ETV Bharat / state

ಇದು ದೇಶಕ್ಕೇ ಮಾದರಿ,, ದರ್ಗಾದಲ್ಲಿ ಆಶೀರ್ವಾದ ಪಡೆದ ಅಂಬಾರಿ ಹೊರುವ ಅರ್ಜುನ ಅಂಡ್ ಟೀಮ್..

author img

By

Published : Oct 7, 2019, 9:54 PM IST

ಮೈಸೂರು ನಗರದ ಹಜರತ್ ಇಮಾಂ ಷಾ ವಲಿ ದರ್ಗಾಕ್ಕೆ ಆಗಮಿಸಿದ ಅಂಬಾರಿ ಹೊರುವ ಅರ್ಜುನ ಹಾಗೂ ಇತರೆ ಆನೆಗಳು ದರ್ಗಾದ ಧರ್ಮ ಗುರುಗಳಿಂದ ಆಶೀರ್ವಾದ ಪಡೆದವು. ಅಂಬಾರಿ ಹೊರುವ ಮುನ್ನಾ ದಿನ ತೂಕ ಪರೀಕ್ಷಿಸುವ ಮುನ್ನ ದರ್ಗಾಗೆ ಭೇಟಿ ಕೊಟ್ಟು ಗುರುಗಳಿಂದ ಆಶೀರ್ವಾದ ಪಡೆದು ತೆರಳುವುದು ವಾಡಿಕೆ. ಅದರಂತೆ ಇಂದು ಸಂಜೆ ಇಲ್ಲಿಗೆ ಆಗಮಿಸಿದ ಅಂಬಾರಿ ಹೊರುವ ಅರ್ಜುನ, ಅಭಿಮನ್ಯು, ಈಶ್ವರ, ವಿಜಯ ಹಾಗೂ ಧನಂಜಯ ಆನೆಗಳು ದರ್ಗಾದಲ್ಲಿ ಆಶೀರ್ವಾದ ಪಡೆದವು.

ಮೈಸೂರು ದಸರಾ ಉತ್ಸವ

ಮೈಸೂರು: ನಗರದ ಹಜರತ್ ಇಮಾಂ ಷಾ ವಲಿ ದರ್ಗಾಕ್ಕೆ ಆಗಮಿಸಿದ ಅಂಬಾರಿ ಹೊರುವ ಅರ್ಜುನ ಹಾಗೂ ಇತರೆ ಆನೆಗಳು ದರ್ಗಾದ ಮೌಲ್ವಿಗಳಿಂದ ಆಶೀರ್ವಾದ ಪಡೆದವು. ಅಂಬಾರಿ ಹೊರುವ ಮುನ್ನಾದಿನ ತೂಕ ಪರೀಕ್ಷಿಸುವ ಮುನ್ನ ದರ್ಗಾಗೆ ಭೇಟಿ ಕೊಟ್ಟು ಇಸ್ಲಾಂ ಧರ್ಮ ಗುರುಗಳಿಂದ ಆಶೀರ್ವಾದ ಪಡೆದು ತೆರಳುವುದು ವಾಡಿಕೆ. ಅದರಂತೆ ಇಂದು ಸಂಜೆ ಇಲ್ಲಿಗೆ ಆಗಮಿಸಿದ ಅಂಬಾರಿ ಹೊರುವ ಅರ್ಜುನ, ಅಭಿಮನ್ಯು, ಈಶ್ವರ, ವಿಜಯ ಹಾಗೂ ಧನಂಜಯ ಆನೆಗಳು ದರ್ಗಾದಲ್ಲಿ ಆಶೀರ್ವಾದ ಪಡೆದವು.

ಜಂಬೂಸವಾರಿ ಮೆರವಣಿಗೆ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಹಾಗೂ ದುಷ್ಟಶಕ್ತಿ ನಿವಾರಣೆಗೆ ಪ್ರಾರ್ಥಿಸಿ ನಗರದ ಕೃಷ್ಣವಿಲಾಸ ರಸ್ತೆಯಲ್ಲಿರುವ ಇಮಾಮ್ ಷಾ ವಲಿ ದರ್ಗಾದಲ್ಲಿ ಸೋಮವಾರ ರಾತ್ರಿ ದಸರಾ ಆನೆಗಳಿಗೆ ಧರ್ಮಗುರು ನಕೀಬ್ ಪೂಜೆ ಸಲ್ಲಿಸಿದರು. ಗಜಪಡೆ ಸಾರಥಿ ಅರ್ಜುನ ಸೇರಿದಂತೆ ಆಗಮಿಸಿದ್ದ 5 ಆನೆಗಳನ್ನು ನೋಡುವ ಸಲುವಾಗಿ ನೂರಾರು ಜನ ಜಮಾಯಿಸಿದ್ದರು.

