ETV Bharat / state

ಕೃಷ್ಣದೇವರಾಯನಿಗೂ ಜಲಕಂಟಕ: 64 ಕಾಲಿನ ಮಂಟಪ ಜಲಾವೃತ

author img

By

Published : Sep 9, 2019, 8:30 AM IST

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ಸಮೀಪದಲ್ಲಿ ತುಂಗಭದ್ರಾ ತಟದಲ್ಲಿರುವ, ಶ್ರೀ ಕೃಷ್ಣದೇವರಾಯನ ಸಮಾಧಿ ಎಂದೇ ಕರೆಯಲಾಗುವ ಐತಿಹಾಸಿಕ 64 ಕಾಲಿನ ಮಂಟಪವು ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದರಿಂದ ಜಲಾವೃತವಾಗಿದೆ.

64 ಕಾಲಿನ ಮಂಟಪ ಜಲಾವೃತ

ಗಂಗಾವತಿ: ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದರಿಂದ ಶ್ರೀ ಕೃಷ್ಣದೇವರಾಯನ ಮಂಟಪ ಜಲಾವೃತವಾಗಿದೆ.

ಶ್ರೀ ಕೃಷ್ಣ ದೇವರಾಯನ ಸಮಾಧಿ, 64 ಕಾಲಿನ ಮಂಟಪ ಜಲಾವೃತ

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ಸಮೀಪದಲ್ಲಿ ತುಂಗಭದ್ರಾ ತಟದಲ್ಲಿರುವ ಐತಿಹಾಸಿಕ 64 ಕಾಲಿನ ಮಂಟಪವನ್ನು ಶ್ರೀ ಕೃಷ್ಣದೇವರಾಯನ ಸಮಾಧಿ ಎಂದು ಕರೆಯಲಾಗುತ್ತದೆ. ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದರಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗಿದೆ. ಪರಿಣಾಮ ಕೃಷ್ಣದೇವರಾಯನ ಸಮಾಧಿ ಜಲಾವೃತವಾಗಿದ್ದು, ಮಂಟಪದ ಮೇಲ್ಭಾಗ ಮಾತ್ರ ಸ್ವಲ್ಪ ಕಾಣಿಸುತ್ತಿದೆ.

64 ಲಲಿತ ಕಲೆಗಳಲ್ಲಿ ಪರಿಣಿತನಾಗಿದ್ದ ಶ್ರೀ ಕೃಷ್ಣದೇವರಾಯ ಯುದ್ಧದಲ್ಲಿ ವೀರಮರಣವನ್ನಪ್ಪಿದ ಬಳಿಕ ಆತನನ್ನು ಇಲ್ಲಿಯೇ ಸಮಾಧಿ ಮಾಡಲಾಗಿದೆ ಎಂಬುದು ಸ್ಥಳೀಯರ ನಂಬಿಕೆ. ಪ್ರತಿ ಬಾರಿ ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾದಾಗೆಲ್ಲಾ, ನದಿಗೆ ನೀರು ಹರಿಸಿದಾಗೆಲ್ಲಾ ಕೃಷ್ಣದೇವರಾಯನ ಸ್ಮಾರಕ ಜಲ ಸಮಾಧಿಯಾಗುತ್ತದೆ.

ಗಂಗಾವತಿ: ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದರಿಂದ ಶ್ರೀ ಕೃಷ್ಣದೇವರಾಯನ ಮಂಟಪ ಜಲಾವೃತವಾಗಿದೆ.

ಶ್ರೀ ಕೃಷ್ಣ ದೇವರಾಯನ ಸಮಾಧಿ, 64 ಕಾಲಿನ ಮಂಟಪ ಜಲಾವೃತ

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ಸಮೀಪದಲ್ಲಿ ತುಂಗಭದ್ರಾ ತಟದಲ್ಲಿರುವ ಐತಿಹಾಸಿಕ 64 ಕಾಲಿನ ಮಂಟಪವನ್ನು ಶ್ರೀ ಕೃಷ್ಣದೇವರಾಯನ ಸಮಾಧಿ ಎಂದು ಕರೆಯಲಾಗುತ್ತದೆ. ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದರಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗಿದೆ. ಪರಿಣಾಮ ಕೃಷ್ಣದೇವರಾಯನ ಸಮಾಧಿ ಜಲಾವೃತವಾಗಿದ್ದು, ಮಂಟಪದ ಮೇಲ್ಭಾಗ ಮಾತ್ರ ಸ್ವಲ್ಪ ಕಾಣಿಸುತ್ತಿದೆ.

