ETV Bharat / state

ತಿರುಪತಿಯಲ್ಲಿ ಮಠಾಧೀಶರಿಗೆ ನೇರ ಪ್ರವೇಶ ನಿರ್ಬಂಧ: ಸುಬುಧೇಂದ್ರ ತೀರ್ಥರ ಅಸಮಾಧಾನ - restricted to pontiff

ತಿರುಪತಿ ಶ್ರೀವೆಂಕಟೇಶ್ವರ ದೇವಾಲಯಕ್ಕೆ ಧರ್ಮ ಗುರುಗಳು, ಮಠಾಧೀಶರಿಗೆ ನೇರ ದರ್ಶನಕ್ಕೆ ನಿರ್ಬಂಧ ಹಾಕಿರುವುದು ಸರಿಯಲ್ಲ. ಈ ಕ್ರಮದ ಕುರಿತು ಮಠದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.

ಸುಬುಧೇಂದ್ರ ತೀರ್ಥರು
author img

By

Published : Mar 13, 2019, 1:07 PM IST

ರಾಯಚೂರು: ತಿರುಪತಿ ಶ್ರೀವೆಂಕಟೇಶ್ವರ ದೇವಾಲಯದಲ್ಲಿ ಧರ್ಮ ಗುರುಗಳು, ಮಠಾಧೀಶರಿಗೆ ನೇರ ದರ್ಶನಕ್ಕೆ ನಿರ್ಬಂಧ ಹೇರಿರುವುದಕ್ಕೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಬುಧೇಂದ್ರ ತೀರ್ಥರು

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬ್ರಿಟಿಷರ ಕಾಲದಿಂದಲೂ ದೇವಾಲಯಗಳಲ್ಲಿ ಧಾರ್ಮಿಕ ಗುರುಗಳು ಮತ್ತು ಮಠಾಧೀಶರಿಗೆ ದೇಗುಲದಲ್ಲಿ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಆದರೆ ಈಗಿನ ಆಡಳಿತಾಧಿಕಾರಿಗಳು ಮಠಾಧೀಶರಿಗೆ ಅಗೌರವ ತೋರುವ ರೀತಿಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಕೂಡಲೇ ಇದರ ಬಗ್ಗೆ ಆಳಿತಾಧಿಕಾರಿಗಳು ಒಗ್ಗೂಡಿ ಚರ್ಚೆ ನಡೆಸಿ ತಿರ್ಮಾನ ಕೈಗೊಳ್ಳಬೇಕೆಂದು ಕಿವಿ ಮಾತು ಹೇಳಿದ್ರು.

ಲೋಕಸಭೆ ಚುನಾವಣೆಯಲ್ಲಿ ಮತದಾನ ಹಕ್ಕು ಹೊಂದಿದವರು ತಪ್ಪದೇ ಮತದಾನ ಮಾಡಬೇಕು. ಸಂವಿಧಾನ ಬದ್ದವಾಗಿ ಪ್ರತಿಯೊಬ್ಬರ ಪ್ರಜೆಗೂ ಮತದಾನ ಹಕ್ಕು ಕಲ್ಪಿಸಿದ್ದು, ಅದನ್ನ ಅಸಡ್ಡೆ ಮಾಡದೆ ಮತದಾನ ಹಕ್ಕನ್ನು ಸಂದ್ಬಳಕೆ ಮಾಡಿಕೊಳ್ಳಬೇಕು. ಯಾವುದೇ ಆಸೆ ಆಮೀಷಾಗಳಿಗೆ ಒಳಗಾಗದೆ ಸಮರ್ಥ ನಾಯಕನ್ನ ಆಯ್ಕೆ ಮಾಡಲು ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದರು.

ಚುನಾವಣೆಯಲ್ಲಿ ಪಕ್ಷದ ಮುಖಂಡರು ಹಾಗೂ ಅಭ್ಯರ್ಥಿಗಳು ವೈಯಕ್ತಿಕ ನಿಂದನೆ ಮಾಡಿಕೊಳ್ಳದೆ ಪಕ್ಷದ ಸಿದ್ಧಾಂತ ಹಾಗೂ ಅಭಿವೃದ್ಧಿ ವಿಚಾರಗಳ ಕಡೆಗೆ ಚರ್ಚೆ ನಡೆಸಬೇಕು ಎಂದರು.

