ETV Bharat / state

'ಡಿಸ್ನಿಲ್ಯಾಂಡ್‌ ಯೋಜನೆಗೆ ಬೇಕಾಗುವಷ್ಟು ಹಣ ಇಲಾಖೆ ಬಳಿ ಇಲ್ಲ, ಸಹಭಾಗಿತ್ವದಿಂದ ಸಾಧ್ಯವಿದೆ' - c t ravi talk about disneyland model

ನಾವು ಪ್ರವಾಸೋದ್ಯಮ ಇಲಾಖೆಯಿಂದ ಡಿಸ್ನಿಲ್ಯಾಂಡ್‌ ಯೋಜನೆ ಹಾಕ್ಕೊಂಡಿಲ್ಲ. ಈ ಹಿಂದೆ ಭಾರಿ ನೀರಾವರಿ ಇಲಾಖೆಯಿಂದ ಮಾಡುವುದಾಗಿ ಹೇಳಿದ್ದು ಆಗ ಅದು ಪ್ಲಾನಿಂಗ್ ಸ್ಟೇಜ್‌ನಲ್ಲಿತ್ತು. ಈ ಬಗ್ಗೆ ಯೋಜನೆಯ ಕರಡು ಕೂಡಾ ಸಿದ್ಧವಾಗಿರಲಿಲ್ಲ. ಆದ್ರೆ, ಡಿಸ್ನಿ ಲ್ಯಾಂಡ್ ಹೆಸರಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸಾವಿರಾರು ಕೋಟಿ ರೂಪಾಯಿ ಹಣ ಹೂಡುವ ಸಾಮರ್ಥ್ಯವಿಲ್ಲ ಎಂದು ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದ್ರು.

c-t-ravi
ಸಿಟಿ ರವಿ
author img

By

Published : Dec 31, 2019, 8:45 PM IST

Updated : Jan 1, 2020, 12:59 PM IST

ಮಂಡ್ಯ: ಡಿಸ್ನಿ ಲ್ಯಾಂಡ್‌ ಹೆಸರಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸಾವಿರಾರು ಕೋಟಿ ರೂಪಾಯಿ ಹಣ ಹೂಡುವ ಸಾಮರ್ಥ್ಯವಿಲ್ಲ. ಉದ್ದೇಶಿತ ಯೋಜನೆಗಳಿಗೆ ಇರುವ ಬಂಡವಾಳದಲ್ಲೇ ಹೂಡಿಕೆ ಮಾಡಬೇಕಿದೆ. ದೊಡ್ಡ ಬಜೆಟ್ ಬೇಕೆಂದರೆ ಬೇರೆ ಇಲಾಖೆಯ ಸಹಭಾಗಿತ್ವ, ಬೇರೆ ಖಾಸಗಿ ವ್ಯಕ್ತಿಗಳ ಸಹಕಾರ ಬೇಕು. ಬೇರೆ ವ್ಯಕ್ತಿಗಳು ಮುಂದೆ ಬಂದರೆ ನಾವು ಹೂಡಿಕೆ ಮಾಡಲು ಯೋಚಿಸುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

ಸಚಿವ ಸಿ.ಟಿ. ರವಿ

ಡಿಸ್ನಿಲ್ಯಾಂಡ್ ಮಾದರಿ ಮನರಂಜನಾ ಪಾರ್ಕ್ ನಿರ್ಮಾಣ ಸಮ್ಮಿಶ್ರ ಸರ್ಕಾರದ ಕನಸಿನ ಕೂಸಾಗಿತ್ತು. ಅದರಲ್ಲೂ ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಡಿ.ಕೆ.ಶಿಯವರ ಕನಸು. ಸಮ್ಮಿಶ್ರ ಸರ್ಕಾರ ಬದಲಾಗುತ್ತಿದ್ದಂತೆ ಡಿಸ್ನಿಲ್ಯಾಂಡ್ ವಿಚಾರ ಮರೆತೇ ಹೋಗಿತ್ತು. ಆದರೆ ಈಗ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದೆ.

ಕೆ.ಆರ್.ಎಸ್ ನಲ್ಲಿ ಡಿಸ್ನಿಲ್ಯಾಂಡ್ ಮಾದರಿ ಮನರಂಜನಾ ಪಾರ್ಕ್ ನಿರ್ಮಾಣ ಮಾಡಲು ಕಳೆದ ಸಮ್ಮಿಶ್ರ ಸರ್ಕಾರ ನಿರ್ಧಾರ ಮಾಡಿತ್ತು. ಈ ಬಗ್ಗೆ ಬಜೆಟ್‌ನಲ್ಲಿ ಘೋಷಣೆಯೂ ಮಾಡಿತ್ತು. ಆದರೆ ಸರ್ಕಾರ ಬೀಳುತ್ತಿದ್ದಂತೆ ಆ ಯೋಜನೆಯ ಕಥೆ ಮುಗಿಯಿತು ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಈ ಯೋಜನೆ ಮಾಡಲು ಆಸಕ್ತಿ ತೋರಿಸಿದ್ದು, ಆದರೆ ಅದು ಪಿಪಿಪಿ ಮಾದರಿಯಲ್ಲಿ ಮಾಡಲು ಮುಂದಾಗಿದೆ. ಯಾರಾದರೂ ಇದರ ನಿರ್ಮಾಣದ ಒಲವು ತೋರಿದರೆ ನೋಡೋಣ ಅಂತ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

