ETV Bharat / state

ಗಂಗಾವತಿ ನಗರದ ಮುಖ್ಯರಸ್ತೆಗಳ ಜಾಗ ಒತ್ತುವರಿ: ಶಾಸಕ ಜಿ. ಜನಾರ್ದನ ರೆಡ್ಡಿ

ಗಂಗಾವತಿ ನಗರದ ಮುಖ್ಯರಸ್ತೆಗಳ ಜಾಗ ಒತ್ತುವರಿಯಾಗಿದೆ ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ತಿಳಿಸಿದರು.

author img

By

Published : Jun 26, 2023, 4:02 PM IST

Updated : Jun 26, 2023, 4:18 PM IST

Janardhana Reddy city rounds
ಬೆಳಕಿಗೆ ಬಂದ ಗಂಗಾವತಿ ಮುಖ್ಯರಸ್ತೆಗಳಲ್ಲಿ 30 ಅಡಿ ಒತ್ತುವರಿ: ಜನಾರ್ದನ ರೆಡ್ಡಿ ಸಿಟಿ ರೌಂಡ್ಸ್
ಗಂಗಾವತಿಯಲ್ಲಿ ಕೆಆರ್​ಡಿಸಿಎಲ್​ನಿಂದ ಕೈಗೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಜಿ. ಜನಾರ್ದನ ರೆಡ್ಡಿ ವೀಕ್ಷಿಸಿದರು.

ಗಂಗಾವತಿ (ಕೊಪ್ಪಳ): ''ನಗರದ ಮುಖ್ಯರಸ್ತೆಗಳು ಮೊದಲು 80 ಅಡಿಗಳಷ್ಟು ಅಗಲ ಇದ್ದವು. ಆದರೆ, ಈಗ 30ರಿಂದ 40 ಅಡಿಗಳಷ್ಟು ರಸ್ತೆಗಳನ್ನು ಒತ್ತುವರಿ ಮಾಡಲಾಗಿದೆ. ವಾಹನಗಳ ಸುಗಮ ಸಂಚಾರಕ್ಕೆ ತೆರವು ಕಾರ್ಯಾಚರಣೆ ನಡೆಸಲಾಗುವುದು'' ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ನಗರದ ರಾಣಾ ಪ್ರತಾಪ್​ ಸಿಂಗ್ ವೃತ್ತದಿಂದ ಸಿಬಿಎಸ್ ವೃತ್ತದ ಮಾರ್ಗವಾಗಿ ರೈಲ್ವೆ ಗೇಟ್ ಬಳಿಯಿರುವ ಸ್ವಾಗತ ಕಮಾನಿನವರೆಗೂ ಕೆಆರ್​ಡಿಸಿಎಲ್​ನಿಂದ ಕೈಗೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.

''ರಾಣಾ ಪ್ರತಾಪ್​ ಸಿಂಗ್ ವೃತ್ತದಿಂದ ಇಂದಿರಾ ಗಾಂಧಿ ವೃತ್ತದ ಮೂಲಕ ಗಾಂಧಿ ವೃತ್ತದವರೆಗೆ ಮತ್ತು ಕನಕದಾಸ ವೃತ್ತದಿಂದ ನೀಲಕಂಠೇಶ್ವರ ವೃತ್ತದ ರಸ್ತೆ 80 ಅಡಿಗಳಷ್ಟು ಅಗಲವಿರುವ ಕುರಿತು ಕಮಿಷನರ್ ಮಾಹಿತಿ ನೀಡಿದ್ದಾರೆ. ಹೀಗಾಗಿ ನಗರದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ರಸ್ತೆ ತೆರವು ಕಾರ್ಯಾಚರಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಂಬಂಧಿತ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು'' ಎಂದರು.