ಮೈಸೂರು ದಸರಾ ಉತ್ಸವ.. ಎಂತಹಾ ಅದ್ಭುತ, ಇದು ದೇಶಕ್ಕೇ ಮಾದರಿ..

ಆನೆಗಳಿಗೆ ಗೌರವ ಸಲ್ಲಿಸಿದ ನಂತರ ಮಾತನಾಡಿದ ಧರ್ಮಗುರುಗಳಾದ ಮೊಹ್ಮದ್ ಹಕಿಮುಲ್ಲಾ ಶಾ ಖಾದ್ರಿ, ಪ್ರಾಣಿಗಳು ಕೂಡ ಇಲ್ಲಿಗೆ ತಮ್ಮ ಭಕ್ತಿ ವ್ಯಕ್ತಪಡಿಸಲು ಬರುತ್ತವೆ. ಆ ಸಂದರ್ಭ ಅವುಗಳ ಕಣ್ಣಲ್ಲಿ ನೀರು ಬರುವುದು ಸಹಜ. ತಮ್ಮ ಕರ್ತವ್ಯ ನಿರ್ವಹಿಸಲು ಕಾಡಿನಿಂದ ನಾಡಿಗೆ ಬಂದಿದ್ದು, ವಾಡಿಕೆಯಂತೆ ದರ್ಗಾಗೆ ಬಂದು ಆಶೀರ್ವಾದ ಪಡೆದು ತೆರಳಿವೆ. ಪ್ರತಿವರ್ಷ ಬಂದು ಇಲ್ಲಿ ಆಶೀರ್ವಾದ ಪಡೆದು ತೆರಳುತ್ತಿವೆ. ಯಾವುದೇ ತೊಂದರೆ ಈವರೆಗೂ ಎದುರಾಗಿಲ್ಲ. ನಾನು ನನ್ನ ಬಾಲ್ಯಾವಸ್ಥೆಯಿಂದ ಆನೆಗಳು ಬರುವುದನ್ನು ನೋಡುತ್ತಿದ್ದೇನೆ 20 ವರ್ಷದಿಂದ ವೀಕ್ಷಿಸುತ್ತಿದ್ದೇನೆ ಎಂದರು.

ಮೈಸೂರು: ನಗರದ ಹಜರತ್ ಇಮಾಂ ಷಾ ವಲಿ ದರ್ಗಾಕ್ಕೆ ಆಗಮಿಸಿದ ಅಂಬಾರಿ ಹೊರುವ ಅರ್ಜುನ ಹಾಗೂ ಇತರೆ ಆನೆಗಳು ದರ್ಗಾದ ಮೌಲ್ವಿಗಳಿಂದ ಆಶೀರ್ವಾದ ಪಡೆದವು. ಅಂಬಾರಿ ಹೊರುವ ಮುನ್ನಾದಿನ ತೂಕ ಪರೀಕ್ಷಿಸುವ ಮುನ್ನ ದರ್ಗಾಗೆ ಭೇಟಿ ಕೊಟ್ಟು ಇಸ್ಲಾಂ ಧರ್ಮ ಗುರುಗಳಿಂದ ಆಶೀರ್ವಾದ ಪಡೆದು ತೆರಳುವುದು ವಾಡಿಕೆ. ಅದರಂತೆ ಇಂದು ಸಂಜೆ ಇಲ್ಲಿಗೆ ಆಗಮಿಸಿದ ಅಂಬಾರಿ ಹೊರುವ ಅರ್ಜುನ, ಅಭಿಮನ್ಯು, ಈಶ್ವರ, ವಿಜಯ ಹಾಗೂ ಧನಂಜಯ ಆನೆಗಳು ದರ್ಗಾದಲ್ಲಿ ಆಶೀರ್ವಾದ ಪಡೆದವು.

