ETV Bharat / state

ಶಾಲಾ ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆತಂದ ಪೋಷಕರು... ಕಾರಣ ಕೇಳಿ ಶಾಕ್​..! - ಕೊಪ್ಪಳ ಶಾಲಾ ಮಕ್ಕಳು ಪೊಲೀಸ್​ ಠಾಣೆಗೆ

ಕೊಪ್ಪಳ ಜಿಲ್ಲೆಯ ಈಚನಾಳ ಎಂಬ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಶಾಲಾ ಮಕ್ಕಳನ್ನು ಪೊಲೀಸ್​ ಠಾಣೆಗೆ ಕರೆತಂದ ಘಟನೆ ನಡೆದಿದೆ.

parents-brought-the-school-children
ಶಾಲಾ ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆತಂದ ಪೋಷಕರು
author img

By

Published : Jan 27, 2020, 7:39 PM IST

ಕೊಪ್ಪಳ : ಜಿಲ್ಲೆಯ ಈಚನಾಳ ಎಂಬ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಶಾಲಾ ಮಕ್ಕಳನ್ನು ಪೊಲೀಸ್​ ಠಾಣೆಗೆ ಕರೆತಂದ ಘಟನೆ ನಡೆದಿದೆ.

ನಿನ್ನೆ ಗ್ರಾಮದ ಶಾಲೆಯಲ್ಲಿ‌ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಯುವಕ ಗಂಗಾಧರ ಎಂಬುವವರನ್ನು ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನ ನೀಡಲಾಗಿತ್ತು, ಈ ಸಂದರ್ಭದಲ್ಲಿ ವೇದಿಕೆ ಮೇಲೆ ಕರೆಯುವಾಗ ಶಿಕ್ಷಣ ಪ್ರೇಮಿ ಎಂದು ಕಾರ್ಯಕ್ರಮ ಆಯೋಜಕರು ಗಂಗಾಧರ್​ ಅವರನ್ನು ಕರೆದಿದ್ದಾರೆ. ಹೀಗೆ ಕರೆದಿರುವುದಕ್ಕೆ ಒಂದು ಸಮುದಾಯದ ಜನ ಆಕ್ಷೇಪ ವ್ಯಕ್ತಪಡಿಸಿ, ಸ್ವಲ್ಪ ಗಲಾಟೆ ಕೂಡ ನಡೆಸಿದ್ದರು ಎನ್ನಲಾಗಿದೆ.

ಶಾಲಾ ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆತಂದ ಪೋಷಕರು

ಕಾರ್ಯಕ್ರಮ ಮುಗಿದ ಬಳಿಕ ಜನರು, ಗಂಗಾಧರ ಅವರ ಮನೆಗೆ ಹೋಗಿ ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ಥಳಿತಕ್ಕೊಳಗಾದ ಗಂಗಾಧರ್​ ಆಸ್ಪತ್ರೆಗೆ ತೆರಳಿ, ನಂತರ ಹಲ್ಲೆ ಮಾಡಿದವರ ವಿರುದ್ಧ ದೂರು ನೀಡಲು ಕನಕಗಿರಿ ಠಾಣೆಗೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ದೂರು ನೀಡಲು ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಸಹ ಶಾಲಾ ಉಡುಪಿನಲ್ಲಿಯೇ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

ಕೊಪ್ಪಳ : ಜಿಲ್ಲೆಯ ಈಚನಾಳ ಎಂಬ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಶಾಲಾ ಮಕ್ಕಳನ್ನು ಪೊಲೀಸ್​ ಠಾಣೆಗೆ ಕರೆತಂದ ಘಟನೆ ನಡೆದಿದೆ.

