ETV Bharat / state

ರಾಜ್ಯದಲ್ಲಿ ಒಬ್ರು ಬೆಂಕಿ ಹಚ್ತಾರೆ, ಮತ್ತೊಬ್ರು ಪೆಟ್ರೋಲ್ ಸುರೀತಾರೆ: ಹೆಚ್‌ಡಿಕೆ

author img

By

Published : Apr 21, 2022, 3:26 PM IST

ಎರಡೂ ಪಕ್ಷಗಳು ಎಲ್ಲಾ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದು, ಸಮಸ್ಯೆಯನ್ನು 5 ನಿಮಿಷಕ್ಕೆ ಬಗೆಹರಿಸಬಹುದು. ಆದರೆ, ಆ ಕೆಲಸ ಮಾಡುತ್ತಿಲ್ಲ. ಈಶ್ವರಪ್ಪನನ್ನು ಬಂಧಿಸಿ ಎಂದು ಹೇಳುತ್ತಿದ್ದಾರೆ. ಅದಕ್ಕೆ ನಾನು ವಿರೋಧಿಸುತ್ತಿಲ್ಲ. ಜೊತೆಗೆ ಈಶ್ವರಪ್ಪನವರ ಬಂಧನಕ್ಕೆ ತಕ್ಕ ಸಾಕ್ಷ್ಯಗಳಿದ್ದರೆ ಬಂಧಿಸಿ ಎಂದು ಹೆಚ್​ಡಿಕೆ ಹೇಳಿದ್ದಾರೆ.

ರಾಜ್ಯದಲ್ಲಿ ಒಬ್ಬರು ಬೆಂಕಿ ಹಚ್ಚುತ್ತಾರೆ, ಮತ್ತೊಬ್ಬರು ಪೆಟ್ರೋಲ್ ಸುರಿಯುತ್ತಾರೆ ಎಂದ ಹೆಚ್​ಡಿಕೆ ಕಿಡಿ
ರಾಜ್ಯದಲ್ಲಿ ಒಬ್ಬರು ಬೆಂಕಿ ಹಚ್ಚುತ್ತಾರೆ, ಮತ್ತೊಬ್ಬರು ಪೆಟ್ರೋಲ್ ಸುರಿಯುತ್ತಾರೆ ಎಂದ ಹೆಚ್​ಡಿಕೆ ಕಿಡಿ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಪ್ರಚೋದನಾತ್ಮಕ ಕೃತ್ಯಗಳಿಗೆ ಎರಡು ಪಕ್ಷಗಳಲ್ಲಿ ಒಬ್ಬರು ಬೆಂಕಿ ಹಚ್ಚುತ್ತಾರೆ, ಮತ್ತೊಬ್ಬರು ಪೆಟ್ರೋಲ್ ಸುರಿಯುತ್ತಾರೆ. ಈ‌ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು. ರಾಜ್ಯದಲ್ಲಿ ಆಜಾನ್ ದಂಗಲ್ ವಿಚಾರದಲ್ಲಿ ಸರ್ಕಾರ ವಿಧಾನಸೌಧದಲ್ಲಿ ಎಲ್ಲಾ ಧಾರ್ಮಿಕ ಮುಖಂಡರ ಸಭೆ ಕರೆದು ಚರ್ಚೆ ಮಾಡಿ ಸ್ಪಷ್ಟ ಸಂದೇಶವನ್ನು ಜನರಿಗೆ ನೀಡಬೇಕು. ಇದನ್ನು ಬೆಳೆಯಲು ಬಿಡಬಾರದು ಎಂದು ಸರ್ಕಾರಕ್ಕೆ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.


ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎರಡು ಪಕ್ಷಗಳು ಎಲ್ಲಾ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದು, ಸಮಸ್ಯೆಯನ್ನು 5 ನಿಮಿಷಕ್ಕೆ ಬಗೆಹರಿಸಬಹುದು. ಆದರೆ, ಆ ಕೆಲಸ ಮಾಡುತ್ತಿಲ್ಲ. ಈಶ್ವರಪ್ಪನನ್ನ ಬಂಧಿಸಿ ಎಂದು ಹೇಳುತ್ತಿದ್ದಾರೆ. ಅದಕ್ಕೆ ನಾನು ವಿರೋಧಿಸುತ್ತಿಲ್ಲ. ಜೊತೆಗೆ ಈಶ್ವರಪ್ಪನವರ ಬಂಧನಕ್ಕೆ ತಕ್ಕ ಸಾಕ್ಷ್ಯಗಳಿದ್ದರೆ ಬಂಧಿಸಿ.‌ ಆದರೆ, ಈ ಬಗ್ಗೆ ಸಂಪೂರ್ಣ ತನಿಖೆ ಮಾಡಿ ಎಂದು ಹೇಳುತ್ತಿದ್ದೇನೆ. ಈಶ್ವರಪ್ಪನವರ ಪರ ಮಾತನಾಡಲು ನಾನು ಅವರ ಲಾಯರ್ ಅಲ್ಲ ಎಂದರು.

ಇದನ್ನೂ ಓದಿ: ಕರ್ನಾಟಕದಲ್ಲೂ ಆಪ್‌ ಆಡಳಿತದ ನಡೆಸಲಿದೆ: ಕೇಜ್ರಿವಾಲ್ ವಿಶ್ವಾಸ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಪ್ರಚೋದನಾತ್ಮಕ ಕೃತ್ಯಗಳಿಗೆ ಎರಡು ಪಕ್ಷಗಳಲ್ಲಿ ಒಬ್ಬರು ಬೆಂಕಿ ಹಚ್ಚುತ್ತಾರೆ, ಮತ್ತೊಬ್ಬರು ಪೆಟ್ರೋಲ್ ಸುರಿಯುತ್ತಾರೆ. ಈ‌ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು. ರಾಜ್ಯದಲ್ಲಿ ಆಜಾನ್ ದಂಗಲ್ ವಿಚಾರದಲ್ಲಿ ಸರ್ಕಾರ ವಿಧಾನಸೌಧದಲ್ಲಿ ಎಲ್ಲಾ ಧಾರ್ಮಿಕ ಮುಖಂಡರ ಸಭೆ ಕರೆದು ಚರ್ಚೆ ಮಾಡಿ ಸ್ಪಷ್ಟ ಸಂದೇಶವನ್ನು ಜನರಿಗೆ ನೀಡಬೇಕು. ಇದನ್ನು ಬೆಳೆಯಲು ಬಿಡಬಾರದು ಎಂದು ಸರ್ಕಾರಕ್ಕೆ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.


ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎರಡು ಪಕ್ಷಗಳು ಎಲ್ಲಾ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದು, ಸಮಸ್ಯೆಯನ್ನು 5 ನಿಮಿಷಕ್ಕೆ ಬಗೆಹರಿಸಬಹುದು. ಆದರೆ, ಆ ಕೆಲಸ ಮಾಡುತ್ತಿಲ್ಲ. ಈಶ್ವರಪ್ಪನನ್ನ ಬಂಧಿಸಿ ಎಂದು ಹೇಳುತ್ತಿದ್ದಾರೆ. ಅದಕ್ಕೆ ನಾನು ವಿರೋಧಿಸುತ್ತಿಲ್ಲ. ಜೊತೆಗೆ ಈಶ್ವರಪ್ಪನವರ ಬಂಧನಕ್ಕೆ ತಕ್ಕ ಸಾಕ್ಷ್ಯಗಳಿದ್ದರೆ ಬಂಧಿಸಿ.‌ ಆದರೆ, ಈ ಬಗ್ಗೆ ಸಂಪೂರ್ಣ ತನಿಖೆ ಮಾಡಿ ಎಂದು ಹೇಳುತ್ತಿದ್ದೇನೆ. ಈಶ್ವರಪ್ಪನವರ ಪರ ಮಾತನಾಡಲು ನಾನು ಅವರ ಲಾಯರ್ ಅಲ್ಲ ಎಂದರು.

ಇದನ್ನೂ ಓದಿ: ಕರ್ನಾಟಕದಲ್ಲೂ ಆಪ್‌ ಆಡಳಿತದ ನಡೆಸಲಿದೆ: ಕೇಜ್ರಿವಾಲ್ ವಿಶ್ವಾಸ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.