ETV Bharat / state

ಎಂಜಿನಿಯರಿಂಗ್​​ ವಿದ್ಯಾರ್ಥಿನಿ ಸಾವು ಪ್ರಕರಣ... ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡುವಂತೆ ಹೋರಾಟ

author img

By

Published : Apr 19, 2019, 3:10 PM IST

Updated : Apr 20, 2019, 7:58 PM IST

ಸುದರ್ಶನ ಅಷ್ಟೆ ಅಲ್ಲದೇ ಅವರ ಗ್ಯಾಂಗ್ ಈ ಕೃತ್ಯ ಎಸಗಿದೆ. ಅವರೆಲ್ಲರಿಗೂ ಕಠಿಣ ಶಿಕ್ಷೆಯಾಗಬೇಕೆಂದು ಪೋಷಕರು, ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆ ಮುಖಂಡರು ಒತ್ತಾಯಿಸಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.

ಆರೋಪಿಗಳಿಗೆ ಉಗ್ರ ಶಿಕ್ಷೆಗೆ ನೀಡುವಂತೆ ಹೋರಾಟ

ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ದೊರೆತ ಬೆನ್ನಲ್ಲೇ ಕೃತ್ಯವೆಸಗಿದ ಆರೋಪಿಗಳಿಗೆ ಉಗ್ರ ಶಿಕ್ಷೆ ಆಗಬೇಕು ಎನ್ನುವ ಬಲವಾದ ಕೂಗು ಕೇಳಿ ಬಂದಿದ್ದು, ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.

ವಿದ್ಯಾರ್ಥಿನಿ ಮೇಲೆ ಸುದರ್ಶನ ಯಾದವ್ ಅತ್ಯಾಚಾರವೆಸಗಿ ಕೊಲೆ ಮಾಡಿರುವುದಾಗಿ ಆರೋಪಿಸಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಏ. 13ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ನಗರದ ಐಡಿಎಂಎಸ್ ಲೇಔಟ್‌‌ನ ವಿದ್ಯಾರ್ಥಿನಿ ಬೈಕ್​ನಲ್ಲಿ ತೆರಳಿದ್ದಾಳೆ. ಅಂದು ಮನೆಯಿಂದ ತೆರಳಿದ ಆಕೆ ಏ. 15ರ ಸಂಜೆ ವೇಳೆ ಮಾಣಿಕ್ಯ ಪ್ರಭು ದೇವಾಲಯದ ಹಿಂಬದಿಯ ಪಾಳು ಬಿದ್ದ ಹೊಲದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಪರೀಕ್ಷೆಯಲ್ಲಿ ಪದೇ ಪದೆ ಫೇಲ್ ಆಗುವುದರಿಂದ ಮನನೊಂದು ಸಾವನ್ನಪ್ಪಿರುವುದಾಗಿ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿತ್ತಾದರೂ, ಕೊಲೆ ಶಂಕೆ ವ್ಯಕ್ತವಾಗಿತ್ತು.

ಆರೋಪಿಗಳಿಗೆ ಉಗ್ರ ಶಿಕ್ಷೆಗೆ ನೀಡುವಂತೆ ಹೋರಾಟ
ಮಧು ಆತ್ಮಹತ್ಯೆ ಮಾಡಿಕೊಂಡಿಲ್ಲ, ಬದಲಾಗಿ ಕೊಲೆಯಾಗಿದ್ದಾಳೆ ಎನ್ನುವ ಮೂಲಕ ನ್ಯಾಯಬೇಕು ಎಂದು ವಿದ್ಯಾರ್ಥಿಗಳು ಮತ್ತು ಸಂಘಟನೆ ಮುಖಂಡರು ಪ್ರತಿಭಟನೆ ನಡೆಸುವ ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನು ಆರಂಭಿಸಿದ್ದರು.

