ETV Bharat / state

ಕೋಳಿ ಬಲಿ ನೋಡ್ತಿದ್ದಂಗೆ ದಿಢೀರ್​ ಹಾರಿ ಮರವೇರಿತು ಹುಂಜ.. ಸಾವಿನ ದವಡೆಯಿಂದ ಪಾರು!

author img

By

Published : May 10, 2022, 8:15 PM IST

Updated : May 10, 2022, 9:06 PM IST

ನಗರದ ನೂರಡಿ ರಸ್ತೆಯಲ್ಲಿ ಶ್ರೀ ಬಿಸಿಲು ಮಾರಮ್ಮ ದೇವಿಗೆ ಬಲಿ ಕೊಡಲೆಂದು ತಂದಿದ್ದ ಹುಂಜವೊಂದು ತಪ್ಪಿಸಿಕೊಂಡು ಮರವೇರಿ ಕುಳಿತು ಪ್ರಾಣವನ್ನು ಉಳಿಸಿಕೊಂಡಿದೆ. ಮಂಡ್ಯ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ಮಂಡ್ಯ: ಮಾರಮ್ಮ ಉತ್ಸವದ ವೇಳೆ ಮರ ಏರಿದ ಕೋಳಿ

ಮಂಡ್ಯ: ಶ್ರೀ ಬಿಸಿಲು ಮಾರಮ್ಮ ಉತ್ಸವದ ವೇಳೆ ದೇವಿಗೆ ಬಲಿ ಕೊಡಲು ತಂದಿದ್ದ ಹುಂಜ ಭಕ್ತರ ಕೈಯಿಂದ ತಪ್ಪಿಸಿಕೊಂಡು ಮರ ಏರಿ ಕುಳಿತಿದೆ. ನಗರದ ನೂರಡಿ ರಸ್ತೆಯಲ್ಲಿ ಶ್ರೀ ಬಿಸಿಲು ಮಾರಮ್ಮ ದೇವಾಲಯದ ಎದುರಿನ ಮರದ ಮೇಲೆ ಕುಳಿತಿದ್ದ ನಾಟಿ ಹುಂಜವನ್ನು ನೋಡಿದ ಜನತೆ ಆಶ್ಚರ್ಯಚಕಿತರಾದರು. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎಂಬಂತೆ ಆ ಕ್ಷಣದಲ್ಲಿ ಹುಂಜ ಸಾವಿನ ದವಡೆಯಿಂದ ಪಾರಾಗಿದೆ.

ಗಾಂಧಿನಗರದಲ್ಲಿ ಮಂಗಳವಾರ ಶ್ರೀ ಬಿಸಿಲು ಮಾರಮ್ಮ ಉತ್ಸವ ಆಚರಿಸಲಾಯಿತು. ಈ ವೇಳೆ ಭಕ್ತರೊಬ್ಬರು ಎರಡು ಕೋಳಿಗಳನ್ನು ದೇವಿಗೆ ಬಲಿ ನೀಡಲು ದೇವಾಲಯಕ್ಕೆ ತಂದಿದ್ದರು. ಒಂದನ್ನು ಬಲಿ ನೀಡುವಾಗ ಮತ್ತೊಂದು ತಪ್ಪಿಸಿಕೊಂಡು ಮರ ಏರಿತು. ಈ ದೃಶ್ಯವನ್ನು ಮೆರವಣಿಗೆಯಲ್ಲಿದ್ದ ಭಕ್ತರು ನೋಡಿ ಆಶ್ಚರ್ಯಚಕಿತರಾಗಿ ಹುಂಜವನ್ನು ನೋಡಲು ಆಕಾಶದತ್ತ ಮುಖ ಮಾಡಿದರು.

ಕೋಳಿ ಬಲಿ ನೋಡ್ತಿದ್ದಂಗೆ ದಿಢೀರ್​ ಹಾರಿ ಮರವೇರಿತು ಹುಂಜ

ರೆಂಬೆಯಿಂದ ರೆಂಬೆಗೆ ಜಾಗ ಬದಲಾಯಿಸಿ ಅಡ್ಡಾಡುತ್ತಿದ್ದ ಹುಂಜವನ್ನು ಇಳಿಸಲು ಕೆಲವರು ಮರ ಏರಿ ಪ್ರಯತ್ನ ಮಾಡಿದರು. ಅದನ್ನು ಉತ್ಸವದಲ್ಲಿ ಬಲಿ ಕೊಡಲು ತಂದಿದ್ದ ಭಕ್ತರು ಕೆಳಗೆ ಇಳಿಯುವುದನ್ನು ಕಾಯುತ್ತಾ ಕುಳಿತರು. ಮೂರು ತಾಸಿನ ನಂತರ ಮಳೆ ಸುರಿಯಲು ಆರಂಭವಾದರೂ ಹುಂಜ ಕೆಳಗೆ ಇಳಿಯಲಿಲ್ಲ. ಆಗ ಭಕ್ತರು ನಿರಾಸೆಯಿಂದ ಮನೆಯತ್ತ ಹೆಜ್ಜೆ ಹಾಕಿದರು. ಆದ್ರೆ ಈ ಹುಂಜ ಮತ್ತೆ ಭಕ್ತನ ಕೈ ಸೇರುವುದೇ ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಐಎಎಸ್​​ ಪೂಜಾ ಸಿಂಘಾಲ್​ ಇಡಿ ಪ್ರಕರಣ.. 16 ಬ್ಯಾಂಕ್​ ಖಾತೆಗಳಿಂದ ₹59.97 ಕೋಟಿ ವರ್ಗಾವಣೆ

