ETV Bharat / state

ಮೈಸೂರು: ಅಪಘಾತದಿಂದ ಇಬ್ಬರು ಸಾವು, 10 ಮಂದಿಗೆ ಜೀವದಾನ

ಮೈಸೂರಿನಲ್ಲಿ ಅಪಘಾತದಿಂದ ಮೃತಪಟ್ಟ ಇಬ್ಬರ ದೇಹವನ್ನು ದಾನ ಮಾಡಲಾಗಿದೆ. ಇದರಿಂದ 10 ಮಂದಿಗೆ ಜೀವದಾನ ಸಿಕ್ಕಿದೆ.

author img

By ETV Bharat Karnataka Team

Published : Dec 3, 2023, 8:52 PM IST

ಮೈಸೂರು
ಮೈಸೂರು

ಮೈಸೂರು : ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟ ಇಬ್ಬರು 10 ಮಂದಿಗೆ ಜೀವದಾನ ಮಾಡಿದ್ದಾರೆ. ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕುಮಾರ್ (43) ಹಾಗೂ ದರ್ಶನ್ (23) ಅವರನ್ನು ಕ್ರಮವಾಗಿ ನ. 26 ಹಾಗೂ 28 ರಂದು ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಇಬ್ಬರ ತಲೆಗೂ ತೀವ್ರವಾಗಿ ಪೆಟ್ಟು ಬಿದ್ದಿತ್ತು. ಆರಂಭಿಕ ಸಿಟಿ ಸ್ಕ್ಯಾನ್​ನಲ್ಲಿ ಮೆದುಳಿನ ಅಂಗಾಂಶಕ್ಕೆ ಘಾಸಿಯಾಗಿದ್ದು ಕಂಡುಬಂದಿದ್ದರಿಂದ ಅವರನ್ನು ಐಸಿಯುಗೆ ಸ್ಥಳಾಂತರಿಸಿ, ಜೀವ ರಕ್ಷಣಾ ಬೆಂಬಲದಲ್ಲಿ ಇರಿಸಲಾಗಿತ್ತು.

ಕುಮಾರ್ ಹಾಗೂ ದರ್ಶನ್ ಅವರು ಗಂಭೀರ ಸ್ಥಿತಿಯಲ್ಲಿದ್ದ ಕಾರಣ, ಅವರನ್ನು ಜೀವ ರಕ್ಷಣಾ ಬೆಂಬಲದಲ್ಲಿ ಇರಿಸಲಾಗಿತ್ತು. ಕ್ರಮವಾಗಿ ನವೆಂಬರ್​ 29 ರಂದು ಸಂಜೆ 7.22 ಕ್ಕೆ ಹಾಗೂ ಡಿಸೆಂಬರ್​ 2 ರಂದು ಸಂಜೆ 4.45 ಕ್ಕೆ ಇಬ್ಬರ ಮೆದುಳು ನಿಷ್ಕ್ರಿಯ (ಬ್ರೈನ್ ಡೆಡ್) ಎಂದು ಘೋಷಿಸಲಾಗಿತ್ತು. 1994ರ ಮಾನವ ಅಂಗಾಂಗಗಳ ಕಸಿ ಕಾಯಿದೆ ಅನುಸಾರ ಆಸ್ಪತ್ರೆಯ ಶಿಷ್ಟಾಚಾರದಂತೆ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆ ವೈದ್ಯರ ತಂಡ ಈ ಘೋಷಣೆ ಮಾಡಿತ್ತು.