ನಿನ್ನೆ ಸಂಜೆ ವೇಳೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ತಾಯಿ ದೂರಿನ ಹಿನ್ನೆಲೆ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದ ಸುದರ್ಶನ ಯಾದವ್ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ. ಆರೋಪಿಯನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಮರಣೋತ್ತರಣ ಪರೀಕ್ಷೆ ಮಾಡಲಾಗುತ್ತಿದೆ.

ಆರೋಪಿ ಸುದರ್ಶನ ಯಾದವ್ ಕಾಲೇಜಿಗೆ ಹೋಗುವಾಗ ತೊಂದರೆ ನೀಡುತ್ತಿದ್ದ. ಈ ಬಗ್ಗೆ ಹಲವಾರು ಬಾರಿ ಬುದ್ಧಿ ಮಾತುಗಳನ್ನ ಹೇಳಲಾಗಿದೆ. ಆದರೂ ಸಹ ತೊಂದ್ರೆ ನೀಡುತ್ತಿದ್ದು, ಸುದರ್ಶನ ಅಷ್ಟೆ ಅಲ್ಲದೇ ಅವರ ಗ್ಯಾಂಗ್ ಈ ಕೃತ್ಯ ಎಸಗಿದೆ. ಅವರೆಲ್ಲರಿಗೂ ಕಠಿಣ ಶಿಕ್ಷೆಯಾಗಬೇಕೆಂದು ಪೋಷಕರು, ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆ ಮುಖಂಡರು ಒತ್ತಾಯಿಸಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.

ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ದೊರೆತ ಬೆನ್ನಲ್ಲೇ ಕೃತ್ಯವೆಸಗಿದ ಆರೋಪಿಗಳಿಗೆ ಉಗ್ರ ಶಿಕ್ಷೆ ಆಗಬೇಕು ಎನ್ನುವ ಬಲವಾದ ಕೂಗು ಕೇಳಿ ಬಂದಿದ್ದು, ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.

ವಿದ್ಯಾರ್ಥಿನಿ ಮೇಲೆ ಸುದರ್ಶನ ಯಾದವ್ ಅತ್ಯಾಚಾರವೆಸಗಿ ಕೊಲೆ ಮಾಡಿರುವುದಾಗಿ ಆರೋಪಿಸಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಏ. 13ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ನಗರದ ಐಡಿಎಂಎಸ್ ಲೇಔಟ್‌‌ನ ವಿದ್ಯಾರ್ಥಿನಿ ಬೈಕ್​ನಲ್ಲಿ ತೆರಳಿದ್ದಾಳೆ. ಅಂದು ಮನೆಯಿಂದ ತೆರಳಿದ ಆಕೆ ಏ. 15ರ ಸಂಜೆ ವೇಳೆ ಮಾಣಿಕ್ಯ ಪ್ರಭು ದೇವಾಲಯದ ಹಿಂಬದಿಯ ಪಾಳು ಬಿದ್ದ ಹೊಲದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಪರೀಕ್ಷೆಯಲ್ಲಿ ಪದೇ ಪದೆ ಫೇಲ್ ಆಗುವುದರಿಂದ ಮನನೊಂದು ಸಾವನ್ನಪ್ಪಿರುವುದಾಗಿ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿತ್ತಾದರೂ, ಕೊಲೆ ಶಂಕೆ ವ್ಯಕ್ತವಾಗಿತ್ತು.

ಆರೋಪಿಗಳಿಗೆ ಉಗ್ರ ಶಿಕ್ಷೆಗೆ ನೀಡುವಂತೆ ಹೋರಾಟ
ಮಧು ಆತ್ಮಹತ್ಯೆ ಮಾಡಿಕೊಂಡಿಲ್ಲ, ಬದಲಾಗಿ ಕೊಲೆಯಾಗಿದ್ದಾಳೆ ಎನ್ನುವ ಮೂಲಕ ನ್ಯಾಯಬೇಕು ಎಂದು ವಿದ್ಯಾರ್ಥಿಗಳು ಮತ್ತು ಸಂಘಟನೆ ಮುಖಂಡರು ಪ್ರತಿಭಟನೆ ನಡೆಸುವ ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನು ಆರಂಭಿಸಿದ್ದರು.

