ETV Bharat / state

ಲಿಂಗಸುಗೂರಿನ ತೋಟವೊಂದರಲ್ಲಿ ಆಕಸ್ಮಿಕ ಬೆಂಕಿ.. ಅಪಾರ ಪ್ರಮಾಣದ ಆಸ್ತಿ ನಷ್ಟ.. - ಲಿಂಗಸುಗೂರಿನ ತೋಟ

ಚಂದ್ರಶೇಖರ ಭೋವಿ ಎಂಬುವವರ ತೋಟದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು 5 ಎಕರೆ ಪ್ರದೇಶದಲ್ಲಿನ 30 ಮಾವಿನ ಗಿಡ, 5 ಸಪೋಟ ಹಣ್ಣಿನ ಗಿಡ, 10 ಸಾಗುವಾನಿ ಗಿಡಗಳು, 30ಕ್ಕೂ ಹೆಚ್ಚು ನೀರು ಹರಿಸುವ ಪೈಪಗಳು ಸುಟ್ಟು ಹಾನಿಯಾಗಿವೆ.

ಆಸ್ತಿ ನಷ್ಟ
ಆಸ್ತಿ ನಷ್ಟ
author img

By

Published : May 1, 2020, 4:50 PM IST

ರಾಯಚೂರು : ಜಿಲ್ಲೆಯ ಲಿಂಗಸುಗೂರು ತಾಲೂಕು ಕಸಬಾಲಿಂಗಸುಗೂರಿನ ತೋಟವೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ತೋಟಗಾರಿಕೆ ಬೆಳೆಗಳು ಸುಟ್ಟು ಅಪಾರ ಪ್ರಮಾಣದ ನಷ್ಟವಾಗಿದೆ.

ಗುರುವಾರ ಸಂಜೆ ಚಂದ್ರಶೇಖರ ಭೋವಿ ಎಂಬುವರ ತೋಟದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, 5 ಎಕರೆ ಪ್ರದೇಶದಲ್ಲಿನ 30 ಮಾವಿನ ಗಿಡ, 5 ಸಪೋಟ ಹಣ್ಣಿನ ಗಿಡ, 10 ಸಾಗುವಾನಿ ಗಿಡಗಳು, 30ಕ್ಕೂ ಹೆಚ್ಚು ನೀರು ಹರಿಸುವ ಪೈಪ್‌ಗಳು ಸುಟ್ಟು ಹಾನಿಯಾಗಿವೆ.

ಇಡೀ ತೋಟಕ್ಕೆ ತೋಟವೇ ಬೆಂಕಿಗಾಹುತಿ..

ಈ ಕುರಿತು ರೈತ ಚಂದ್ರಶೇಖರ ಭೋವಿ ಮಾತನಾಡಿ, ನಾಲ್ಕೈದು ವರ್ಷಗಳ ಫಸಲು ನೀಡುವಂತಹ ಗಿಡಗಳು ಸುಟ್ಟು ಲಕ್ಷಾಂತರ ರೂ. ಬೆಳೆ ಹಾನಿಯಾಗಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಮನವಿ ಮಾಡಿಕೊಂಡರು.

ರಾಯಚೂರು : ಜಿಲ್ಲೆಯ ಲಿಂಗಸುಗೂರು ತಾಲೂಕು ಕಸಬಾಲಿಂಗಸುಗೂರಿನ ತೋಟವೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ತೋಟಗಾರಿಕೆ ಬೆಳೆಗಳು ಸುಟ್ಟು ಅಪಾರ ಪ್ರಮಾಣದ ನಷ್ಟವಾಗಿದೆ.

ಗುರುವಾರ ಸಂಜೆ ಚಂದ್ರಶೇಖರ ಭೋವಿ ಎಂಬುವರ ತೋಟದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, 5 ಎಕರೆ ಪ್ರದೇಶದಲ್ಲಿನ 30 ಮಾವಿನ ಗಿಡ, 5 ಸಪೋಟ ಹಣ್ಣಿನ ಗಿಡ, 10 ಸಾಗುವಾನಿ ಗಿಡಗಳು, 30ಕ್ಕೂ ಹೆಚ್ಚು ನೀರು ಹರಿಸುವ ಪೈಪ್‌ಗಳು ಸುಟ್ಟು ಹಾನಿಯಾಗಿವೆ.

ಇಡೀ ತೋಟಕ್ಕೆ ತೋಟವೇ ಬೆಂಕಿಗಾಹುತಿ..

ಈ ಕುರಿತು ರೈತ ಚಂದ್ರಶೇಖರ ಭೋವಿ ಮಾತನಾಡಿ, ನಾಲ್ಕೈದು ವರ್ಷಗಳ ಫಸಲು ನೀಡುವಂತಹ ಗಿಡಗಳು ಸುಟ್ಟು ಲಕ್ಷಾಂತರ ರೂ. ಬೆಳೆ ಹಾನಿಯಾಗಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಮನವಿ ಮಾಡಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.