ETV Bharat / state

ಜೆಸಿಬಿ ಬಕೆಟ್ ಕದ್ದು ಬೈಕ್​​ನಲ್ಲಿ ಹೊತ್ತೊಯ್ದ ಕಳ್ಳರು : ಸಿಸಿಟಿವಿಯಲ್ಲಿ ಕೃತ್ಯ ಸೆರೆ

author img

By

Published : Dec 22, 2021, 3:53 PM IST

ಬಕೆಟ್‌ ಮೇಲೆ ಕಣ್ಣಿಟ್ಟಿದ್ದ ಇಬ್ಬರು ಬೈಕ್​​​ನಲ್ಲಿ ಬಂದು ಭಾರವಾದ ಬಕೆಟ್ ಹೊತ್ತೊಯ್ದಿದ್ದಾರೆ. ಕಳ್ಳರು ಜೆಸಿಬಿ ಬಕೆಟ್​​ ಅನ್ನು ಬೈಕ್​​​ನಲ್ಲಿ ಹೊತ್ತೊಯ್ಯುತ್ತಿರುವ ದೃಶ್ಯ ಪಕ್ಕದ ಸಿಡಿಪಿಒ ಕಚೇರಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ..

Thieves stole JCB bucket Scene captured on CCTV
ಕಳ್ಳರು ಜೆಸಿಬಿ ಬಕೆಟ್ ಕದ್ದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದು..

ಕುಷ್ಟಗಿ : ಪಟ್ಟಣದ 1ನೇ ವಾರ್ಡ್​ನ ಕೃಷ್ಣಗಿರಿ ಕಾಲೋನಿಯಲ್ಲಿ ಹಾಡುಹಗಲೇ ಜೆಸಿಬಿಯ ಚಿಕ್ಕ ಬಕೆಟ್​​ ಹೊತ್ತೊಯ್ದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಳ್ಳರು ಜೆಸಿಬಿ ಬಕೆಟ್ ಕದ್ದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದು..

ಕಳೆದ ಡಿ.5ರಂದು ‌ಮಾಜಿ ಪುರಸಭೆ ಸದಸ್ಯ ನಾಗರಾಜ ಮೇಲಿನಮನಿ ಅವರ‌ ಮನೆ ಎದುರಿನ ಬಯಲಿನಲ್ಲಿ ಶರಣಪ್ಪ ಬಿಜಕಲ್ ಎಂಬುವರು ಜೆಸಿಬಿ ನಿಲ್ಲಿಸಿದ್ದರು. ಜೆಸಿಬಿಯ ಎರಡು ಸಣ್ಣ ಬಕೆಟ್​​ಗಳನ್ನು ಅಲ್ಲಿಯೇ ಇರಿಸಿದ್ದರು.

ಇದರ ಮೇಲೆ ಕಣ್ಣಿಟ್ಟಿದ್ದ ಇಬ್ಬರು ಬೈಕ್​​​ನಲ್ಲಿ ಬಂದು ಭಾರವಾದ ಬಕೆಟ್ ಹೊತ್ತೊಯ್ದಿದ್ದಾರೆ. ಕಳ್ಳರು ಜೆಸಿಬಿ ಬಕೆಟ್​​ ಅನ್ನು ಬೈಕ್​​​ನಲ್ಲಿ ಹೊತ್ತೊಯ್ಯುತ್ತಿರುವ ದೃಶ್ಯ ಪಕ್ಕದ ಸಿಡಿಪಿಒ ಕಚೇರಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಸಂಬಂಧ ಜೆಸಿಬಿ ಮಾಲೀಕ ಶರಣಪ್ಪ ಬಿಜಕಲ್ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿಸಿ ಕ್ಯಾಮೆರಾದಲ್ಲಿನ ದೃಶ್ಯ ಅಸ್ಪಷ್ಟವಾಗಿದೆ. ಆದರೂ ಪತ್ತೆ ಕಾರ್ಯ ಮುಂದುವರೆದಿದೆ. ಜತೆಗೆ ಸ್ಥಳೀಯ ಹಾಗೂ ಸುತ್ತಮುತ್ತಲಿನ ಗುಜರಿ ಅಂಗಡಿಗಳಲ್ಲಿ ವಿಚಾರಣೆ ನಡೆಸಲಾಗಿದೆ.