ನಿನ್ನೆ ಸಂಜೆ ವೇಳೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ತಾಯಿ ದೂರಿನ ಹಿನ್ನೆಲೆ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದ ಸುದರ್ಶನ ಯಾದವ್ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ. ಆರೋಪಿಯನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಮರಣೋತ್ತರಣ ಪರೀಕ್ಷೆ ಮಾಡಲಾಗುತ್ತಿದೆ.

ಆರೋಪಿ ಸುದರ್ಶನ ಯಾದವ್ ಕಾಲೇಜಿಗೆ ಹೋಗುವಾಗ ತೊಂದರೆ ನೀಡುತ್ತಿದ್ದ. ಈ ಬಗ್ಗೆ ಹಲವಾರು ಬಾರಿ ಬುದ್ಧಿ ಮಾತುಗಳನ್ನ ಹೇಳಲಾಗಿದೆ. ಆದರೂ ಸಹ ತೊಂದ್ರೆ ನೀಡುತ್ತಿದ್ದು, ಸುದರ್ಶನ ಅಷ್ಟೆ ಅಲ್ಲದೇ ಅವರ ಗ್ಯಾಂಗ್ ಈ ಕೃತ್ಯ ಎಸಗಿದೆ. ಅವರೆಲ್ಲರಿಗೂ ಕಠಿಣ ಶಿಕ್ಷೆಯಾಗಬೇಕೆಂದು ಪೋಷಕರು, ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆ ಮುಖಂಡರು ಒತ್ತಾಯಿಸಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.

Intro:ಆಂಕರ್: ನವೋದಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣ ಹೊಸ ಟಿಸ್ವ್ ದೊರೆತ ಬೆನ್ನಲ್ಲೇ ಕೃತ್ಯವೆಸಗಿದ ಆರೋಪಿಗಳು ಉಗ್ರ ಶಿಕ್ಷೆ ಆಗಬೇಕು ಎನ್ನುವ ಬಲವಾದ ಒತ್ತಡ ಕೇಳಿ ಬಂದಿದ್ದು, ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಕುರಿತು ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ.Body:ವಾಯ್ಸ್ ಓವರ್.೧: ರಾಯಚೂರಿನ ನವೋದಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್(೨೩)ನ್ನ ಸುದರ್ಶನ ಯಾದವ್ ಅತ್ಯಾಚಾರವೆಸಗಿ ಕೊಲರ ಮಾಡಿರುವ ಪ್ರಕರಣ ದಾಖಲಾಗಿ, ಆರೋಪಿಯನ್ನ ಬಂಧಿಸಲಾಗಿದೆ. ಏ.೧೩ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ನಗರದ ಐಡಿಎಂಎಸ್ ಲೇ ಔಟ್‌‌ನ ಮಧು ಪತ್ತಾರ್ ಬೈಕ್ ಸುಮಾರು ಬೆಳಗ್ಗೆ ತೆರಳಿದ್ದಾಳೆ. ಅಂದು ಮನೆಯಿಂದ ತೆರಳಿದ ಮಧು ಏ.೧೫ರ ಸಂಜೆ ವೇಳೆ ಮಾಣಿಕ್ಯಪ್ರಭು ದೇವಾಲಯದ ಹಿಂಬದಿಯ ಪಾಳು ಬಿದ್ದ ಹೊಲದಲ್ಲಿ ನೇಣು ಬಿಗಿದು ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿತ್ತು. ಸ್ಥಳದಲ್ಲಿ ಪರೀಕ್ಷೆಯಲ್ಲಿ ಪದೇ ಪದೇ ಫೇಲ್ ಆಗುವುದರಿಂದ ಮನನೊಂದು ಸ್ವಾನ್ನಪ್ಪಿರುವುದಾಗಿ ಡತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿತ್ತಾದರೂ, ಕೊಲೆ ಶಂಕೆ ವ್ಯಕ್ತವಾಗಿತ್ತು.

