ETV Bharat / state

ಪ್ರತ್ಯಕ್ಷವಾದ ಚಿರತೆ: ಕುರಿ ತಿಂದು ಪರಾರಿ

ಆಕಸ್ಮಿಕವಾಗಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು ಕುರಿಯೊಂದನ್ನು ತಿಂದು ಪರಾರಿಯಾಗಿದೆ. ಘಟನೆಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

author img

By

Published : Apr 30, 2019, 7:56 AM IST

ಕುರಿ ತಿಂದು ಪರಾರಿಯಾದ ಚಿರತೆ

ಕೋಲಾರ: ಚಿರತೆಯೊಂದು ಪ್ರತ್ಯಕ್ಷವಾಗಿದ್ದು ತಾಲೂಕಿನ ಕೊಂಡರಾಜೇನಹಳ್ಳಿ ಕುರಿಯೊಂದನ್ನು ತಿಂದು ಪರಾರಿಯಾಗಿರುವ ಘಟನೆ ನಡೆದಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮದ ನಂಜುಗೌಡ ಎಂಬುವರಿಗೆ ಸೇರಿದ ಕುರಿ ಇದಾಗಿದೆ.

ತಮ್ಮ ತೋಟದಲ್ಲಿ ಕುರಿ ಸತ್ತುಬಿದ್ದಿದ್ದು ಚಿರತೆ ದಾಳಿ ಮಾಡಿ ಕೊಂದು ಹಾಕಿದೆ ಎಂದು ನಂಜುಗೌಡ ನೋವು ತೋಡಿಕೊಂಡಿದ್ದಾರೆ. ಇನ್ನು ಘಟನೆಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ಚಿರತೆಯನ್ನ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನ ಒತ್ತಾಯಿಸುತ್ತಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೋಲಾರ: ಚಿರತೆಯೊಂದು ಪ್ರತ್ಯಕ್ಷವಾಗಿದ್ದು ತಾಲೂಕಿನ ಕೊಂಡರಾಜೇನಹಳ್ಳಿ ಕುರಿಯೊಂದನ್ನು ತಿಂದು ಪರಾರಿಯಾಗಿರುವ ಘಟನೆ ನಡೆದಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮದ ನಂಜುಗೌಡ ಎಂಬುವರಿಗೆ ಸೇರಿದ ಕುರಿ ಇದಾಗಿದೆ.

ತಮ್ಮ ತೋಟದಲ್ಲಿ ಕುರಿ ಸತ್ತುಬಿದ್ದಿದ್ದು ಚಿರತೆ ದಾಳಿ ಮಾಡಿ ಕೊಂದು ಹಾಕಿದೆ ಎಂದು ನಂಜುಗೌಡ ನೋವು ತೋಡಿಕೊಂಡಿದ್ದಾರೆ. ಇನ್ನು ಘಟನೆಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ಚಿರತೆಯನ್ನ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನ ಒತ್ತಾಯಿಸುತ್ತಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ಕೋಲಾರ
ದಿನಾಂಕ - 30-04-19
ಸ್ಲಗ್ - ಚಿರತೆ ದಾಳಿ
ಫಾರ್ಮೆಟ್ - ಎವಿ



ಆಂಕರ್: ಚಿರತೆ ಪ್ರತ್ಯಕ್ಷವಾಗಿ ಕುರಿಯೊಂದನ್ನ ತಿಂದು ಪರಾರಿಯಾಗಿರುವ ಘಟನೆ ಕೋಲಾರದಲ್ಲಿ ಜರುಗಿದೆ. ಕೋಲಾರ ತಾಲೂಕಿನ ಕೊಂಡರಾಜೇನಹಳ್ಳಿ ಬಳಿ ಚಿರತೆ ಕಂಡಿ ಬಂದಿದ್ದು, ಕೊಂಡರಾಜೇನಹಳ್ಳಿ ಗ್ರಾಮದ ನಂಜುಗೌಡ ಎಂಬುವರಿಗೆ ಸೇರಿದ ಕುರಿ ಇದಾಗಿದೆ. ಇನ್ನು ನಂಜುಂಡಗೌಡ ತೋಟದಲ್ಲಿ ಕಂಡು ಬಂದ ಚಿರತೆ ಇದಾಗಿದ್ದು, ಒಂದು ಕುರಿಯನ್ನ ತಿಂದು ಪರಾರಿಯಾಗಿದ್ದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ ಚಿರತೆಯನ್ನ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳನ್ನ ಒತ್ತಾಯಿಸಿದ್ದಾರೆ. ಇನ್ನು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.Body:.Conclusion:.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.