ಮಂಡ್ಯ: ಶ್ರೀ ಬಿಸಿಲು ಮಾರಮ್ಮ ಉತ್ಸವದ ವೇಳೆ ದೇವಿಗೆ ಬಲಿ ಕೊಡಲು ತಂದಿದ್ದ ಹುಂಜ ಭಕ್ತರ ಕೈಯಿಂದ ತಪ್ಪಿಸಿಕೊಂಡು ಮರ ಏರಿ ಕುಳಿತಿದೆ. ನಗರದ ನೂರಡಿ ರಸ್ತೆಯಲ್ಲಿ ಶ್ರೀ ಬಿಸಿಲು ಮಾರಮ್ಮ ದೇವಾಲಯದ ಎದುರಿನ ಮರದ ಮೇಲೆ ಕುಳಿತಿದ್ದ ನಾಟಿ ಹುಂಜವನ್ನು ನೋಡಿದ ಜನತೆ ಆಶ್ಚರ್ಯಚಕಿತರಾದರು. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎಂಬಂತೆ ಆ ಕ್ಷಣದಲ್ಲಿ ಹುಂಜ ಸಾವಿನ ದವಡೆಯಿಂದ ಪಾರಾಗಿದೆ.

ಗಾಂಧಿನಗರದಲ್ಲಿ ಮಂಗಳವಾರ ಶ್ರೀ ಬಿಸಿಲು ಮಾರಮ್ಮ ಉತ್ಸವ ಆಚರಿಸಲಾಯಿತು. ಈ ವೇಳೆ ಭಕ್ತರೊಬ್ಬರು ಎರಡು ಕೋಳಿಗಳನ್ನು ದೇವಿಗೆ ಬಲಿ ನೀಡಲು ದೇವಾಲಯಕ್ಕೆ ತಂದಿದ್ದರು. ಒಂದನ್ನು ಬಲಿ ನೀಡುವಾಗ ಮತ್ತೊಂದು ತಪ್ಪಿಸಿಕೊಂಡು ಮರ ಏರಿತು. ಈ ದೃಶ್ಯವನ್ನು ಮೆರವಣಿಗೆಯಲ್ಲಿದ್ದ ಭಕ್ತರು ನೋಡಿ ಆಶ್ಚರ್ಯಚಕಿತರಾಗಿ ಹುಂಜವನ್ನು ನೋಡಲು ಆಕಾಶದತ್ತ ಮುಖ ಮಾಡಿದರು.

ಕೋಳಿ ಬಲಿ ನೋಡ್ತಿದ್ದಂಗೆ ದಿಢೀರ್​ ಹಾರಿ ಮರವೇರಿತು ಹುಂಜ

ರೆಂಬೆಯಿಂದ ರೆಂಬೆಗೆ ಜಾಗ ಬದಲಾಯಿಸಿ ಅಡ್ಡಾಡುತ್ತಿದ್ದ ಹುಂಜವನ್ನು ಇಳಿಸಲು ಕೆಲವರು ಮರ ಏರಿ ಪ್ರಯತ್ನ ಮಾಡಿದರು. ಅದನ್ನು ಉತ್ಸವದಲ್ಲಿ ಬಲಿ ಕೊಡಲು ತಂದಿದ್ದ ಭಕ್ತರು ಕೆಳಗೆ ಇಳಿಯುವುದನ್ನು ಕಾಯುತ್ತಾ ಕುಳಿತರು. ಮೂರು ತಾಸಿನ ನಂತರ ಮಳೆ ಸುರಿಯಲು ಆರಂಭವಾದರೂ ಹುಂಜ ಕೆಳಗೆ ಇಳಿಯಲಿಲ್ಲ. ಆಗ ಭಕ್ತರು ನಿರಾಸೆಯಿಂದ ಮನೆಯತ್ತ ಹೆಜ್ಜೆ ಹಾಕಿದರು. ಆದ್ರೆ ಈ ಹುಂಜ ಮತ್ತೆ ಭಕ್ತನ ಕೈ ಸೇರುವುದೇ ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಐಎಎಸ್​​ ಪೂಜಾ ಸಿಂಘಾಲ್​ ಇಡಿ ಪ್ರಕರಣ.. 16 ಬ್ಯಾಂಕ್​ ಖಾತೆಗಳಿಂದ ₹59.97 ಕೋಟಿ ವರ್ಗಾವಣೆ

Last Updated : May 10, 2022, 9:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.