ವಾಯ್ಸ್ ಓವರ್.೨: ಮಧು ಆತ್ಮಹತ್ಯೆ ಮಾಡಿಕೊಂಡಿಲ್ಲ, ಬದಲಾಗಿ ಕೊಲೆಯಾಗಿದೆ ಎನ್ನುವ ಮೂಲಕ ಜಸ್ಟಿಸ್ ಫಾರ್ ಮಧು ಎಂದು ವಿದ್ಯಾರ್ಥಿಗಳು ಮತ್ತು ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಲಾಯಿತು ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜಸ್ಟಿಸ್ ಫಾರ್ ಮಧು ಎನ್ನುವ ಅಭಿಯಾನವನ್ನ ಆರಂಭಿಸಲಾಯಿತು. ನಿನ್ನೆ ಸಂಜೆ ವೇಳೆ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡು, ತಾಯಿ ದೂರಿನ ಹಿನ್ನಲೆಯಲ್ಲಿ, ನವೋದಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದ ಸುದರ್ಶನ ಯಾದವ್ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆಂದು ಆರೋಪಿಯನ್ನ ಬಂಧಿಸಿದ್ದು, ಮೂಲಕ‌ ಪೊಲೀಸ್ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಮರೋತ್ತರಣ ಪರೀಕ್ಷೆ ಮಾಡಲಾಗುತ್ತಿದೆ.Conclusion:ವಾಯ್ಸ್ ಓವರ್.೩: ಇನ್ನು ಬಂಧಿತ ಪರೀಕ್ಷೆಯಲ್ಲಿ ಫೇಲ್ ಆಗಿರುವುದಕ್ಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ.‌ ಆರೋಪಿ ಸುದರ್ಶನ ಯಾದವ್ ಕಾಲೇಜಿಗೆ ಹೋಗುವಾಗ ತೊಂದರೆ ನೀಡುತ್ತಿದ್ದ. ಈ ಬಗ್ಗೆ ಹಲವಾರು ಬುದ್ದಿ ಮಾತುಗಳನ್ನ ಹೇಳಲಾಗಿದೆ. ಆದ್ರೆ ಆದ್ರೂ ಸಹ ತೊಂದ್ರೆ ನೀಡುತ್ತಿದ್ದು, ಸುದರ್ಶನ ಅಷ್ಟೆ ಅಲ್ಲದೇ ಅವರ ಗ್ಯಾಂಗ್ ಮಾಡಿದು ಎಲ್ಲಾರಿಗೂ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯ ಪೊಷಕರು, ವಿದ್ಯಾರ್ಥಿಗಳು, ವಿವಿಧ ಸಂಘಟನೆ ಮುಖಂಡರು ಒತ್ತಾಯಿಸಿದ್ರೆ. ಅಲ್ಲದೇ ಹೊರಗಡೆ ಇರುವ ನವೋದಯ ಕಾಲೇಜಿಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥರಾಯಚೂರು

ಭದ್ರತೆ ಒದಗಿಸುವಂತೆ ಒತ್ತಾಯ ಸಹ ಮಾಡಲಾಗಿದೆ. ಒಟ್ಟಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣ ಸಮಗ್ರ ತನಿಖೆ ನಡೆಸುವ ಮೂಲಕ ಮಧು‌‌ ನ್ಯಾಯ ಒದಗಿಸುವ, ಆರೋಪಿಗಳಿಗೆ ಕಠಿಣ ಶಿಕ್ಷೆ ಗುರಿಪಡಿಸಿ, ಜಸ್ಟಿಸ್ ಫಾರ್ ಮಧು ಜಯ ದೊರಬೇಕಾಗಿದೆ.
ಬೈಟ್. ೧: ಮಾರುತಿ ಬಡಿಗೇರ್, ವಿಶ್ವಕರ್ಮ ಸಮಾಜದ ಮುಖಂಡ
ಬೈಟ್. ೨: ಡಾ.ಕಿಶೋರ್ ಬಾಬು, ಎಸ್ಪಿ, ರಾಯಚೂರು
***

Last Updated : Apr 20, 2019, 7:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.