ETV Bharat / state

ಸಚಿವರ ಬಳಿ ಚುನಾವಣಾ ವೆಚ್ಚಕ್ಕೆ ಹಣ ಕೇಳಿದ ಮಾಜಿ ಸಂಸದ: ಅದು ತನ್ನದೇ ವಾಯ್ಸ್ ಅಂದ್ರು ಮಾದೇಗೌಡ!

ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಹುಡುಗರಿಗೆ ಹಣ ಕೊಡಿ ಅಂದ್ರು ಜಿ.ಮಾದೇಗೌಡ- ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಜತೆ ಮಾತನಾಡಿರುವ ಆಡಿಯೋ ಸಂಭಾಷಣೆಯಲ್ಲಿರುವುದು ತನ್ನದೇ ಧ್ವನಿ ಎಂದು ಒಪ್ಪಿಕೊಂಡ್ರು ಕಾವೇರಿ ಹೋರಾಟಗಾರ.

author img

By

Published : Apr 7, 2019, 1:37 PM IST

ಮಾಜಿ ಸಂಸದ ಜಿ.ಮಾದೇಗೌಡ

ಮಂಡ್ಯ: ಚುನಾವಣೆ ಅಂದ್ರೆ ಹಣದ ಹೊಳೆ. ಹೀಗಾಗಿ ಹಣದ ಹಿಂದೆ ಬೀಳೋದು ಸಾಮಾನ್ಯ. ಆದರೆ ಮಾಜಿ ಸಂಸದ, ಕಾವೇರಿ ಹೋರಾಟಗಾರ ಜಿ.ಮಾದೇಗೌಡರು ಹಣ ಕೇಳ್ತಾರೆ ಅಂದ್ರೆ ನೀವು ನಂಬ್ತಿರಾ?. ನಂಬಲೇಬೇಕು.

ಹೌದು, ಜಿ. ಮಾದೇಗೌಡರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಹುಡುಗರಿಗೆ ಹಣ ಕೊಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಜೊತೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರ ಮೊಬೈಲ್‌ಗೆ ಕರೆ ಮಾಡಿಸಿ ಕಾವೇರಿ ಹೋರಾಟಗಾರ ಜಿ.ಮಾದೇಗೌಡರು ಕಾರ್ಯಕರ್ತರಿಗೆ ಹಣ ನೀಡುವಂತೆ ಕೇಳಿದ್ದಾರೆ.

ಅದು ನನ್ನದೇ ವಾಯ್ಸ್ ಎಂದ ಮಾದೇಗೌಡ

ಆಡಿಯೋ ತಮ್ಮದೆಂದು ಒಪ್ಪಿಕೊಂಡ ಮಾದೇಗೌಡ್ರು:

ಆಡಿಯೋ ವೈರಲ್ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಜಿ. ಮಾದೇಗೌಡ, ಅದು ನನ್ನದೇ ಧ್ವನಿ. ಹಣ ಕೊಡದೆ ಯಾರು ಚುನಾವಣೆ ಮಾಡ್ತಾರೆ‌ ಹೇಳಿ ಎಂದು ಪ್ರಶ್ನಿಸಿದ್ದಾರೆ. ಪ್ರಚಾರಕ್ಕೆ ಬಂದವರಿಗೆ ಹಣ ಕೊಡಿ ಅಂತ ಕೇಳಿದ್ದೀನಿ. ಕ್ಯಾನ್ವಾಸ್‌ಗೆ ಬಂದವರಿಗೆ ತಿಂಡಿ, ಊಟ ಕೊಡಿಸಬೇಕು ಅಲ್ವಾ. ಅದ್ಕೆ ನಮ್ ಸಚಿವ ಪುಟ್ಟರಾಜುಗೆ ಕೇಳ್ದೆ ತಪ್ಪೇನಿದೆ. ನಂಗೆ ಅದರಲ್ಲೇನು ತಪ್ಪು ಕಾಣಿಸ್ತಾ ಇಲ್ಲ ಎಂದು ಹಣದ ಬೇಡಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಇಂಡಿಯಾದಲ್ಲಿ ದುಡ್ಡು ಖರ್ಚು ಮಾಡದೇ ಯಾರಾದ್ರೂ ಎಲೆಕ್ಷನ್ ಮಾಡೋರು ಇದಾರಾ. ಪ್ರಧಾನಿ ಮೋದಿಯಿಂದ ಹಿಡಿದು ದುಡ್ ಖರ್ಚ್ ಮಾಡದೇ ಇರೋರು ಯಾರಾದರೂ ಇದಾರಾ ಎಂದು ಮರು ಪ್ರಶ್ನೆ ಹಾಕಿದರು ಮಾದೇಗೌಡ. ಮೊನ್ನೆ ಹುಡುಗರು ಬಂದು ನನ್ ಕೇಳ್ತಾರೆ. ನನ್ ಹತ್ರ ದುಡ್ ಇಲ್ಲ. ಕಾಫಿ ಕೊಡಿಸ್ಬೇಕು, ಊಟ ಕೂಡಿಸ್ಬೇಕು, ಎಣ್ಣೆ ಕೊಡಿಸ್ಬೇಕು ಅಂತ ಕೇಳ್ತಾರೆ. ಇದು ಕಾಮನ್ ಅಗಿದೆ. ಅದಕ್ಕೆ ನಾನ್ ಎಲ್ಲಿಂದ ತಂದ್ ಕೊಡ್ಲಿ, ನನ್ ಹತ್ರ ದುಡ್ಡಿಲ್ಲ. ಹಾಗಾಗಿ ಮಿನಿಸ್ಟರ್​ಗೆ ಕೇಳ್ದೆ ಎಂದರು. ನಾನು ಲಂಚ ಕೇಳಿಲ್ಲ. ನನ್ ಹತ್ರ ಬಂದ ಹುಡುಗರಿಗೆ ಕೇಳ್ದೆ‌. ನನ್ ಹೆಸರು ಕೆಡಿಸೋಕೆ ಇದರಲ್ಲಿ ಕೆಟ್ ಹೋದ್ರೆ ಸಂತೋಷ. ನಾನು ಹೆಸರಿಗಾಗಿ ಹೋರಾಟ ಮಾಡ್ತಾ ಇಲ್ಲ. ಸಿಎಂ ಆಗಬೇಕಾ, ಮಿನಿಸ್ಟರ್ ಆಗಬೇಕಾ. ಜನ ಬೈದರೆ ಬೈಸಿಕೊಳ್ಳಲು ನಾನು ಸಿದ್ಧ ಅಂತಾ ಬಹಿರಂಗವಾಗಿಯೇ ಹೇಳಿದ್ದು ವಿಪರ್ಯಾಸವೇ ಸರಿ.

ಮಂಡ್ಯ: ಚುನಾವಣೆ ಅಂದ್ರೆ ಹಣದ ಹೊಳೆ. ಹೀಗಾಗಿ ಹಣದ ಹಿಂದೆ ಬೀಳೋದು ಸಾಮಾನ್ಯ. ಆದರೆ ಮಾಜಿ ಸಂಸದ, ಕಾವೇರಿ ಹೋರಾಟಗಾರ ಜಿ.ಮಾದೇಗೌಡರು ಹಣ ಕೇಳ್ತಾರೆ ಅಂದ್ರೆ ನೀವು ನಂಬ್ತಿರಾ?. ನಂಬಲೇಬೇಕು.

ಹೌದು, ಜಿ. ಮಾದೇಗೌಡರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಹುಡುಗರಿಗೆ ಹಣ ಕೊಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಜೊತೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರ ಮೊಬೈಲ್‌ಗೆ ಕರೆ ಮಾಡಿಸಿ ಕಾವೇರಿ ಹೋರಾಟಗಾರ ಜಿ.ಮಾದೇಗೌಡರು ಕಾರ್ಯಕರ್ತರಿಗೆ ಹಣ ನೀಡುವಂತೆ ಕೇಳಿದ್ದಾರೆ.