''ರಾಣಾ ಪ್ರತಾಪ್​ ಸಿಂಗ್ ವೃತ್ತ ದೊಡ್ಡದಾಗಿದ್ದು, ಇದರಿಂದ ವಾಹನ ಸವಾರರಿಗೆ ಭಾರಿ ಸಮಸ್ಯೆಯಾಗಿದೆ. ಹೀಗಾಗಿ ವೃತ್ತದಲ್ಲಿರುವ ರಾಣಾ ಪ್ರತಾಪ್​ ಸಿಂಗ್​ ಪ್ರತಿಮೆಗೆ ಯಾವುದೇ ಹಾನಿಯಾಗದಂತೆ ಗಾತ್ರ ತಗ್ಗಿಸಲಾಗುವುದು. ವೃತ್ತವನ್ನು ರಸ್ತೆಯ ಪಕ್ಕಕ್ಕೆ ಸರಿಸಿ ರಸ್ತೆ ಅಗಲೀಕರಣ ಮಾಡುವ ಬಗ್ಗೆ ಸಲಹೆಗಳು ಬಂದಿವೆ. ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯಕ್ಕಿರುವ ವೃತ್ತ ಮುಂದುವರೆಯುಂತೆ ಮಾಡಿ, ಕೇವಲ ಗಾತ್ರ ತಗ್ಗಿಸುವ ಚಿಂತನೆ ಇದೆ'' ಎಂದು ಅವರು ತಿಳಿಸಿದರು.

ಇದನ್ನೂ ಓದಿ: Guarantee Scheme: ಮೋದಿ ಅಕ್ಕಿ ಅಲ್ಲ, ಯುಪಿಎ ಸರ್ಕಾರದ ಅಕ್ಕಿ: ಸಚಿವ ಸಂತೋಷ ಲಾಡ್ ಗರಂ

ಟೋಲ್ ಪ್ಲಾಜಾಗಳಿಂದಲೇ ರಸ್ತೆ ನಿರ್ವಹಣೆ: ''ಜೂನ್ 6ರಂದು ನಡೆದಿದ್ದ ಕೆಡಿಪಿ ಸಭೆಯಲ್ಲಿ ನಾನಾ ಇಲಾಖೆಗಳ ಅಧಿಕಾರಿಗಳಿಗೆ ಕೆಲವು ಸಲಹೆ, ಸೂಚನೆಗಳನ್ನು ನೀಡಲಾಗಿತ್ತು. ಆದರೆ, ಅಧಿಕಾರಿಗಳು ಎಷ್ಟರ ಮಟ್ಟಿಗೆ ಅವುಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ ಎಂಬುದರ ಪರಿಶೀಲನೆ ಕುರಿತು ಸಭೆ ಮಾಡಲಾಗುತ್ತಿದೆ. ವಾಹನ ಸವಾರರಿಂದ ರಸ್ತೆ ಶುಲ್ಕ ಸಂಗ್ರಹಿಸುವ ಟೋಲ್ ಪ್ಲಾಜಾಗಳಿಂದಲೇ ರಸ್ತೆ ನಿರ್ವಹಣೆ ಮಾಡಬೇಕು ಎಂಬ ನಿಯಮವಿದೆ. ಆದರೆ, ಈ ಹಿಂದೆ ಇದ್ದ ಶಾಸಕರು ಈ ಬಗ್ಗೆ ಗಮನ ಹರಿಸಿರಲಿಲ್ಲ. ನಾನು ಶಾಸಕನಾದ ತಕ್ಷಣ ಕೆಲಸ ಕೈಗೆತ್ತಿಕೊಂಡಿದ್ದು, ಕೇವಲ ಒಂದೇ ತಿಂಗಳಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ. ರಸ್ತೆ ಸುಧಾರಣೆ ಮಾಡಿ ಎಂದು ಟೋಲ್​ ಪ್ಲಾಜಾಗಳ ಮಾಲೀಕರ ಕೊರಳಪಟ್ಟಿ ಹಿಡಿದು ಈ ಹಿಂದಿನ ಶಾಸಕರು ಕೇಳಬೇಕಿತ್ತು. ಆದರೆ, ಅವರು ಕೇಳಿಲ್ಲ, ರಸ್ತೆ ಸುಧಾರಣೆಯಾಗಲಿಲ್ಲ. ಟೋಲ್​ನವರ ಜೊತೆಗೆ ಈ ಹಿಂದಿನ ಶಾಸಕರು ಯಾವ ಕೊಡುವ-ತೆಗೆದುಕೊಳ್ಳುವ ಸಂಬಂಧಗಳನ್ನು ಇರಿಸಿಕೊಂಡಿದ್ದರೋ ಗೊತ್ತಿಲ್ಲ'' ಎಂದು ರೆಡ್ಡಿ ಪರೋಕ್ಷವಾಗಿ ಟೀಕಿಸಿದರು.

