ETV Bharat / state

ಕೊಡಗಿನಲ್ಲಿ ನೆರೆ ಹಾವಳಿ: ನಿರಾಶ್ರಿತರಿಗೆ ಧೈರ್ಯ ತುಂಬುವ ಕಾರ್ಯದಲ್ಲಿ ಕೈ ನಾಯಕರು - floods in kodagu: congress followers visited damaged areas

ಶಾಸಕ ಹೆಚ್.ಸಿ.ಮಹದೇವಪ್ಪ ಮತ್ತು ಯತೀಂದ್ರ ಸಿದ್ದರಾಮಯ್ಯ ತಂಡ ಕೊಡಗು ಪ್ರವಾಸ ಕೈಗೊಂಡು ನಿರಾಶ್ರಿತರಿಗೆ ಸಾಂತ್ವನ ಹೇಳುವ ಕಾರ್ಯ ಮಾಡುತ್ತಿದೆ.

ನೆರೆ ಹಾವಳಿ
author img

By

Published : Aug 18, 2019, 12:12 PM IST

ಕೊಡಗು: ಪ್ರವಾಹ ಹಾಗೂ ಭೂ ಕುಸಿತ ಪ್ರದೇಶಗಳಿಗೆ ಶಾಸಕ ಹೆಚ್.ಸಿ.ಮಹದೇವಪ್ಪ ತಂಡ ಭೇಟಿ ನೀಡಿ ಪರಿಶೀಲಿಸಿ ನಿರಾಶ್ರಿತರಿಗೆ ಸಾಂತ್ವಾನ ಹೇಳಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಹೆಚ್.ಸಿ.ಮಹದೇವಪ್ಪ, ಕೊಡಗು ಜಿಲ್ಲೆ ಕಳೆದ ಮತ್ತು ಈ ವರ್ಷ ಕೂಡ ಅತಿವೃಷ್ಟಿಗೆ ಒಳಗಾಗಿ ಸಾಕಷ್ಟು ನಷ್ಟ ಅನುಭವಿಸಿದೆ. ಜಿಲ್ಲೆಯಲ್ಲಿ ಕಂಡು-ಕೇಳರಿಯದ ರೀತಿಯಲ್ಲಿ ಪ್ರವಾಹ, ಭೂ ಕುಸಿತ ಸಂಭವಿಸಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಸೂಕ್ತ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಕೊಡಗಿನ ರಕ್ಷಣೆಗೆ ಮುಂದಾಗಬೇಕು. ರಾಜ್ಯದ ಹಲವು ಭಾಗಗಳಲ್ಲಿ ಕೂಡ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ರಕ್ಷಣಾ ಕಾರ್ಯದಲ್ಲಿ ಸೇನೆ ಉತ್ತಮ ಕಾರ್ಯ ಮಾಡಿರುವುದು ಶ್ಲಾಘನೀಯ. ಸರ್ಕಾರದ ಮಂತ್ರಿ ಮಂಡಲ ರಚನೆ ಆಗದಿದ್ದರೂ ಉತ್ತಮ ಕೆಲಸ ಮಾಡಿದೆ. ಮಂತ್ರಿ ಮಂಡಲ ರಚಿಸಿದ್ದರೆ ಹೆಚ್ಚಿನ ಅನಾಹುತ ತಪ್ಪಿಸಬಹುದಿತ್ತು ಎಂದರು.

ನಿರಾಶ್ರಿತರಿಗೆ ಧೈರ್ಯ ತುಂಬುವ ಕಾರ್ಯದಲ್ಲಿ ಕೈ ನಾಯಕರು

ರಾಜ್ಯ ಸರ್ಕಾರದ ಪರಿಹಾರ ನಿರಾಶ್ರಿತರಿಗೆ ಸಾಲುವುದಿಲ್ಲ. ಪ್ರಧಾನಮಂತ್ರಿಗಳು ಈ ವಿಪತ್ತನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು.‌ ತಕ್ಷಣವೇ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ನಿರಾಶ್ರಿತರಿಗೆ ಹೊಸ ವಸತಿ ನೀತಿ ಘೋಷಣೆ ಮಾಡಿ ಸೂರು ಒದಗಿಸಬೇಕು. ಜಿಲ್ಲೆಯ ಪುನರ್ ನಿರ್ಮಾಣಕ್ಕೆ ತಕ್ಷಣವೇ‌ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಿ ಕೊಡಗಿನ ಪರಿಸರ ಸಮತೋಲನ ಹಾಳಾಗದಂತೆ ಸರ್ಕಾರಗಳು ಎಚ್ಚರ ವಹಿಸಬೇಕು ಎಂದರು.‌