ಅದು ನನ್ನದೇ ವಾಯ್ಸ್ ಎಂದ ಮಾದೇಗೌಡ

ಆಡಿಯೋ ತಮ್ಮದೆಂದು ಒಪ್ಪಿಕೊಂಡ ಮಾದೇಗೌಡ್ರು:

ಆಡಿಯೋ ವೈರಲ್ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಜಿ. ಮಾದೇಗೌಡ, ಅದು ನನ್ನದೇ ಧ್ವನಿ. ಹಣ ಕೊಡದೆ ಯಾರು ಚುನಾವಣೆ ಮಾಡ್ತಾರೆ‌ ಹೇಳಿ ಎಂದು ಪ್ರಶ್ನಿಸಿದ್ದಾರೆ. ಪ್ರಚಾರಕ್ಕೆ ಬಂದವರಿಗೆ ಹಣ ಕೊಡಿ ಅಂತ ಕೇಳಿದ್ದೀನಿ. ಕ್ಯಾನ್ವಾಸ್‌ಗೆ ಬಂದವರಿಗೆ ತಿಂಡಿ, ಊಟ ಕೊಡಿಸಬೇಕು ಅಲ್ವಾ. ಅದ್ಕೆ ನಮ್ ಸಚಿವ ಪುಟ್ಟರಾಜುಗೆ ಕೇಳ್ದೆ ತಪ್ಪೇನಿದೆ. ನಂಗೆ ಅದರಲ್ಲೇನು ತಪ್ಪು ಕಾಣಿಸ್ತಾ ಇಲ್ಲ ಎಂದು ಹಣದ ಬೇಡಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಇಂಡಿಯಾದಲ್ಲಿ ದುಡ್ಡು ಖರ್ಚು ಮಾಡದೇ ಯಾರಾದ್ರೂ ಎಲೆಕ್ಷನ್ ಮಾಡೋರು ಇದಾರಾ. ಪ್ರಧಾನಿ ಮೋದಿಯಿಂದ ಹಿಡಿದು ದುಡ್ ಖರ್ಚ್ ಮಾಡದೇ ಇರೋರು ಯಾರಾದರೂ ಇದಾರಾ ಎಂದು ಮರು ಪ್ರಶ್ನೆ ಹಾಕಿದರು ಮಾದೇಗೌಡ. ಮೊನ್ನೆ ಹುಡುಗರು ಬಂದು ನನ್ ಕೇಳ್ತಾರೆ. ನನ್ ಹತ್ರ ದುಡ್ ಇಲ್ಲ. ಕಾಫಿ ಕೊಡಿಸ್ಬೇಕು, ಊಟ ಕೂಡಿಸ್ಬೇಕು, ಎಣ್ಣೆ ಕೊಡಿಸ್ಬೇಕು ಅಂತ ಕೇಳ್ತಾರೆ. ಇದು ಕಾಮನ್ ಅಗಿದೆ. ಅದಕ್ಕೆ ನಾನ್ ಎಲ್ಲಿಂದ ತಂದ್ ಕೊಡ್ಲಿ, ನನ್ ಹತ್ರ ದುಡ್ಡಿಲ್ಲ. ಹಾಗಾಗಿ ಮಿನಿಸ್ಟರ್​ಗೆ ಕೇಳ್ದೆ ಎಂದರು. ನಾನು ಲಂಚ ಕೇಳಿಲ್ಲ. ನನ್ ಹತ್ರ ಬಂದ ಹುಡುಗರಿಗೆ ಕೇಳ್ದೆ‌. ನನ್ ಹೆಸರು ಕೆಡಿಸೋಕೆ ಇದರಲ್ಲಿ ಕೆಟ್ ಹೋದ್ರೆ ಸಂತೋಷ. ನಾನು ಹೆಸರಿಗಾಗಿ ಹೋರಾಟ ಮಾಡ್ತಾ ಇಲ್ಲ. ಸಿಎಂ ಆಗಬೇಕಾ, ಮಿನಿಸ್ಟರ್ ಆಗಬೇಕಾ. ಜನ ಬೈದರೆ ಬೈಸಿಕೊಳ್ಳಲು ನಾನು ಸಿದ್ಧ ಅಂತಾ ಬಹಿರಂಗವಾಗಿಯೇ ಹೇಳಿದ್ದು ವಿಪರ್ಯಾಸವೇ ಸರಿ.

