ETV Bharat / state

ರಾತ್ರೋರಾತ್ರಿ ವಾಹನಗಳಿಗೆ ಬೆಂಕಿ... ಕಿಡಿಗೇಡಿಗಳ ಕೃತ್ಯಕ್ಕೆ ಬೇಸತ್ತ ಕೊಡಗಿನ ಜನ

ಜಿಲ್ಲೆಯಲ್ಲಿ ಕಿಡಿಗೇಡಿಗಳ ಹಾವಳಿ ಮಿತಿ ಮೀರಿದೆ. ಮನೆ ಮುಂದೆ ನಿಲ್ಲಿಸಿದ ವಾಹನಗಳಿಗೆ ಹಾನಿಯುಂಟು ಮಾಡುವುದಲ್ಲದೆ, ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ನಗರವಾಸಿಗಳಿಗೆ ಆತಂಕ ಶುರುವಾಗಿದೆ.

author img

By

Published : Mar 11, 2019, 8:41 AM IST

ವಿಕಾಸ್ ಜನಸೇವಾ ಟ್ರಸ್ಟ್, ವ್ಯಾನ್

ಮಡಿಕೇರಿ: ಕೊಡಗು ಜಿಲ್ಲೆಯ ಶುಂಠಿಕೊಪ್ಪ ವ್ಯಾಪ್ತಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ಜನ ಕಂಗಾಲಾಗಿದ್ದಾರೆ.

ಕಳೆದ ರಾತ್ರಿ ಶುಂಠಿಕೊಪ್ಪದ ಅನಾಥ ಆಶ್ರಮಕ್ಕೆ ಸೇರಿದ ವಾಹನಕ್ಕೆ ಬೆಂಕಿ ಹಚ್ಚಿ ಸುಡಲು ಯತ್ನಿಸಿದ್ದು ಬೆಳಗ್ಗೆ ಮಾಲೀಕ ವಾಹನ ಬಳಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ವಿಕಾಸ್ ಜನಸೇವಾ ಟ್ರಸ್ಟ್, ಅನಾಥರಿಗೆ, ಭಿಕ್ಷುಕರಿಗೆ, ವಿಕಲಚೇತನ ಮಕ್ಕಳಿಗೆ ಆಸರೆ ನೀಡುವ ಸಲುವಾಗಿ ರಮೇಶ್ ಎಂಬುವರು ಆಶ್ರಮ ಕಟ್ಟಿದ್ದಾರೆ. ಈ ಮೂಲಕ ಕಷ್ಟದಲ್ಲಿ ಇರುವರನ್ನು ಕರೆತರಲು ತಮ್ಮ ಸ್ವಂತ ಖರ್ಚಿನಲ್ಲಿ ಮಾರುತಿ ವ್ಯಾನ್ ಖರೀದಿಸಿದ್ದರು. ಆದರೆ ಕಿಡಿಗೇಡಿಗಳು ಕೃತ್ಯಕ್ಕೆ ವ್ಯಾನ್​ ಹಾಳಾಗಿದೆ.

ಆಶ್ರಮದ ಮುಂದೆ ನಿಲ್ಲಿಸಿದ ವಾಹನದ ಕೆಳ ಬಾಗ ಮತ್ತು ಹಿಂದಿನ ಕಿಟಕಿ ಭಾಗದಲ್ಲಿ ಬೆಂಕಿ ಹಚ್ಚಲಾಗಿದೆ. ಅದೃಷ್ಟವಶಾತ್ ವ್ಯಾನಿನಲ್ಲಿ ಸಾಕಷ್ಟು ಪೆಟ್ರೋಲ್ ಇಲ್ಲದಿದ್ದ ಕಾರಣ ಅನಾಹುತ ತಪ್ಪಿದೆ. ಇದೇ ರೀತಿ ಕೆಲವು ತಿಂಗಳುಗಳ ಹಿಂದೆ ಬೈಕಿನಲ್ಲಿ ತಡರಾತ್ರಿ ಬರುವ ಕೆಲವು ಪುಂಡರು ಆಟೋಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು ಎನ್ನಲಾಗುತ್ತಿದೆ.

ಕಾರುಗಳ ಚಕ್ರ ಕದಿಯುವಂತಹ ಪ್ರಕರಣ ದಾಖಲಾಗಿದ್ದರೂ ಶುಂಠಿಕೂಪ್ಪ ಪೊಲೀಸರು ಆರೋಪಿಗಳ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಅಲ್ಲದೆ ಜಿಲ್ಲೆಯಲ್ಲಿ ಗಾಂಜಾ ಮಾರಾಟ, ವೈಟ್ನರ್ ಸೇವನೆ , ಮದ್ಯಪಾನ ದಂತಹ ಚಟುವಟಿಕೆಗಳು ಸಾಕಷ್ಟು ನಡೆಯುತ್ತಿವೆಯಂತೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಇಲ್ಲಿನ ಜನರ ಆರೋಪವಾಗಿದೆ.

