ಮಂಡ್ಯ: ಹಿರಿಯ ರಾಜಕೀಯ ಹಿರಿಯ ಮುತ್ಸದ್ಧಿ ಹಾಗೂ ಮಾಜಿ ಸಂಸದ ಜಿ. ಮಾದೇಗೌಡರ ಅಗಲಿಕೆಗೆ ಹನ್ನೊಂದು ದಿನಗಳಾಗಿವೆ. ಅಗಲಿಕೆಯ ನೋವಲ್ಲಿಯೇ ಕುಟುಂಬ ಹಾಗೂ ಅಭಿಮಾನಿಗಳು ಪುಣ್ಯತಿಥಿ ನಡೆಸಿದರು.
ಮದ್ದೂರಿನ ಹನುಮಂತ ನಗರದಲ್ಲಿ ಮಾದೇಗೌಡರ ಹಿರಿಯ ಮಗ ಪ್ರಕಾಶ್ ಅವರು ಅಗಲಿದ ತಮ್ಮ ತಂದೆ ಪುಣ್ಯತಿಥಿ ಕಾರ್ಯದ ಪೂಜೆ ಸಲ್ಲಿಸಿದರು. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪಾಲ್ಗೊಂಡು ಸಮಾಧಿಗೆ ಹಾಲು ತುಪ್ಪ ಬಿಡುವ ಮೂಲಕ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
ಮಾಜಿ ಸಚಿವ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಮಾದೇಗೌಡರ ಪುತ್ರ ಮಧು ಮಾದೇಗೌಡ, ಪ್ರದೇಶ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ, ಗುರುಚರಣ್ ಮತ್ತಿತರರು ಭಾಗವಹಿಸಿದ್ದರು.