ETV Bharat / state

ರಾಯಚೂರಲ್ಲಿ ಕೃಷಿ ಮೇಳ: ಆಧುನಿಕ ಕೃಷಿ ಯಂತ್ರಗಳ ಪ್ರದರ್ಶನ, ಮಾರಾಟ - ರಾಯಚೂರಿನಲ್ಲಿ  ಕೃಷಿ ಮೇಳ

ರಾಯಚೂರಿನಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ  ಆಧುನಿಕ  ಕೃಷಿ ಯಂತ್ರಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು.

Agricultural Fair at Raichur
ರಾಯಚೂರಿನಲ್ಲಿ  ಕೃಷಿ ಮೇಳ: ಆಧುನಿಕ  ಕೃಷಿ ಯಂತ್ರಗಳ ಪ್ರದರ್ಶನ ಹಾಗೂ ಮಾರಾಟ
author img

By

Published : Dec 17, 2019, 1:55 AM IST

ರಾಯಚೂರು: ನಗರದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಆಧುನಿಕ ಕೃಷಿ ಯಂತ್ರಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ರೈತರು ಆಗಮಿಸಿ ಮೇಳದ ಪ್ರಯೋಜನ ಪಡೆದರು.

ರಾಯಚೂರಿನಲ್ಲಿ ಕೃಷಿ ಮೇಳ: ಆಧುನಿಕ ಕೃಷಿ ಯಂತ್ರಗಳ ಪ್ರದರ್ಶನ ಹಾಗೂ ಮಾರಾಟ

ಇಲ್ಲಿ ಕಳೆ ಕೊಚ್ಚುವ ಯಂತ್ರ, ರೊಟರಿ ಟಿಲ್ಲರ್​ಗಳು , ಸ್ಪ್ರೇಯರ್​ಗಳು, ಮರ ಕೊಯ್ಯುವ ಯಂತ್ರಗಳು, ಔಷಧಿ‌ ಸಿಂಪಡಣೆ ಮಾಡುವ ವಿವಿಧ ಕೃಷಿ ಉಪಕರಣಗಳು, ಯಂತ್ರಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ. ಕೃಷಿಯನ್ನು ಪರಿಣಾಮಕಾರಿಯಾಗಿ ಲಾಭದಾಯಕವಾಗಿಸಲು ಹಾಗೂ ಕೃಷಿ ಕಾರ್ಮಿಕರ ಸಮಸ್ಯೆ ನೀಗಿಸಲು ಯಂತ್ರಗಳು ಸಹಾಯಕವಾಗಿವೆ.

ರೈತರಿಗೆ ಕಡಿಮೆ ಬೆಲೆ ಹಾಗೂ ಆಧುನಿಕ ಯಂತ್ರೋಪಕರಣಗಳ ಬಳಕೆಯ ಬಗ್ಗೆ ಮಾಹಿತಿ ನೀಡುವುದು ಈ ಕೃಷಿ ಮೇಳದ ಮುಖ್ಯ ಉದ್ದೇಶವಾಗಿದೆ.

ರಾಯಚೂರು: ನಗರದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಆಧುನಿಕ ಕೃಷಿ ಯಂತ್ರಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ರೈತರು ಆಗಮಿಸಿ ಮೇಳದ ಪ್ರಯೋಜನ ಪಡೆದರು.

ರಾಯಚೂರಿನಲ್ಲಿ ಕೃಷಿ ಮೇಳ: ಆಧುನಿಕ ಕೃಷಿ ಯಂತ್ರಗಳ ಪ್ರದರ್ಶನ ಹಾಗೂ ಮಾರಾಟ

ಇಲ್ಲಿ ಕಳೆ ಕೊಚ್ಚುವ ಯಂತ್ರ, ರೊಟರಿ ಟಿಲ್ಲರ್​ಗಳು , ಸ್ಪ್ರೇಯರ್​ಗಳು, ಮರ ಕೊಯ್ಯುವ ಯಂತ್ರಗಳು, ಔಷಧಿ‌ ಸಿಂಪಡಣೆ ಮಾಡುವ ವಿವಿಧ ಕೃಷಿ ಉಪಕರಣಗಳು, ಯಂತ್ರಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ. ಕೃಷಿಯನ್ನು ಪರಿಣಾಮಕಾರಿಯಾಗಿ ಲಾಭದಾಯಕವಾಗಿಸಲು ಹಾಗೂ ಕೃಷಿ ಕಾರ್ಮಿಕರ ಸಮಸ್ಯೆ ನೀಗಿಸಲು ಯಂತ್ರಗಳು ಸಹಾಯಕವಾಗಿವೆ.