ಮಡಿಕೇರಿ: ಕೊಡಗು ಜಿಲ್ಲೆಯ ಶುಂಠಿಕೊಪ್ಪ ವ್ಯಾಪ್ತಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ಜನ ಕಂಗಾಲಾಗಿದ್ದಾರೆ.

ಕಳೆದ ರಾತ್ರಿ ಶುಂಠಿಕೊಪ್ಪದ ಅನಾಥ ಆಶ್ರಮಕ್ಕೆ ಸೇರಿದ ವಾಹನಕ್ಕೆ ಬೆಂಕಿ ಹಚ್ಚಿ ಸುಡಲು ಯತ್ನಿಸಿದ್ದು ಬೆಳಗ್ಗೆ ಮಾಲೀಕ ವಾಹನ ಬಳಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ವಿಕಾಸ್ ಜನಸೇವಾ ಟ್ರಸ್ಟ್, ಅನಾಥರಿಗೆ, ಭಿಕ್ಷುಕರಿಗೆ, ವಿಕಲಚೇತನ ಮಕ್ಕಳಿಗೆ ಆಸರೆ ನೀಡುವ ಸಲುವಾಗಿ ರಮೇಶ್ ಎಂಬುವರು ಆಶ್ರಮ ಕಟ್ಟಿದ್ದಾರೆ. ಈ ಮೂಲಕ ಕಷ್ಟದಲ್ಲಿ ಇರುವರನ್ನು ಕರೆತರಲು ತಮ್ಮ ಸ್ವಂತ ಖರ್ಚಿನಲ್ಲಿ ಮಾರುತಿ ವ್ಯಾನ್ ಖರೀದಿಸಿದ್ದರು. ಆದರೆ ಕಿಡಿಗೇಡಿಗಳು ಕೃತ್ಯಕ್ಕೆ ವ್ಯಾನ್​ ಹಾಳಾಗಿದೆ.

ಆಶ್ರಮದ ಮುಂದೆ ನಿಲ್ಲಿಸಿದ ವಾಹನದ ಕೆಳ ಬಾಗ ಮತ್ತು ಹಿಂದಿನ ಕಿಟಕಿ ಭಾಗದಲ್ಲಿ ಬೆಂಕಿ ಹಚ್ಚಲಾಗಿದೆ. ಅದೃಷ್ಟವಶಾತ್ ವ್ಯಾನಿನಲ್ಲಿ ಸಾಕಷ್ಟು ಪೆಟ್ರೋಲ್ ಇಲ್ಲದಿದ್ದ ಕಾರಣ ಅನಾಹುತ ತಪ್ಪಿದೆ. ಇದೇ ರೀತಿ ಕೆಲವು ತಿಂಗಳುಗಳ ಹಿಂದೆ ಬೈಕಿನಲ್ಲಿ ತಡರಾತ್ರಿ ಬರುವ ಕೆಲವು ಪುಂಡರು ಆಟೋಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು ಎನ್ನಲಾಗುತ್ತಿದೆ.

ಕಾರುಗಳ ಚಕ್ರ ಕದಿಯುವಂತಹ ಪ್ರಕರಣ ದಾಖಲಾಗಿದ್ದರೂ ಶುಂಠಿಕೂಪ್ಪ ಪೊಲೀಸರು ಆರೋಪಿಗಳ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಅಲ್ಲದೆ ಜಿಲ್ಲೆಯಲ್ಲಿ ಗಾಂಜಾ ಮಾರಾಟ, ವೈಟ್ನರ್ ಸೇವನೆ , ಮದ್ಯಪಾನ ದಂತಹ ಚಟುವಟಿಕೆಗಳು ಸಾಕಷ್ಟು ನಡೆಯುತ್ತಿವೆಯಂತೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಇಲ್ಲಿನ ಜನರ ಆರೋಪವಾಗಿದೆ.

