ETV Bharat / state

ಮನೆಯೊಳಗೆ ಸುರಂಗ ನಿರ್ಮಿಸಿ, ವೆಂಟಿಲೇಟರ್‌ ಅಳವಡಿಸಿ ಮಂಡ್ಯದಲ್ಲಿ ಭೂಗತ ವೇಶ್ಯಾವಾಟಿಕೆ!

ಶ್ರೀರಂಗಪಟ್ಟಣ ತಾಲ್ಲೂಕಿನ ನಗುವಿನಹಳ್ಳಿ-ಬ್ರಹ್ಮಪುರ ನಡುವೆ ಇರುವ ಜೋಸೆಪ್ ಎಂಬಾತನ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಸುಳಿವು ಪಡೆದ ಪೊಲೀಸರು ದಾಳಿ ನಡೆಸಿದಾಗ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

author img

By

Published : Nov 6, 2019, 6:01 PM IST

ವೇಶ್ಯಾವಾಟಿಕೆ ಅಡ್ಡೆ

ಮಂಡ್ಯ: ವೇಶ್ಯಾವಾಟಿಕೆಯ ಬಗ್ಗೆ ಸುಳಿವು ಪಡೆದು ದಾಳಿ ನಡೆಸಿದಾಗ ಪೊಲೀಸರೇ ಬೆಚ್ಚಿ ಬೀಳುವಂತಹ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

ಭೂಗತ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್​ ದಾಳಿ, ಆರೋಪಿಗಳ ಬಂಧನ

ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿ-ಬ್ರಹ್ಮಪುರ ಪ್ರದೇಶದ ನಡುವೆ ಇರುವ ಜೋಸೆಪ್ ಎಂಬಾತನ ಮನೆ ಮೇಲೆ ಪೊಲೀಸರು ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ವೇಶ್ಯಾವಾಟಿಕೆಗಾಗಿ ಮನೆಯಲ್ಲಿಯೇ ಸುರಂಗ ನಿರ್ಮಿಸಿ ಅದಕ್ಕೆ ಗಾಳಿ ಸರಾಗವಾಗಿ ಬರಲು ವೆಂಟಿಲೇಟರ್ ಅಳವಡಿಸಿ ಮಹಿಳೆಯರನ್ನು ಕೂಡಿ ಹಾಕಿದ್ದ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ.

ಬಾಬು ಎಂಬಾತ ಈ ದಂಧೆ ನಡೆಸುತ್ತಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 5 ಜನ ಪುರುಷರು 3 ಮಂದಿ ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಮಹಿಳೆಯರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ತಲುಪಿಸಲಾಗಿದೆ. ವೇಶ್ಯಾವಾಟಿಕೆ ಅಡ್ಡೆಯಲ್ಲಿದ್ದ ಮಹಿಳೆಯರು ಪಶ್ಚಿಮ ಬಂಗಾಳ ಮೂಲದವರೆಂದು ಪೊಲೀಸರು ಮಾಹಿತಿ ಒದಗಿಸಿದ್ದಾರೆ.

ವೇಶ್ಯಾವಾಟಿಕೆ ಅಡ್ಡೆಗಳು ಈ ರೀತಿ ಭೂಗತವಾಗಿಯೂ ನಡೆಯುತ್ತಿದ್ದು ಪ್ರಕರಣಗಳನ್ನು ಪತ್ತೆ ಹಚ್ಚುವುದು ಪೊಲೀಸ್ ಇಲಾಖೆಗೂ ಸವಾಲಾಗಿ ಪರಿಣಮಿಸಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು ತನಿಖೆ ತೀವ್ರಗೊಂಡಿದೆ.

ಮಂಡ್ಯ: ವೇಶ್ಯಾವಾಟಿಕೆಯ ಬಗ್ಗೆ ಸುಳಿವು ಪಡೆದು ದಾಳಿ ನಡೆಸಿದಾಗ ಪೊಲೀಸರೇ ಬೆಚ್ಚಿ ಬೀಳುವಂತಹ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

ಭೂಗತ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್​ ದಾಳಿ, ಆರೋಪಿಗಳ ಬಂಧನ

ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿ-ಬ್ರಹ್ಮಪುರ ಪ್ರದೇಶದ ನಡುವೆ ಇರುವ ಜೋಸೆಪ್ ಎಂಬಾತನ ಮನೆ ಮೇಲೆ ಪೊಲೀಸರು ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ವೇಶ್ಯಾವಾಟಿಕೆಗಾಗಿ ಮನೆಯಲ್ಲಿಯೇ ಸುರಂಗ ನಿರ್ಮಿಸಿ ಅದಕ್ಕೆ ಗಾಳಿ ಸರಾಗವಾಗಿ ಬರಲು ವೆಂಟಿಲೇಟರ್ ಅಳವಡಿಸಿ ಮಹಿಳೆಯರನ್ನು ಕೂಡಿ ಹಾಕಿದ್ದ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ.