ರಾಯಚೂರು: ತಿರುಪತಿ ಶ್ರೀವೆಂಕಟೇಶ್ವರ ದೇವಾಲಯದಲ್ಲಿ ಧರ್ಮ ಗುರುಗಳು, ಮಠಾಧೀಶರಿಗೆ ನೇರ ದರ್ಶನಕ್ಕೆ ನಿರ್ಬಂಧ ಹೇರಿರುವುದಕ್ಕೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಬುಧೇಂದ್ರ ತೀರ್ಥರು

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬ್ರಿಟಿಷರ ಕಾಲದಿಂದಲೂ ದೇವಾಲಯಗಳಲ್ಲಿ ಧಾರ್ಮಿಕ ಗುರುಗಳು ಮತ್ತು ಮಠಾಧೀಶರಿಗೆ ದೇಗುಲದಲ್ಲಿ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಆದರೆ ಈಗಿನ ಆಡಳಿತಾಧಿಕಾರಿಗಳು ಮಠಾಧೀಶರಿಗೆ ಅಗೌರವ ತೋರುವ ರೀತಿಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಕೂಡಲೇ ಇದರ ಬಗ್ಗೆ ಆಳಿತಾಧಿಕಾರಿಗಳು ಒಗ್ಗೂಡಿ ಚರ್ಚೆ ನಡೆಸಿ ತಿರ್ಮಾನ ಕೈಗೊಳ್ಳಬೇಕೆಂದು ಕಿವಿ ಮಾತು ಹೇಳಿದ್ರು.

ಲೋಕಸಭೆ ಚುನಾವಣೆಯಲ್ಲಿ ಮತದಾನ ಹಕ್ಕು ಹೊಂದಿದವರು ತಪ್ಪದೇ ಮತದಾನ ಮಾಡಬೇಕು. ಸಂವಿಧಾನ ಬದ್ದವಾಗಿ ಪ್ರತಿಯೊಬ್ಬರ ಪ್ರಜೆಗೂ ಮತದಾನ ಹಕ್ಕು ಕಲ್ಪಿಸಿದ್ದು, ಅದನ್ನ ಅಸಡ್ಡೆ ಮಾಡದೆ ಮತದಾನ ಹಕ್ಕನ್ನು ಸಂದ್ಬಳಕೆ ಮಾಡಿಕೊಳ್ಳಬೇಕು. ಯಾವುದೇ ಆಸೆ ಆಮೀಷಾಗಳಿಗೆ ಒಳಗಾಗದೆ ಸಮರ್ಥ ನಾಯಕನ್ನ ಆಯ್ಕೆ ಮಾಡಲು ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದರು.

ಚುನಾವಣೆಯಲ್ಲಿ ಪಕ್ಷದ ಮುಖಂಡರು ಹಾಗೂ ಅಭ್ಯರ್ಥಿಗಳು ವೈಯಕ್ತಿಕ ನಿಂದನೆ ಮಾಡಿಕೊಳ್ಳದೆ ಪಕ್ಷದ ಸಿದ್ಧಾಂತ ಹಾಗೂ ಅಭಿವೃದ್ಧಿ ವಿಚಾರಗಳ ಕಡೆಗೆ ಚರ್ಚೆ ನಡೆಸಬೇಕು ಎಂದರು.

Intro:KN_RCR_03_13_Mantaralaya Swamiji Hellike_Bite1_7202440


Body:KN_RCR_03_13_Mantaralaya Swamiji Hellike_Bite1_7202440


Conclusion:KN_RCR_03_13_Mantaralaya Swamiji Hellike_Bite1_7202440
ETV Bharat Logo

Copyright © 2025 Ushodaya Enterprises Pvt. Ltd., All Rights Reserved.