ETV Bharat / state

ನೀರಿನ ಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಸಾವು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

author img

By

Published : Sep 28, 2019, 5:38 PM IST

ಹೊಂಡಕ್ಕೆ ಬಿದ್ದು ಕುದರಿಮೋತಿ ಗ್ರಾಮದ ವಿಜಯಮಹಾಂತೇಶ ವಸತಿ ಶಾಲೆಯ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ.

ನೀರಿನ ಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಸಾವು

ಕೊಪ್ಪಳ: ನೀರಿನ ಹೊಂಡಕ್ಕೆ ಬಿದ್ದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ನಡೆದಿದೆ.

ನೀರಿನ ಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಸಾವು

ಕುದರಿಮೋತಿ ಗ್ರಾಮದ ವಿಜಯ ಮಹಾಂತೇಶ ವಸತಿ ಶಾಲೆಯ ವಿದ್ಯಾರ್ಥಿ ಕೋಟೇಶ್ (10) ಮೃತ ಬಾಲಕ. ಇಂದು ಅಮವಾಸ್ಯೆ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯಸ್ಥ ಪಂಪಣ್ಣ ಎಂಬುವವರಿಗೆ ಸೇರಿದ ವಾಹನವನ್ನು ತೊಳೆಯಲು ಚಾಲಕ ಆನಂದ ಎಂಬಾತ ಬಾಲಕ ಕೋಟೇಶನನ್ನು ಹೊಂಡಕ್ಕೆ ಕರೆದುಕೊಂಡು ಹೋಗಿದ್ದನಂತೆ. ಹೊಂಡದ ಬಳಿ ವಾಹನ ತೊಳೆಯುತ್ತಿರುವ ಸಂದರ್ಭದಲ್ಲಿ ಬಾಲಕ ಕೋಟೇಶ್ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಮೃತ ಬಾಲಕ ಜಿಲ್ಲೆಯ ಹಿರೇಬೀಡನಾಳ ಗ್ರಾಮದವನಾಗಿದ್ದು ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಮೃತ ಬಾಲಕನ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ಹುಡುಗರು ಆಕಸ್ಮಿಕವಾಗಿ ಹೋಗಿದ್ದಾರೆ. ಬಾಲಕನನ್ನು ಕರೆದುಕೊಂಡು ಹೋಗಬಾರದಿತ್ತು. ಈಗ ನಮ್ಮಿಂದ ತಪ್ಪಾಗಿದೆ ಎಂದು ಶಾಲೆಯ ಮುಖ್ಯಸ್ಥ ಪಂಪಣ್ಣ ಹೇಳಿದ್ದಾರೆ.

ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಕೊಪ್ಪಳ: ನೀರಿನ ಹೊಂಡಕ್ಕೆ ಬಿದ್ದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ನಡೆದಿದೆ.

ನೀರಿನ ಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಸಾವು

ಕುದರಿಮೋತಿ ಗ್ರಾಮದ ವಿಜಯ ಮಹಾಂತೇಶ ವಸತಿ ಶಾಲೆಯ ವಿದ್ಯಾರ್ಥಿ ಕೋಟೇಶ್ (10) ಮೃತ ಬಾಲಕ. ಇಂದು ಅಮವಾಸ್ಯೆ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯಸ್ಥ ಪಂಪಣ್ಣ ಎಂಬುವವರಿಗೆ ಸೇರಿದ ವಾಹನವನ್ನು ತೊಳೆಯಲು ಚಾಲಕ ಆನಂದ ಎಂಬಾತ ಬಾಲಕ ಕೋಟೇಶನನ್ನು ಹೊಂಡಕ್ಕೆ ಕರೆದುಕೊಂಡು ಹೋಗಿದ್ದನಂತೆ. ಹೊಂಡದ ಬಳಿ ವಾಹನ ತೊಳೆಯುತ್ತಿರುವ ಸಂದರ್ಭದಲ್ಲಿ ಬಾಲಕ ಕೋಟೇಶ್ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಮೃತ ಬಾಲಕ ಜಿಲ್ಲೆಯ ಹಿರೇಬೀಡನಾಳ ಗ್ರಾಮದವನಾಗಿದ್ದು ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಮೃತ ಬಾಲಕನ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ಹುಡುಗರು ಆಕಸ್ಮಿಕವಾಗಿ ಹೋಗಿದ್ದಾರೆ. ಬಾಲಕನನ್ನು ಕರೆದುಕೊಂಡು ಹೋಗಬಾರದಿತ್ತು. ಈಗ ನಮ್ಮಿಂದ ತಪ್ಪಾಗಿದೆ ಎಂದು ಶಾಲೆಯ ಮುಖ್ಯಸ್ಥ ಪಂಪಣ್ಣ ಹೇಳಿದ್ದಾರೆ.

ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Intro:Body:ಕೊಪ್ಪಳ:-ನೀರಿನ ಹೊಂಡಕ್ಕೆ ಬಿದ್ದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ನಡೆದಿದೆ. ಕುದರಿಮೋತಿ ಗ್ರಾಮದ ವಿಜಯಮಹಾಂತೇಶ ವಸತಿ ಶಾಲೆಯ ಕೋಟೇಶ್ (10) ಎಂಬ ವಿದ್ಯಾರ್ಥಿಯೇ ಸಾವನ್ನಪ್ಪಿದ ದುರ್ದೈವಿ. ಇಂದು ಅಮವಾಸ್ಯೆ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯಸ್ಥ ಪಂಪಣ್ಣ ಎಂಬುವವರಿಗೆ ಸೇರಿದ ವಾಹನವನ್ನು ತೊಳೆಯಲು ಚಾಲಕ ಆನಂದ ಎಂಬಾತ ಬಾಲಕ ಕೋಟೇಶನನ್ನು ಹೊಂಡಕ್ಕೆ ಕರದುಕೊಂಡು ಹೋಗಿದ್ನಂತೆ. ಹೊಂಡದ ಬಳಿ ವಾಹನ ತೊಳೆಯುತ್ತಿರುವ ಸಂದರ್ಭದಲ್ಲಿ ಬಾಲಕ ಕೋಟೇಶ್ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ . ಮೃತ ಬಾಲಕ ಜಿಲ್ಲೆಯ ಹಿರೇಬೀಡನಾಳ ಗ್ರಾಮದವನಾಗಿದ್ದು ಪೋಷಕರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೃತ ಬಾಲಕನ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ಹುಡುಗರು ಆಕಸ್ಮಿಕವಾಗಿ ಹೋಗಿದ್ದಾರೆ. ಬಾಲಕನನ್ನು ಕರೆದುಕೊಂಡು ಹೋಗಬಾರದಿತ್ತು. ಈಗ ನಮ್ಮಿಂದ ತಪ್ಪು ಆಗಿದೆ ಎಂದು ಶಾಲೆಯ ಮುಖ್ಯಸ್ಥ ಪಂಪಣ್ಣ
ಹೇಳಿ ಕೈತೊಳೆದುಕೊಂಡಿದ್ದಾನೆ. ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೈಟ್1:- ಪಂಪಣ್ಣ, ಶಾಲೆಯ ಮುಖ್ಯಸ್ಥ (ಬಿಳಿ ತಲೆಯ ವ್ಯಕ್ತಿ)
---------------
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.