ನಿನ್ನೆ ಗ್ರಾಮದ ಶಾಲೆಯಲ್ಲಿ‌ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಯುವಕ ಗಂಗಾಧರ ಎಂಬುವವರನ್ನು ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನ ನೀಡಲಾಗಿತ್ತು, ಈ ಸಂದರ್ಭದಲ್ಲಿ ವೇದಿಕೆ ಮೇಲೆ ಕರೆಯುವಾಗ ಶಿಕ್ಷಣ ಪ್ರೇಮಿ ಎಂದು ಕಾರ್ಯಕ್ರಮ ಆಯೋಜಕರು ಗಂಗಾಧರ್​ ಅವರನ್ನು ಕರೆದಿದ್ದಾರೆ. ಹೀಗೆ ಕರೆದಿರುವುದಕ್ಕೆ ಒಂದು ಸಮುದಾಯದ ಜನ ಆಕ್ಷೇಪ ವ್ಯಕ್ತಪಡಿಸಿ, ಸ್ವಲ್ಪ ಗಲಾಟೆ ಕೂಡ ನಡೆಸಿದ್ದರು ಎನ್ನಲಾಗಿದೆ.

ಶಾಲಾ ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆತಂದ ಪೋಷಕರು

ಕಾರ್ಯಕ್ರಮ ಮುಗಿದ ಬಳಿಕ ಜನರು, ಗಂಗಾಧರ ಅವರ ಮನೆಗೆ ಹೋಗಿ ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ಥಳಿತಕ್ಕೊಳಗಾದ ಗಂಗಾಧರ್​ ಆಸ್ಪತ್ರೆಗೆ ತೆರಳಿ, ನಂತರ ಹಲ್ಲೆ ಮಾಡಿದವರ ವಿರುದ್ಧ ದೂರು ನೀಡಲು ಕನಕಗಿರಿ ಠಾಣೆಗೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ದೂರು ನೀಡಲು ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಸಹ ಶಾಲಾ ಉಡುಪಿನಲ್ಲಿಯೇ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

Intro:Body:ಕೊಪ್ಪಳ:- ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳದ ಹಿನ್ನೆಲೆಯಲ್ಲಿ ಶಾಲಾ‌‌ಮಕ್ಕಳನ್ನು ಪೋಷಕರು ಪೊಲೀಸ್ ಠಾಣೆಗೆ ಕರೆತಂದ‌ ಘಟನೆ ನಡೆದಿದೆ. ಜಿಲ್ಲೆಯ ಕನಕಗಿರಿ ಪೊಲೀಸ್ ಠಾಣೆಗೆ ಮಕ್ಕಳನ್ನು‌ ಕರೆತರಲಾಗಿದ್ದು ಈಚನಾಳ ಗ್ರಾಮದ ಸಮುದಾಯವೊಂದರ‌ ಜನರು ತಮ್ಮ‌ ಮಕ್ಕಳನ್ನು ಕನಕಗಿರಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ನಿನ್ನೆ ಈಚನಾಳ ಗ್ರಾಮದ ಶಾಲೆಯಲ್ಲಿ‌ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಯುವಕ ಗಂಗಾಧರ ಎಂಬುವವರನ್ನು ಶಿಕ್ಷಣ ಪ್ರೇಮಿ ಎಂದು ಹೇಳಿದ್ದಕ್ಕೆ ಸಮುದಾಯ ಒಂದರ ಜನರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಸ್ವಲ್ಪ ಗಲಾಟೆಯೂ ನಡೆದಿದೆ. ಬಳಿಕ ಆ ಯುವಕನ ಮನೆಗೆ ಹೋದ ಸಮುದಾಯವೊಂದರ ಜನರು ಯುವಕ ಗಂಗಾಧರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ಥಳಿತಕ್ಕೊಳಗಾದ ಯುವಕ ಗಂಗಾಧರ ಹಲ್ಲೆ ಮಾಡಿದ ಆ ಸಮುದಾದಯ ಜನರ ವಿರುದ್ಧ ದೂರು ನೀಡಲು ಕನಕಗಿರಿ ಠಾಣೆಗೆ ಬಂದ ಹಿನ್ನೆಲೆಯಲ್ಲಿ ಪ್ರತಿ ದೂರು ನೀಡಲು ಆ ಸಮುದಾಯದ ಜನರು ತಮ್ಮ ಮಕ್ಕಳನ್ನು ಶಾಲಾ ದಿರಿಸಿನಲ್ಲಿಯೇ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ.‌ ‌ಕನಕಗಿರಿ ಪೊಲೀಸ್ ಠಾಣೆ ಮುಂದೆ ಆ ವಿದ್ಯಾರ್ಥಿಗಳು ಕಾದು ಕುಳಿತಿದ್ದಾರೆ‌.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.