Intro:ಕೊಡಗು:ಇತೀಚೆಗೆ ಶುಂಠಿಕೂಪ್ಪ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ರಾತ್ರಿ ಮನೆಯ ಮುಂದೆ ನಿಲ್ಲಿಸಿದ ವಾಹನಗಳನ್ನು ಹಾನಿ ಮಾಡುವುದು ಸಾಮಾನ್ಯ ಆಗಿಬಿಟ್ಟಿದೆ. ಕಳೆದ ರಾತ್ರಿ ಅನಾಥ ಆಶ್ರಮಕ್ಕೆ ಸೇರಿದ ವ್ಯಾನೊಂದಕ್ಕೆ ಬೆಂಕಿ ಹಚ್ಚಿ ಸುಡಲು ಯತ್ನ ಮಾಡಿದ್ದು ಬೆಳಗ್ಗೆ ಮಾಲೀಕ ವಾಹನ ಬಳಿ ಬಂದು ನೋಡಿದಾಗ ಇದು ಬೆಳಕಿಗೆ ಬಂದಿದೆ.
Body:ವಿಕಾಸ್ ಜನಸೇವಾ ಟ್ರಸ್ಟ್, ಅನಾಥ ರಿಗೆ, ಭಿಕ್ಷೆ ಬೇಡುವ ಮಂದಿಗೆ ಅಂಗವಿಕಲ ಮಕ್ಕಳಿಗೆ ಆಸರೆ ನೀಡುವ ಸಲುವಾಗಿ ರಮೇಶ್ ಎಂಬುವವರು ಶುಂಠಿಕೂಪ್ಪ ವ್ಯಾಪ್ತಿಯಲ್ಲಿ ಒಂದು ಪುಟ್ಟದಾದ ಆಶ್ರಮ ಕಟ್ಟಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಕಷ್ಟದ ಲ್ಲಿ ಇರುವವರನ್ನು ಕರೆತರಲು ತನ್ನ ಸ್ವಂತ ಖರ್ಚಿನಲ್ಲಿ ಮಾರುತಿ ವ್ಯಾನ್ ಖರೀದಿಸಿ ಅದರಲ್ಲಿ ಜನಸೇವೆ ಮಾಡಿಕೊಂಡು ಇದ್ದಾರೆ. ಆದರೆ ಇವರ ಜನಸೇವೆ ಕಾರ್ಯ ಕಿಡಿಗೇಡಿಗಳಿಗೆ ಸರಿ ಇಲ್ಲ ಎನ್ನಿಸಿರಬಹುದೇನೋ. ಇದೇ ಕಾರಣಕ್ಕಾಗಿ ರಮೇಶ್ ರವರ ವಾಹನಕ್ಕೆ ಬೆಂಕಿ ಹಚ್ಚಿ ಸುಡಲು ಯತ್ನ ಮಾಡಿದ್ದು, ಅದು ವಿಫಲವಾಗಿದೆ.
ಆಶ್ರಮದ ಮುಂದೆ ನಿಲ್ಲಿಸಿದ ವಾಹನದ ಕೆಳ ಬಾಗ ಮತ್ತು ಹಿಂದಿನ ಕಿಟಕಿ ಭಾಗದಲ್ಲಿ ಬೆಂಕಿ ಹಚ್ಚಲಾಗಿದೆ, ಅದೃಷ್ಟವಶಾತ್ ವ್ಯಾನಿನಲ್ಲಿ ಸಾಕಷ್ಟು ಪೆಟ್ರೋಲ್ ಇಲ್ಲದಿದ್ದ ಕಾರಣ ಭಾರೀ ಅನಾಹುತ ತಪ್ಪಿದೆ.
ಇದೇ ರೀತಿಯಲ್ಲಿ ಕೆಲವು ತಿಂಗಳುಗಳ ಹಿಂದೆ ಬೈಕಿನಲ್ಲಿ ತಡರಾತ್ರಿ ಬರುವ ಕೆಲವು ಯುವಕರು ಆಟೋಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು, ಕಾರುಗಳ ಚಕ್ರ ಕದಿಯುವಂತಹಾ ಪ್ರಕರಣ ದಾಖಲು ಆದರೂ ಶುಂಠಿಕೂಪ್ಪ ಪೋಲಿಸರು ಆರೋಪಿಗಳ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. Conclusion:ಗಾಂಜಾ ಮಾರಾಟ, ವೈಟ್ನರ್ ಸೇವನೆ , ಮದ್ಯಪಾನ ದಂತಹ ಚಟುವಟಿಕೆಗಳು ಈ ಭಾಗದಲ್ಲಿ ಸಾಕಷ್ಟು ನಡೆಯುತ್ತಲೇ ಇದೆ. ಈ ಬಗ್ಗೆ ಪೋಲಿಸರಿಗೂ ಮಾಹಿತಿ ಇದ್ದರೂ ಯಾಕೆ ಇನ್ನೂ ಕ್ರಮ ಕೈಗೊಳ್ಳಲು ಪೋಲಿಸರು ಹಿಂದೇಟು ಹಾಕುತ್ತಿರುವುದು ಯಕ್ಷ ಪ್ರಶ್ನೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.