Intro:ಮಂಡ್ಯ: ಚುನಾವಣೆ ಅಂದ್ರೆ ಹಣ ಹೊಳೆ. ಹೀಗಾಗಿ ಹಣದ ಹಿಂದೆ ಬೀಳೋದು ಸಾಮಾನ್ಯ. ಆದರೆ ಮಾಜಿ ಸಂಸದ, ಕಾವೇರಿ ಹೋರಾಟಗಾರ ಜಿ.ಮಾದೇಗೌಡರು ಹಣ ಕೇಳ್ತಾರೆ ಅಂದ್ರೆ ನೀವು ನಂಬ್ತಿರಾ, ನಂಬಲೇಬೇಕು.
ಹೌದು, ಜಿ.ಮಾದೇಗೌಡರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಹುಡುಗರಿಗೆ ಹಣ ಕೊಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಜೊತೆ ಮಾತನಾಡಿರುವ ಆಡಿಯೋ ಸಕತ್ ವೈರಲ್ ಆಗಿದೆ.
ಅವ್ರ ಆಡಿಯೋ ಸಂಭಾಷಣೆ ಇಲ್ಲಿದೆ ನೋಡಿ.
ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರ ಮೊಬೈಲ್‌ಗೆ ಕರೆ ಮಾಡಿಸುವ ಕಾವೇರಿ ಹೋರಾಟಗಾರ ಜಿ.ಮಾದೇಗೌಡ 1.50 ಸೆಕೆಂಡ್ ಮಾತುಕತೆ ನಡೆಸಿದ್ದಾರೆ. ಮಾತುಕತೆ ಸಂಪೂರ್ಣ ವಿವರ ಇಂತಿದೆ.