ಬಾಬು ಎಂಬಾತ ಈ ದಂಧೆ ನಡೆಸುತ್ತಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 5 ಜನ ಪುರುಷರು 3 ಮಂದಿ ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಮಹಿಳೆಯರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ತಲುಪಿಸಲಾಗಿದೆ. ವೇಶ್ಯಾವಾಟಿಕೆ ಅಡ್ಡೆಯಲ್ಲಿದ್ದ ಮಹಿಳೆಯರು ಪಶ್ಚಿಮ ಬಂಗಾಳ ಮೂಲದವರೆಂದು ಪೊಲೀಸರು ಮಾಹಿತಿ ಒದಗಿಸಿದ್ದಾರೆ.

ವೇಶ್ಯಾವಾಟಿಕೆ ಅಡ್ಡೆಗಳು ಈ ರೀತಿ ಭೂಗತವಾಗಿಯೂ ನಡೆಯುತ್ತಿದ್ದು ಪ್ರಕರಣಗಳನ್ನು ಪತ್ತೆ ಹಚ್ಚುವುದು ಪೊಲೀಸ್ ಇಲಾಖೆಗೂ ಸವಾಲಾಗಿ ಪರಿಣಮಿಸಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು ತನಿಖೆ ತೀವ್ರಗೊಂಡಿದೆ.

Intro:ಮಂಡ್ಯ: ಉಗ್ರರ ಅಡಗುತಾಣಗಳ ಬಗ್ಗೆ ಕೇಳಿದ್ದೀರಿ. ಆದರೆ ನೋಡಿಲ್ಲ ಅಲ್ವಾ. ಇದೇ ರೀತಿಯ ಅಡಗುತಾಣಗಳಲ್ಲಿ ಜಿಲ್ಲೆಯಲ್ಲಿ ವೇಶ್ಯೇವಾಟಿಕೆ ಅಡ್ಡೆಗಳು ನಡೆಯುತ್ತಿವೆ ಅಂದರೆ ನಂಬಲೇ ಬೇಕು. ಯಾಕಂದರೆ ಪೊಲೀಸರೇ ಬೆಚ್ಚಿ ಬೀಳುವಂತಹ ವೇಶ್ಯವಾಟಿಕೆ ಅಡ್ಡೆ ಜಿಲ್ಲೆಯಲ್ಲಿ ಪತ್ತೆಯಾಗಿದೆ.
ಶ್ರೀರಂಗಪಟ್ಟಣ ತಾಲ್ಲೂಕಿನ ನಗುವಿನಹಳ್ಳಿ-ಬ್ರಹ್ಮಪುರ ನಡುವಿನ ಜೋಸೆಪ್ ಎಂಬವರ ಮನೆ ಮೇಲೆ ದಾಳಿ ಮಾಡಿದಾಗ ಅಚ್ಚರಿಯ ವಿಷ್ಯ ಬೆಳಕಿಗೆ ಬಂದಿದೆ. ವೇಷ್ಯವಾಟಿಕೆಗಾಗಿಯೇ ಮನೆಯಲ್ಲಿ ಸುರಂಗ ನಿರ್ಮಾಣ ಮಾಡಿ, ಅದಕ್ಕೆ ವೆಂಟಿಲೇಟರ್ ಹಾಕಿ ಮಹಿಳೆಯರನ್ನು ಕೂಡಿಹಾಕಿದ್ದ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ.
ಬಾಬು ಎಂಬಾತ ಈ ದಂದೆ ನಡೆಸುತ್ತಿದ್ದು, 5 ಜನ ಪುರುಷರನ್ನು ಬಂಧಿಸಿರುವ ಪೊಲೀಸರು, ಮೂವರು ಮಹಿಳೆಯರನ್ನು ವಶಕ್ಕೆ ಪಡೆದು ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಿಡಲಾಗಿದೆ. ಅಡ್ಡೆಯಲ್ಲಿದ್ದ ಮಹಿಳೆಯರು ಪಶ್ಚಿಮ ಬಂಗಾಳ ಮೂಲದವರು ಎಂದು ಹೇಳಲಾಗಿದೆ.
ವೇಶ್ಯವಾಟಿಕೆ ಅಡ್ಡೆಗಳು ಭೂಗತವಾಗಿ ನಡೆಯುತ್ತಿದ್ದು, ಪೊಲೀಸ್ ಇಲಾಖೆ ಮತ್ತಷ್ಟು ಆಳಕ್ಕೆ ಇಳಿಯಬೇಕಾಗಿದೆ. ಅದರಲ್ಲೂ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈ ದಂಧೆ ಜೋರಾಗಿಯೇ ನಡೆಯುತ್ತಿದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿದೆ.
Body:ಯತೀಶ್ ಬಾಬು, ಈಟಿವಿ ಭಾರತ್ ಮಂಡ್ಯ.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.