ETV Bharat / state

ಕೊರೊನಾ ನಿಯಮಕ್ಕೆ ಡೋಂಟ್ ಕೇರ್: ನಂಜನಗೂಡಿನ ಬ್ಯಾಂಕ್ ಮುಂದೆ ಜನಜಾತ್ರೆ

author img

By

Published : May 18, 2021, 12:53 PM IST

ಮೈಸೂರು ಜಿಲ್ಲೆಯ ಹುಲ್ಲಹಳ್ಳಿಯಲ್ಲಿ ಬ್ಯಾಂಕ್ ಮುಂದೆ ಭಾರೀ ಸಂಖ್ಯೆಯಲ್ಲಿ ಜನರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

People violated Covid guidelines in Nanjangu
ಬ್ಯಾಂಕ್ ಮುಂದೆ ಜನ ಜಂಗುಳಿ

ಮೈಸೂರು: ನಂಜನಗೂಡಿನ ಹುಲ್ಲಹಳ್ಳಿಯಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಿ ಬ್ಯಾಂಕ್ ಮುಂದೆ ಜನ ಜಂಗುಳಿ ಸೇರಿರುವುದು ಕಂಡು ಬಂತು.

ಹುಲ್ಲಹಳ್ಳಿಯಲ್ಲಿ ಜನಸಾಮಾನ್ಯರಿಗೆ ಕೇವಲ ಒಂದು ಕಾರ್ಪೋರೇಶನ್ ಬ್ಯಾಂಕ್ ಮಾತ್ರ ಇದೆ. ಲಾಕ್‌ಡೌನ್​ ಆಗಿದ್ದರಿಂದ ಹಣ ತೆಗೆಯಲು ಆಗುವುದಿಲ್ಲ ಎಂಬ ಆತಂಕದಿಂದ ಹಾಲು ಉತ್ಪಾದಕರ ಸಂಘ ಹಾಗೂ ವಿವಿಧ ಮಹಿಳಾ ಸಂಘಗಳ ಸದಸ್ಯರು ಬ್ಯಾಂಕ್ ಮುಂದೆ ಪ್ರತಿನಿತ್ಯ ಗುಂಪು ಸೇರುತ್ತಿದ್ದಾರೆ. ಇದರಿಂದ ಕೊರೊನಾ ಹರಡುವ ಆತಂಕ ಶುರುವಾಗಿದೆ.

ಬ್ಯಾಂಕ್ ಮುಂದೆ ಜನ ಜಂಗುಳಿ

ಇದನ್ನೂ ಓದಿ: ಬೆಂಗಳೂರು: ಕೋವಿಡ್​​ ಮಾರ್ಗಸೂಚಿ ಉಲ್ಲಂಘಿಸಿದ 20,000ಕ್ಕೂ ಹೆಚ್ಚು ವಾಹನಗಳು ಸೀಜ್‌!

ಬ್ಯಾಂಕ್ ಮುಂದೆ ಸೇರುವ ಜನ ಯಾವುದೇ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್​ ಧರಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಬ್ಯಾಂಕ್ ಗ್ರಾಹಕರಿಗೆ ಸೇವೆ ನೀಡುವ ಬದಲು ಕೋವಿಡ್ ಹಾಟ್​ಸ್ಪಾಟ್ ಆದರೂ ಅಚ್ಚರಿಯಿಲ್ಲ.

ಮೈಸೂರು: ನಂಜನಗೂಡಿನ ಹುಲ್ಲಹಳ್ಳಿಯಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಿ ಬ್ಯಾಂಕ್ ಮುಂದೆ ಜನ ಜಂಗುಳಿ ಸೇರಿರುವುದು ಕಂಡು ಬಂತು.

ಹುಲ್ಲಹಳ್ಳಿಯಲ್ಲಿ ಜನಸಾಮಾನ್ಯರಿಗೆ ಕೇವಲ ಒಂದು ಕಾರ್ಪೋರೇಶನ್ ಬ್ಯಾಂಕ್ ಮಾತ್ರ ಇದೆ. ಲಾಕ್‌ಡೌನ್​ ಆಗಿದ್ದರಿಂದ ಹಣ ತೆಗೆಯಲು ಆಗುವುದಿಲ್ಲ ಎಂಬ ಆತಂಕದಿಂದ ಹಾಲು ಉತ್ಪಾದಕರ ಸಂಘ ಹಾಗೂ ವಿವಿಧ ಮಹಿಳಾ ಸಂಘಗಳ ಸದಸ್ಯರು ಬ್ಯಾಂಕ್ ಮುಂದೆ ಪ್ರತಿನಿತ್ಯ ಗುಂಪು ಸೇರುತ್ತಿದ್ದಾರೆ. ಇದರಿಂದ ಕೊರೊನಾ ಹರಡುವ ಆತಂಕ ಶುರುವಾಗಿದೆ.

ಬ್ಯಾಂಕ್ ಮುಂದೆ ಜನ ಜಂಗುಳಿ

ಇದನ್ನೂ ಓದಿ: ಬೆಂಗಳೂರು: ಕೋವಿಡ್​​ ಮಾರ್ಗಸೂಚಿ ಉಲ್ಲಂಘಿಸಿದ 20,000ಕ್ಕೂ ಹೆಚ್ಚು ವಾಹನಗಳು ಸೀಜ್‌!

ಬ್ಯಾಂಕ್ ಮುಂದೆ ಸೇರುವ ಜನ ಯಾವುದೇ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್​ ಧರಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಬ್ಯಾಂಕ್ ಗ್ರಾಹಕರಿಗೆ ಸೇವೆ ನೀಡುವ ಬದಲು ಕೋವಿಡ್ ಹಾಟ್​ಸ್ಪಾಟ್ ಆದರೂ ಅಚ್ಚರಿಯಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.