ಕೊಡಗು: ವಿಚಾರಣೆಗೆ ಕರೆ ತಂದಿದ್ದ ವೇಳೆ ಕೈದಿಯೊಬ್ಬ ನ್ಯಾಯಾಲಯದ ಆವರಣದಿಂದ ಪೊಲೀಸರ ಕಣ್ತಪ್ಪಿಸಿ ಕಾಲ್ಕಿತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೋಮವಾರಪೇಟೆ ತಾಲೂಕಿನ ಯಡವನಾಡು ಸೂಳೆಬಾವಿ ಗ್ರಾಮದ ನಿವಾಸಿ ರಾಮು ನಿನ್ನೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಆರೋಪಿ.ಇತ್ತೀಚೆಗಷ್ಟೆ ಈತನನ್ನು ಪತ್ನಿಯ ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.
ನಿನ್ನೆ ಕುಶಾಲನಗರ ಸಿವಿಲ್ ನ್ಯಾಯಾಧೀಶರ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ವಿಚಾರಣೆಗೆ ಆರೋಪಿಯನ್ನು ಕರೆ ತರಲಾಗಿತ್ತು. ಮೂತ್ರ ವಿಸರ್ಜನೆಗೆ ಎಂದು ಸಿಬ್ಬಂದಿಗೆ ಹೇಳಿ ಹೋಗಿದ್ದ ರಾಮು, ಶೌಚಾಲಯದ ಕಿಟಕಿಯಿಂದ ಎಸ್ಕೇಪ್ ಆಗಿದ್ದನು.