ಇದನ್ನೂ ಓದಿ: ದಾವಣಗೆರೆ ಬಳಿ ಖಾಸಗಿ ಬಸ್ ಪಲ್ಟಿ: 20ಕ್ಕೂ ಹೆಚ್ಚು ಜನರಿಗೆ ಗಾಯ

ಕುಷ್ಟಗಿ : ಪಟ್ಟಣದ 1ನೇ ವಾರ್ಡ್​ನ ಕೃಷ್ಣಗಿರಿ ಕಾಲೋನಿಯಲ್ಲಿ ಹಾಡುಹಗಲೇ ಜೆಸಿಬಿಯ ಚಿಕ್ಕ ಬಕೆಟ್​​ ಹೊತ್ತೊಯ್ದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಳ್ಳರು ಜೆಸಿಬಿ ಬಕೆಟ್ ಕದ್ದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದು..

ಕಳೆದ ಡಿ.5ರಂದು ‌ಮಾಜಿ ಪುರಸಭೆ ಸದಸ್ಯ ನಾಗರಾಜ ಮೇಲಿನಮನಿ ಅವರ‌ ಮನೆ ಎದುರಿನ ಬಯಲಿನಲ್ಲಿ ಶರಣಪ್ಪ ಬಿಜಕಲ್ ಎಂಬುವರು ಜೆಸಿಬಿ ನಿಲ್ಲಿಸಿದ್ದರು. ಜೆಸಿಬಿಯ ಎರಡು ಸಣ್ಣ ಬಕೆಟ್​​ಗಳನ್ನು ಅಲ್ಲಿಯೇ ಇರಿಸಿದ್ದರು.

ಇದರ ಮೇಲೆ ಕಣ್ಣಿಟ್ಟಿದ್ದ ಇಬ್ಬರು ಬೈಕ್​​​ನಲ್ಲಿ ಬಂದು ಭಾರವಾದ ಬಕೆಟ್ ಹೊತ್ತೊಯ್ದಿದ್ದಾರೆ. ಕಳ್ಳರು ಜೆಸಿಬಿ ಬಕೆಟ್​​ ಅನ್ನು ಬೈಕ್​​​ನಲ್ಲಿ ಹೊತ್ತೊಯ್ಯುತ್ತಿರುವ ದೃಶ್ಯ ಪಕ್ಕದ ಸಿಡಿಪಿಒ ಕಚೇರಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಸಂಬಂಧ ಜೆಸಿಬಿ ಮಾಲೀಕ ಶರಣಪ್ಪ ಬಿಜಕಲ್ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿಸಿ ಕ್ಯಾಮೆರಾದಲ್ಲಿನ ದೃಶ್ಯ ಅಸ್ಪಷ್ಟವಾಗಿದೆ. ಆದರೂ ಪತ್ತೆ ಕಾರ್ಯ ಮುಂದುವರೆದಿದೆ. ಜತೆಗೆ ಸ್ಥಳೀಯ ಹಾಗೂ ಸುತ್ತಮುತ್ತಲಿನ ಗುಜರಿ ಅಂಗಡಿಗಳಲ್ಲಿ ವಿಚಾರಣೆ ನಡೆಸಲಾಗಿದೆ.

ಇದನ್ನೂ ಓದಿ: ದಾವಣಗೆರೆ ಬಳಿ ಖಾಸಗಿ ಬಸ್ ಪಲ್ಟಿ: 20ಕ್ಕೂ ಹೆಚ್ಚು ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.