ಇದನ್ನೂ ಓದಿ: ಜುಲೈ ಒಂದರಿಂದ ನಿರೀಕ್ಷೆಯಂತೆ ಅಕ್ಕಿ ವಿತರಣೆ ಮಾಡಲಾಗುವುದು: ಸಚಿವ ಸತೀಶ್ ಜಾರಕಿಹೊಳಿ

ಗಂಗಾವತಿಯಲ್ಲಿ ಕೆಆರ್​ಡಿಸಿಎಲ್​ನಿಂದ ಕೈಗೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಜಿ. ಜನಾರ್ದನ ರೆಡ್ಡಿ ವೀಕ್ಷಿಸಿದರು.

ಗಂಗಾವತಿ (ಕೊಪ್ಪಳ): ''ನಗರದ ಮುಖ್ಯರಸ್ತೆಗಳು ಮೊದಲು 80 ಅಡಿಗಳಷ್ಟು ಅಗಲ ಇದ್ದವು. ಆದರೆ, ಈಗ 30ರಿಂದ 40 ಅಡಿಗಳಷ್ಟು ರಸ್ತೆಗಳನ್ನು ಒತ್ತುವರಿ ಮಾಡಲಾಗಿದೆ. ವಾಹನಗಳ ಸುಗಮ ಸಂಚಾರಕ್ಕೆ ತೆರವು ಕಾರ್ಯಾಚರಣೆ ನಡೆಸಲಾಗುವುದು'' ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ನಗರದ ರಾಣಾ ಪ್ರತಾಪ್​ ಸಿಂಗ್ ವೃತ್ತದಿಂದ ಸಿಬಿಎಸ್ ವೃತ್ತದ ಮಾರ್ಗವಾಗಿ ರೈಲ್ವೆ ಗೇಟ್ ಬಳಿಯಿರುವ ಸ್ವಾಗತ ಕಮಾನಿನವರೆಗೂ ಕೆಆರ್​ಡಿಸಿಎಲ್​ನಿಂದ ಕೈಗೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.

''ರಾಣಾ ಪ್ರತಾಪ್​ ಸಿಂಗ್ ವೃತ್ತದಿಂದ ಇಂದಿರಾ ಗಾಂಧಿ ವೃತ್ತದ ಮೂಲಕ ಗಾಂಧಿ ವೃತ್ತದವರೆಗೆ ಮತ್ತು ಕನಕದಾಸ ವೃತ್ತದಿಂದ ನೀಲಕಂಠೇಶ್ವರ ವೃತ್ತದ ರಸ್ತೆ 80 ಅಡಿಗಳಷ್ಟು ಅಗಲವಿರುವ ಕುರಿತು ಕಮಿಷನರ್ ಮಾಹಿತಿ ನೀಡಿದ್ದಾರೆ. ಹೀಗಾಗಿ ನಗರದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ರಸ್ತೆ ತೆರವು ಕಾರ್ಯಾಚರಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಂಬಂಧಿತ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು'' ಎಂದರು.

''ರಾಣಾ ಪ್ರತಾಪ್​ ಸಿಂಗ್ ವೃತ್ತ ದೊಡ್ಡದಾಗಿದ್ದು, ಇದರಿಂದ ವಾಹನ ಸವಾರರಿಗೆ ಭಾರಿ ಸಮಸ್ಯೆಯಾಗಿದೆ. ಹೀಗಾಗಿ ವೃತ್ತದಲ್ಲಿರುವ ರಾಣಾ ಪ್ರತಾಪ್​ ಸಿಂಗ್​ ಪ್ರತಿಮೆಗೆ ಯಾವುದೇ ಹಾನಿಯಾಗದಂತೆ ಗಾತ್ರ ತಗ್ಗಿಸಲಾಗುವುದು. ವೃತ್ತವನ್ನು ರಸ್ತೆಯ ಪಕ್ಕಕ್ಕೆ ಸರಿಸಿ ರಸ್ತೆ ಅಗಲೀಕರಣ ಮಾಡುವ ಬಗ್ಗೆ ಸಲಹೆಗಳು ಬಂದಿವೆ. ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯಕ್ಕಿರುವ ವೃತ್ತ ಮುಂದುವರೆಯುಂತೆ ಮಾಡಿ, ಕೇವಲ ಗಾತ್ರ ತಗ್ಗಿಸುವ ಚಿಂತನೆ ಇದೆ'' ಎಂದು ಅವರು ತಿಳಿಸಿದರು.

