ETV Bharat / state

ಆಸ್ತಿ ವಿಚಾರಕ್ಕೆ ವೃದ್ಧನ ರಕ್ತ ಬಸಿದ ಯುವಕರು: ಬೆಚ್ಚಿಬಿದ್ದ ಗ್ರಾಮಸ್ಥರು - ರಾತ್ರಿ ಮಲಗಿರುವ ವೃದ್ಧನ ಮೇಲೆ ಅಟ್ಟಹಾಸ

ಚಾಮನಹಳ್ಳಿಯಲ್ಲಿ ವೃದ್ಧನೋರ್ವ ದನದ ಕೊಟ್ಟಿಗೆಯಲ್ಲಿ ಮಲಗಿದ್ದ ವೇಳೆ ದುಷ್ಕರ್ಮಿಗಳು ಆಸ್ತಿ ವಿಚಾರದ ಗಲಾಟೆಯಿಂದಾಗಿ ಆತನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಕೊಲೆಯಾದ ವ್ಯಕ್ತಿ
author img

By

Published : Sep 21, 2019, 1:51 PM IST

ಮೈಸೂರು: ಆಸ್ತಿ ವಿಚಾರಕ್ಕಾಗಿ ವೃದ್ಧನ ಕತ್ತು ಸೀಳಿ ಯುವಕರಿಬ್ಬರು ಕೊಲೆ ಮಾಡಿರುವ ಘಟನೆ ತಿ.ನರಸೀಪುರ ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೆಂಪೇಗೌಡ (65) ವರ್ಷದ ಚಾಮನಹಳ್ಳಿ ಗ್ರಾಮದ ನಿವಾಸಿ ಕೊಲೆಯಾಗಿರುವ ದುರ್ದೈವಿ. ಅದೇ ಗ್ರಾಮದ ಚೇತನ್ (28), ಮಧು (22) ಕೊಲೆಪಾತಕರು. ಪೊಲೀಸರು ಚೇತನ ಎಂಬಾತನನ್ನು ಹೆಡೆಮುರಿ ಕಟ್ಟಿದ್ದು, ಮತ್ತೊಬ್ಬ ಸ್ಥಳದಿಂದ ಪರಾರಿಯಾಗಿದ್ದಾನೆ.

Chethan
ಕೊಲೆಗೈದ ಚೇತನ್

ತಡರಾತ್ರಿ ವೃದ್ಧನ ಮನೆಗೆ ನುಗ್ಗಿದ ಇವರಿಬ್ಬರು ವೃದ್ಧ ಮಲಗಿರುವ ವೇಳೆಯಲ್ಲಿ ಕೊಡಲಿಯಿಂದ ತಲೆ ಕಡಿದಿದ್ದಾರೆ. ಮನೆಯ ಮುಂಭಾಗದ ಜಾಗದ ವಿಚಾರವಾಗಿ ನಡೆದಿರುವ ಬರ್ಬರ ಕೊಲೆ ಇದು. ರಾತ್ರಿ ಮಲಗಿರುವ ವೃದ್ಧನ ಮೇಲೆ ಅಟ್ಟಹಾಸ ಮೆರೆದು, ಕೊಡಲಿಯಲ್ಲಿ ತಲೆ ಕತ್ತರಿಸಿ ರುಂಡ ಹಿಡಿದು ಪಾತಕಿಗಳು ಓಡಾಡಿದ್ದಾರೆ.

ಮೃತರ ಕುಟುಂಬದವರು

ನಿತ್ಯ ವೃದ್ಧ ಮಲಗುತ್ತಿರುವ ಸ್ಥಳವನ್ನು ನೋಡಿ ತಡರಾತ್ರಿ ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ. ವೃದ್ಧನ ಬರ್ಬರ ಕೊಲೆಯಿಂದ ಬೆಚ್ಚಿಬಿದ್ದಿರುವ ಗ್ರಾಮದ ಮಹಿಳೆಯರು ಮಕ್ಕಳು ಮತ್ತು ಸಾರ್ವಜನಿಕರು, ರಾತ್ರಿ ಹೊರಗೆ ಮಲಗುವುದಕ್ಕೆ ಭಯವಾಗುತ್ತಿದೆ ಎನ್ನುತ್ತಿದ್ದಾರೆ.

