ETV Bharat / state

ಮೇಲ್ಸೇತುವೆ ಪಿಲ್ಲರ್​​ಗೆ ಟಿಪ್ಪರ್​ ಡಿಕ್ಕಿ.. ಮದ್ದೂರಲ್ಲಿ ಚಾಲಕ ಸಜೀವ ದಹನ

author img

By

Published : Mar 17, 2022, 1:21 PM IST

Updated : Mar 17, 2022, 2:31 PM IST

ಮೇಲ್ಸೇತುವೆ ಪಿಲ್ಲರ್​​ಗೆ ಟಿಪ್ಪರ್​ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಚಾಲಕ ಸಜೀವ ದಹನವಾಗಿರುವ ಘಟನೆ ಮದ್ದೂರಿನಲ್ಲಿ ನಡೆದಿದೆ.

tipper-driver-dead-alive-in-accident-near-madduru
ಮೇಲ್ಸೇತುವೆ ಪಿಲ್ಲರ್​​ಗೆ ಟಿಪ್ಪರ್​ ಡಿಕ್ಕಿ

ಮಂಡ್ಯ: ಚಲಿಸುತ್ತಿದ್ದ ಟಿಪ್ಪರ್​​ನ ಟೈರ್ ಸ್ಫೋಟಗೊಂಡು ಮೇಲ್ಸೇತುವೆ ಪಿಲ್ಲರ್​​ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಚಾಲಕ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಮದ್ದೂರಿನ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸಂಭವಿಸಿದೆ.

ರಾಮನಗರದ ಬಿಡದಿಯಿಂದ ಮೈಸೂರಿಗೆ ಜಲ್ಲಿ ತುಂಬಿಕೊಂಡು ತೆರಳುತ್ತಿದ್ದ ಟಿಪ್ಪರ್ ಟೈರ್ ಸ್ಫೋಟಗೊಂಡು ಪಿಲ್ಲರ್​ಗೆ ಗುದ್ದಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡಿದೆ. ಡಿಕ್ಕಿ ರಭಸಕ್ಕೆ ಟಿಪ್ಪರ್ ಮುಂಭಾಗ ನಜ್ಜುಗುಜ್ಜಾಗಿದ್ದು, ಚಾಲಕ ಹೊರಬರಲಾಗದೇ ವಾಹನದಲ್ಲೇ ಸಜೀವ ದಹನವಾಗಿದ್ದಾನೆ.

ಮೇಲ್ಸೇತುವೆ ಪಿಲ್ಲರ್​​ಗೆ ಟಿಪ್ಪರ್​ ಡಿಕ್ಕಿ.. ಮದ್ದೂರಲ್ಲಿ ಚಾಲಕ ಸಜೀವ ದಹನ

ಹಾಸನ ಮೂಲದ ದಿನೇಶ್ ಮೃತ ಚಾಲಕ. ಘಟನೆ ಕಂಡ ಸ್ಥಳೀಯರು ಚಾಲಕನ ರಕ್ಷಣೆಗೆ ಮುಂದಾಗಿಲ್ಲ ಎನ್ನಲಾಗಿದ್ದು, ಬಳಿಕ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ನಂದಿಸಿ ಚಾಲಕನ ಶವ ಹೊರ ತೆಗೆದಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಕಿಲೋಮೀಟರ್​ ದೂರದವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ಪೊಲೀಸರು ಜಖಂಗೊಂಡಿದ್ದ ಟಿಪ್ಪರ್ ಪಕ್ಕಕ್ಕೆ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಘಟನೆಯಿಂದ ಮೇಲ್ಸೇತುವೆ ಪಿಲ್ಲರ್ ನಂ. 26ಕ್ಕೆ ಹಾನಿಯಾಗಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಿಜಾಬ್ ವಿಚಾರವಾಗಿ ಬಂದ್​ಗೆ ಕರೆ ಕೊಟ್ಟವರು ರಾಷ್ಟ್ರ ವಿರೋಧಿಗಳು: ಸಚಿವ ಆರ್.ಅಶೋಕ್

ಮಂಡ್ಯ: ಚಲಿಸುತ್ತಿದ್ದ ಟಿಪ್ಪರ್​​ನ ಟೈರ್ ಸ್ಫೋಟಗೊಂಡು ಮೇಲ್ಸೇತುವೆ ಪಿಲ್ಲರ್​​ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಚಾಲಕ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಮದ್ದೂರಿನ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸಂಭವಿಸಿದೆ.

ರಾಮನಗರದ ಬಿಡದಿಯಿಂದ ಮೈಸೂರಿಗೆ ಜಲ್ಲಿ ತುಂಬಿಕೊಂಡು ತೆರಳುತ್ತಿದ್ದ ಟಿಪ್ಪರ್ ಟೈರ್ ಸ್ಫೋಟಗೊಂಡು ಪಿಲ್ಲರ್​ಗೆ ಗುದ್ದಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡಿದೆ. ಡಿಕ್ಕಿ ರಭಸಕ್ಕೆ ಟಿಪ್ಪರ್ ಮುಂಭಾಗ ನಜ್ಜುಗುಜ್ಜಾಗಿದ್ದು, ಚಾಲಕ ಹೊರಬರಲಾಗದೇ ವಾಹನದಲ್ಲೇ ಸಜೀವ ದಹನವಾಗಿದ್ದಾನೆ.

ಮೇಲ್ಸೇತುವೆ ಪಿಲ್ಲರ್​​ಗೆ ಟಿಪ್ಪರ್​ ಡಿಕ್ಕಿ.. ಮದ್ದೂರಲ್ಲಿ ಚಾಲಕ ಸಜೀವ ದಹನ

ಹಾಸನ ಮೂಲದ ದಿನೇಶ್ ಮೃತ ಚಾಲಕ. ಘಟನೆ ಕಂಡ ಸ್ಥಳೀಯರು ಚಾಲಕನ ರಕ್ಷಣೆಗೆ ಮುಂದಾಗಿಲ್ಲ ಎನ್ನಲಾಗಿದ್ದು, ಬಳಿಕ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ನಂದಿಸಿ ಚಾಲಕನ ಶವ ಹೊರ ತೆಗೆದಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಕಿಲೋಮೀಟರ್​ ದೂರದವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ಪೊಲೀಸರು ಜಖಂಗೊಂಡಿದ್ದ ಟಿಪ್ಪರ್ ಪಕ್ಕಕ್ಕೆ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಘಟನೆಯಿಂದ ಮೇಲ್ಸೇತುವೆ ಪಿಲ್ಲರ್ ನಂ. 26ಕ್ಕೆ ಹಾನಿಯಾಗಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಿಜಾಬ್ ವಿಚಾರವಾಗಿ ಬಂದ್​ಗೆ ಕರೆ ಕೊಟ್ಟವರು ರಾಷ್ಟ್ರ ವಿರೋಧಿಗಳು: ಸಚಿವ ಆರ್.ಅಶೋಕ್

Last Updated : Mar 17, 2022, 2:31 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.