ಜಿ.ಮಾದೇಗೌಡ: ಪುಟ್ಟರಾಜು ಸಾಹೇಬ್ರೆ?
ಸಿ.ಎಸ್.ಪುಟ್ಟರಾಜು: ಓ ಅಪ್ಪಾಜಿ, ನಮಸ್ಕಾರ ಅಪ್ಪಾಜಿ...
ಜಿ.ಮಾದೇಗೌಡ: ಯಾಕೆ ನಮ್ಮ ಫೋನ್ ಎತ್ತುತ್ತಿಲ್ಲವಲ್ಲಾ ನೀವು?
ಸಿ.ಎಸ್.ಪುಟ್ಟರಾಜು: ಏ ಇಲ್ಲ ಇಲ್ಲ ಅಪ್ಪಾಜಿ, ರಾತ್ರೆ ಅದೆಲ್ಲೋ ಫಂಕ್ಷನ್‌ಗೆ ಸಿಗಾಕಬುಟ್ಟಿದ್ದೆ.
ಜಿ.ಮಾದೇಗೌಡ: ಹೂಂ.
ಸಿ.ಎಸ್.ಪುಟ್ಟರಾಜು: ಹತ್ತೂವರೆಗೆ ನೋಡಿದೆ, ಅಮೇಲೆ ಮಾಡೋಣ ಅಂತ ಟ್ರೈ ಮಾಡಿದೆ, ಈಗ ತಿರಗಾ ಬೆಳಗ್ಗೆಯಿಂದ ಟ್ರೈ ಮಾಡಿದೆ ಸಿಗಲಿಲ್ಲ.
ಜಿ.ಮಾದೇಗೌಡ: ಈಗ..?
ಸಿ.ಎಸ್.ಪುಟ್ಟರಾಜು: ಅಪ್ಪಾಜಿ..
ಜಿ.ಮಾದೇಗೌಡ: ಈಗ ಎಲಕ್ಷನ್ ಬತ್ತಾದೆ..
ಸಿ.ಎಸ್.ಪುಟ್ಟರಾಜು: ಅಪ್ಪಾಜಿ..
ಜಿ.ಮಾದೇಗೌಡ: ಈಗ ಜನ ದುಡ್ ಕೇಳ್ತಾರೆ ದುಡ್ಡನ್ನ..
ಸಿ.ಎಸ್.ಪುಟ್ಟರಾಜು: ಅದೆ, ಸರಿ ಅಪ್ಪಾಜಿ..
ಜಿ.ಮಾದೇಗೌಡ: ಈಗ ಮಧುಗೇಳಿದ್ದೀನಿ, ನನ್ನ ಮಗನಿಗೆ..
ಸಿ.ಎಸ್.ಪುಟ್ಟರಾಜು: ಸರಿ ಅಪ್ಪಾಜಿ..
ಜಿ.ಮಾದೇಗೌಡ: ಎಲ್ಲ ದುಡ್ ಕೇಳ್ತಾರೆ..
ಸಿ.ಎಸ್‌ಪುಟ್ಟರಾಜು: ಎಲ್ಲ ಎಲ್ಲ ಅರೆಂಜ್ ಮಾಡ್ತಿದೀನಿ ಅಪ್ಪಾಜಿ ಮಾಡ್ತಿನಿ..
ಜಿ.ಮಾದೇಗೌಡ: ಬೇಗ ಬೇಗ, ಚೀಪ್ ಮಿನಿಸ್ಟರ್‌ಗೂ ಹೇಳಿ..
ಸಿ.ಎಸ್.ಪುಟ್ಟರಾಜು: ಈಗ್ಲೆ ಹೇಳ್ತಿನಿ ಅಪ್ಪಾಜಿ..
ಜಿ.ಮಾದೇಗೌಡ: ತಮ್ಮಣ್ಣ.., ನಿಮಗೆ ಗೊತ್ತಲ್ಲ? ತಮ್ಮಣ್ಣಂದೆ ಒಂದು ಗುಂಪದೆ, ನಮ್ಮದೆ ಒಂದು ಗುಂಪದೆ.
ಸಿ.ಎಸ್.ಪುಟ್ಟರಾಜು: ಆಂ ನಾನ್ ಮಾಡಿಸ್ತಿನಿ ಅಪ್ಪಾಜಿ, ಮಾಡಿಸ್ತಿನಿ.
ಜಿ.ಮಾದೇಗೌಡ: ಅವನಾಗ್ಲೆ ದುಡ್ ಕೊಟ್ಟು ಕರ್ಕಂಡೋಯ್ತನೆ, ನಮ್ಮೊರೆಲ್ಲಾ ದುಡ್ ಕೇಳ್ತಾವ್ರೆ.
ಸಿ.ಎಸ್.ಪುಟ್ಟರಾಜು: ಮಾಡಿಸ್ತಿನಿ, ಮಾಡಿಸ್ತಿನಿ ಅಪ್ಪಾಜಿ.
