ETV Bharat / state

ಪರಿಹಾರ ನೀಡಲು ನಮ್ಮ ಕೈ ಮೀರಿ ಪ್ರಯತ್ನಿಸುತ್ತೇವೆ ಎಂದ ಕೃಷಿ ಸಚಿವ ಪಾಟೀಲ್

author img

By

Published : Sep 8, 2020, 6:04 PM IST

ಎಲ್ಲರಿಗೂ ಒಂದೇ ರೀತಿಯ ಪರಿಹಾರ ನೀಡಲು ಸಾಧ್ಯವಿಲ್ಲ. ಕೊರೊನಾ ಹಿನ್ನೆಲೆ ರಾಜ್ಯ ಸರ್ಕಾರ ವಿವಿಧ ವಲಯಗಳಿಗೆ 1,610 ಕೋಟಿ ರೂ. ನೀಡಿದೆ ಎಂದರು. ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರೊತೆ ಇದೆ. ಅಗತ್ಯ ಸೇವೆಗೆ ತಕ್ಕಂತೆ ಸಿಬ್ಬಂದಿ ನೇಮಕಕ್ಕೆ ಅವಕಾಶ ನೀಡಬೇಕು ಎಂದು‌ ಮುಖ್ಯಮಂತ್ರಿ ಬಿಎಸ್​ವೈ ಗಮನಕ್ಕೆ ತರಲಾಗುವುದು..

agriculture minister b.c.patil press meet
ಕೃಷಿ ಸಚಿವ ಬಿ.ಸಿ.ಪಾಟೀಲ್

ಮೈಸೂರು : ಬೆಳೆ ನಷ್ಟ ಪರಿಹಾರ ವಿಚಾರದಲ್ಲಿ ನಮ್ಮಿಂದ ಎಷ್ಟು ಸಾಧ್ಯವೋ‌, ಅಷ್ಟು ಸಹಾಯ ಮಾಡ್ತಿದ್ದೇವೆ. ಎಷ್ಟು ಅನುದಾನ ಕೊಡಲು ಸಾಧ್ಯವೋ ಅಷ್ಟೂ ಪ್ರಯತ್ನ ಮಾಡಿದ್ದೇವೆ. ಅದಕ್ಕೂ ಮೀರಿ ಕೊಡಲು ಸಾಧ್ಯವೇ ಎಂದು ರಾಜ್ಯ ಸರ್ಕಾರ ಆರ್ಥಿಕತೆ ಅಸಹಾಯಕತೆಯನ್ನು ಕೃಷಿ ಸಚಿವ ಬಿ ಸಿ .ಪಾಟೀಲ್ ತೆರೆದಿಟ್ಟಿದ್ದಾರೆ‌.

ಕೃಷಿ ಸಚಿವ ಬಿ ಸಿ ಪಾಟೀಲ್

ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ನಡೆದ ಮೈಸೂರು ವಿಭಾಗೀಯ ಎಂಟು ಜಿಲ್ಲೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಳೆ ನಾಶ ಪರಿಹಾರಕ್ಕೆ ಸಂಬಂಧಿಸಿದಂತೆ ರೈತರಿಗೆ ರಾಜ್ಯ ಸರ್ಕಾರ ಅಗತ್ಯಕ್ಕೆ ಸಹಾಯ ಮಾಡುತ್ತಿದೆ.

ಎಲ್ಲರಿಗೂ ಒಂದೇ ರೀತಿಯ ಪರಿಹಾರ ನೀಡಲು ಸಾಧ್ಯವಿಲ್ಲ. ಕೊರೊನಾ ಹಿನ್ನೆಲೆ ರಾಜ್ಯ ಸರ್ಕಾರ ವಿವಿಧ ವಲಯಗಳಿಗೆ 1,610 ಕೋಟಿ ರೂ. ನೀಡಿದೆ ಎಂದರು. ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರೊತೆ ಇದೆ. ಅಗತ್ಯ ಸೇವೆಗೆ ತಕ್ಕಂತೆ ಸಿಬ್ಬಂದಿ ನೇಮಕಕ್ಕೆ ಅವಕಾಶ ನೀಡಬೇಕು ಎಂದು‌ ಮುಖ್ಯಮಂತ್ರಿ ಬಿಎಸ್​ವೈ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ರಸಗೊಬ್ಬರ ಅಕ್ರಮ‌ ದಾಸ್ತಾನು ಮಾಡಿದ ಆರೋಪದ ಮೇಲೆ ಬಂಧಿಸಿದವರನ್ನು ಸ್ಟೇಷನ್ ಬೇಲ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ಠಾಣೆಯಲ್ಲಿ ಸಮರ್ಪಕವಾಗಿ ಪ್ರಕರಣ ದಾಖಲಾಗಿಲ್ಲ. ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಬಳಿ ಮಾಹಿತಿ ತೆಗೆದುಕೊಳ್ಳುತ್ತೇನೆ ಎಂದರು.