ಜಂಬೂಸವಾರಿ ಮೆರವಣಿಗೆ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಹಾಗೂ ದುಷ್ಟಶಕ್ತಿ ನಿವಾರಣೆಗೆ ಪ್ರಾರ್ಥಿಸಿ ನಗರದ ಕೃಷ್ಣವಿಲಾಸ ರಸ್ತೆಯಲ್ಲಿರುವ ಇಮಾಮ್ ಷಾ ವಲಿ ದರ್ಗಾದಲ್ಲಿ ಸೋಮವಾರ ರಾತ್ರಿ ದಸರಾ ಆನೆಗಳಿಗೆ ಧರ್ಮಗುರು ನಕೀಬ್ ಪೂಜೆ ಸಲ್ಲಿಸಿದರು. ಗಜಪಡೆ ಸಾರಥಿ ಅರ್ಜುನ ಸೇರಿದಂತೆ ಆಗಮಿಸಿದ್ದ 5 ಆನೆಗಳನ್ನು ನೋಡುವ ಸಲುವಾಗಿ ನೂರಾರು ಜನ ಜಮಾಯಿಸಿದ್ದರು.

ಮೈಸೂರು ದಸರಾ ಉತ್ಸವ.. ಎಂತಹಾ ಅದ್ಭುತ, ಇದು ದೇಶಕ್ಕೇ ಮಾದರಿ..

ಆನೆಗಳಿಗೆ ಗೌರವ ಸಲ್ಲಿಸಿದ ನಂತರ ಮಾತನಾಡಿದ ಧರ್ಮಗುರುಗಳಾದ ಮೊಹ್ಮದ್ ಹಕಿಮುಲ್ಲಾ ಶಾ ಖಾದ್ರಿ, ಪ್ರಾಣಿಗಳು ಕೂಡ ಇಲ್ಲಿಗೆ ತಮ್ಮ ಭಕ್ತಿ ವ್ಯಕ್ತಪಡಿಸಲು ಬರುತ್ತವೆ. ಆ ಸಂದರ್ಭ ಅವುಗಳ ಕಣ್ಣಲ್ಲಿ ನೀರು ಬರುವುದು ಸಹಜ. ತಮ್ಮ ಕರ್ತವ್ಯ ನಿರ್ವಹಿಸಲು ಕಾಡಿನಿಂದ ನಾಡಿಗೆ ಬಂದಿದ್ದು, ವಾಡಿಕೆಯಂತೆ ದರ್ಗಾಗೆ ಬಂದು ಆಶೀರ್ವಾದ ಪಡೆದು ತೆರಳಿವೆ. ಪ್ರತಿವರ್ಷ ಬಂದು ಇಲ್ಲಿ ಆಶೀರ್ವಾದ ಪಡೆದು ತೆರಳುತ್ತಿವೆ. ಯಾವುದೇ ತೊಂದರೆ ಈವರೆಗೂ ಎದುರಾಗಿಲ್ಲ. ನಾನು ನನ್ನ ಬಾಲ್ಯಾವಸ್ಥೆಯಿಂದ ಆನೆಗಳು ಬರುವುದನ್ನು ನೋಡುತ್ತಿದ್ದೇನೆ 20 ವರ್ಷದಿಂದ ವೀಕ್ಷಿಸುತ್ತಿದ್ದೇನೆ ಎಂದರು.

