ETV Bharat / state

'ಸಮುದ್ರದಲ್ಲಿ ಸಣ್ಣ ಅಲೆ ಬಂದಾಗ ಸ್ನಾನ ಮಾಡಿಕೊಳ್ಳಬೇಕು; ದೊಡ್ಡ ಅಲೆ ಬಂದಾಗ ಜಾಗೃತರಾಗಿರಬೇಕು'

author img

By

Published : Jul 13, 2021, 6:34 PM IST

ಪಕ್ಷ ದೊಡ್ಡ ಸ್ಥಾನ ಅಥವಾ ಸಣ್ಣ ಸ್ಥಾನವನ್ನೇ ಕೊಡಬಹುದು. ಯಾವುದನ್ನೇ ಕೊಟ್ಟರೂ ನಿರ್ವಹಿಸುತ್ತೇನೆ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು.

ಸದಾನಂದ ಗೌಡ
ಸದಾನಂದ ಗೌಡ

ಮೈಸೂರು: ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದರು. ಅದಕ್ಕೆ ತಕ್ಷಣ ರಾಜೀನಾಮೆ ನೀಡಿದೆ. ಪಕ್ಷ ಸಂಘಟನೆ ಹಾಗೂ ಕೆಲವು ರಾಜ್ಯಗಳಲ್ಲಿ ಚುನಾವಣೆ ಇರುವುದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸದಾನಂದ ಗೌಡ ಹೇಳಿದರು.

ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆ

ಪಕ್ಷ ದೇಶದಲ್ಲಿ ದೊಡ್ಡದಾಗಿ ಬೆಳೆದಿದೆ. ಈಗ ಬೇರೆಡೆಯಿಂದ ಬಂದವರನ್ನು ಸ್ಟ್ರೀಮ್ ಲೈನ್ ಮಾಡುವ ಕೆಲಸ ನಡೆಯುತ್ತಿದೆ. ಅದರಂತೆ ನಾವು ಕೈಜೊಡಿಸಬೇಕಾಗಿದೆ. ಇದೇ ಕಾರಣಕ್ಕೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜಕೀಯ ಸಮುದ್ರ ಇದ್ದ ಹಾಗೆ. ಆ ಸಮುದ್ರದಲ್ಲಿ ಸಣ್ಣ ಅಲೆ ಬಂದಾಗ ಸ್ನಾನ ಮಾಡಿಕೊಳ್ಳಬೇಕು, ದೊಡ್ಡ ಅಲೆ ಬಂದಾಗ ಜಾಗೃತರಾಗಿರಬೇಕು. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಪಕ್ಷ ಹೇಳಿದಾಗ ನಾನು ರಾಜೀನಾಮೆ ನೀಡಿದ್ದೇನೆ ಎಂದರು.

ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ವದ ಸ್ಥಾನ ಅಥವಾ ಸಿಎಂ ಹುದ್ದೆ ನೀಡಬಹುದೇ? ಎಂದು ಕೇಳಿದಾಗ, ದೊಡ್ಡ ಅಥವಾ ಸಣ್ಣ ಸ್ಥಾನ ಕೊಡಬಹುದು. ಯಾವುದನ್ನೇ ಕೊಟ್ಟರೂ ನಾನು ನಿರ್ವಹಿಸುತ್ತೇನೆ. ಪಕ್ಷ ಹೇಳುವ ಕೆಲಸ ಮಾಡುತ್ತೇ‌ನೆ ಎಂದರು.

ಇದನ್ನೂ ಓದಿ: ದರ್ಶನ್ ಬಹಳ ಶಕ್ತಿಯುತರು, ವಿವಾದವನ್ನು ಬಗೆಹರಿಸಿಕೊಳ್ತಾರೆ: ನಿಖಿಲ್ ಕುಮಾರಸ್ವಾಮಿ

ಮೈಸೂರು: ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದರು. ಅದಕ್ಕೆ ತಕ್ಷಣ ರಾಜೀನಾಮೆ ನೀಡಿದೆ. ಪಕ್ಷ ಸಂಘಟನೆ ಹಾಗೂ ಕೆಲವು ರಾಜ್ಯಗಳಲ್ಲಿ ಚುನಾವಣೆ ಇರುವುದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸದಾನಂದ ಗೌಡ ಹೇಳಿದರು.

ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆ

ಪಕ್ಷ ದೇಶದಲ್ಲಿ ದೊಡ್ಡದಾಗಿ ಬೆಳೆದಿದೆ. ಈಗ ಬೇರೆಡೆಯಿಂದ ಬಂದವರನ್ನು ಸ್ಟ್ರೀಮ್ ಲೈನ್ ಮಾಡುವ ಕೆಲಸ ನಡೆಯುತ್ತಿದೆ. ಅದರಂತೆ ನಾವು ಕೈಜೊಡಿಸಬೇಕಾಗಿದೆ. ಇದೇ ಕಾರಣಕ್ಕೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜಕೀಯ ಸಮುದ್ರ ಇದ್ದ ಹಾಗೆ. ಆ ಸಮುದ್ರದಲ್ಲಿ ಸಣ್ಣ ಅಲೆ ಬಂದಾಗ ಸ್ನಾನ ಮಾಡಿಕೊಳ್ಳಬೇಕು, ದೊಡ್ಡ ಅಲೆ ಬಂದಾಗ ಜಾಗೃತರಾಗಿರಬೇಕು. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಪಕ್ಷ ಹೇಳಿದಾಗ ನಾನು ರಾಜೀನಾಮೆ ನೀಡಿದ್ದೇನೆ ಎಂದರು.

ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ವದ ಸ್ಥಾನ ಅಥವಾ ಸಿಎಂ ಹುದ್ದೆ ನೀಡಬಹುದೇ? ಎಂದು ಕೇಳಿದಾಗ, ದೊಡ್ಡ ಅಥವಾ ಸಣ್ಣ ಸ್ಥಾನ ಕೊಡಬಹುದು. ಯಾವುದನ್ನೇ ಕೊಟ್ಟರೂ ನಾನು ನಿರ್ವಹಿಸುತ್ತೇನೆ. ಪಕ್ಷ ಹೇಳುವ ಕೆಲಸ ಮಾಡುತ್ತೇ‌ನೆ ಎಂದರು.

ಇದನ್ನೂ ಓದಿ: ದರ್ಶನ್ ಬಹಳ ಶಕ್ತಿಯುತರು, ವಿವಾದವನ್ನು ಬಗೆಹರಿಸಿಕೊಳ್ತಾರೆ: ನಿಖಿಲ್ ಕುಮಾರಸ್ವಾಮಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.