ETV Bharat / state

ಸಾಂಸ್ಕೃತಿಕ ನಗರಿಯಲ್ಲಿ ವರುಣನ ಅಬ್ಬರಾಟ: ದಸರಾ ಸಿದ್ಧತೆಗೆ ರಂಪಾಟ - ಮೈಸೂರಿನಲ್ಲಿ ದಸರಾ ಕಾಮಗಾರಿ

ಮೈಸೂರು ನಗರದಲ್ಲಿ ದಸರಾ ಹಬ್ಬದ ಸಂಭ್ರಮಕ್ಕೆ ಸಕಲ ಸಿದ್ದತೆಗಳ ಕಾರ್ಯ ಮುಂದುವರೆದಿದ್ದು, ಈ ಮಧ್ಯೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಾಡಹಬ್ಬದ ಕೆಲಸ ಕಾರ್ಯಗಳಿಗೆ ತೊಡಕನ್ನುಂಟು ಮಾಡಿದೆ.

Heavy Rain Fall in Mysore
ಮೈಸೂರಿನಲ್ಲಿ ಮಳೆಯ ಅಬ್ಬರ
author img

By

Published : Oct 8, 2020, 6:28 PM IST

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ದಸರಾ ಆಚರಣೆಯ ಸಿದ್ಧತೆ ಭರದಿಂದ ಸಾಗಿದ್ದು, ಈ ಮಧ್ಯೆ ಕಳೆದ 5 ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಹಸ್ತ ಮಳೆಯಿಂದಾಗಿ ನಗರದ ಕೆಲಸ ಕಾರ್ಯಗಳು ಸೇರಿದಂತೆ ಜನಜೀವನದ ಮೇಲೆ ಪರಿಣಾಮ ಬೀರಿದೆ.

ಮೈಸೂರಿನಲ್ಲಿ ಮಳೆಯ ಅಬ್ಬರ

ಈ ವರ್ಷ ಸರಳ ಹಾಗೂ ಸಾಂಪ್ರದಾಯಿಕ ದಸರಾ ನಡೆಸಲು ಸಿದ್ದತೆಗಳನ್ನು ಮಾಡಲಾಗುತ್ತಿದೆ, ಆದರೆ ಹಸ್ತ ಮಳೆಯ ಅಬ್ಬರ ಜೋರಾದ ಹಿನ್ನೆಲೆ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು, ಕಾಮಗಾರಿಗಳೆಲ್ಲ ಸ್ಥಗಿತಗೊಂಡಿವೆ. ದಸರಾ ಸಿದ್ಧತೆಯಲ್ಲಿ ಗುಂಡಿ ಬಿದ್ದ ರಸ್ತೆಗಳಿಗೆ ಮಣ್ಣು ಹಾಕಲಾಗಿದ್ದು, ವರುಣನ ಆರ್ಭಟಕ್ಕೆ ಮಣ್ಣು ಸಹ ಕೊಚ್ಚಿಕೊಂಡು ಹೋಗಿದೆ.

ನಾಡಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ನಗರದಲ್ಲಿನ ದೀಪಾಲಂಕಾರ ಕಾರ್ಯಕ್ಕೂ ಮಳೆರಾಯ ಅಡ್ಡಿಯುಂಟು ಮಾಡಿದೆ.

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ದಸರಾ ಆಚರಣೆಯ ಸಿದ್ಧತೆ ಭರದಿಂದ ಸಾಗಿದ್ದು, ಈ ಮಧ್ಯೆ ಕಳೆದ 5 ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಹಸ್ತ ಮಳೆಯಿಂದಾಗಿ ನಗರದ ಕೆಲಸ ಕಾರ್ಯಗಳು ಸೇರಿದಂತೆ ಜನಜೀವನದ ಮೇಲೆ ಪರಿಣಾಮ ಬೀರಿದೆ.

ಮೈಸೂರಿನಲ್ಲಿ ಮಳೆಯ ಅಬ್ಬರ

ಈ ವರ್ಷ ಸರಳ ಹಾಗೂ ಸಾಂಪ್ರದಾಯಿಕ ದಸರಾ ನಡೆಸಲು ಸಿದ್ದತೆಗಳನ್ನು ಮಾಡಲಾಗುತ್ತಿದೆ, ಆದರೆ ಹಸ್ತ ಮಳೆಯ ಅಬ್ಬರ ಜೋರಾದ ಹಿನ್ನೆಲೆ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು, ಕಾಮಗಾರಿಗಳೆಲ್ಲ ಸ್ಥಗಿತಗೊಂಡಿವೆ. ದಸರಾ ಸಿದ್ಧತೆಯಲ್ಲಿ ಗುಂಡಿ ಬಿದ್ದ ರಸ್ತೆಗಳಿಗೆ ಮಣ್ಣು ಹಾಕಲಾಗಿದ್ದು, ವರುಣನ ಆರ್ಭಟಕ್ಕೆ ಮಣ್ಣು ಸಹ ಕೊಚ್ಚಿಕೊಂಡು ಹೋಗಿದೆ.

ನಾಡಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ನಗರದಲ್ಲಿನ ದೀಪಾಲಂಕಾರ ಕಾರ್ಯಕ್ಕೂ ಮಳೆರಾಯ ಅಡ್ಡಿಯುಂಟು ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.