ಮಂಡ್ಯ: ಮಾಜಿ ಸಚಿವ ಚೆಲುವರಾಯಸ್ವಾಮಿ ಟ್ವೀಟ್ನಲ್ಲಿ ರಾಜಕೀಯ ವಿಶ್ಲೇಷಣೆ ಮಾಡಡಿ ಗಮನ ಸೆಳೆದಿದ್ದಾರೆ. ಜಯಚಾಮರಾಜ ಒಡೆಯರ್ ಜಯಂತಿಗೆ ಶುಭ ಕೋರಿ ಮಾಡಿರುವ ಟ್ವೀಟ್ ವಿಶೇಷವಾಗಿದ್ದು, ಸದ್ಯ ಕೊಂಚಮಟ್ಟಿಗೆ ಚರ್ಚೆಗೂ ಕಾರಣವಾಗಿದೆ.
![tweet](https://etvbharatimages.akamaized.net/etvbharat/prod-images/3890799_cheluva.jpg)
"ಎಲ್ಲರೂ ಸಿಂಹಾಸನಾರೂಢರಾಗಿ ಮಹಾರಾಜರಾದರೆ ಜಯಚಾಮರಾಜ ಒಡೆಯರ್ರವರು ಅದನ್ನು ತ್ಯಜಿಸಿ ಜನರ ಹೃದಯ ಸಿಂಹಾಸನದ ಅಧಿದೇವತೆಯಾದವರು" ಎಂದು ಜಯಚಾಮರಾಜ ಒಡೆಯರ್ ಜಯಂತಿ ಕುರಿತು ಎನ್.ಚೆಲುವರಾಯಸ್ವಾಮಿ ಬರೆದುಕೊಂಡಿದ್ದಾರೆ.
ಈ ಟ್ವೀಟ್ ಸದ್ಯ ಎಲ್ಲರ ಗಮನ ಸೆಳೆದಿದ್ದು, ಶುಭಾಶಯ ಕೋರುವ ನೆಪದಲ್ಲಿ ಇಂದಿನ ರಾಜಕೀಯ ಪರಿಸ್ಥಿತಿ ಕುರಿತು ಹಾಗೂ ಸಿಎಂ ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.