ಇದನ್ನೂ ಓದಿ: Guarantee Scheme: ಮೋದಿ ಅಕ್ಕಿ ಅಲ್ಲ, ಯುಪಿಎ ಸರ್ಕಾರದ ಅಕ್ಕಿ: ಸಚಿವ ಸಂತೋಷ ಲಾಡ್ ಗರಂ

ಟೋಲ್ ಪ್ಲಾಜಾಗಳಿಂದಲೇ ರಸ್ತೆ ನಿರ್ವಹಣೆ: ''ಜೂನ್ 6ರಂದು ನಡೆದಿದ್ದ ಕೆಡಿಪಿ ಸಭೆಯಲ್ಲಿ ನಾನಾ ಇಲಾಖೆಗಳ ಅಧಿಕಾರಿಗಳಿಗೆ ಕೆಲವು ಸಲಹೆ, ಸೂಚನೆಗಳನ್ನು ನೀಡಲಾಗಿತ್ತು. ಆದರೆ, ಅಧಿಕಾರಿಗಳು ಎಷ್ಟರ ಮಟ್ಟಿಗೆ ಅವುಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ ಎಂಬುದರ ಪರಿಶೀಲನೆ ಕುರಿತು ಸಭೆ ಮಾಡಲಾಗುತ್ತಿದೆ. ವಾಹನ ಸವಾರರಿಂದ ರಸ್ತೆ ಶುಲ್ಕ ಸಂಗ್ರಹಿಸುವ ಟೋಲ್ ಪ್ಲಾಜಾಗಳಿಂದಲೇ ರಸ್ತೆ ನಿರ್ವಹಣೆ ಮಾಡಬೇಕು ಎಂಬ ನಿಯಮವಿದೆ. ಆದರೆ, ಈ ಹಿಂದೆ ಇದ್ದ ಶಾಸಕರು ಈ ಬಗ್ಗೆ ಗಮನ ಹರಿಸಿರಲಿಲ್ಲ. ನಾನು ಶಾಸಕನಾದ ತಕ್ಷಣ ಕೆಲಸ ಕೈಗೆತ್ತಿಕೊಂಡಿದ್ದು, ಕೇವಲ ಒಂದೇ ತಿಂಗಳಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ. ರಸ್ತೆ ಸುಧಾರಣೆ ಮಾಡಿ ಎಂದು ಟೋಲ್​ ಪ್ಲಾಜಾಗಳ ಮಾಲೀಕರ ಕೊರಳಪಟ್ಟಿ ಹಿಡಿದು ಈ ಹಿಂದಿನ ಶಾಸಕರು ಕೇಳಬೇಕಿತ್ತು. ಆದರೆ, ಅವರು ಕೇಳಿಲ್ಲ, ರಸ್ತೆ ಸುಧಾರಣೆಯಾಗಲಿಲ್ಲ. ಟೋಲ್​ನವರ ಜೊತೆಗೆ ಈ ಹಿಂದಿನ ಶಾಸಕರು ಯಾವ ಕೊಡುವ-ತೆಗೆದುಕೊಳ್ಳುವ ಸಂಬಂಧಗಳನ್ನು ಇರಿಸಿಕೊಂಡಿದ್ದರೋ ಗೊತ್ತಿಲ್ಲ'' ಎಂದು ರೆಡ್ಡಿ ಪರೋಕ್ಷವಾಗಿ ಟೀಕಿಸಿದರು.

ಇದನ್ನೂ ಓದಿ: ಜುಲೈ ಒಂದರಿಂದ ನಿರೀಕ್ಷೆಯಂತೆ ಅಕ್ಕಿ ವಿತರಣೆ ಮಾಡಲಾಗುವುದು: ಸಚಿವ ಸತೀಶ್ ಜಾರಕಿಹೊಳಿ

Last Updated : Jun 26, 2023, 4:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.