ETV Bharat / state

ಎಸಿಬಿ ಬಲೆಗೆ ಬಿದ್ದ ಪಿಡಿಒ, ಎಸ್​ಡಿಎ.. ಇಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು!

ನಿವೇಶನ ಖಾತೆ ಬದಲಾವಣೆಗೆ 30ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ ಹಾಗೂ ಎಸ್​ಡಿಎ ಇಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.

author img

By

Published : Feb 26, 2021, 7:47 PM IST

ACB trap
ಎಸಿಬಿ ಬಲೆಗೆ ಬಿದ್ದ ಪಿಡಿಒ, ಎಸ್​ಡಿಎ

ಮೈಸೂರು: ನಿವೇಶನ ಖಾತೆ ಬದಲಾವಣೆಗೆ ಹಣದ ಬೇಡಿಕೆ ಇಟ್ಟಿದ್ದ ಪಿಡಿಒ ಹಾಗೂ ಎಸ್​ಡಿಎ ಇಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಹೆಚ್‌.ಡಿ.ಕೋಟೆ ತಾಲೂಕಿನ ಮಾದಾಪುರ ಗ್ರಾ.ಪಂ ಪಿಡಿಒ ಲೋಕೇಶ್ ಮತ್ತು ಎಸ್‌ಡಿಎ ವೆಂಕಟೇಶ್ ಎಸಿಬಿ ಬಲೆಗೆ ಬಿದ್ದವರು.

ಮಾದಾಪುರ ಗ್ರಾಮದ ನಿವೇಶನವೊಂದರ ಖಾತೆ ಬದಲಾವಣೆಗೆ ಕೇಶರಾಮ್ ಅವರಿಗೆ ಪಿಡಿಒ ಹಾಗೂ ಎಸ್​ಡಿಎ 30ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 10ಸಾವಿರ ಮುಂಗಡವಾಗಿ ಪಡೆದಿದ್ದ ಪಿಡಿಒ, ಇನ್ನುಳಿದ 20 ಸಾವಿರ ಹಣ ನೀಡುವಂತೆ ನಿವೇಶನ ಮಾಲೀಕರಿಗೆ ಒತ್ತಡ ಹಾಕಿದ್ದ, ಈ ಸಂಬಂಧ ನಿವೇಶನ ಮಾಲೀಕ ಎಸಿಬಿಗೆ ದೂರು ನೀಡಿದರು.

ದೂರು ಸ್ವೀಕರಿಸಿದ ಅಧಿಕಾರಿಗಳು, ಹಣ ನೀಡುವ ವೇಳೆ ದಾಳಿ ಮಾಡಿ ಪಿಡಿಒ ಹಾಗೂ ಎಸ್​ಡಿಎ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಮೈಸೂರು ಎಸಿಬಿ ಪೊಲೀಸ್ ಠಾಣೆಯ ಉಪಾಧೀಕ್ಷರಾದ ಪರಶುರಾಮಪ್ಪನವರ ನೇತೃತ್ವದಲ್ಲಿ ದಾಳಿ ಮಾಡಲಾಯಿತು.

ಮೈಸೂರು: ನಿವೇಶನ ಖಾತೆ ಬದಲಾವಣೆಗೆ ಹಣದ ಬೇಡಿಕೆ ಇಟ್ಟಿದ್ದ ಪಿಡಿಒ ಹಾಗೂ ಎಸ್​ಡಿಎ ಇಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಹೆಚ್‌.ಡಿ.ಕೋಟೆ ತಾಲೂಕಿನ ಮಾದಾಪುರ ಗ್ರಾ.ಪಂ ಪಿಡಿಒ ಲೋಕೇಶ್ ಮತ್ತು ಎಸ್‌ಡಿಎ ವೆಂಕಟೇಶ್ ಎಸಿಬಿ ಬಲೆಗೆ ಬಿದ್ದವರು.

ಮಾದಾಪುರ ಗ್ರಾಮದ ನಿವೇಶನವೊಂದರ ಖಾತೆ ಬದಲಾವಣೆಗೆ ಕೇಶರಾಮ್ ಅವರಿಗೆ ಪಿಡಿಒ ಹಾಗೂ ಎಸ್​ಡಿಎ 30ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 10ಸಾವಿರ ಮುಂಗಡವಾಗಿ ಪಡೆದಿದ್ದ ಪಿಡಿಒ, ಇನ್ನುಳಿದ 20 ಸಾವಿರ ಹಣ ನೀಡುವಂತೆ ನಿವೇಶನ ಮಾಲೀಕರಿಗೆ ಒತ್ತಡ ಹಾಕಿದ್ದ, ಈ ಸಂಬಂಧ ನಿವೇಶನ ಮಾಲೀಕ ಎಸಿಬಿಗೆ ದೂರು ನೀಡಿದರು.

ದೂರು ಸ್ವೀಕರಿಸಿದ ಅಧಿಕಾರಿಗಳು, ಹಣ ನೀಡುವ ವೇಳೆ ದಾಳಿ ಮಾಡಿ ಪಿಡಿಒ ಹಾಗೂ ಎಸ್​ಡಿಎ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಮೈಸೂರು ಎಸಿಬಿ ಪೊಲೀಸ್ ಠಾಣೆಯ ಉಪಾಧೀಕ್ಷರಾದ ಪರಶುರಾಮಪ್ಪನವರ ನೇತೃತ್ವದಲ್ಲಿ ದಾಳಿ ಮಾಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.