ಜಿ.ಮಾದೇಗೌಡ: ನಾನು ಒಡಾಡಲು ಆಗುದಿಲ್ಲ, ನನ್ನ ಮಗನಿಗೆ ಹೇಳಿದ್ದೀನಿ, ಒಡಾಡು ಅಂತ.
ಸಿ.ಎಸ್.ಪುಟ್ಟರಾಜು: ಸರಿ ಅಪ್ಪಾಜಿ.
ಜಿ.ಮಾದೇಗೌಡ: ಅವನು ಒಡಾಡ್ತನೆ, ದುಡ್ ಕೇಳ್ತವರೆ, ಅವನಿಗೊಂದಷ್ಟು ದುಡ್ ಕೊಟ್ಬುಡು.
ಸಿ.ಎಸ್.ಪುಟ್ಟರಾಜು: ಮಾಡಿಸ್ತಿವಿ ಅಪ್ಪಾಜಿ.
ಜಿ.ಮಾದೇಗೌಡ: ದಯವಿಟ್ಟು ಸ್ವಲ್ಪ ಬೇಗ ಮಾಡಿಕೊಡಬೇಕು ದಯವಿಟ್ಟು.
ಸಿ.ಎಸ್.ಪುಟ್ಟರಾಜು: ಆಯ್ತಯ್ತು ಅಪ್ಪಾಜಿ.
ಜಿ.ಮಾದೇಗೌಡ: ಈಗ ಹೋಯ್ತವ್ನೆ, ಕ್ಯಾನ್ವಸ್‌ಗೆ ಅವನು.
ಸಿ.ಎಸ್.ಪುಟ್ಟರಾಜು: ಸರಿ ಅಪ್ಪಾಜಿ.
ಜಿ.ಮಾದೇಗೌಡ: ಅಮೇಲೆ ನೀವು ಒಂದಿಸ ಬಂದೋಗಿ..
ಸಿ.ಎಸ್.ಪುಟ್ಟರಾಜು: ನಾನ್ ಬರ್ತಿನಿ ಅಪ್ಪಾಜಿ ಬತ್ತಿನಿ. ಅರೆಂಜ್ ಮಾಡ್ತೀನಿ ಈಗ..
ಜಿ.ಮಾದೇಗೌಡ: ಒಂದ್ ಫಂಕ್ಷನ್ ಮಾಡ್ತಿವಿ ಅಲ್ಲಿ ಮದ್ದೂರಲ್ಲಿ. ದಯವಿಟ್ಟು ಬಂದ್ ಹೋಗಬೇಕು.
ಸಿ.ಎಸ್.ಪುಟ್ಟರಾಜು: ಓಕೆ ಓಕೆ ಅಪ್ಪಾಜಿ.
ಜಿ.ಮಾದೇಗೌಡ: ನೀವು ತಕ್ಷಣ ಮಾಡಿ, ಟೈಮಿಲ್ಲ. ಅದ್ಯಾರು ಹೇಳಿ, ನಾನೇ ಹೇಳ್ತಿನಿ..
ಸಿ.ಎಸ್.ಪುಟ್ಟರಾಜು: ನಾನಲ್ಲೆ, ನಾನಲ್ಲೇ, ಮಿಡ್ಲಲ್ಲೇ ಅರೆಂಜ್ ಮಾಡಿ ನಿಮಗೆ ಪೋನ್ ಮಾಡ್ತಿನಿ ಅಪ್ಪಾಜಿ ಈಗ...
ಜಿ.ಮಾದೇಗೌಡ: ಅಲ್ಲಲ್ಲಾ ಅವರು ಕೊಡ್ತರಲ್ಲಾ ದುಡ್ಡುನ್ನ ಎಲ್ರುಗುವೆ, ಅವರು ಯಾರು ಹೇಳಿ? ನಾನೇ ಹೇಳ್ತಿನಿ ಅವ್ರಗೆ.
ಸಿ.ಎಸ್.ಪುಟ್ಟರಾಜು: ನಾನೇಳ್ತಿನಿ, ನಾನು ಅರೆಂಜ್ ಮಾಡಿಸ್ತಿನಿ ಬಿಡಿ ಈಗ.
ಜಿ.ಮಾದೇಗೌಡ: ದಯವಿಟ್ಟು ನಾಳೆ, ನಾಳಿದ್ರಲ್ಲಿ ಮಾಡಪ್ಪ...
ಸಿ.ಎಸ್.ಪುಟ್ಟರಾಜು: ಆಯ್ತಪ್ಪಾಜಿ.
ಜಿ.ಮಾದೇಗೌಡ: ಪ್ಲೀಸ್ ಪ್ಲೀಸ್...