ಕೊಡಗು: ಪ್ರವಾಹ ಹಾಗೂ ಭೂ ಕುಸಿತ ಪ್ರದೇಶಗಳಿಗೆ ಶಾಸಕ ಹೆಚ್.ಸಿ.ಮಹದೇವಪ್ಪ ತಂಡ ಭೇಟಿ ನೀಡಿ ಪರಿಶೀಲಿಸಿ ನಿರಾಶ್ರಿತರಿಗೆ ಸಾಂತ್ವಾನ ಹೇಳಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಹೆಚ್.ಸಿ.ಮಹದೇವಪ್ಪ, ಕೊಡಗು ಜಿಲ್ಲೆ ಕಳೆದ ಮತ್ತು ಈ ವರ್ಷ ಕೂಡ ಅತಿವೃಷ್ಟಿಗೆ ಒಳಗಾಗಿ ಸಾಕಷ್ಟು ನಷ್ಟ ಅನುಭವಿಸಿದೆ. ಜಿಲ್ಲೆಯಲ್ಲಿ ಕಂಡು-ಕೇಳರಿಯದ ರೀತಿಯಲ್ಲಿ ಪ್ರವಾಹ, ಭೂ ಕುಸಿತ ಸಂಭವಿಸಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಸೂಕ್ತ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಕೊಡಗಿನ ರಕ್ಷಣೆಗೆ ಮುಂದಾಗಬೇಕು. ರಾಜ್ಯದ ಹಲವು ಭಾಗಗಳಲ್ಲಿ ಕೂಡ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ರಕ್ಷಣಾ ಕಾರ್ಯದಲ್ಲಿ ಸೇನೆ ಉತ್ತಮ ಕಾರ್ಯ ಮಾಡಿರುವುದು ಶ್ಲಾಘನೀಯ. ಸರ್ಕಾರದ ಮಂತ್ರಿ ಮಂಡಲ ರಚನೆ ಆಗದಿದ್ದರೂ ಉತ್ತಮ ಕೆಲಸ ಮಾಡಿದೆ. ಮಂತ್ರಿ ಮಂಡಲ ರಚಿಸಿದ್ದರೆ ಹೆಚ್ಚಿನ ಅನಾಹುತ ತಪ್ಪಿಸಬಹುದಿತ್ತು ಎಂದರು.

ನಿರಾಶ್ರಿತರಿಗೆ ಧೈರ್ಯ ತುಂಬುವ ಕಾರ್ಯದಲ್ಲಿ ಕೈ ನಾಯಕರು

ರಾಜ್ಯ ಸರ್ಕಾರದ ಪರಿಹಾರ ನಿರಾಶ್ರಿತರಿಗೆ ಸಾಲುವುದಿಲ್ಲ. ಪ್ರಧಾನಮಂತ್ರಿಗಳು ಈ ವಿಪತ್ತನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು.‌ ತಕ್ಷಣವೇ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ನಿರಾಶ್ರಿತರಿಗೆ ಹೊಸ ವಸತಿ ನೀತಿ ಘೋಷಣೆ ಮಾಡಿ ಸೂರು ಒದಗಿಸಬೇಕು. ಜಿಲ್ಲೆಯ ಪುನರ್ ನಿರ್ಮಾಣಕ್ಕೆ ತಕ್ಷಣವೇ‌ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಿ ಕೊಡಗಿನ ಪರಿಸರ ಸಮತೋಲನ ಹಾಳಾಗದಂತೆ ಸರ್ಕಾರಗಳು ಎಚ್ಚರ ವಹಿಸಬೇಕು ಎಂದರು.‌

Intro:ಕೊಡಗಿನಲ್ಲಿ ನೆರೆ ಹಾವಳಿ: ನಿರಾಶ್ರಿತರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ ಕೈ ನಾಯಕರು

ಕೊಡಗು: ಕೊಡಗು ಪ್ರವಾಹ ಹಾಗೂ ಭೂ ಕುಸಿತ ಪ್ರದೇಶಗಳಿಗೆ ಶಾಸಕ ಹೆಚ್.ಸಿ.ಮಹದೇವಪ್ಪ ತಂಡ ಭೇಟಿ ನೀಡಿ ಪರಿಶೀಲಿಸಿ ನೆರೆ ಹಾವಳಿಗೆ ಒಳಗಾದ ನಿರಾಶ್ರಿತರಿಗೆ ಸಾಂತ್ವಾನ ಹೇಳಿತು.

