಇಷ್ಟಾದರೂ ಇದ್ದ ಬದ್ದ ಸಸಿಗಳು ಈಗ ಬೆಳೆಯಲಾರಂಬಿಸಿದ್ದು ಅವುಗಳಿಗೆ ಕಳೆದ ಹಲವಾರು ತಿಂಗಳಿಯ ನೀರು ಹಾಕದೇ ಪೋಷಣೆ ಮರೆಯಿದ್ದು ಹಸಿರುಕರಣದ ಧ್ಯೆಯ ವಿಫಲ ವಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗಿಡಗಳ ಸಕಾಕಕ್ಕೆ ಬೀಳುತ್ತಿಲ್ಲ ಕತ್ತರಿ; ವಾಹನ ಸವಾರರಿ ಅಪತ್ತು: ನಗರದಲ್ಲಿ ಹಸೀರುಕರಣಕ್ಕೆ ಅಂದಿನ ಎಸ್.ಪಿ.ಚೇತನ್ ಸಿಂಗ್ ರಾಥೋರ್ ಅವರೂ ಕೈ ಜೋಡಿಸಿ ಗಂಜ್ ರಸ್ತೆಯಲ್ಲಿ ಬಿಳಿ,ಕೆಂಪು ಸೇರಿ ವಿವಿಧ ಕಲರ್ ಫುಲ್ ಹೂ ಗಿಡಿಗಳು ದೊಡ್ಡದಾಗಿದ್ದು ಇದಕ್ಕೆ ಜಾಲಿ,ಬ್ಯಾರಿಕೇಡ್ ಅಳವಡಿಸಿದ್ದು ಕೆಲವೆಡೆ ತಂತಿ ಹಾಳಾಗಿ ಗಿಡಗಳು ನಾಶವಾಗಿವೆ. ಅಲ್ಲದೇ ಗಂಜ್ ವೃತ್ತದಲ್ಲಿ ಈ ಗಿಡಗಳು ದೊಡ್ಡದಾಗಿ ಕೊಂಬೆ,ರೆಂಬೆಗಳು ಜಾಲಿಯಿಂದ ಹೊರಬಂದಿದ್ದು ರಸ್ತೆಬದಿಯ ವಾಹನ ಸವಾರರಿಗೆ ಮುಳ್ಳು ತಾಕುತ್ತಿವೆ ಕೆಲವೊಮ್ಮೆ ಗಿಡಗಳು ತಾಕಿ ಅಪಘಾತಕ್ಕೆ ಎಡೆಮಾಡುವಂತಾಗಿ ವಾಹನ ಸವಾರರಿಗೆ ಅಪಾಯ ಒಡ್ಡುತ್ತಿವೆ.
ಈ ಗಂಜ್ ರಸ್ತೆಯಲ್ಲಿನ ಕಲರ್ ಫುಲ್ ಗಿಡಗಳಿಂದ ಅರಳಿದ ಹೂಗಳು ಆಕರ್ಷಿಸಬೇಕಿದ್ದು ನಗರಸಭೆ ಹಾಗೂ ಅರಣ್ಯ ಇಲಾಖೆಯ ನಿಷ್ಕಾಳಜಿಯ ಪರಿಣಾಮ ವಾಹನ ಸವಾರರಿಗೆ ಕಂಟಕವಾಗಿದ್ದು ವಿಪರ್ಯಾಸ.
ಈ ಸಸಿ ನೆಡುವ ಮೂಲಕ ನಗರ ಹಸಿರುಕರಣ ಹಾಗೂ ಕೋಟಿ ವೃಕ್ಷ ಆಂದೋಲನದ ಮೂಲಕ ಸ್ವಚ್ಛ ಪರಿಸರವಾಗಬೇಕಿದ್ದು ಆದರೆ ಇದಕ್ಕೆ ನಗರಸಭೆಯ ಬೇಜವಾಬ್ದಾರಿಯಿಂದ ಎಳ್ಳು ನೀರು ಬಿಟ್ಟಂತಾಗಿದೆ.
ಮೊದಲೇ ನಗರದಲ್ಲಿನ ಆರ್ಟಿಪಿಎಸ್ ಹಾಗೂ ವೈಟಿಪಿಎಸ್ ಶಾಖೋತ್ಪನ್ನ ಕೇಂದ್ರಗಳ ಕಾರ್ಯ ನಿರ್ವಹಣೆಯಿಂದ ಸೆಖೆಯಿಂದ ತತ್ತರಿಸುತ್ತಿರುವ ಇಲ್ಲಿನ ನಿವಾಸಿಗಳಿಗೆ ನಗರದಲ್ಲಿ ಲಕ್ಷಾಂತರ ಗಿಡಗಳಿಂದ ಬಿಸಿಲಿನ ತಾಪಮಾನ ಹತೋಟಿ ತರಬೇಕಾಗಿದ್ದು ಇದ್ದ ಸಸಿಗಳನ್ನು ಪೊಷಣೆ ಮಾಡದಂತಹ ಸ್ಥಳೀಯ ಆಡಳಿತದಿಂದ ನಿವಾಸಿಗಳೇ ಅದರ ಪರಿಣಾಮ ಅನುಭವಿಸುವಂತಹದ್ದು ದುರ್ದೈವವೇ ಸರಿ.


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.