Intro:newsBody:ದರ್ಗಾದಲ್ಲಿ ಆಶೀರ್ವಾದ ಪಡೆದ ಅಂಬಾರಿ ಹೊರುವ ಅರ್ಜುನ ಹಾಗೂ ಇತರೆ ಆನೆಗಳು


ಮೈಸೂರು: ನಗರದ ಹಜರತ್ ಇಮಾಂ ಷಾ ವಲಿ ದರ್ಗಾಕ್ಕೆ ಆಗಮಿಸಿದ ಅಂಬಾರಿ ಹೊರುವ ಅರ್ಜುನ ಹಾಗೂ ಇತರೆ ಆನೆಗಳು ದರ್ಗಾದ ಧರ್ಮ ಗುರುಗಳಿಂದ ಆಶೀರ್ವಾದ ಪಡೆದವು.
ಅಂಬಾರಿ ಹೊರುವ ಮುನ್ನಾದಿನ ತೂಕ ಪರೀಕ್ಷಿಸುವ ಮುನ್ನ ದರ್ಗಾಗೆ ಭೇಟಿ ಕೊಟ್ಟು ಧರ್ಮ ಗುರುಗಳಿಂದ ಆಶೀರ್ವಾದ ಪಡೆದು ತೆರಳುವುದು ವಾಡಿಕೆ. ಅದೇ ರೀತಿ ಇಂದು ಸಂಜೆ ಹಜರತ್ ಇಮಾಂ ಶಾವಲಿ ದರ್ಗಾಗೆ ಆಗಮಿಸಿದ ಅಂಬಾರಿ ಹೊರುವ ಅರ್ಜುನ, ಅಭಿಮನ್ಯು, ಈಶ್ವರ, ವಿಜಯ ಹಾಗೂ ಧನಂಜಯ ಆನೆಗಳು ದರ್ಗಾದಲ್ಲಿ ಆಶೀರ್ವಾದ ಪಡೆದವು.
ಜಂಬೂಸವಾರಿ ಮೆರವಣಿಗೆ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಹಾಗೂ ದುಷ್ಟಶಕ್ತಿ ನಿವಾರಣೆಗೆ ಪ್ರಾರ್ಥಿಸಿ ನಗರದ ಕೃಷ್ಣವಿಲಾಸ ರಸ್ತೆಯಲ್ಲಿರುವ ಇಮಾಮ್ ಷಾ ವಲಿ ದರ್ಗಾದಲ್ಲಿ ಸೋಮವಾರ ರಾತ್ರಿ ದಸರಾ ಆನೆಗಳಿಗೆ ಧರ್ಮಗುರು ನಕೀಬ್ ಗಜಪಡೆಗೆ ಪೂಜೆ ಸಲ್ಲಿಸಿದರು. ಗಜಪಡೆ ಸಾರಥಿ ಅರ್ಜುನ ಸೇರಿದಂತೆ ಆಗಮಿಸಿದ್ದ 5 ಆನೆಗಳನ್ನು ನೋಡುವ ಸಲುವಾಗಿ ನೂರಾರು ಜನ ಜಮಾಯಿಸಿದ್ದರು.
ಆನೆಗಳಿಗೆ ದರ್ಗಾದಲ್ಲಿ ಗೌರವ ಸಲ್ಲಿಸಿದ ನಂತರ ಮಾತನಾಡಿದ ಧರ್ಮಗುರುಗಳಾದ ಮೊಹಮ್ಮದ್ ಹಕಿಮುಲ್ಲಾ ಶಾ ಖಾದ್ರಿ, ಪ್ರಾಣಿಗಳು ಕೂಡ ಇಲ್ಲಿಗೆ ತಮ್ಮ ಭಕ್ತಿ ವ್ಯಕ್ತಪಡಿಸಲು ಬರುತ್ತವೆ. ಆ ಸಂದರ್ಭ ಅವುಗಳ ಕಣ್ಣಲ್ಲಿ ನೀರು ಬರುವುದು ಸಹಜ. ತಮ್ಮ ಕರ್ತವ್ಯ ನಿರ್ವಹಿಸಲು ಕಾಡಿನಿಂದ ನಾಡಿಗೆ ಬಂದಿದ್ದು ವಾಡಿಕೆಯಂತೆ ದರ್ಗಾ ಗೆ ಬಂದು ಆಶೀರ್ವಾದ ಪಡೆದು ತೆರಳಿವೆ. ಪ್ರತಿವರ್ಷ ಬಂದು ಇಲ್ಲಿ ಆಶೀರ್ವಾದ ಪಡೆದು ತೆರಳುತ್ತಿವೆ. ಯಾವುದೇ ತೊಂದರೆ ಇದುವರೆಗೂ ಎದುರಾಗಿಲ್ಲ. ನಾನು ನನ್ನ ಬಾಲ್ಯವಸ್ಥೆಯ ಆನೆಗಳು ಬರುವುದನ್ನು ನೋಡುತ್ತಿದ್ದೇನೆ 20 ವರ್ಷದಿಂದ ವೀಕ್ಷಿಸುತ್ತಿದ್ದೇನೆ. ನನ್ನ ಮಾಹಿತಿಯ ಪ್ರಕಾರ 80 ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ನನ್ನ ಮುತ್ತಾತನ ಕಾಲದಿಂದಲೂ ಇದು ನಡೆಯುತ್ತಿದೆ ಎಂದು ತಿಳಿದಿದ್ದೇನೆ ಎಂದರು.





ಈ ಸುದ್ದಿಗೆ ಸಂಬಂಧಿಸಿದ ವಿಡಿಯೋವನ್ನು ಕ್ಯಾಮೆರಾ ಬ್ಯಾಕ್ ಬ್ಯಾಕ್ ಮೂಲಕ ಕಳುಹಿಸಲಾಗಿದೆ
File name: dasara elephant visit darga


Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.