ಶಾಸಕ ಹೆಚ್.ಸಿ.ಮಹದೇವಪ್ಪ ಮತ್ತು ಯತೀಂದ್ರ ಸಿದ್ದರಾಮಯ್ಯ ತಂಡ ಕೊಡಗು ಪ್ರವಾಸ ಕೈಗೊಂಡ ಬಳಿಕ
ನಿರಾಶ್ರಿತರ ಅಳಲು ಆಲಿಸಿ ನಗರದ ಹೊಟೆಲ್ ವ್ಯಾಲಿ ವ್ಯೂ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿರುವ ಕೊಡಗಿಗೆ ನಮ್ಮ ತಂಡ ಭೇಟಿ ನೀಡಿದೆ.‌ಕಳೆದ ಮತ್ತು ಈ ವರ್ಷ ಕೊಡಗು ಅತಿವೃಷ್ಠಿಗೆ ಒಳಗಾಗಿ ಸಾಕಷ್ಟು ನಷ್ಟ ಅನುಭವಿಸಿದೆ.ಜಿಲ್ಲೆಯಲ್ಲಿ
ಕಂಡು-ಕೇಳರಿಯದ ರೀತಿಯಲ್ಲಿ ಪ್ರವಾಹ, ಭೂ ಕುಸಿತ ಸಂಭವಿಸಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಮನುಷ್ಯ ಪ್ರಕೃತಿಯ ವಿರುದ್ಧ ನಡೆದುಕೊಂಡ ಪರಿಣಾಮ ಪ್ರಕೃತಿ ಮನುಷ್ಯನ ವಿರುದ್ಧ ನಡೆಯುತ್ತಿದೆ.ಸರ್ಕಾರ ಸೂಕ್ತ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಕೊಡಗಿನ ರಕ್ಷಣೆಗೆ ಮುಂದಾಗಬೇಕು.ರಾಜ್ಯದ ಹಲವು ಭಾಗಗಳಲ್ಲಿ ಕೂಡ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ.ರಕ್ಷಣಾ ಕಾರ್ಯದಲ್ಲಿ ಸೇನೆ ಉತ್ತಮ ಕಾರ್ಯ ಮಾಡಿರುವುದು ಶ್ಲಾಘನೀಯ.
ಸರ್ಕಾರದ ಮಂತ್ರಿ ಮಂಡಲದ ರಚನೆ ಆಗದಿದ್ದರೂ ಉತ್ತಮ ಕೆಲಸ ಮಾಡಿದೆ.ಮಂತ್ರಿ ಮಂಡಲ ರಚಿಸಿದ್ದಿದ್ದರೆ ಹೆಚ್ಚಿನ
ಅನಾಹುತ ತಪ್ಪಿಸಬಹುದು ಎಂದು ಹೇಳಿದರು.

ಕೇಂದ್ರ ಸರ್ಕಾರ ಪ್ರಾಕೃತಿಕ ವಿಕೋಪ ಬಗ್ಗೆ ಇನ್ನೂ ಏನೂ ಮಾತನಾಡಿಲ್ಲ.ರಾಜ್ಯ ಕಾಂಗ್ರೆಸ್ 4 ತಂಡ ರಚಿಸಿ ಪ್ರಾಕೃತಿಕ ವಿಕೋಪ ಬಗ್ಗೆ ಗ್ರೌಂಡ್ ರಿಪೋರ್ಟ್ ತಯಾರಿಸುತ್ತಿದೆ.ಅದೇ ಕಾರಣಕ್ಕೆ ನಾನು ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ ಎಂದು ಹೇಳಿದರು.

ಎನ್‌ಡಿಆರ್‌ಎಫ್ ಮತ್ತು ರಾಜ್ಯ ಸರ್ಕಾರದ ಪರಿಹಾರ ನಿರಾಶ್ರಿತರಿಗೆ ಸಾಲುವುದಿಲ್ಲ.ಪ್ರಧಾನ ಮಂತ್ರಿಗಳು ಈ ವಿಪತ್ತನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು.‌
ತಕ್ಷಣವೇ ಕೇಂದ್ರ ಸರ್ಕಾರ 10 ಸಾವಿರ ಕೋಟಿ ಬಿಡುಗಡೆ ಮಾಡಬೇಕು.ನಿರಾಶ್ರಿತರಿಗೆ ಹೊಸ ವಸತಿ ನೀತಿ ಘೋಷಣೆ ಮಾಡಿ ಸೂರು ಒದಗಿಸಬೇಕು.ಕೊಡಗಿಗೆ ರಾಜ್ಯ ಸರ್ಕಾರ ತಕ್ಷಣ ಹೆಚ್ಚು ಅನುದಾನ ನೀಡಬೇಕು.ಜಿಲ್ಲೆಯ ಪುನರ್ ನಿರ್ಮಾಣಕ್ಕೆ ತಕ್ಷಣವೇ‌ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಿ ಕೊಡಗಿನ ಪರಿಸರ ಸಮತೋಲನ ಹಾಳಾಗದಂತೆ ಸರ್ಕಾರಗಳು ಎಚ್ಚರ ವಹಿಸಬೇಕು ಎಂದರು.‌

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.