ಆಡಿಯೋ ನನ್ನದೆ ಎಂದ ಮಾದೇಗೌಡ:
ಆಡಿಯೋ ವೈರಲ್ ಬಗ್ಗೆ ಸ್ಪಷ್ಟನೆ ನೀಡಿರುವ ಮಾಜಿ ಸಂಸದ ಜಿ. ಮಾದೇಗೌಡ, ಅದು ನನ್ನದೆ, ಹಣ ಕೊಡದೆ ಯಾರು ಚುನಾವಣೆ ಮಾಡ್ತಾರೆ‌ ಹೇಳಿ ಎಂದು ಪ್ರಶ್ನೆ ಮಾಡಿದರು.
ಪ್ರಚಾರಕ್ಕೆ ಬಂದವರಿಗೆಹಣ ಕೊಡಿ ಅಂತ ಕೇಳಿದ್ದೀನಿ. ಕ್ವಾನಸ್‌ಗೆ ಬಂದವರಿಗೆ ತಿಂಡಿ, ಊಟ ಕೊಡಿಸಬೇಕು ಅಲ್ವಾ.ಅದ್ಕೆ ನಮ್ ಸಚಿವ ಪುಟ್ಟರಾಜುಗೆ ಕೇಳ್ದೆ ತಪ್ಪೇನಿದೆ. ನನ್ಗೆ ತಪ್ ಕಾಣಿಸ್ತಾ ಇಲ್ಲ ಎಂದರು.
ಇಂಡಿಯಾದಲ್ಲಿ ದುಡ್ಡು ಖರ್ಚ್ ಮಾಡದೇ ಯಾರಾದ್ರೂ ಎಲೆಕ್ಷನ್ ಮಾಡೋರು ಇದಾರಾ. ಮೋದಿ ಇಂದ ಹಿಡಿದು ದುಡ್ ಖರ್ಚ್ ಮಾಡದೇ ಇರೋರು ಯಾರಾದರೂ ಇದಾರಾ ಎಂದು ಪ್ರಶ್ನೆ ಮಾಡಿದರು.
ಮೊನ್ನೆ ಹುಡುಗರು ಬಂದು ನನ್ ಕೇಳ್ತಾರೆ.ನನ್ ಹತ್ರ ದುಡ್ ಇಲ್ಲ. ಕಾಫಿ ಕೊಡಿಸ್ಬೇಕು, ಊಟ ಕೂಡಿಸ್ಬೇಕು, ಎಣ್ಣೆ ಕೊಡಿಸ್ಬೇಕು ಅಂತ ಕೇಳ್ತಾರೆ. ಇದು ಕಾಮನ್ ಅಗಿದೆ. ಅದಕ್ಕೆ ನಾನ್ ಎಲ್ಲಿಂದ ತಂದ್ ಕೊಡ್ಲಿ, ನನ್ ಹತ್ರ ದುಡ್ಡಿಲ್ಲ. ಹಾಗಾಗಿ ಮಿನಿಸ್ಟರ್ ಕೇಳ್ದೆ ಎಂದರು.
ನಾನು ಲಂಚ ಕೇಳಿಲ್ಲ. ನನ್ ಹತ್ರ ಬಂದ ಹುಡುಗರಿಗೆ ಕೇಳ್ದೆ‌. ನನ್ ಹೆಸರು ಕೆಡಿಸೋಕೆ ಇದರಲ್ಲಿ ಕೆಟ್ ಹೋದ್ರೆ ಸಂತೋಷ. ನಾನು ಹೆಸರಿಗಾಗಿ ಹೋರಾಟ ಮಾಡ್ತಾ ಇಲ್ಲ. ಸಿಎಂ ಆಗಬೇಕಾ, ಮಿನಿಸ್ಟರ್ ಆಗಬೇಕಾ. ಜನ ಬೈದರೆ ಬೈಸಿಕೊಳ್ಳಲು ನಾನು ಸಿದ್ದ ಎಂದರು.Body:ಕೊತ್ತತ್ತಿ ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.