ಈ ದುರ್ಘಟನೆಗೂ ಮುನ್ನ ಈ ಇಬ್ಬರೂ ಆರೋಗ್ಯವಾಗಿಯೇ ಇದ್ದರು. ನಂತರ ಇನ್ನಷ್ಟು ಪರೀಕ್ಷೆ ನಡೆಸಿದಾಗ ಇಬ್ಬರೂ ಅಂಗಾಂಗ ದಾನಕ್ಕೆ ಯೋಗ್ಯರಾಗಿರುವುದು ಕಂಡುಬಂತು. ನಂತರ ಇಬ್ಬರ ಕುಟುಂಬದವರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು. ಅಂಗದಾನದ ಶಿಷ್ಟಾಚಾರದಂತೆ ಎಸ್​ಟಿಟಿಒ ಅಧಿಕಾರಿಗಳು (ಸ್ಟೇಟ್ ಆರ್ಗನ್ ಅಂಡ್ ಟಿಶ್ಯೂ ಟ್ರಾನ್ಸ್ಪ್ಲಾಂಟ್ ಆರ್ಗನೈಸೇಶನ್) (ಹಿಂದಿನ ಹೆಸರು ಜೀವ ಸಾರ್ಥಕತೆ) ಅಂಗ ಸ್ವೀಕರಿಸುವವರ ನಿರೀಕ್ಷಣಾ ಪಟ್ಟಿಯಾನುಸಾರ ತಮ್ಮ ಪ್ರಕ್ರಿಯೆ ಪ್ರಾರಂಭಿಸಿದರು.

ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಈ ಸಂತ್ರಸ್ತರ ಲಿವರ್​, ಶ್ವಾಸಕೋಶ, ಹೃದಯ, ಕಿಡ್ನಿ ಮತ್ತು ಕಾರ್ನಿಯಾಗಳಂತಹ ಅಂಗಗಳನ್ನು ಕ್ರಾಸ್-ಕ್ಲ್ಯಾಂಪ್ ಮೂಲಕ ಹೊರತೆಗೆದು, ಈ ಮೂಲಕ ಕಳೆದ 5 ದಿನಗಳಲ್ಲಿ 10 ಜೀವಗಳನ್ನು ಉಳಿಸಲಾಗಿದೆ.

ಕರ್ನಾಟಕದ ಎಸ್‌ಒಟಿಟಿಒ ಅಡಿಯಲ್ಲಿ ಅಂಗಾಂಗ ಕಸಿಗಾಗಿ 5ನೇ ವಲಯವೆಂದು ಗುರುತಿಸಲ್ಪಟ್ಟಿರುವ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯು ಬಹುಅಂಗಾಂಗ ಕಸಿಗೆ ಪರವಾನಗಿ ಪಡೆದ ಕೇಂದ್ರವಾಗಿದೆ. ಈ ಪ್ರದೇಶದಲ್ಲಿ ಅಂಗಾಂಗ ಕಸಿಗಾಗಿ ಹೊಂದಾಣಿಕ ಮಾಡುವ ಸೌಲಭ್ಯವನ್ನು ಸುಲಭಗೊಳಿಸುವ ಸಂಬಂಧ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯೊಂದಿಗೆ ಒಂದು ಒಪ್ಪಂದ ಮಾಡಿಕೊಂಡಿದೆ.

ಬಿಜಿಎಸ್ ಆಸ್ಪತ್ರೆಯಿಂದ ಕೃತಜ್ಞತೆ: ಅದರಂತೆ ಅಂಗಾಂಗ ಕಸಿಗೆ ಒಳಗಾಗುವ ರೋಗಿಗಳ ಕ್ರಾಸ್ ಮ್ಯಾಚಿಂಗ್ ಅನ್ನು ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಕೈಗೊಳ್ಳಲಾಗುತ್ತದೆ. ಇದರಿಂದ ಬೆಂಗಳೂರಿಗೆ ತೆರಳುವ ಸಮಯವು ಉಳಿಯುವುದರಿಂದ ಅಂಗಾಂಗ ಕಸಿಗೂ ಬೇಕಾಗುವ ನಿರ್ಣಾಯಕ ಸಮಯವೂ ಉಳಿತಾಯವಾಗುತ್ತದೆ. ಅಂಗಾಂಗ ದಾನದಂಥ ಅತಿ ದೊಡ್ಡ ಮಾನವೀಯ ಕಾರ್ಯ ಕೈಗೊಂಡ ಸಂತ್ರಸ್ತರ ಕುಟುಂಬಕ್ಕೆ ಅಪೋಲೊ ಬಿಜಿಎಸ್ ಆಸ್ಪತ್ರೆಯು ತುಂಬು ಹೃದಯದ ಧನ್ಯವಾದ ಹಾಗೂ ಕೃತಜ್ಞತೆ ಸಲ್ಲಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಮೆದುಳು ನಿಷ್ಕ್ರಿಯಗೊಂಡು ಸಾವು: ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ವ್ಯಕ್ತಿ