ರಸಗೊಬ್ಬರ ಹಾಗೂ ಯೂರಿಯಾ ಕೃತಕ‌ ಅಭಾವ ಸೃಷ್ಟಿಸಿದ 117 ಅಂಗಡಿಗಳ ಲೈಸೆನ್ಸ್ ರದ್ದು ಮಾಡಲಾಗಿದೆ. ನಕಲಿ ರಸಗೊಬ್ಬರ ಪಡೆಯುವ ರೈತರು ಅಂಗಡಿಗಳ ಬಿಲ್ ಇಟ್ಟುಕೊಂಡಿರಬೇಕು.‌ ಬೆಳೆ ನಷ್ಟವಾದ್ರೆ ನಕಲಿ ಗೊಬ್ಬರ ಮಾರಾಟಗಾರರಿಂದ ನಷ್ಟ ಭರಿಸಲಾಗುವುದು ಎಂದರು.

ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಚಾಮರಾಜನಗರ ಜಿಲ್ಲೆಯ ಡಿಡಿ, ಜೆಡಿ, ಅರಸಿಕೆರೆ ಡಿಡಿ, ಎಡಿ, ಅಡೂರು ಎಡಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಮೈಸೂರು : ಬೆಳೆ ನಷ್ಟ ಪರಿಹಾರ ವಿಚಾರದಲ್ಲಿ ನಮ್ಮಿಂದ ಎಷ್ಟು ಸಾಧ್ಯವೋ‌, ಅಷ್ಟು ಸಹಾಯ ಮಾಡ್ತಿದ್ದೇವೆ. ಎಷ್ಟು ಅನುದಾನ ಕೊಡಲು ಸಾಧ್ಯವೋ ಅಷ್ಟೂ ಪ್ರಯತ್ನ ಮಾಡಿದ್ದೇವೆ. ಅದಕ್ಕೂ ಮೀರಿ ಕೊಡಲು ಸಾಧ್ಯವೇ ಎಂದು ರಾಜ್ಯ ಸರ್ಕಾರ ಆರ್ಥಿಕತೆ ಅಸಹಾಯಕತೆಯನ್ನು ಕೃಷಿ ಸಚಿವ ಬಿ ಸಿ .ಪಾಟೀಲ್ ತೆರೆದಿಟ್ಟಿದ್ದಾರೆ‌.

ಕೃಷಿ ಸಚಿವ ಬಿ ಸಿ ಪಾಟೀಲ್

ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ನಡೆದ ಮೈಸೂರು ವಿಭಾಗೀಯ ಎಂಟು ಜಿಲ್ಲೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಳೆ ನಾಶ ಪರಿಹಾರಕ್ಕೆ ಸಂಬಂಧಿಸಿದಂತೆ ರೈತರಿಗೆ ರಾಜ್ಯ ಸರ್ಕಾರ ಅಗತ್ಯಕ್ಕೆ ಸಹಾಯ ಮಾಡುತ್ತಿದೆ.

ಎಲ್ಲರಿಗೂ ಒಂದೇ ರೀತಿಯ ಪರಿಹಾರ ನೀಡಲು ಸಾಧ್ಯವಿಲ್ಲ. ಕೊರೊನಾ ಹಿನ್ನೆಲೆ ರಾಜ್ಯ ಸರ್ಕಾರ ವಿವಿಧ ವಲಯಗಳಿಗೆ 1,610 ಕೋಟಿ ರೂ. ನೀಡಿದೆ ಎಂದರು. ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರೊತೆ ಇದೆ. ಅಗತ್ಯ ಸೇವೆಗೆ ತಕ್ಕಂತೆ ಸಿಬ್ಬಂದಿ ನೇಮಕಕ್ಕೆ ಅವಕಾಶ ನೀಡಬೇಕು ಎಂದು‌ ಮುಖ್ಯಮಂತ್ರಿ ಬಿಎಸ್​ವೈ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ರಸಗೊಬ್ಬರ ಅಕ್ರಮ‌ ದಾಸ್ತಾನು ಮಾಡಿದ ಆರೋಪದ ಮೇಲೆ ಬಂಧಿಸಿದವರನ್ನು ಸ್ಟೇಷನ್ ಬೇಲ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ಠಾಣೆಯಲ್ಲಿ ಸಮರ್ಪಕವಾಗಿ ಪ್ರಕರಣ ದಾಖಲಾಗಿಲ್ಲ. ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಬಳಿ ಮಾಹಿತಿ ತೆಗೆದುಕೊಳ್ಳುತ್ತೇನೆ ಎಂದರು.

ರಸಗೊಬ್ಬರ ಹಾಗೂ ಯೂರಿಯಾ ಕೃತಕ‌ ಅಭಾವ ಸೃಷ್ಟಿಸಿದ 117 ಅಂಗಡಿಗಳ ಲೈಸೆನ್ಸ್ ರದ್ದು ಮಾಡಲಾಗಿದೆ. ನಕಲಿ ರಸಗೊಬ್ಬರ ಪಡೆಯುವ ರೈತರು ಅಂಗಡಿಗಳ ಬಿಲ್ ಇಟ್ಟುಕೊಂಡಿರಬೇಕು.‌ ಬೆಳೆ ನಷ್ಟವಾದ್ರೆ ನಕಲಿ ಗೊಬ್ಬರ ಮಾರಾಟಗಾರರಿಂದ ನಷ್ಟ ಭರಿಸಲಾಗುವುದು ಎಂದರು.

ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಚಾಮರಾಜನಗರ ಜಿಲ್ಲೆಯ ಡಿಡಿ, ಜೆಡಿ, ಅರಸಿಕೆರೆ ಡಿಡಿ, ಎಡಿ, ಅಡೂರು ಎಡಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.