64 ಲಲಿತ ಕಲೆಗಳಲ್ಲಿ ಪರಿಣಿತನಾಗಿದ್ದ ಶ್ರೀ ಕೃಷ್ಣದೇವರಾಯ ಯುದ್ಧದಲ್ಲಿ ವೀರಮರಣವನ್ನಪ್ಪಿದ ಬಳಿಕ ಆತನನ್ನು ಇಲ್ಲಿಯೇ ಸಮಾಧಿ ಮಾಡಲಾಗಿದೆ ಎಂಬುದು ಸ್ಥಳೀಯರ ನಂಬಿಕೆ. ಪ್ರತಿ ಬಾರಿ ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾದಾಗೆಲ್ಲಾ, ನದಿಗೆ ನೀರು ಹರಿಸಿದಾಗೆಲ್ಲಾ ಕೃಷ್ಣದೇವರಾಯನ ಸ್ಮಾರಕ ಜಲ ಸಮಾಧಿಯಾಗುತ್ತದೆ.

Intro:ವಿಜಯನಗರ ಸಾಮ್ರಾಜ್ಯವನ್ನು ಅಧಿಪತಿ ಶ್ರೀಕೃಷ್ಣ ದೇವರಾಯನಿಗೂ ಜಲಕಂಟಕ ಎದುರಾಗಿದೆ. ಶ್ರೀಕೃಷ್ಣ ದೇವರಾಯ ಗತಿಸಿ ಐದು ದಶಕ ಕಳೆದರೂ ತುಂಗಭದ್ರೆಯ ಕಂಟಕ ಆತನನ್ನು ಬಿಟ್ಟಿಲ್ಲ.
Body:ಕೃಷ್ಣ ದೇವರಾಯನಿಗೂ ಜಲಕಂಟಕ: ಸ್ಮಾಕರ ಜಲ ಸಮಾಧಿ
ಗಂಗಾವತಿ:
ವಿಜಯನಗರ ಸಾಮ್ರಾಜ್ಯವನ್ನು ಅಧಿಪತಿ ಶ್ರೀಕೃಷ್ಣ ದೇವರಾಯನಿಗೂ ಜಲಕಂಟಕ ಎದುರಾಗಿದೆ. ಶ್ರೀಕೃಷ್ಣ ದೇವರಾಯ ಗತಿಸಿ ಐದು ದಶಕ ಕಳೆದರೂ ತುಂಗಭದ್ರೆಯ ಕಂಟಕ ಆತನನ್ನು ಬಿಟ್ಟಿಲ್ಲ.
ಶ್ರೀಕೃಷ್ಣ ದೇವರಾಯನ ಸ್ಮಾರಕವನ್ನು ತುಂಗಭದ್ರೆ ತನ್ನ ಅಪೋಶನಕ್ಕೆ ಪಡೆದದ್ದಾಳೆ.
ತಾಲ್ಲೂಕಿನ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯ ಆನೆಗೊಂದಿ ಗ್ರಾಮದ ಸಮೀಪದಲ್ಲಿ ತುಂಗಭದ್ರಾ ತಟದಲ್ಲಿರುವ 64 ಕಾಲಿನ ಮಂಟಪ ಇದೀಗ ಸಂಪೂರ್ಣ ಜಲಾವೃತವಾಗಿದೆ. ಮಂಟಪದ ಮೇಲ್ಭಾಗ ಮಾತ್ರ ಕೊಂಚ ಕಾಣುತ್ತದೆ.
ಈ 64 ಕಾಲಿನ ಮಂಟಪವನ್ನು ಶ್ರೀ ಕೃಷ್ಣ ದೇವರಾಯನ ಸಮಾಧಿ ಎಂದು ಹೇಳಲಾಗುತ್ತಿದೆ. 64 ಲಲಿತ ಕಲೆಗಳಲ್ಲಿ ಪರಣಿತನಾಗಿದ್ದ ಶ್ರೀ ಕೃಷ್ಣ ದೇವರಾಯ ಯುದ್ಧದಲ್ಲಿ ಅಸುನೀಗಿದ ಬಳಿಕ ಆತನನ್ನು ಇಲ್ಲಿಯೇ ಸಮಾಧಿ ಮಾಡಲಾಗಿದೆ ಎಂದು ಸ್ಥಳೀಯರು ನಂಬುತ್ತಾರೆ.
ಹೀಗಾಗಿ 64 ಕಾಲಿನ ಮಂಟಪ ಇದೀಗ ಜಲಾವೃತವಾಗಿದೆ. ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾದಾಗ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತದೆ. ಹೀಗೆ ನೀರು ಹರಿಸಿದಾಗೆಲ್ಲಾ ಕೃಷ್ಣ ದೇವರಾಯನ ಸ್ಮಾರಕ, ಜಲ ಸಮಾಧಿಯಾಗುತ್ತದೆ.

Conclusion:64 ಕಾಲಿನ ಮಂಟಪ ಇದೀಗ ಜಲಾವೃತವಾಗಿದೆ. ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾದಾಗ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತದೆ. ಹೀಗೆ ನೀರು ಹರಿಸಿದಾಗೆಲ್ಲಾ ಕೃಷ್ಣ ದೇವರಾಯನ ಸ್ಮಾರಕ, ಜಲ ಸಮಾಧಿಯಾಗುತ್ತದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.