ಮೈಸೂರು : ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟ ಇಬ್ಬರು 10 ಮಂದಿಗೆ ಜೀವದಾನ ಮಾಡಿದ್ದಾರೆ. ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕುಮಾರ್ (43) ಹಾಗೂ ದರ್ಶನ್ (23) ಅವರನ್ನು ಕ್ರಮವಾಗಿ ನ. 26 ಹಾಗೂ 28 ರಂದು ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಇಬ್ಬರ ತಲೆಗೂ ತೀವ್ರವಾಗಿ ಪೆಟ್ಟು ಬಿದ್ದಿತ್ತು. ಆರಂಭಿಕ ಸಿಟಿ ಸ್ಕ್ಯಾನ್​ನಲ್ಲಿ ಮೆದುಳಿನ ಅಂಗಾಂಶಕ್ಕೆ ಘಾಸಿಯಾಗಿದ್ದು ಕಂಡುಬಂದಿದ್ದರಿಂದ ಅವರನ್ನು ಐಸಿಯುಗೆ ಸ್ಥಳಾಂತರಿಸಿ, ಜೀವ ರಕ್ಷಣಾ ಬೆಂಬಲದಲ್ಲಿ ಇರಿಸಲಾಗಿತ್ತು.

ಕುಮಾರ್ ಹಾಗೂ ದರ್ಶನ್ ಅವರು ಗಂಭೀರ ಸ್ಥಿತಿಯಲ್ಲಿದ್ದ ಕಾರಣ, ಅವರನ್ನು ಜೀವ ರಕ್ಷಣಾ ಬೆಂಬಲದಲ್ಲಿ ಇರಿಸಲಾಗಿತ್ತು. ಕ್ರಮವಾಗಿ ನವೆಂಬರ್​ 29 ರಂದು ಸಂಜೆ 7.22 ಕ್ಕೆ ಹಾಗೂ ಡಿಸೆಂಬರ್​ 2 ರಂದು ಸಂಜೆ 4.45 ಕ್ಕೆ ಇಬ್ಬರ ಮೆದುಳು ನಿಷ್ಕ್ರಿಯ (ಬ್ರೈನ್ ಡೆಡ್) ಎಂದು ಘೋಷಿಸಲಾಗಿತ್ತು. 1994ರ ಮಾನವ ಅಂಗಾಂಗಗಳ ಕಸಿ ಕಾಯಿದೆ ಅನುಸಾರ ಆಸ್ಪತ್ರೆಯ ಶಿಷ್ಟಾಚಾರದಂತೆ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆ ವೈದ್ಯರ ತಂಡ ಈ ಘೋಷಣೆ ಮಾಡಿತ್ತು.

ಈ ದುರ್ಘಟನೆಗೂ ಮುನ್ನ ಈ ಇಬ್ಬರೂ ಆರೋಗ್ಯವಾಗಿಯೇ ಇದ್ದರು. ನಂತರ ಇನ್ನಷ್ಟು ಪರೀಕ್ಷೆ ನಡೆಸಿದಾಗ ಇಬ್ಬರೂ ಅಂಗಾಂಗ ದಾನಕ್ಕೆ ಯೋಗ್ಯರಾಗಿರುವುದು ಕಂಡುಬಂತು. ನಂತರ ಇಬ್ಬರ ಕುಟುಂಬದವರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು. ಅಂಗದಾನದ ಶಿಷ್ಟಾಚಾರದಂತೆ ಎಸ್​ಟಿಟಿಒ ಅಧಿಕಾರಿಗಳು (ಸ್ಟೇಟ್ ಆರ್ಗನ್ ಅಂಡ್ ಟಿಶ್ಯೂ ಟ್ರಾನ್ಸ್ಪ್ಲಾಂಟ್ ಆರ್ಗನೈಸೇಶನ್) (ಹಿಂದಿನ ಹೆಸರು ಜೀವ ಸಾರ್ಥಕತೆ) ಅಂಗ ಸ್ವೀಕರಿಸುವವರ ನಿರೀಕ್ಷಣಾ ಪಟ್ಟಿಯಾನುಸಾರ ತಮ್ಮ ಪ್ರಕ್ರಿಯೆ ಪ್ರಾರಂಭಿಸಿದರು.

ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಈ ಸಂತ್ರಸ್ತರ ಲಿವರ್​, ಶ್ವಾಸಕೋಶ, ಹೃದಯ, ಕಿಡ್ನಿ ಮತ್ತು ಕಾರ್ನಿಯಾಗಳಂತಹ ಅಂಗಗಳನ್ನು ಕ್ರಾಸ್-ಕ್ಲ್ಯಾಂಪ್ ಮೂಲಕ ಹೊರತೆಗೆದು, ಈ ಮೂಲಕ ಕಳೆದ 5 ದಿನಗಳಲ್ಲಿ 10 ಜೀವಗಳನ್ನು ಉಳಿಸಲಾಗಿದೆ.

ಕರ್ನಾಟಕದ ಎಸ್‌ಒಟಿಟಿಒ ಅಡಿಯಲ್ಲಿ ಅಂಗಾಂಗ ಕಸಿಗಾಗಿ 5ನೇ ವಲಯವೆಂದು ಗುರುತಿಸಲ್ಪಟ್ಟಿರುವ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯು ಬಹುಅಂಗಾಂಗ ಕಸಿಗೆ ಪರವಾನಗಿ ಪಡೆದ ಕೇಂದ್ರವಾಗಿದೆ. ಈ ಪ್ರದೇಶದಲ್ಲಿ ಅಂಗಾಂಗ ಕಸಿಗಾಗಿ ಹೊಂದಾಣಿಕ ಮಾಡುವ ಸೌಲಭ್ಯವನ್ನು ಸುಲಭಗೊಳಿಸುವ ಸಂಬಂಧ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯೊಂದಿಗೆ ಒಂದು ಒಪ್ಪಂದ ಮಾಡಿಕೊಂಡಿದೆ.

ಬಿಜಿಎಸ್ ಆಸ್ಪತ್ರೆಯಿಂದ ಕೃತಜ್ಞತೆ: ಅದರಂತೆ ಅಂಗಾಂಗ ಕಸಿಗೆ ಒಳಗಾಗುವ ರೋಗಿಗಳ ಕ್ರಾಸ್ ಮ್ಯಾಚಿಂಗ್ ಅನ್ನು ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಕೈಗೊಳ್ಳಲಾಗುತ್ತದೆ. ಇದರಿಂದ ಬೆಂಗಳೂರಿಗೆ ತೆರಳುವ ಸಮಯವು ಉಳಿಯುವುದರಿಂದ ಅಂಗಾಂಗ ಕಸಿಗೂ ಬೇಕಾಗುವ ನಿರ್ಣಾಯಕ ಸಮಯವೂ ಉಳಿತಾಯವಾಗುತ್ತದೆ. ಅಂಗಾಂಗ ದಾನದಂಥ ಅತಿ ದೊಡ್ಡ ಮಾನವೀಯ ಕಾರ್ಯ ಕೈಗೊಂಡ ಸಂತ್ರಸ್ತರ ಕುಟುಂಬಕ್ಕೆ ಅಪೋಲೊ ಬಿಜಿಎಸ್ ಆಸ್ಪತ್ರೆಯು ತುಂಬು ಹೃದಯದ ಧನ್ಯವಾದ ಹಾಗೂ ಕೃತಜ್ಞತೆ ಸಲ್ಲಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಮೆದುಳು ನಿಷ್ಕ್ರಿಯಗೊಂಡು ಸಾವು: ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ವ್ಯಕ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.