ETV Bharat / state

ಗ್ರಾಮಸ್ಥರ ಕಾರ್ಯಾಚರಣೆ: ಬೃಹತ್​​​ ಗಾತ್ರದ ಮೊಸಳೆ ಸೆರೆ - undefined

ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಬೃಹತ್ ಗಾತ್ರದ ಮೊಸಳೆಯನ್ನು ಗ್ರಾಮಸ್ಥರು ರಕ್ಷಣೆ ಮಾಡಿ, ಕಬಿನಿ ಜಲಾಶಯದ ಹಿನ್ನೀರಿಗೆ ಬಿಟ್ಟಿದ್ದಾರೆ.

ಲಕ್ಷ್ಮಣ ತೀರ್ಥ ನದಿ ಅಂಚಿನ ಕೆರೆಯಲ್ಲಿ ಬೃಹತ್​​​ ಗಾತ್ರದ ಮೊಸಳೆ ಸೆರೆ.
author img

By

Published : Mar 20, 2019, 12:37 PM IST

ಕೊಡಗು: ಲಕ್ಷ್ಮಣ ತೀರ್ಥ ನದಿ ಅಂಚಿನ ಕೆರೆಯೊಂದರಲ್ಲಿ ಆಶ್ರಯ ಪಡೆದಿದ್ದ ಭಾರೀ ಗಾತ್ರದ ಮೊಸಳೆಯನ್ನು ಗ್ರಾಮಸ್ಥರು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಈ ಮೊಸಳೆಯು ಅಂದಾಜು 70 ಕೆಜಿ ತೂಕವಿದ್ದು, ಬೃಹತ್ ಗಾತ್ರವನ್ನು ಹೊಂದಿದೆ. ಗ್ರಾಮದ ಚಂಗಪ್ಪ ಎಂಬುವವರಿಗೆ ಸೇರಿದ ಕೆರೆಯಲ್ಲಿ ಮೊಸಳೆ ಆಶ್ರಯ ಪಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಅಷ್ಟೇ ಅಲ್ಲದೆ ಸಮೀಪದ ಭತ್ತದ ಗದ್ದೆಯ ಮಧ್ಯೆಯು ಸಹ ಓಡಾಡುತ್ತಿತ್ತು. ಮೊಸಳೆಯ ಚಲನವಲನಗಳನ್ನ ಗಮನಿಸಿದ ಗ್ರಾಮಸ್ಥರು ಕೊನೆಗೂ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಲಕ್ಷ್ಮಣ ತೀರ್ಥ ನದಿ ಅಂಚಿನ ಕೆರೆಯಲ್ಲಿ ಬೃಹತ್​​​ ಗಾತ್ರದ ಮೊಸಳೆ ಸೆರೆ.

ಕಾರ್ಯಾಚರಣೆ ವೇಳೆ ಮೊಸಳೆ ಬಾಯಿ ಭಾಗದಲ್ಲಿ ಗಾಯಗಳಾಗಿದ್ದು, ಪಶು ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಕಬಿನಿ ಜಲಾಶಯದ ಹಿನ್ನೀರಿಗೆ ಬಿಡಲಾಗಿದೆ.

ಕೊಡಗು: ಲಕ್ಷ್ಮಣ ತೀರ್ಥ ನದಿ ಅಂಚಿನ ಕೆರೆಯೊಂದರಲ್ಲಿ ಆಶ್ರಯ ಪಡೆದಿದ್ದ ಭಾರೀ ಗಾತ್ರದ ಮೊಸಳೆಯನ್ನು ಗ್ರಾಮಸ್ಥರು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಈ ಮೊಸಳೆಯು ಅಂದಾಜು 70 ಕೆಜಿ ತೂಕವಿದ್ದು, ಬೃಹತ್ ಗಾತ್ರವನ್ನು ಹೊಂದಿದೆ. ಗ್ರಾಮದ ಚಂಗಪ್ಪ ಎಂಬುವವರಿಗೆ ಸೇರಿದ ಕೆರೆಯಲ್ಲಿ ಮೊಸಳೆ ಆಶ್ರಯ ಪಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಅಷ್ಟೇ ಅಲ್ಲದೆ ಸಮೀಪದ ಭತ್ತದ ಗದ್ದೆಯ ಮಧ್ಯೆಯು ಸಹ ಓಡಾಡುತ್ತಿತ್ತು. ಮೊಸಳೆಯ ಚಲನವಲನಗಳನ್ನ ಗಮನಿಸಿದ ಗ್ರಾಮಸ್ಥರು ಕೊನೆಗೂ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಲಕ್ಷ್ಮಣ ತೀರ್ಥ ನದಿ ಅಂಚಿನ ಕೆರೆಯಲ್ಲಿ ಬೃಹತ್​​​ ಗಾತ್ರದ ಮೊಸಳೆ ಸೆರೆ.

ಕಾರ್ಯಾಚರಣೆ ವೇಳೆ ಮೊಸಳೆ ಬಾಯಿ ಭಾಗದಲ್ಲಿ ಗಾಯಗಳಾಗಿದ್ದು, ಪಶು ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಕಬಿನಿ ಜಲಾಶಯದ ಹಿನ್ನೀರಿಗೆ ಬಿಡಲಾಗಿದೆ.

Intro:ಕೊಡಗು: ಲಕ್ಷ್ಮಣ ತೀರ್ಥ ನದಿ ಅಂಚಿನ ಕೆರೆಯೊಂದರಲ್ಲಿ ಆಶ್ರಯ ಪಡೆದ್ದಿದ್ದ ಭಾರೀ ಗಾತ್ರದ ಮೊಸಳೆ ಯನ್ನು ರಕ್ಷಣೆ ಮಾಡಲಾಗಿದೆ. ಜಾಗಲೆ ಗ್ರಾಮದ ಭತ್ತದ ಗದ್ದೆಯಲ್ಲಿ ಅಡಾಡುತಿದ್ದ ಮೊಸಳೆ ಯನ್ನು ಗ್ರಾಮಸ್ಥರು ರಕ್ಷಣೆ ಮಾಡಿ ಅರಣ್ಯ ಇಲಾಖೆ ಗೆ ಒಪ್ಪಿಸಿದ್ದು, ಬಳಿಕ ಕಬಿನಿ ಜಲಾಶಯದ ಹಿನ್ನೀರಿಗೆ ಬಿಡಲಾಗಿದೆ. Body:ಗ್ರಾಮದ ಚಂಗಪ್ಪ ಎಂಬುವವರಿಗೆ ಸೇರಿದ ಕೆರೆಯಲ್ಲಿ ಆಶ್ರಯ ಪಡೆದಿದ್ದ ಈ ಮೊಸಳೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಇಲ್ಲಿಗೆ ಸಮೀಪದ ಭತ್ತದ ಗದ್ದೆಯ ಮಧ್ಯ ಅಡ್ಡಾಡುತ್ತಿದ್ದ ಅಂದಾಜು 70 ಕೆ. ಜಿ ತೂಕದ ಬೃಹತ್ ಗಾತ್ರದ ಮೊಸಳೆ ಯನ್ನು ಗಮನಿಸಿದ ಸ್ಥಳೀಯ ರು, ಗ್ರಾಮಸ್ಥರು ಎಲ್ಲಾ ಸೇರಿ ಮೂಳೆಯನ್ನು ಸೆರೆ ಹಿಡಿಯಲಾಗಿದೆ. ಕಾರ್ಯಾಚರಣೆ ವೇಳೆ ಮೊಸಳೆ ಬಾಯಿ ಭಾಗದಲ್ಲಿ ಗಾಯಗಳಾಗಿದ್ದು ವಶುವೈದ್ಯರ ಚಿಕಿತ್ಸೆ ಬಳಿಕ ಕಬಿನಿ ಜಲಾಶಯ ಹಿನ್ನೀರಿಗೆ ಬಿಡಲಾಗಿದೆ. Conclusion:ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಯಲ್ಲಿ ನೀರು ಕಡಿಮೆ ಆಗುತ್ತಿದ್ದಂತೆ, ಮೊಸಳೆಗಳು ಪ್ರತ್ಯಕ್ಷವಾಗುವುದು ಸಾಮಾನ್ಯ, ಇಂತಹಾ ಸಂದರ್ಭದಲ್ಲಿ ನದಿಯ ಅಕ್ಕಪಕ್ಕ ದ ನಿವಾಸಿಗಳು, ಜಮೀನಿನಲ್ಲಿ ರೈತರು, ಕಾರ್ಮಿಕರು ಜಾಗೃತರಾಗಿರಬೇಕಷ್ಟೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.