ಕೃತ್ಯ ನೋಡಿ ಆಶ್ಚರ್ಯ ವ್ಯಕ್ತಪಡಿಸಿರುವ ಪೊಲೀಸರು:. ನಗರ ಪ್ರದೇಶಗಳಲ್ಲಿ ನಡೆಯುತ್ತಿದ್ದ ಬರ್ಬರ ಹತ್ಯೆಗಳನ್ನು ನೋಡುತ್ತಿದ್ದ ಪೊಲೀಸರು, ಈ ಗ್ರಾಮೀಣ ಪ್ರದೇಶದಲ್ಲಿ ನಡೆದಿರುವ ವೃದ್ಧನ ಕೊಲೆ ನೋಡಿ ಬೆಚ್ಚಿಬಿದ್ದಿದ್ದದಾರೆ. ಈ ಕುರಿತು ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು: ಆಸ್ತಿ ವಿಚಾರಕ್ಕಾಗಿ ವೃದ್ಧನ ಕತ್ತು ಸೀಳಿ ಯುವಕರಿಬ್ಬರು ಕೊಲೆ ಮಾಡಿರುವ ಘಟನೆ ತಿ.ನರಸೀಪುರ ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೆಂಪೇಗೌಡ (65) ವರ್ಷದ ಚಾಮನಹಳ್ಳಿ ಗ್ರಾಮದ ನಿವಾಸಿ ಕೊಲೆಯಾಗಿರುವ ದುರ್ದೈವಿ. ಅದೇ ಗ್ರಾಮದ ಚೇತನ್ (28), ಮಧು (22) ಕೊಲೆಪಾತಕರು. ಪೊಲೀಸರು ಚೇತನ ಎಂಬಾತನನ್ನು ಹೆಡೆಮುರಿ ಕಟ್ಟಿದ್ದು, ಮತ್ತೊಬ್ಬ ಸ್ಥಳದಿಂದ ಪರಾರಿಯಾಗಿದ್ದಾನೆ.

Chethan
ಕೊಲೆಗೈದ ಚೇತನ್

ತಡರಾತ್ರಿ ವೃದ್ಧನ ಮನೆಗೆ ನುಗ್ಗಿದ ಇವರಿಬ್ಬರು ವೃದ್ಧ ಮಲಗಿರುವ ವೇಳೆಯಲ್ಲಿ ಕೊಡಲಿಯಿಂದ ತಲೆ ಕಡಿದಿದ್ದಾರೆ. ಮನೆಯ ಮುಂಭಾಗದ ಜಾಗದ ವಿಚಾರವಾಗಿ ನಡೆದಿರುವ ಬರ್ಬರ ಕೊಲೆ ಇದು. ರಾತ್ರಿ ಮಲಗಿರುವ ವೃದ್ಧನ ಮೇಲೆ ಅಟ್ಟಹಾಸ ಮೆರೆದು, ಕೊಡಲಿಯಲ್ಲಿ ತಲೆ ಕತ್ತರಿಸಿ ರುಂಡ ಹಿಡಿದು ಪಾತಕಿಗಳು ಓಡಾಡಿದ್ದಾರೆ.

ಮೃತರ ಕುಟುಂಬದವರು

ನಿತ್ಯ ವೃದ್ಧ ಮಲಗುತ್ತಿರುವ ಸ್ಥಳವನ್ನು ನೋಡಿ ತಡರಾತ್ರಿ ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ. ವೃದ್ಧನ ಬರ್ಬರ ಕೊಲೆಯಿಂದ ಬೆಚ್ಚಿಬಿದ್ದಿರುವ ಗ್ರಾಮದ ಮಹಿಳೆಯರು ಮಕ್ಕಳು ಮತ್ತು ಸಾರ್ವಜನಿಕರು, ರಾತ್ರಿ ಹೊರಗೆ ಮಲಗುವುದಕ್ಕೆ ಭಯವಾಗುತ್ತಿದೆ ಎನ್ನುತ್ತಿದ್ದಾರೆ.

ಕೃತ್ಯ ನೋಡಿ ಆಶ್ಚರ್ಯ ವ್ಯಕ್ತಪಡಿಸಿರುವ ಪೊಲೀಸರು:. ನಗರ ಪ್ರದೇಶಗಳಲ್ಲಿ ನಡೆಯುತ್ತಿದ್ದ ಬರ್ಬರ ಹತ್ಯೆಗಳನ್ನು ನೋಡುತ್ತಿದ್ದ ಪೊಲೀಸರು, ಈ ಗ್ರಾಮೀಣ ಪ್ರದೇಶದಲ್ಲಿ ನಡೆದಿರುವ ವೃದ್ಧನ ಕೊಲೆ ನೋಡಿ ಬೆಚ್ಚಿಬಿದ್ದಿದ್ದದಾರೆ. ಈ ಕುರಿತು ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕೊಲೆBody:ಚಾಮನಹಳ್ಳಿಯಲ್ಲಿ ವೃದ್ಧನ ಕತ್ತು ಕತ್ತರಿಸಿ ಕೊಲೆ
ಮೈಸೂರು: ವೃದ್ಧನ ಕತ್ತು ಕತ್ತರಿಸಿ ಕೊಲೆ ಮಾಡಿರುವ ಘಟನೆ,
ಮೈಸೂರು ತಿ.ನರಸೀಪುರ  ತಾಲ್ಲೂಕು ಬನ್ನೂರು ಹೋಬಳಿ ಚಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಮ್ಮ ನಿವಾಸದಲ್ಲಿರುವ ದನದ ಕೊಟ್ಟಿಗೆಯಲ್ಲಿ ಮಲಗಿರುವ ತಡರಾತ್ರಿ ಆಗಮಿಸಿದ ದುಷ್ಕರ್ಮಿಗಳು ,ವೃದ್ಧನ ಕತ್ತು ಕತ್ತರಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಈ ಸಂಬಂಧ ಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ‌.Conclusion:ಕೊಲೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.