ಮಂಡ್ಯ: ಡಿಸ್ನಿ ಲ್ಯಾಂಡ್‌ ಹೆಸರಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸಾವಿರಾರು ಕೋಟಿ ರೂಪಾಯಿ ಹಣ ಹೂಡುವ ಸಾಮರ್ಥ್ಯವಿಲ್ಲ. ಉದ್ದೇಶಿತ ಯೋಜನೆಗಳಿಗೆ ಇರುವ ಬಂಡವಾಳದಲ್ಲೇ ಹೂಡಿಕೆ ಮಾಡಬೇಕಿದೆ. ದೊಡ್ಡ ಬಜೆಟ್ ಬೇಕೆಂದರೆ ಬೇರೆ ಇಲಾಖೆಯ ಸಹಭಾಗಿತ್ವ, ಬೇರೆ ಖಾಸಗಿ ವ್ಯಕ್ತಿಗಳ ಸಹಕಾರ ಬೇಕು. ಬೇರೆ ವ್ಯಕ್ತಿಗಳು ಮುಂದೆ ಬಂದರೆ ನಾವು ಹೂಡಿಕೆ ಮಾಡಲು ಯೋಚಿಸುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

ಸಚಿವ ಸಿ.ಟಿ. ರವಿ

ಡಿಸ್ನಿಲ್ಯಾಂಡ್ ಮಾದರಿ ಮನರಂಜನಾ ಪಾರ್ಕ್ ನಿರ್ಮಾಣ ಸಮ್ಮಿಶ್ರ ಸರ್ಕಾರದ ಕನಸಿನ ಕೂಸಾಗಿತ್ತು. ಅದರಲ್ಲೂ ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಡಿ.ಕೆ.ಶಿಯವರ ಕನಸು. ಸಮ್ಮಿಶ್ರ ಸರ್ಕಾರ ಬದಲಾಗುತ್ತಿದ್ದಂತೆ ಡಿಸ್ನಿಲ್ಯಾಂಡ್ ವಿಚಾರ ಮರೆತೇ ಹೋಗಿತ್ತು. ಆದರೆ ಈಗ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದೆ.

ಕೆ.ಆರ್.ಎಸ್ ನಲ್ಲಿ ಡಿಸ್ನಿಲ್ಯಾಂಡ್ ಮಾದರಿ ಮನರಂಜನಾ ಪಾರ್ಕ್ ನಿರ್ಮಾಣ ಮಾಡಲು ಕಳೆದ ಸಮ್ಮಿಶ್ರ ಸರ್ಕಾರ ನಿರ್ಧಾರ ಮಾಡಿತ್ತು. ಈ ಬಗ್ಗೆ ಬಜೆಟ್‌ನಲ್ಲಿ ಘೋಷಣೆಯೂ ಮಾಡಿತ್ತು. ಆದರೆ ಸರ್ಕಾರ ಬೀಳುತ್ತಿದ್ದಂತೆ ಆ ಯೋಜನೆಯ ಕಥೆ ಮುಗಿಯಿತು ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಈ ಯೋಜನೆ ಮಾಡಲು ಆಸಕ್ತಿ ತೋರಿಸಿದ್ದು, ಆದರೆ ಅದು ಪಿಪಿಪಿ ಮಾದರಿಯಲ್ಲಿ ಮಾಡಲು ಮುಂದಾಗಿದೆ. ಯಾರಾದರೂ ಇದರ ನಿರ್ಮಾಣದ ಒಲವು ತೋರಿದರೆ ನೋಡೋಣ ಅಂತ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