ರೈತರಿಗೆ ಕಡಿಮೆ ಬೆಲೆ ಹಾಗೂ ಆಧುನಿಕ ಯಂತ್ರೋಪಕರಣಗಳ ಬಳಕೆಯ ಬಗ್ಗೆ ಮಾಹಿತಿ ನೀಡುವುದು ಈ ಕೃಷಿ ಮೇಳದ ಮುಖ್ಯ ಉದ್ದೇಶವಾಗಿದೆ.

Intro:ಕೃಷಿ ಕ್ಷೇತ್ರದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ ಈ ಹಿಂದೆ ಕೇವಲ ಎತ್ತು,ನೇಗಿಲು,ಕುಂಟೆ ಹಾಗೂ ಕೆಲವೇ ಸಲಕರಣೆಗಳಿಂದ ರೈತರು ಕೃಷಿ ಚಟುವಟಿಕೆ ನಡೆಸುತಿದ್ದರು ಆದ್ರೆ ಈಗ ವಿಜ್ಞಾನ ತಂತ್ರಜ್ಞಾನ ಮುಂದುವರೆದ ಕಾರಣ ಹೊಲಗಳಲ್ಲಿ ಈಗ ಯಂತ್ರಗಳದ್ದೇ ಸದ್ದು.


Body:ಹೌದು ಈ ಹಿಂದೆ ಕೆಲವೇ ಸಲಕರಣೆಗಳಿಂದ ಕೃಷಿ ಚಟುವಟಿಕೆ ಕೈಗೊಳ್ಳುವ ಮೂಲಕ ಹೆಚ್ಚಿನ ಲಾಭದ ನಿರೀಕ್ಷೆ ಹೊಂದುತ್ತಿರಲಿಲ್ಲ‌ಆದ್ರೆ ಈಗ ಕಾಲ‌ಬದಲಾಗಿದೆ, ಕಾರ್ಮಿಕರ ಕೆಲಸ ಯಂತ್ರಗಳೇ ಝಟ್ ಪಟ್ ಅಂತ ಮಾಡಿ ಮುಗಿಸುತ್ತವೆ ಆದ್ರೆ ಅದನ್ನು ಉಪಯೋಗಿಸುವ ಕೌಶಲ್ಯ ಹೊಂದಿದ್ದರೆ ಸಾಕು. ಹಿಂದೆ ರೈತರು ಹೊಲದಲ್ಲಿ ಒಂದು ಮರದ ದಿಮ್ಮಿ ಕತ್ತರಿಸಲಿಕ್ಕು ಕೊಡಲಿ,ಕತ್ತಿ ಗರಗಸ ಬೇಕಿತ್ತು,ದನಗಳಿಗೆ ಮೇವು‌ ಕೊಯ್ಯಲು ಕತ್ತರಿಸಲು 4-5 ಜನ ಕೂಲಿ‌ ಆಳುಗಳು ಬೇಕಾಗಿತ್ತು.ಹೊಲ ತೋಟದಲ್ಲಿ ಕಳೆ ಕೀಳುವುದು ಸವಾಲಿನ ಕೆಲಸವಾಗಿತ್ತು. ಇದ್ರಿಂದ ವ್ಯವಸಾಯ ವೆಂದರೆ ಕ್ಲಿಷ್ಟಕರ ಸಮಸ್ಯೆ ಯಾಗಿತ್ತು‌ ಆದ್ರೆ ಈಗ ಕಾಲ ಬದಲಾಗಿದ್ದು ಉಳುವುದು,ನಾಟಿ ಮಾಡುವುದು,ಕಳೆ ಕೀಳುವುದು,ಔಷಧ ಸಿಂಪರಣೆ ಮಾಡುವುದು,ಬೆಳೆ ಕಟಾವು ಹೀಗೆ ಎಲ್ಲಾ ಕೆಲಸಗಳು ಯಂತ್ರಗಳ ಸಹಾಯದಿಂದ ಮಾಡಬಹುದಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹಲವೆಡೆ ಸಣ್ಣ‌ತಾಲೂಕುಗಳಿಂದ ಹಿಡಿದ ನಗರಗಳಲ್ಲಿ ಮಳಿಗೆಗಳು ,ಮಾಲ್ ಗಳು ತಲೆ ಎತ್ತಿವೆ ಆದ್ರೆ ರೈತರಿಗೆ ಕಡಿಮೆ ಬೆಲೆ ಹಾಗೂ ಆಧುನಿಕ ಯಂತ್ರೋಪಕರಣಗಳ ಬಳಕೆಯ ಬಗೆ ಮಾಹಿತಿ ನೀಡುವುದು,ಪ್ರಾತ್ಯಾಕ್ಷಿಕೆ ಹಾಗೂ ಮಾರಾಟ ಕ್ಕಾಗಿ ಸರಕಾರದಿಂದ ಕೃಷಿ ಮೇಳ ಆಯೋಜಿಸುವ ಉದ್ದೇಶ. ಅದ್ರಂತೆ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಯಚೂರಿನಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಇಂತಹ ಹಲವು ಯಂತ್ರಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ ಸಾವಿರಾರು ಸಂಖ್ಯೆಯಲ್ಲಿ ರೈತರು ಆಗಮಿಸಿ ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಇಲ್ಲಿ ಕಳೆ ಕೊಚ್ಚುವ ಯಂತ್ರ,ರೊಟರಿ ಟಿಲ್ಲರ್ ಗಳು , ಸ್ಪ್ರೇಯರ್ ಗಳು,ಮರ ಕೊಯ್ಯುವ ಯಂತ್ರಗಳು, ಔಷಧಿ‌ ಸಿಂಪರಣೆ ಮಾಡುವ ಬಗೆಬಗೆಯ ವಿವಿಧ ಆಕಾರದ ಕೃಷಿ ಉಪಕರಣಗಳು,ಯಂತ್ರಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ. ಕೃಷಿ ಯನ್ನು ಪರಿಣಾಮಕಾರಿಯಾಗಿ ಲಾಭದಾಯಕವಾಗಿಸಲು ಯಂತ್ರಗಳ ಸಹಾಯ ಮುಖ್ಯವಾಗಿವೆ ಆಧುನಿಕ ಯಂತ್ರಗಳಿಂದ ಕೃಷಿ ಚಟುವಟಿಕೆ ಸುಲಭವಾಗಿ ಹಾಗೂ ತ್ವರಿತಗತಿಯಲ್ಲಿ‌ ಮಾಡ ಬಹುದಾಗಿದೆ. ಯಂತ್ರಗಳಿಂದ ಕೆಲಸ ಮಾಡುವುದರಿಂದ ಈಗಿನ ಕೃಷಿ ಕಾರ್ಮಿಕರ ಸಮಸ್ಯೆಯನ್ನು ನೀಗಿಸಬಹುದು ಆದ್ರೆ ಕಾಲಕ್ಕೆ ತಕ್ಕಂತೆ ಇವುಗಳ ಖರೀದಿ ಬೆಲೆಯೂ ತುಸು‌ಹೆಚ್ಚಾಗಿದ್ದು ಸರಕಾರ ಸಬ್ಸಿಡಿ ದೊರೆಯಲಿದೆ ಎನ್ನುವುದು ಸಮಧಾನಕರ ಸಂಗತಿ. ಮೇಳದಲ್ಲಿ ಯಂತ್ರಗಳನ್ನು ನೋಡೊದ ರೈತರು ಆರ್ಥಿಕ ಸಮಸ್ಯೆ ಅನುಭವಿಸುತ್ತಿದ್ದರೆ ಮಾರಾಟಗಾರರ ವಿಳಾಸ ಪಡೆದು ಅಲ್ಲಿಂದ ಖರೀದಿ ಮಾಡಬಹುದಾಗಿದೆ. ಬೈಟ್: ಅನುಕ್ರಮವಾಗಿ. 1) ಮಲ್ಲಿಕಾರ್ಜುನ, ವರ್ಷ ಅಸೋಶಿಯೇಟ್ ಕಂಪನಿ‌ ಮ್ಯಾನೇಜರ್. 2) ಗುರುರಾಜ,ಸಿಂದನೂರು ಮೇಳದಲ್ಲಿ‌ ಮಳಿಗೆ ಸ್ಥಾಪಿಸಿಕೊಂಡ ಅಂಗಡಿ ಮಾಲೀಕ ( ತಲೆ ಮೇಲೆ‌ಕ್ಯಾಪ್ ಧರಿಸಿದವರು) 3) ಲಿಂಗನಗೌಡ, ರೈತ,( ಮೇಲಿನ ಜೇಬಲ್ಲಿ ಮೊಬೈಲ್‌,ಕಪ್ಪು‌ಬಣ್ಣದ ವ್ಯಕ್ತಿ) ಮನವಿ : ಇಂದು‌ ಕೃಷಿ‌ಮೇಳದ ಕೊನೆಯ ದಿನವಾಗಿದ್ದು ಇಂದೇ ಸ್ಟೋರಿ ಬರುವಂತೆ ನೊಡಿಕೊಳ್ಳಿ.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.