Intro:ಮಂಡ್ಯ: ಡಿಸ್ನಿಲ್ಯಾಂಡ್ ಮಾದರಿ ಮನರಂಜನಾ ಪಾರ್ಕ್ ನಿರ್ಮಾಣ ಸಮ್ಮಿಶ್ರಮ ಸರ್ಕಾರದ ಕನಸಿನ ಕೂಸಾಗಿತ್ತು. ಅದರಲ್ಲೂ ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಡಿ.ಕೆ.ಶಿಯವರ ಕನಸು. ಸಮ್ಮಿಶ್ರ ಸರ್ಕಾರ ಬದಲಾಗುತ್ತಿದ್ದಂತೆ ಡಿಸ್ನಿಲ್ಯಾಂಡ್ ವಿಚಾರ ಮರೆತೇ ಹೋಗಿತ್ತು. ಆದರೆ ಈಗ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದೆ. ಯಾರಾದರೂ ಪಿಪಿಪಿ ಮಾದರಯಲ್ಲಿ ಮುಂದೆ ಬಂದರೆ ಒಪ್ಪಿಗೆ ಕೊಡಲು ಸಿದ್ಧ ಎಂದು ಬಿಜೆಪಿ ಸರ್ಕಾರ ಹೇಳ್ತಾ ಇದೆ. ಯಾರು ಹೀಗೆ ಹೇಳಿದ್ದು, ಯಾವ ಇಲಾಖೆ ಈ ಯೋಜನೆಯನ್ನು ಕೈಗೆತ್ತಿಕೊಂಡಿತ್ತು ಅನ್ನುವುದರ ಸಂಪೂರ್ಣ ವರದಿ ಇಲ್ಲಿದೆ ನೋಡಿ.
ನಿಮಗೆ ಗೊತ್ತಿರಬೇಕು. ಕೆ.ಆರ್.ಎಸ್ ನಲ್ಲಿ ಡಿಸ್ನಿಲ್ಯಾಂಡ್ ಮಾದರಿ ಮನರಂಜನಾ ಪಾರ್ಕ್ ನಿರ್ಮಾಣ ಮಾಡಲು ಕಳೆದ ಸಮ್ಮಿಶ್ರಿ ಸರ್ಕಾರ ನಿರ್ಧಾರ ಮಾಡಿತ್ತು. ಬಜೆಟ್ ನಲ್ಲಿ ಘೋಷಣೆಯನ್ನೂ ಮಾಡಿತ್ತು. ಆದರೆ ಸರ್ಕಾರ ಬೀಳುತ್ತಿದ್ದಂತೆ ಆ ಯೋಜನೆಯ ಕಥೆ ಮುಗಿಯಿತು ಅಂದುಕೊಳ್ಳಲಾಗಿತ್ತು. ಆದರೆ ಬಿಜೆಪಿ ಸರ್ಕಾರವೂ ಯೋಜನೆ ಮಾಡಲು ಆಸಕ್ತಿ ತೋರಿದೆ. ಆದರೆ ಅದು ಪಿಪಿಪಿ ಮಾದರಿಲ್ಲಿ ಮಾಡಲು ಮುಂದಾಗಿದೆ. ಯಾರಾದರೂ ಪಿಪಿಪಿ ಮಾದರಿಗೆ ಒಲವು ತೋರಿದರೆ ನೋಡೋಣ ಅಂತ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳುವುದರ ಮೂಲಕ ಮತ್ತೊಮ್ಮೆ ಡಿಸ್ನಿಲ್ಯಾಂಡ್ ಸಸ್ಯಕ್ಕೆ ನೀರನ್ನು ಎರೆದಿದ್ದಾರೆ.
ಬೈಟ್: ಸಿ.ಟಿ. ರವಿ, ಪ್ರವಾಸೋದ್ಯಮ ಸಚಿವ.
2020ರ ಜನವರಲ್ಲಿ 2005ರಿಂದ ಇಲ್ಲಿವರೆಗೆ ಪ್ರವಾಸೋದ್ಯಮ ಸಚಿವರಾಗಿದ್ದವರ ಸಭೆಯನ್ನು ಸಿ.ಟಿ. ರವಿ ಕರೆದಿದ್ದಾರೆ. ಸಭೆಯಲ್ಲಿ ರಾಜ್ಯದ ಪ್ರವಾಸಿ ಕೇಂದ್ರಗಳ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಅವಕಾಶಗಳ ಕುರಿತು ಚರ್ಚೆ ಮಾಡಲಿದ್ದಾರೆ. ಇಲ್ಲಿ ಡಿಸ್ನಿಲ್ಯಾಂಡ್ ಮಾದರಿಯ ಮನರಂಜನಾ ಪಾರ್ಕ್ ವಿಚಾರವೂ ಪ್ರಸ್ತಾಪಕ್ಕೆ ಬರಲಿದೆ. ಈ ಹಿಂದೆ ಈ ಯೋಜನೆಯನ್ನು ಬಾರೀ ನೀರಾವರಿ ಇಲಾಖೆಯ ವತಿಯಿಂದ ಜಾರಿಗೆ ತರಲು ಯೋಜನೆ ರೂಪಿಸಲಾಗಿತ್ತು. ಹೀಗಾಗಿ ಪ್ರವಾಸೋದ್ಯಮ ಇಲಾಖೆಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ.
ಬೈಟ್: ಸಿ.ಟಿ. ರವಿ, ಪ್ರವಾಸೋದ್ಯಮ ಸಚಿವ.
ಮತ್ತೊಮ್ಮೆ ಡಿಸ್ನಿಲ್ಯಾಂಡ್ ಮಾದರಿ ಮುನ್ನೆಲೆಗೆ ಬಂದಿದೆ. ಯೋಜನೆಗೆ ಮರು ಜೀವ ಬರುವ ಸಾಧ್ಯತೆ ಇದ್ದು, ಪಿಪಿಪಿಗೆ ಒಪ್ಪುವ ಉದ್ಯಮಿಗಳು ಮುಂದೆ ಬಂದರೆ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ.
(ಮನವಿ: ಕೆ.ಆರ್.ಎಸ್ ಫೈಲ್ ವಿಡಿಯೋ ಹಾಕಿಕೊಳ್ಳಲು ಮನವಿ)
Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.Conclusion:
Last Updated : Jan 1, 2020, 12:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.